Saturday, July 29, 2023

ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಕವಿಗಳ ಕುರಿತು ಕವನ ಕಟ್ಟಿ ವಾಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -೪: ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಕವಿಗಳ ಕುರಿತು ಕವನ ಕಟ್ಟಿ ವಾಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ, ಕವಿತೆಗಳಲ್ಲಿ ಸಮಾಜದ ನೋವು -ನಲಿವು, ಬಡತನ, ಅನಕ್ಷರತೆ, ನಿರುದ್ಯೋಗ ಸೇರಿದಂತೆ ಕಂದಾಚಾರಗಳ ಕುರಿತು ಕವಿತೆ ಬರೆದು ಕವಿಗಳು ಆಧುನಿಕ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು  ಬೆಂಗಳೂರಿನ ಹಿರಿಯ ಕವಿ ಡಾ. ಟಿ. ಯಲ್ಲಪ್ಪ ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೪ರ ಕಾವ್ಯ ಸಂಭ್ರಮ-೧ ವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅತಿಥಿಗಳಾಗಿ ಕವಯಿತ್ರಿ ಇಂದುಮತಿ ಲಮಾಣಿ ಅವರು ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳು ಅರ್ಥಪೂರ್ಣವಾಗಿ ಕವಿತೆಗಳನ್ನು ವಾಚಿಸುವ ಮೂಲಕ ಸಮ್ಮೇಳನದ ಮೆರಗು ಹೆಚ್ಚಿಸಿದ್ದಾರೆ ಎಂದು ಹೇಳಿದರು , ಡಾ, ಜಯಮಂಗಲ ಚಂದ್ರಶೇಖರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಜಿಲ್ಲೆಗಳ ಕವಿಗಳಾದ ಸಂತೆಬೆನ್ನೂರ ಫೈಜ್ನಟ್ರಾಜ್‌, ಡಾ.ರತ್ನಾಕರ ಕುನಗೋಡು,ಮಹಾಂತೇಶ ಪಾಟೀಲ , ರಮೇಶ ಗಬ್ಬೂರ, ಇಂಚರಾ ನಾರಾಯಣಸ್ವಾಮಿ, ದಾಕ್ಷಾಯಣಿ ಹುಡೇದ, ಜಬೀವುಲ್ಲಾ ಎಂ ಅಸದ್, ಸಿದ್ದು ಸವಳಸಂಗ, ಪಿ ಆರ್ ವೆಂಕಟೇಶ್, ಸಿದ್ದು ಬಾರಿಗಿಡದ,ಮಮತಾ ಅರಸಿಕೇರಿ, ಡಾ ಎಚ್ ಬಿ ನಡುವಿನಕೇರಿ, ಡಾ ಎಂ ಎಸ್ ಶಿವಶರಣ, ಈರಣ್ಣ ಮಾದರ ,ಡಾ ಮಲ್ಲಿಕಾರ್ಜುನ ಮೇತ್ರಿ, ವಿಶಾಲ ಮ್ಯಾಸರ್, ಮೈಲಾರಪ್ಪ ಬೂದಿಹಾಳ, ವಸಂತಕುಮಾರ ಕಡ್ಲಿಮಟ್ಟಿ, ಸಿದ್ದು ಸತ್ಯಣ್ಣವರ, ಶಂಕರ ಚಾಮರಾಜನಗರ ಮತ್ತು ಸಿದ್ಧಾರೂಢ ಕಟ್ಟಿಮನಿ ಅವರು 
ತಮ್ಮ ಕವನವನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್‌.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಕಲಬುರಗಿ ದಸಾಪ ಅಧ್ಯಕ್ಷ ಡಾ. ಸುನೀಲ ಜಾಬಾದಿ, ಅವರು ಗೋಷ್ಠಿಯನ್ನು ಸಂಯೋಜಿಸಿದರು ಅಶೋಕ ಬಾಬು ಸ್ವಾಗತಿಸಿದರು. ಸವಿತಾ ಲಮಾಣಿ, ವಿಕ್ರಂ ನಿಂಬರ್ಗಾ ನಿರೂಪಿಸಿದರು. ರಾಹುಲ ದ್ರಾವಿಡ್‌ ವಂದಿಸಿದರು.

ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಕವಿಗಳ ಕುರಿತು ಕವನ ಕಟ್ಟಿ ವಾಚಿಸಿರುವುದು :ಡಾ. ಟಿ. ಯಲ್ಲಪ್ಪ ಉತ್ತಮ ಬೆಳವಣಿಗೆ:

ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -೪: ಆಧುನಿಕ ಜಗತ್ತಿನ ಸಮಸ್ಯೆಗಳ ಕುರಿತು ಕವನ ಕಟ್ಟಿ ವಾಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ, ಕವಿತೆಗಳಲ್ಲಿ ಸಮಾಜದ ನೋವು -ನಲಿವು, ಬಡತನ, ಅನಕ್ಷರತೆ, ನಿರುದ್ಯೋಗ ಸೇರಿದಂತೆ ಕಂದಾಚಾರಗಳ ಕುರಿತು ಕವಿತೆ ಬರೆದು ಕವಿಗಳು ಆಧುನಿಕ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು  ಬೆಂಗಳೂರಿನ ಹಿರಿಯ ಕವಿ ಡಾ. ಟಿ. ಯಲ್ಲಪ್ಪ ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೪ರ ಕಾವ್ಯ ಸಂಭ್ರಮ-೧ ವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅತಿಥಿಗಳಾಗಿ ಕವಯಿತ್ರಿ ಇಂದುಮತಿ ಲಮಾಣಿ ಅವರು ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳು ಅರ್ಥಪೂರ್ಣವಾಗಿ ಕವಿತೆಗಳನ್ನು ವಾಚಿಸುವ ಮೂಲಕ ಸಮ್ಮೇಳನದ ಮೆರಗು ಹೆಚ್ಚಿಸಿದ್ದಾರೆ ಎಂದು ಹೇಳಿದರು , ಡಾ, ಜಯಮಂಗಲ ಚಂದ್ರಶೇಖರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಜಿಲ್ಲೆಗಳ ಕವಿಗಳಾದ ಸಂತೆಬೆನ್ನೂರ ಫೈಜ್ನಟ್ರಾಜ್‌, ಡಾ.ರತ್ನಾಕರ ಕುನಗೋಡು,ಮಹಾಂತೇಶ ಪಾಟೀಲ , ರಮೇಶ ಗಬ್ಬೂರ, ಇಂಚರಾ ನಾರಾಯಣಸ್ವಾಮಿ, ದಾಕ್ಷಾಯಣಿ ಹುಡೇದ, ಜಬೀವುಲ್ಲಾ ಎಂ ಅಸದ್, ಸಿದ್ದು ಸವಳಸಂಗ, ಪಿ ಆರ್ ವೆಂಕಟೇಶ್, ಸಿದ್ದು ಬಾರಿಗಿಡದ,ಮಮತಾ ಅರಸಿಕೇರಿ, ಡಾ ಎಚ್ ಬಿ ನಡುವಿನಕೇರಿ, ಡಾ ಎಂ ಎಸ್ ಶಿವಶರಣ, ಈರಣ್ಣ ಮಾದರ ,ಡಾ ಮಲ್ಲಿಕಾರ್ಜುನ ಮೇತ್ರಿ, ವಿಶಾಲ ಮ್ಯಾಸರ್, ಮೈಲಾರಪ್ಪ ಬೂದಿಹಾಳ, ವಸಂತಕುಮಾರ ಕಡ್ಲಿಮಟ್ಟಿ, ಸಿದ್ದು ಸತ್ಯಣ್ಣವರ, ಶಂಕರ ಚಾಮರಾಜನಗರ ಮತ್ತು ಸಿದ್ಧಾರೂಢ ಕಟ್ಟಿಮನಿ ಅವರು ತಮ್ಮ ಕವನವನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್‌.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಕಲಬುರಗಿ ದಸಾಪ ಅಧ್ಯಕ್ಷ ಡಾ. ಸುನೀಲ ಜಾಬಾದಿ, ಅವರು ಗೋಷ್ಠಿಯನ್ನು ಸಂಯೋಜಿಸಿದರು ಅಶೋಕ ಬಾಬು ಸ್ವಾಗತಿಸಿದರು. ಸವಿತಾ ಲಮಾಣಿ, ವಿಕ್ರಂ ನಿಂಬರ್ಗಾ ನಿರೂಪಿಸಿದರು. ರಾಹುಲ ದ್ರಾವಿಡ್‌ ವಂದಿಸಿದರು.


 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಆಧುನಿಕ ಭಾರತದಲ್ಲಿ ಹೆಚ್ಚು ಜನರಿಗೆ ತಲುಪಿದ ಯಾವುದಾದರು ಚಿಂತನೆ ಇದ್ದರೆ ಅದು ಅಂಬೇಡ್ಕರ್ ಚಿಂತನೆ ನಿಮ್ನ ವರ್ಗಗಳ ಬದುಕಿನ ಸುತ್ತ ಪೋತೆ ಅವರ ಸಾಹಿತ್ಯ ರಚನೆಗೊಂಡಿದೆ ಅವರು ಬಳಸಿದ ಶಬ್ದ ಲಹರಿ ಅವರು ಬರೆದ ಸಾಹಿತ್ಯ ನೋಡಿದರೆ ಒಂದು ಕ್ಷಣ ಅಚ್ಚರಿಯಾಗುತ್ತದೆ ಎಂದು ಚಳ್ಳಕೆರೆಯ ಪ್ರೊ ಡಿ ಅಂಜನಪ್ಪ ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 3ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ವಿವಿಧ ಉಪನ್ಯಾಸಕರು ಮಂಡಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ,   ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ:ಶಿವರಾಜ ಬ್ಯಾಡರ


 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಪೋತೆ ಅವರು ತಮ್ಮ ಪಿ ಎಚ್ ಡಿ ಯನ್ನು ನಿಗದಿತ ಕಲಾವಧಿಯಲ್ಲಿ ಮುಗಿಸಿದವರು ಒಂದು ಕಾಲದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಚ್ಚೆ ಹಾಕುವ ಕಲೆಯನ್ನು ವಿಸ್ತಾರವಾಗಿ ಬರೆದಿದ್ದಾರೆ ಜಾನಪದ ನಂಬಿಕೊಂಡು ಬಂದಿರುವ ಕುಟುಂಬಗಳ ಬಗ್ಗೆ ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಜಾನಪದ ಹಾಡುಗಳನ್ನು ಅಶ್ಲೀಲವಾಗಿ ಬಿಂಬಿಸುವ ಕೆಲಸ ನಡೆದಿದೆ ಎಂದು ಶಿವರಾಜ ಬ್ಯಾಡರ ಹಳ್ಳಿ ವಿಷಾದ ವ್ಯಕ್ತಪಡಿಸಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 3ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಸಂಶೋಧನೆ ಸಾಹಿತ್ಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ,  ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಅಸಮಾನತೆಯ ಜಾತಿ ಹೋಗಲಾಡಿಸುವ ಸಲುವಾಗಿ ಎಚ್.ಟಿ.ಪೋತೆ ಅವರು ಹಲವು ಪ್ರಯೋಗ ಮಾಡುತ್ತಾರೆ:ಮುದೇನೂರು ನಿಂಗಪ್ಪ


 ಅಸಮಾನತೆಯ ಜಾತಿ ಹೋಗಲಾಡಿಸುವ ಸಲುವಾಗಿ ಎಚ್.ಟಿ.ಪೋತೆ ಅವರು ಹಲವು ಪ್ರಯೋಗ ಮಾಡುತ್ತಾರೆ. ಅವರ ಮಾನವಿಯತೆ ಬರಹಗಳು ಎಲ್ಲರರಿಗೂ ಅನ್ವಯಿಸುತ್ತವೆ. ಸಾಹಿತ್ಯ ಮತ್ತು ಇತರೆ ಮಾನವೀಯತೆ ಜ್ಞಾನವನ್ನು ಒಟ್ಟಾಗಿಸಿ ಹೋಗುವುದು ಕಷ್ಟಕರ. ಅಂತಹವುಗಳಲ್ಲಿಗೂ ಕಲಾತ್ಮಕವಾಗಿ ಬರಹಗಳನ್ನು ಬರೆಯುತ್ತಾರೆ ಎಂದು ಮುದೇನೂರು ನಿಂಗಪ್ಪ ಅವರು ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೩ರಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತು ಅವರು ಮಾತನಾಡಿದರು.

