Saturday, June 13, 2020

ರಕ್ತ ದಾನ ಮಹಾ ದಾನ



ಜಾತಿ ಯಾವುದಾದರೇನು ರಕುತದ ಬಣ್ಣ ಒಂದು .. 
ರಕುತ ದಾನದಿ ಉಳಿಯಬಲ್ಲದು ಜೀವವೊಂದು.. 

ರಕ್ತದಾನ ಮಹಾದಾನ... 
ರಕ್ತದಾನ ಜೀವದಾನ...
ರಕ್ತದಾನದಿ ಬೆಳಗೋದು ಜೀವನ...

ಹದಿನೆಂಟರ ಭಂಟ .. 
ನಲ್ವತ್ತೈದರ ತೂಕವ ಹೊಂದಿದ್ದರೆ ನೀನೆ ನೆಂಟ..
ಇರಬೇಕು ಹಿಮೋಗ್ಲೋಬಿನ್   12.5gm% ಕನಿಷ್ಟ...
ನೀನಾಗಿರಬೇಕು  ಆರೋಗ್ಯ ದೇಹದ ಪಂಟ...
ನಿನಗಿರಬಾರದು   ಮಾರಕ ಖಾಯಿಲೆಗಳ ನಂಟು...
ರಕ್ತದಾನ ಮಾಡಿ  ನೀನಾಗುವೆ  ನೆಂಟ...

ರಕ್ತ  ದಾನದಿ  ಮೊದಲು ನೀ ಅರಿಯಬೇಕು 
ರಕ್ತ ದಾನಕೆ ನೀ ಯೋಗ್ಯನಾಗಿರಬೇಕು..
ನಿನ್ನ ರಕ್ತದ  ಗುಂಪ ಪರೀಕ್ಷಿಸಬೇಕು..
ರಕ್ತವ ಪಡೆಯುವ ಜೀವದ ಹನಿಗೆ ನಿನ್ನ ರಕ್ತದ ಹನಿ ಹೊಂದಿಕೆಯಾಗಬೇಕು..
ನಿನ್ನ ರಕ್ತದಲಿ  ಇರಬಾರದು ಆಲ್ಕೋಹಾಲ್ ನ  ಗುಟುಕು..

ರಕ್ತದಾನದಿ ಮೊದಲು ನೀ ಸೇವಿಸು ಉತ್ತಮ ಆಹಾರ.. 
ಉಪವಾಸದಿ  ನೀ ರಕ್ತ ದಾನಿಯಾದರೆ ರೋಗದ ಪ್ರಹಾರ..
ರಕ್ತದಾನದಿ ನಂತರ ನೀ ಸೇವಿಸು ಪೌಷ್ಟಿಕ ಆಹಾರ...
ನಿನ್ನ ಅಲಂಕರಿಸುವುದು  ಆರೋಗ್ಯದ ಹಾರ.. 

ರಕ್ತದಾನದಿ ನೀ ಪಡೆವೆ  ಸದೃಢ ಕಾಯ...
ರಕ್ತದಾನದಿ ಹಲವು ರೋಗಗಳು ಮಾಯಾ...

ರಕ್ತದಾನ ಶ್ರೇಷ್ಠ ದಾನ...
ಜೀವವ  ಉಳಿಸಲು  ಇರುವ ದಾನ.. 
ಜಾತಿ ಭೇದವಿಲ್ಲದೆ ಮಾಡುವ ದಾನ...
ಬಡವ - ಬಲ್ಲಿದ  ಅನ್ನೋ ಹಂಗಿಲ್ಲದ  ದಾನ..
ಇದನ ಅರಿತು ಮಾನವರೆಲ್ಲ ಒಂದಾಗೋಣ...


ಸಮಿತ ಶೆಟ್ಟಿ 
ಸಿದ್ಧಕಟ್ಟೆ, ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಕವಿತೆಯಾಗಬೇಕು..!



ಸಹಜ ಆಶಯ
ಸರಳ ಭಾಷೆ
ಸುಲಲಿತವಾಗಿ ಸೇರಿ
ಕವಿತೆಯಾಗಬೇಕು!

ದ್ವಂದ್ವ ಬೇಡ
ಧ್ವನಿ ಬೇಡ
ಭಾವದ ದನಿ ಭಾಷೆಯಾಗಿ
ಕವಿತೆಯಾಗಬೇಕು.

ಛಂದ ಬೇಡ,
ಬಂದ ಬೇಡ,
ಭಾವ ಭಾಷೆಗಳ ಬಂಧನ
ಕವಿತೆಯಾಗಬೇಕು.

ಪ್ರಾಸವೇಕೆ?
ಲಯ ಬೇಕೆ?
ಎದೆಯ ಮಾತು ಅಕ್ಷರವಾಗಿ
ಕವಿತೆಯಾಗಬೇಕು.

ಚೆಲುವಿಗೆ ಕನ್ನಡಿಯಾಗಿ
ಒಲವಿಗೆ ಮುನ್ನುಡಿಯಾಗಿ
ಚೆಲುವು-ಒಲವುಗಳ ಚೆಲುವಿನ ವ್ಯಾಖ್ಯಾನ
ಕವಿತೆಯಾಗಬೇಕು.

ವಾಸ್ತವತೆಗೆ ಪ್ರತಿಬಿಂಬವಾಗಿ.
ಸಮಾಜಕ್ಕೆ ಗತಿಬಿಂಬವಾಗಿ.
ಜೊತೆ -ಜೊತೆ ಸಾಗುವ ಸಾಲುಗಳು.
ಕವಿತೆಯಾಗಬೇಕು.

ಅಂಬರೀಷ ಎಸ್. ಪೂಜಾರಿ.