Monday, July 17, 2023

ಅಧ್ಯಕ್ಷರಾಗಿ ರಾಧಾ ತಾವರಗೇರಿ ಆಯ್ಕೆ

ಈ ದಿವಸ ವಾರ್ತೆ

ವಿಜಯಪುರ:  ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆಯ ವಿಜಯಪುರ ಜಿಲ್ಲಾ ಘಟಕದ ಬ್ರಾಹ್ಮಣ ಮಹಿಳಾ ರಾಜಕೀಯ ವೇದಿಕೆಯ ಅಧ್ಯಕ್ಷರಾಗಿ  ರಾಧಾ ತಾವರಗೇರಿ ಅವರು ಆಯ್ಕೆ ಆಗಿದ್ದಾರೆ.

 ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ರಾಘವೇಂದ್ರ ಅಲಗೂರ ಹಾಗೂ ಸಂಚಾಲಕರಾದ ಕೃಷ್ಣಾಜಿ ಕುಲಕರ್ಣಿ ಅವರು  ತಾವರಗೇರಿ ಅವರನ್ನು ಅಭಿನಂದಿಸಿ, ಎಲ್ಲ ತಾಲೂಕುಗಳಿಗೆ ಪ್ರಾತಿನಿಧ್ಯ ನೀಡಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಮಾಡಲು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ನೇಮಕ,ಆಯ್ಕೆ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಅಪ್ಪ


ಕಿರುಬೆರಳ ಹಿಡಿದು ನಡೆಸಿದಾತನು

ಕೈ ಮಾಡಿದೆಲ್ಲವ ಕೊಡಿಸುವಾತನು

ಈ ಜಗಕ್ಕೆ ನನ್ನನ್ನು ತಂದವನು

ನನ್ನ ಮೊದಲ ಸ್ನೇಹಿತ ನೀನು

ಅಪ್ಪ ನನ್ನ ಅಪ್ಪ..


ಬಡವ ನಿನಾದರೂ ಅಪ್ಪ

ಬಡತನದ ಸೋಂಕು ನನಗೆ ತಗುಲಿಸಲಿಲ್ಲ

ಬರೀ ಹೊಟ್ಟೆಯಲ್ಲಿ ನೀ ಮಲಗಿರಲೂ ಬಹುದು ಆದರೆ

ಹಸಿವಿನ ಪರಿಚಯವೇ ನನಗೆ ಮಾಡಿಸಲಿಲ್ಲ

ಜರಿ ಬಟ್ಟೆಯ ನಾನುಟ್ಟರೂ ಇದು ನಿನ್ನ ಹರಿದ ಅಂಗಿಯ ಭಿಕ್ಷೆ ನಾನೆಂದು ಮರೆಯುವುದಿಲ್ಲ

ನಿನಗಿಂತ ಶ್ರೀಮಂತ ವ್ಯಕ್ತಿ ನನ್ನ ದೃಷ್ಟಿಲೀ ಬೇರಾರು ಇಲ್ಲ

ಅಪ್ಪ ಬೇರಾರು ಇಲ್ಲ..


ಲೆಕ್ಕವೇ ಬಾರದಷ್ಟು ಮುಗ್ದ ನನ್ನಪ್ಪ

ಲೆಕ್ಕವಿಲ್ಲದಷ್ಟು ಖುಷಿಯ ನನ್ನ ಕಾಲಡಿ ಇಟ್ಟವನು

ಗಂಡು ಮಗನಿಗಿಂತ ಹೆಚ್ಚಿನ ಸ್ವಾತಂತ್ರವ ನನಗಾಗಿ ಕೊಟ್ಟವನು

ನಾ ಕಂಡ ಕನಸುಗಳಿಗೆಲ್ಲ ರೆಕ್ಕೆ ಕಟ್ಟಿ ಹಾರಲು ಬಿಟ್ಟವನು

ನನ್ನಮ್ಮ ನನ್ನ ಮೊದಲ ದೇವರಾದರೇನು ಆ ದೇವರಿಗೂ, ದೇವರಾದವನು ನೀನು

ಅಪ್ಪ ನನ್ನ ಅಪ್ಪ...


ಶೋಭಾ ಹರಿಜನ

ಎಂ.ಎ. ವಿದ್ಯಾರ್ಥಿ

ಗ್ರಾಮ ಯಂಭತ್ನಾಳ

ತಾಲೂಕು : ಬಸವನ ಬಾಗೇವಾಡಿ

ಜಿಲ್ಲೆ : ವಿಜಯಪುರ


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.