ವಿಶಿಷ್ಠ ಹೆಣೆಯುತ್ತಾರೆ. ಅವರು ವೈದಿಕ ಕೃತಿಯ ಪರಿಚಯಗಳನ್ನು ನೋಡಿದರೆ ಸಾಕು ಅವರಿಗೆ ಅಘಾದವಾದ ಜ್ಞಾನ ಇದೆ ಎಂಬುವುದು ಕಂಡು ಬರುತ್ತದೆ. ವರ್ತಮಾನವನ್ನು ಮರು ಶೋಧನೆಗೆ, ಅಂಬೇಡ್ಕರ, ಗಾಂಧಿ, ದಲಿತ ಚಿಂತನೆ, ವೈಚಾರಿಕ ಆಲೋಚನೆಗಳನ್ನು ಸಹಿತ ಬರವಣೆಗಳನ್ನು ಸ್ಪಷ್ಟಪಡಿಸುತ್ತಾರೆ. ನಿರ್ಭೀಡ , ಪ್ರಾಮಾಣಿಕ ವೈಚಾರಿಕತೆಯನ್ನು ಅವರ ಬರವಣಿಗೆಯಲ್ಲಿ ಕಾಣಬಹುದಾಗಿದೆ. ಅವರ ಬರಹಗಳನ್ನು ಜೀವಪರ ಮತ್ತು ಜನರಪರವಾಗಿವೆ. ಈ ಮೌಖಿಕ ಪರಂಪರೆ ಕುರಿತು, ಲಿಖಿತ ಪರಂಪರೆ ಮಾತನಾಡುವಾಗ ಅದರ ಫಲಿತಗಳನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಸಾಮಾಜಿಕ ವೈಜ್ಞಾನಿಕ, ವೈಚಾರಿಕ ಸಾಹಿತ್ಯಿಕವನ್ನು ಅವರು ರೂಪಿಸಿಕೊಳ್ಳುತ್ತಿದ್ದಾರೆ.  

ಸಾಹಿತಿಗಳಾದ ಡಾ, ಚನ್ನಪ್ಪ ಕಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ವಿಕ್ರಂ ವಿಸಾಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಬುಕ್‌ ಬ್ರಹ್ಮ ದೇವು ಪತ್ತಾರ, ಡಾ. ಜೈನೇಶ ಪ್ರಸಾದ, ಡಾ. ಬಸವರಾಜ ಪೂಜಾರ, ಡಾ. ಪೀರಪ್ಪ ಸಜ್ಜನ ವೇದಿಕೆಯಲ್ಲಿದ್ದರು.


ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು. ಶ್ರೀಮತಿ ಪೂಜಾ ಸಿಂಗೆ ನಿರೂಪಿಸಿದರು. ಶಂಕ್ರೆಮ್ಮ ಈಳಗೇರ ವಂದಿಸಿದರು.

ಮೂಖನಾಯಕ ನಾಟಕ ಪೋತೆ ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದೆ :ಡಾ ಕಿರಣ ಗಾಜನೂರ


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಕುಮಾರ ಕಕ್ಕಯ್ಯ ಪೋಳ ಅವರು ಬರೆದ ಮೂಖನಾಯಕ ನಾಟಕ ಪೋತೆ ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದೆ ಎಂದು ಡಾ ಕಿರಣ ಗಾಜನೂರ ಅವರು ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಜೀವನ ಚರಿತ್ರೆ  ಕುರಿತು ಮಾತನಾಡಿದರು.ದಲಿತ ಸಮುದಾಯದ ಸಾಂಸ್ಕೃತಿಕ ನಾಯಕರ ಚರಿತ್ರೆಗಳು ಅಷ್ಟಾಗಿ ಬಂದಿಲ್ಲ ಇದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಪೋತೆ ಅವರು ಬರೆದ ಜೀವನ ಚರಿತ್ರೆಗಳು ಅಂತಃ ಕರಣ ಸಂಸ್ಕೃತಿಯಿಂದ ಕುದಿರುವಂತಹವು ಜೀವನ ಚರಿತ್ರೆಗಳ ಮೂಲಕ ಸಾಂಸ್ಕೃತಿಕ ರಾಜ್ಯಕಾರಣವನ್ನು ಕಟ್ಟಿಕೊಡುವ ಕೆಲಸವನ್ನು ಪ್ರೊ ಪೋತೆ ಅವರು ಮಾಡಿದ್ದಾರೆ ಎಂದು ಹೇಳಿದರು. ಸಾಹಿತಿ ಚೆನ್ನಪ್ಪ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮುದೇನೂರು ನಿಂಗಪ್ಪ,  ಡಾ ಶಿವರಾಜ ಬ್ಯಾಡರಹಳ್ಳಿ, ಡಾ ಶಿವಗಂಗಾ ಬಲಗುಂದಿ, ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಕಾದಂಬರಿಗಳನ್ನು ಬರೆಯುವ ಕಲೆ ಪೋತೆ ಅವರಿಗೆ ಕರಗತವಾಗಿದೆ:ಡಾ ವಿಕ್ರಮ ವಿಸಾಜಿ


