Saturday, August 27, 2022

ರಾಷ್ಟ್ರ ಮಟ್ಟದ ರಾಯಣ್ಣ ಭೂಷಣ ಪ್ರಶಸ್ತಿಗೆ ರುದ್ರಪ್ಪ , ಪರಶುರಾಮ ಆಯ್ಕೆ



ರುದ್ರಪ್ಪ ಆಸಂಗಿ

ಪರಶುರಾಮ ಶಿವಶರಣ


ಈ ದಿವಸ ವಾರ್ತೆ

ವಿಜಯಪುರ: ಅಖಿಲ ಭಾರತ ಹಾಲುಮತ ಸಾಹಿತ್ಯ ಪರಿಷತ್ತು ಹಾಗೂ ಕನಕ ಸಾಹಿತ್ಯ ಪ್ರತಿಷ್ಠಾನ ವಿಜಯಪುರ ವತಿಯಿಂದ ಕೊಡಮಾಡುವ ರಾಷ್ಟ್ರಮಟ್ಟದ ರಾಯಣ್ಣ ಭೂಷಣ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಹಾಗೂ ಪರಶುರಾಮ ಶಿವಶರಣ ಅವರು ಆಯ್ಕೆಯಾಗಿದ್ದಾರೆ . ಪತ್ರಿಕಾ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗೈದ ಹಿನ್ನಲೆ ರಾಷ್ಟ್ರ ಮಟ್ಟದ ರಾಯಣ್ಣ ಭೂಷಣ ಪ್ರಶಸ್ತಿಯನ್ನು  ಆ.28 ರಂದು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ‌ ವಿತರಣಾ ಕಾರ್ಯಕ್ರಮವು ಚೇತನಾ ಶಿಕ್ಷಣ ಸಂಸ್ಥೆ ಆವರಣ ವಿಜಯಪುರದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಕೊಳಮಲಿ ತಿಳಿಸಿದ್ದಾರೆ.