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಪ್ರೊ ಎಚ್ ಟಿ ಪೋತೆ ಅವರಿಗೆ ಅವರ ಜನ್ಮಸ್ಥಳ ಇಂಡಿ ತಾಲೂಕಿನ ಹಂಜಗಿಯ ಬಾಲ್ಯದ ದಿನಗಳು, ಅವರ ವಿಜಯಪುರದ ವಿದ್ಯಾರ್ಥಿ ಜೀವನದ ದಿನಗಳು ಹಾಗೂ ಕಲಬುರಗಿಯ ಅವರ ನಂಟು ಕಂಡುಬರುತ್ತವೆ ಅವರ ಕಥಾ ಪಾತ್ರಗಳಲ್ಲಿ ಊಹಾತ್ಮಕ ಪಾತ್ರಗಳು ಬರುವುದಿಲ್ಲ ವರ್ತಮಾನದ ಸತ್ಯ ಘಟನೆಗಳು ಹೇಳುತ್ತವೆ ಅವರ 6 ಕಥಾ ಸಂಕಲನಗಳು ಹಾಗೂ ಎರಡು ಕಾದಂಬರಿಗಳಲ್ಲಿ ಮತ್ತೆ ಮತ್ತೆ ಬರುವ ಪಾತ್ರ ಅಪ್ಪ ಬಹುಷಃ ಅವರ ಜೀವನದಲ್ಲಿ ಅವರ ತಂದೆ ತಿಪ್ಪಣ್ಣ ಅವರು  ಗಾಢವಾದ ಪ್ರಭಾವ ಬೀರಿದಂತೆ ತೋರುತ್ತದೆ ಎಂದು ಕಲಬುರಗಿ ಕೇಂದ್ರೀಯ ವಿ ವಿ ಪ್ರಾಧ್ಯಾಪಕ ಡಾ ವಿಕ್ರಮ ವಿಸಾಜಿ ಅವರು ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಸೃಜನ ಸಾಹಿತ್ಯ ಕುರಿತು ಮಾತನಾಡಿದರು.ತಮ್ಮ ಸುತ್ತ -ಮುತ್ತಲಿನ ವಿಷಯಗಳನ್ನು ತಮ್ಮ ಕಥಾವಸ್ತುವಾಗಿಸಿಕೊಂಡವರು ವರ್ತಮಾನದ ವಿಷಯಗಳನ್ನು ವಿಷಯವಾಗಿ ಇಟ್ಟುಕೊಂಡು ಕಥೆಗಳನ್ನು ಹಾಗೂ ಕಾದಂಬರಿಗಳನ್ನು ಬರೆಯುವ ಕಲೆ ಪೋತೆ ಅವರಿಗೆ ಕರಗತವಾಗಿದೆ ಚರಿತ್ರೆಯನ್ನು ವರ್ತಮಾನಕ್ಕೆ ತಂದಿರುವ ಅವರು ಬುದ್ಧ ಬಸವ, ಅಂಬೇಡ್ಕರ್ ದೇವನೂರು ಮಹಾದೇವ, ಬಿ ಬಸಲಿಂಗಪ್ಪ, ಡಾ ಸಿದ್ದಲಿಂಗಯ್ಯ ಅವರ ಪತ್ರಗಳನ್ನು ಬಳಸಿಕೊಂಡು ಮಹಾಬಿಂದು ಎಂಬ ಅಪರೂಪದ ಕಾಂದಬರಿಯನ್ನು ಬರೆದಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ, ಡಾ ಶಿವಗಂಗಾ ಬಲಗುಂದಿ, ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಹೊಣೆ:ಶ್ರೀದೇವಿ ಉತ್ಲಾಸ್ಕರ


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2:ನಮ್ಮ ಸಂವಿಧಾನ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ ಸಂವಿಧಾನ ಪ್ರತಿಯೊಬ್ಬ ಭಾರತೀಯರಿಗೆ ಪವಿತ್ರ ಗ್ರಂಥವಾಗಿದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕಿ ಶ್ರೀದೇವಿ ಉತ್ಲಾಸ್ಕರ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಡಾ ಸಿದ್ದನಗೌಡ ಪಾಟೀಲ ಅವರು ಮಂಡಿಸಿದ ವಿಷಯಕ್ಕೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಂದೀಪ ವಿಶ್ವನಾಥ ಅವರು ಸಂವಿಧಾನ ರಕ್ಷಣೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಸುಜಾತಾ ಚಲವಾದಿ,  ಡಾ. ಗಾಂಧೀಜಿ ಮೊಳಕೇರಿ ಡಾ ರಾಮಚಂದ್ರ ಗಾಣೆಪುರೆ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಅಕ್ಷರಸ್ಥರು ಮತ್ತು ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವವರಿಂದ ಅಪಾಯವಿದೆ:ಡಾ ರಾಮಚಂದ್ರ ಗಾಣಾಪುರೆ

 


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2:ದೇಶದಲ್ಲಿ ನಡೆದ ಅನೇಕ ದುಕೃತ್ಯಗಳನ್ನು ನೋಡಿದಾಗ ಸಂವಿಧಾನ ಅಪಾಯದಲ್ಲಿದೆ ಎಂಬ ಭಾವನೆ ಮೂಡುತ್ತದೆ ದೇಶದಲ್ಲಿ ಅಕ್ಷರಸ್ಥರು ಮತ್ತು ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವವರಿಂದ ಅಪಾಯವಿದೆ ಹೊರತು ಅನಕ್ಷರಸ್ಥರಿಂದ ಅಲ್ಲ ಎಂದು ಡಾ ರಾಮಚಂದ್ರ ಗಾಣಾಪುರೆ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಡಾ ಸಿದ್ದನಗೌಡ ಪಾಟೀಲ ಅವರು ಮಂಡಿಸಿದ ವಿಷಯಕ್ಕೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು 

ಈ ಸಂದರ್ಭದಲ್ಲಿ ಡಾ. ಸುಜಾತಾ ಚಲವಾದಿ ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಸಂವಿಧಾನವನ್ನು ನಾವು ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬೇಕಿದೆ:ಸಾಹಿತಿ ಡಾ ಸುಜಾತಾ ಚಲವಾದಿ


ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2: ಸಂವಿಧಾನವನ್ನು ನಾವು ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬೇಕಿದೆ ಪ್ರಬುದ್ಧತೆಯಿಂದ ಮಾತನಾಡುವ ನಾವು ಪ್ರತಿಯೊಂದರಲ್ಲಿ ಜಾತಿಯನ್ನು ಹುಡುಕುತ್ತೇವೆ ಎಂದು ಸಾಹಿತಿ ಡಾ ಸುಜಾತಾ ಚಲವಾದಿ ಅವರು ಕಳವಳ ವ್ಯಕ್ತಪಡಿಸಿದರು. ಅವರು  ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೨ರ ಸಂವಾದದಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ವಿಷಯದ ಕುರಿತು ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ ಅವರು ಮಂಡಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ  ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಸಿದ್ದನಗೌಡ ಪಾಟೀಲ ರಾಮಚಂದ್ರ ಗಾಣಾಪುರೆ, ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ಉಪಸ್ಥಿತರಿದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಭಾರತದ ಸಂವಿಧಾನ ಒಂದು ಮಹಾಕಾವ್ಯವಾಗಿದೆ: ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ



ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2:ಯಾವುದೇ ಒಬ್ಬ ವ್ಯಕ್ತಿ ಆತನ ನಿಧನದ ನಂತರ ಅವು ಬದುಕಿದರೆ ಸಿದ್ಧಾಂತಗಳಾಗುತ್ತವೆ, ಚಿಂತನೆ ಇಲ್ಲದ ಚಟುವಟಿಕೆ ಮತ್ತು ಚಟುವಟಿಕೆಯಿಲ್ಲದ ಚಿಂತನೆ ಕುರುಡಾಗುತ್ತವೆ ಮನಸ್ಮೃತಿ ವೈದಿಕರು ಹೇಗೆ ಬದುಕಬೇಕು, ಬೈಬಲ್ ಕ್ರಿಸ್ತರು ಹೇಗೆ ಬದುಕಬೇಕು, ಕುರಾನ್ ಮುಸ್ಲಿಂರು ಹೇಗೆ ಬದುಕಬೇಕು ಎಂದು ತಿಳಿಸಿದರೆ ಭಾರತದ ಸಂವಿಧಾನ ಎಲ್ಲರೂ ಕೂಡಿ ಹೇಗೆ ಬದುಕಬೇಕು ಎಂದು ತಿಳಿಸುತ್ತದೆ ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ ಅವರು ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಎಂಬ ವಿಷಯ ಮಂಡಿಸಿ ಮಾತನಾಡಿದರು.ಅಂಬೇಡ್ಕರ್ ಅವರು ದೇಶದ ಸಂಪತ್ತು ಅವಕಾಶ ವಂಚಿತ ಜನರು ಆರ್ಥಿಕವಾಗಿ ಸಬಲರಾಗಲು ಮೀಸಲಾತಿಯನ್ನು ತಂದರು ಕೆಲವು ಪ್ರಮುಖ ವಿಷಯಗಳಿಗೆ ವಿರೋಧ ವ್ಯಕ್ತವಾದಾಗ ಅವುಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿದರು.ನಮ್ಮ ದೇಶದಲ್ಲಿ ಇಂದಿಗೂ ಪುನಾ ಒಪ್ಪಂದದ ದುರುಪಯೋಗವಾಗುತ್ತಿದೆ ಎಂದು ಆಘಾತ ವ್ಯಕ್ತಪಡಿಸಿದ ಅವರು ಅಂಬೇಡ್ಕರ್ ಅವರು ಜಗತ್ತಿನ ಎಲ್ಲ ಸಂವಿಧಾನಗಳನ್ನು ಅಭ್ಯಸಿಸಿ ಭಾರತದ ಸಂವಿಧಾನವನ್ನು ರಚಿಸಿದರು. ಭಾರತದಲ್ಲಿ ಸಮಾಜವಾದಿ ಪ್ರಜಾಪ್ರಭುತ್ವ ಜಾರಿಗೊಳಿಸುವುದು ಅವರ ಉದ್ದೇಶವಾಗಿತ್ತು ಸಂವಿಧಾನದ ಪೀಠಕೆಯಲ್ಲಿ ನಮಗೆ ನಾವೇ ಅರ್ಪಿಸಿಕೊಳ್ಳುತ್ತಿದ್ದೇವೆ ಎಂದು ಬರೆದಿರುವುದು ಭಾರತದ ಎಲ್ಲರೂ ಅದ್ದನ್ನು ಒಪ್ಪಿಕೊಂಡಿದ್ದೇವೆ ಎಂಬುದಾಗಿದೆ. ಭಾರತದ ಸಂವಿಧಾನ ಒಂದು ಮಹಾಕಾವ್ಯವಾಗಿದೆ ಇತ್ತೀಚಿಗೆ ಸಂವಿಧಾನಕ್ಕೆ ಅಪಮಾನವಾಗುವ ಘಟನೆಗಳು ಜರುಗುತ್ತಿವೆ, ನಮ್ಮ ಸಂವಿಧಾನ ಇವತ್ತು ತನ್ನ ಪ್ರಸ್ತುತತೆ ಉಳಿಸಿಕೊಂಡಿದೆಯೇ ಎಂಬುದನ್ನು ಚಿಂತಿಸಬೇಕಿದೆ ಭಾರತ ಒಂದು ದೇಶವಲ್ಲ ಇದು ಹಲವು ದೇಶಗಳ ಒಂದು ಒಕ್ಕೂಟವಾಗಿದೆ ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡಲಾಗುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಡಾ. ಸುಜಾತಾ ಚಲವಾದಿ, ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಮಾನವೀಯತೆಯನ್ನು ಬೆಳೆಸಿಕೊಂಡು ನಾವು ವಿಶ್ವಮಾನವರಾಗಬೇಕು:ಡಾ ಕಲ್ಯಾಣಸಿರಿ ಭಂತೇಜಿ


ಈ ದಿವಸ ವಾರ್ತೆ ವಿಜಯಪುರ:

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಮಾನವೀಯತೆಯನ್ನು ಬೆಳೆಸಿಕೊಂಡು ನಾವು ವಿಶ್ವಮಾನವರಾಗಬೇಕು ಸಹೋದರತೆಯಿಂದ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು ನಮ್ಮ ಬದುಕಿನಲ್ಲಿ  ಭಾರತದಲ್ಲಿ ಬೆಳಕಾಗಿ ಬಂದ ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಇಂದಿನ ಭಾರತಕ್ಕೆ ಬುದ್ಧನ ಅಸ್ಟಾಂಗ ಮಾರ್ಗದ ಅವಶ್ಯಕತೆ ಇದೆ ಎಂದು ಮೈಸೂರು ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದ ನೇತೃತ್ವ ವಹಿಸಿ ಮಾತನಾಡಿದರು.ವೇದಿಕೆಯಲ್ಲಿ ಸಮ್ಮೇಳನ ಸರ್ವಧ್ಯಕ್ಷರಾದ ಪ್ರೊ ಎಚ್ ಟಿ ಪೋತೆ,ಡಾ ಬಿ ಎಂ ಪುಟ್ಟಯ್ಯ, ಡಾ ನಾರಾಯಣ ಪವಾರ ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ, ಚಿತ್ರದುಗ ಸಾಹಿತಿ ಬಿ.ಎಂ.ಗುರುನಾಥ  ವೇದಿಕೆಯಲ್ಲಿ ಇದ್ದರು.ಡಾ ಗುರುರಾಜ ಯರಗನಹಳ್ಳಿ ಕಾರ್ಯಕ್ರಮ ಸಂಯೋಜಿಸಿದರು ಅವಿನಾಶ ಹತ್ತರಕಿಹಾಳ ಸ್ವಾಗತಿಸಿದರು ಬಸವರಾಜ ಜಾಲವಾದಿ ನಿರೂಪಿಸಿದರು ಭಾರತಿ ಸಂಗಣ್ಣವರ ವಂದಿಸಿದರು.

ನಮ್ಮ ನಮ್ಮ ಸಮುದಾಯಗಳನ್ನು ಎಚ್ಚರಿಸುವ ಕೆಲಸ ಇಂದು ಮಾಡಬೇಕಿದೆ : ಬಿ ಎಂ ಗುರುನಾಥ



 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಜಾತಿ ಅನ್ನುವಂತಹದು ಈ ದೇಶದಲ್ಲಿ ಬಹು ಸಂಖ್ಯಾತರನ್ನು ಶೋಷಣೆಗೆ ಒಳಪಡಿಸಿದೆ ನಮ್ಮ ನಮ್ಮ ಸಮುದಾಯಗಳನ್ನು ಎಚ್ಚರಿಸುವ ಕೆಲಸ ಇಂದು ಮಾಡಬೇಕಿದೆ ಚರ್ಚೆಗಳು ನಾಲ್ಕು ಗೋಡೆ ಒಳಗಿನ ಭಾಷಣಕ್ಕೆ ಸೀಮಿತವಾಗದೆ ನಮ್ಮನ್ನು ನಂಬಿರುವ ಸಮುದಾಯದ ಒಳತಿಗಾಗಿ ಶ್ರಮಿಸಬೇಕಿದೆ ಎಂದು ಚಿತ್ರದುರ್ಗದ ಸಾಹಿತಿ ಬಿ ಎಂ ಗುರುನಾಥ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ,  ವೇದಿಕೆಯಲ್ಲಿ ಇದ್ದರು.

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ : ಡಾ.ಸೂರ್ಯಕಾಂತ ಸುಜ್ಯಾತ



 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಶಿಕ್ಷಣ ಪಡೆಯಲು ಅವಕಾಶ ಪಡೆದ ನಾವು ಅನಾಗರಿಕರಂತೆ ವರ್ತಿಸುತ್ತಿದ್ದೇವೆ, ಸುಶಿಕ್ಷಿತರಾದ ನಾವು ಆಳುವ ವರ್ಗ ಆಗದೆ ಆಳುಗಳಾಗಿದ್ದೇವೆ,ನಾವು ನೂರಕ್ಕೆ 90ರಷ್ಟು ಇರುವ ಜನರನ್ನು ಶಿಕ್ಷಣದಿಂದ ವಂಚಿಸಲು ಇಂದಿನ ಸರಕಾರ ಹೊಂಚುಹಾಕುತ್ತಿದೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ ಎಂದು ಕಲಬುರಗಿ ಸಾಹಿತಿ ಡಾ ಸೂರ್ಯಕಾಂತ ಸುಜ್ಯಾತ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, , ಚಿತ್ರದುಗ ಸಾಹಿತಿ ಬಿ.ಎಂ.ಗುರುನಾಥ ವೇದಿಕೆಯಲ್ಲಿ ಇದ್ದರು.

ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ: ಡಾ.ಸೋಮಕ್ಕ

ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಗಂಗಾವತಿ ಸಾಹಿತಿ ಡಾ ಸೋಮಕ್ಕ ಅವರು ಹೇಳಿದರು. ಅವರು  ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.ಭಾರತದ ಪ್ರತಿಯೊಬ್ಬರು ಗೊಡ್ಡು ಸಂಪ್ರದಾಯದಿಂದ ಹೊರ ಬರಬೇಕು ಮೊದಲ ಬಾರಿಗೆ ಬುದ್ಧನ ಕಾಲದಲ್ಲಿ,12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲದಲ್ಲಿ ಪ್ರಬುದ್ಧ ಭಾರತ ಬಂದಿತ್ತು ಪ್ರಸ್ತುತ ಸಂದರ್ಭದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಗಟ್ಟಿಗೊಳಿಸುವ ಮೂಲಕ ಪ್ರಬುದ್ಧ ಭಾರತ ಕಟ್ಟಬೇಕಿದೆ ನಾವು ಬುದ್ಧನ ರೀತಿಯಲ್ಲಿ ಎಚ್ಚಗೊಂಡಾಗ ಬಸವಣ್ಣನವರಂತೆ ತಳ ಸಮುದಾಯದವರನ್ನು ತಬ್ಬಿಕೊಂಡಾಗ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ , ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ, ಚಿತ್ರದುಗ ಸಾಹಿತಿ ಬಿ.ಎಂ.ಬಿರಾದಾರ ವೇದಿಕೆಯಲ್ಲಿ ಇದ್ದರು.

ಸಂವಿಧಾನವನ್ನು ಓದಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಕಷ್ಟದ ಕೆಲಸ: ಡಾ ಬಿ ಎಂ ಪುಟ್ಟಯ್ಯ

ಈ ದಿವಸ ವಾರ್ತೆ

ವಿಜಯಪುರ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ : ಗಾಂಧೀಜಿ ಕಲ್ಪನೆ ಸ್ವಾವಲಂಬಿ ಭಾರತವನ್ನು ಇರುವ ಹಾಗೆ ಮುಂದುವರೆಸಬೇಕೆಂಬುದಾಗಿತ್ತು. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನವರದು ಭಾರತವನ್ನು ಆಳಬೇಕೆಂಬುದಾಗಿತ್ತು, ಭಾರತದಲ್ಲಿ ತಲತಲಾತರದಿಂದ ಶೋಷಣೆಗೆ ಒಳಗಾದ ಬಹುಸಂಖ್ಯಾತರಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವುದಾಗಿತ್ತು ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ ಬಿ ಎಂ ಪುಟ್ಟಯ್ಯ ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಪ್ರಬುದ್ಧ ಭಾರತ ಎಂಬ ವಿಷಯದ ಕುರಿತು ವಿಷಯ ಮಂಡಿಸಿ ಮಾತನಾಡಿದರು. ಭಾರತದ ಸಂವಿಧಾನವನ್ನು ಓದಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಕಷ್ಟದ ಕೆಲಸ ಎಂದರು. ಪ್ರತಿಯೊಬ್ಬರು ಸಂವಿಧಾನದ ಆರ್ಟಿಕಲ್ 51 ಓದಿಕೊಳ್ಳಬೇಕು ಪ್ರಬುದ್ಧ ಭಾರತ ನಿರ್ಮಾಣಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಅಡ್ಡಿಯಾಗಿದೆ ಇದರಿಂದ ಭಾರತದಲ್ಲಿ ಜನರ ಇಂದ್ರಿಯಗಳು ಮಲಿನಗೊಂಡಿವೆ, ಭಾರತ ಸಂವಿಧಾನವನ್ನು ನಾವು ಕೇವಲ ಕಾನೂನು ಗ್ರಂಥಗಳೆಂದು ಪರಿಗಣಿಸಿದ್ದೇವೆ ಇದು ಕೇವಲ ಕಾನೂನು ಗ್ರಂಥವಾಗಿರದೆ ನೈತಿಕ, ಮನೋವೈಜ್ಞಾನಿಕ ಗ್ರಂಥವಾಗಿದೆ ಎಂದು ಹೇಳಿದರು.                   

ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.

ಮಕ್ಕಳಿಗೆ ಸಾಹಿತ್ಯವನ್ನು ಓದುವುದನ್ನು ಕಲಿಸಬೇಕು :ಗಜಲ್ ಕವಿ ಅಲ್ಲಾಗಿರಿರಾಜ್


ಈ ದಿವಸ ವಾರ್ತೆ

 ವಿಜಯಪುರ: ಅಕ್ಯಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಗಾಗಿ ಸಾಹಿತ್ಯ ಬರೆದು ವಿಧಾನಸೌಧ ಸುತ್ತುವುದನ್ನು ಬಿಟ್ಟು ಸಮಾಜದಲ್ಲಿನ ನೋವು ಸಂಕಟಗಳ ಬಗ್ಗೆ ಸಾಹಿತ್ಯ ರಚನೆ ಮಾಡಬೇಕಿದೆ ಎಂದು ಗಜಲ್ ಕವಿ ಅಲ್ಲಾಗಿರಿರಾಜ್ ಅವರು ಹೇಳಿದರು. ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಜುಲೈ 29 ಮತ್ತು 30ರಂದು ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು.ಕವಿ ಮತ್ತೊಬ್ಬ ಕವಿ ಯನ್ನು ಎಂದು ಪ್ರೀತಿಸಲಾರ ನೀವು ಬರೆದ ಪುಸ್ತಕಗಳನ್ನು ಹಮಾಲನಿಗೆ ಕೊಡಿ ಅವರು ನಿಮ್ಮ ಸಾಹಿತ್ಯವನ್ನು ಪ್ರೀತಿಸುತ್ತಾರೆ ನಮ್ಮ ಮನೆಯ ಮಕ್ಕಳಿಗೆ ಸಾಹಿತ್ಯವನ್ನು ಓದುವುದನ್ನು ಕಲಿಸಬೇಕು ಇಲ್ಲವಾದರೆ ಸಾಹಿತ್ಯ ಸಂಸ್ಕೃತಿ ಕಟ್ಟುವುದು ಕಷ್ಟಕರವಾಗಲಿದೆ ಎಂದರು. 

ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, ನಾಗಠಾಣ ಶಾಸಕ ವಿಠ್ಠಲ ಕಟಧೋಂಡ, ರಾಜು ಆಲಗೂರ, ಮುತ್ತಪ್ಪ ಪೋತೆ, ದಸಂಸ ರಾಜ್ಯ ಸಂಚಾಲಕ ಡಿ.ಜಿಸಾಗರ,  ಬಿ ಎಚ್ ನಾಡಗೇರಿ, ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ಉಪಾಧ್ಯಕ್ಚ ಡಾ. ವೈ.ಎಂ.ಭಜಂತ್ರಿ, ದಸಾಪ ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ,  ಸುಜಾತಾ ಚಲವಾದಿ, ಡಾ.ಗಾಂಧೀಜಿ ಮೊಳಕೇರಿ,ಹೇಮಲತಾ ವಸ್ತ್ರದ , ಸಿದ್ದು ರಾಯಣ್ಣವರ  ಇದ್ದರು.

ಸಂವಿಧಾನ ಉಳಿದರೆ ಎಲ್ಲ ಧರ್ಮಗ್ರಂಥಗಳು ಉಳಿಯಲು ಸಾಧ್ಯ:ಪ್ರೊ ಎಚ್ ಟಿ ಪೋತೆ


 ಈ ದಿವಸ ವಾರ್ತೆ

ವಿಜಯಪುರ: ಸಂವಿಧಾನ ಉಳಿದರೆ ಎಲ್ಲ ಧರ್ಮಗ್ರಂಥಗಳು ಉಳಿಯಲು ಸಾಧ್ಯ. ಯಾವ ದೇಶ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಂಸ್ಕೃತವನ್ನು ಕಲಿಯಲಿಕ್ಕೆ ಬಿಡಲಿಲ್ಲ ಅಂತಹ ದೇಶದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಮೂಲಕ ನೀಡಿದ ಸ್ವಾತಂತ್ರ್ಯದ ಮೂಲಕ ಇವತ್ತು ಮಲ್ಲೇಪುರಂ ಜಿ ವೆಂಕಟೇಶ್ ಅವರು ಇವತ್ತು ಸಂಸ್ಕೃತ ಪಾಳಿ ಭಾಷೆಯಲ್ಲಿ ಪಾಂಡಿತ್ಯ ಪಡೆದು ನಮ್ಮ ನಡುವೆ ಇದ್ದಾರೆ ಎಂದು ಪ್ರೊ ಎಚ್ ಟಿ ಪೋತೆ ಅವರು ಹೇಳಿದರು.     ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಾದಿ ಶರಣರ ಆತ್ಮಗಳು ಬೀದಿಯಲ್ಲಿ ಅಲೆದಾಡುತ್ತಿವೆ ಅವರ ಫೋಟೋಗಳಿಗೆ ಮಠಗಳಲ್ಲಿ ಜಾಗ ಸಿಕ್ಕಿದೆ ಎಂದು ಇಂದಿನ ಸಮಾಜದಲ್ಲಿ ಬುದ್ಧ ಬಸವ ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.         ದಲಿತ ಸಾಹಿತಿಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಇಂದು ದಲಿತ ಸಾಹಿತ್ಯ ಬಹಳ ವಿಶಾಲವಾಗಿ ಬೆಳದಿದೆ. ಅಸ್ಪೃಶ್ಯತೆ ಕಾರಣಕ್ಕೆ ಭಾರತ ಅಂಗವಿಕಲ ಭಾರತವಾಗಿ ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಭಾರತದ ಮಣಿಪುರದಲ್ಲಿ ಈಚೆಗೆ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ ವಿಷಯ ಇದರ ವಿರುದ್ಧ ಸಂಘಟಿತ ಹೋರಾಟ ಅವಶ್ಯಕತೆಯಿದೆ ಎಂದರು.

ದಲಿತ ಸಾಹಿತ್ಯ ಸಮಾಜದಲ್ಲಿ ಒಂದು ಹೊಸ ಚಳುವಳಿ ಕಟ್ಟುತ್ತಿರುವುದು ಹೆಮ್ಮೆಯ ವಿಷಯ : ಡಿ.ಜಿ.ಸಾಗರ


ಈ ದಿವಸ ವಾರ್ತೆ

 ವಿಜಯಪುರ: ಪ್ರಬುದ್ಧ ಭಾರತ ಮುನ್ನೊಟದೊಂದಿಗೆ ನಡೆಯುತ್ತಿರುವ ದಲಿತ ಸಾಹಿತ್ಯ ಸಮ್ಮೇಳನ ಸಮಾಜದಲ್ಲಿ ಬೆರೂರಿರುವ ಅಸಮಾನತೆಯನ್ನು ತೊಡೆದು ಹಾಕುವ ಕಾರ್ಯವನ್ನು ಮಾಡುತ್ತಿರುವ ದಲಿತ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಸಾಮಾಜಿಕ ಸಮಾನತೆಯ ಬಗ್ಗೆ ಚಿಂತನೆ ಮಾಡುವ ಮೂಲಕ ಪ್ರಬುದ್ಧ ಭಾರತ ಕಟ್ಟಲಿಕ್ಕೆ ಶ್ರಮಿಸುತ್ತಿದೆ. ದಲಿತರ ನೋವಿನ ಕಥೆಗಳು ಹೇಳುವ ದಲಿತ ಸಾಹಿತ್ಯ ಸಮಾಜದಲ್ಲಿ ಒಂದು ಹೊಸ ಚಳುವಳಿ ಕಟ್ಟುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ ಜಿ ಸಾಗರ ಅವರು ಹೇಳಿದರು.                            ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟಿಸಿ  ಮಾತನಾಡಿದರು.                          ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, 

 ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ಉಪಾಧ್ಯಕ್ಚ ಡಾ. ವೈ.ಎಂ.ಭಜಂತ್ರಿ, ದಸಾಪ ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ, ಸುಜಾತಾ ಚಲವಾದಿ, ಡಾ.ಗಾಂಧೀಜಿ ಮೊಳಕೇರಿ ಇದ್ದರು.

ಪ್ರಬುದ್ಧ ಭಾರತ ಕಲ್ಪನೆಯಲ್ಲಿ ಮಾಡುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಲಿ ; ಸಚಿವ ಎಂ.ಬಿ.ಪಾಟೀಲ


ಈ ದಿವಸ ವಾರ್ತೆ

ವಿಜಯಪುರ: ನೈಜಯವಾಗಿರುವ ಸಾಹಿತ್ಯ ದಲಿತ ಸಾಹಿತ್ಯ ಅದು ದಲಿತರ ಸಾಮಾಜಿಕ ಸಮಸ್ಯೆಗಳ ಸುತ್ತ ರಚನೆ ಆಗಿರುವಂತಹದು 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದಂತಹ ಸಾಮಾಜಿಕ ಕ್ರಾಂತಿಯನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೆರವೇರಿಸಿದ್ದಾರೆ ದಲಿತ ಸಾಹಿತ್ಯ ಬಹಳ ಶ್ರೇಷ್ಠವಾದುದು ಪ್ರಬುದ್ಧ ಭಾರತ ಕಲ್ಪನೆಯಲ್ಲಿ ಮಾಡುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಬೃಹತ್  ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು.        ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನವನ್ನು ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.         ಪ್ರಾಸ್ತವಿಕವಾಗಿ ದಸಾಪ ರಾಜ್ಯ ಉಪಾಧ್ಯಕ್ಷ ವೈ ಎಂ ಭಜಂತ್ರಿ ಅವರು ಮಾತನಾಡಿ 25 ವರ್ಷಗಳ ಸಂಘಟನೆಯಲ್ಲಿ ಬೆವರು ಹನಿಗಳಿವೆ ಅವು ಸಸಿಯಾಗಿ ಮರವಾಗಿ ನಮ್ಮವರಿಗೆ ಫಲ ನೀಡಿದರೆ ನಮ್ಮ ದಲಿತ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಸಂಘಟನೆ ಸಾರ್ಥಕವಾಗುತ್ತದೆ ಎಂದರು. ದಲಿತ ಸಾಹಿತ್ಯ ಪರಿಷತ್ತು ಉತ್ತರ ಕರ್ನಾಟಕದ ಕೌದಿಯಂತಿದೆ ಅದರೊಳಗೆ ತುಂಡು ತುಂಡು ಬಟ್ಟೆಗಳಿವೆ ಅವುಗಳನ್ನು ಜೋಡಿಸುವ ಕಾರ್ಯವನ್ನು ನಮ್ಮ ರಾಜ್ಯಾಧ್ಯಕ್ಷರಾದ ಡಾ ಅರ್ಜುನ ಗೊಳಸಂಗಿ ಅವರು ಮಾಡಿದ್ದಾರೆ ಎಂದರು. 


ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, ನಾಗಠಾಣ ಶಾಸಕ ವಿಠ್ಠಲ ಕಟಧೋಂಡ, ಮಾಜಿ ಶಾಸಕ ರಾಜು ಆಲಗೂರ, ಮುತ್ತಪ್ಪ ಪೋತೆ, ದಸಂಸ ರಾಜ್ಯ ಸಂಚಾಲಕ ಡಿ.ಜಿಸಾಗರ,  ಬಿ ಎಚ್ ನಾಡಗೇರಿ, ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ,  ಸುಜಾತಾ ಚಲವಾದಿ, ತಾಲೂಕು ಅಧ್ಯಕ್ಷೆ ಡಾ ಪೂರ್ಣಿಮಾ ಧಾಮಣ್ಣವರ ಡಾ.ಗಾಂಧೀಜಿ ಮೊಳಕೇರಿ,ಹೇಮಲತಾ ವಸ್ತ್ರದ  ಸಿದ್ದು ರಾಯಣ್ಣವರ  ಇದ್ದರು.