Saturday, August 5, 2023

3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಶ್ರಾವಣಿ

 


ಈ ದಿವಸ ವಾರ್ತೆ

ವಿಜಯಪುರ  : ಇಂಡಿಯಲ್ಲಿ ವಾಸವಿರುವ ಬಿ.ಕೆ.ಹೊಸಮನಿ ಹಾಗೂ ಮಲ್ಲಮ್ಮ ಅವರ ಮೊಮ್ಮಗಳಾದ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ತಾಯಿ ಸಾವಿತ್ರಿ  ಮಣೂರ, ನವದೆಹಲಿಯ ಕರ್ನಾಟಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂದೆ ನಾಗರಾಜ್ ಹೊಸಮನಿ ಅವರ ಮುದ್ದಿನ ಮಗಳಾದ

 ಶ್ರಾವಣಿಯ  3ನೇ ಹುಟ್ಟು ಹಬ್ಬವನ್ನು ಇಂದು ಆಚರಿಸಲಾಯಿತು.

ಮನೆಯ ಸದಸ್ಯರಾದ ವಾರ್ತಾಧಿಕಾರಿ ಅಮರೇಶ ದೊಡಮನಿ, ರೇಣುಕಾ ದೊಡಮನಿ, ರೈಲ್ವೆ ಇಲಾಖೆಯ ಶರಣು ಹೊಸಮನಿ,ಚಂದ್ರಶೇಖರ ಹೊಸಮನಿ, ರಾಘವೇಂದ್ರ ಹೊಸಮನಿ,ಮಲ್ಲಿಕಾರ್ಜುನ ಹೊಸಮನಿ, ಯೋಗಿತಾ ದೊಡಮನಿ, ಮಂಜುಳಾ, ಜ್ಯೋತಿ ಹೊಸಮನಿ ಹಾಗೂ ಪ್ರೇಮಾ ಶ್ರಾವಣಿಯ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದರು.

06-08-2023 EE DIVASA KANNADA DAILY NEWS PAPER

ನಮ್ಮೂರ ಸಿರಿ ಹಾಡು ಬಿಡುಗಡೆಗೊಳಿಸಿದ : ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ


 ಈ ದಿವಸ ವಾರ್ತೆ

ವಿಜಯಪುರ : ವಿಜಯಪುರದ ಯುವ ಸಾಹಿತಿ ಸೋಮು ಹಿಪ್ಪರಗಿ ಅವರ ವಿರಚಿತ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ಐತಿಹಾಸಿಕ ಸಾಂಸ್ಕೃತಿಕ ಗತ ಇತಿಹಾಸ ಸಾರುವ ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದೆ ಬೆಂಗಳೂರಿನ ಸವಿತಾ ಗಣೇಶ ಪ್ರಸಾದ ಕಲಾವಿದೆ ಅವರ ಸಂಗೀತ ಮತ್ತು ಗಾಯನದಲ್ಲಿ ಸೊಗಸಾಗಿ ಮೂಡಿಬಂದ ನಮ್ಮೂರ ಸಿರಿ ಎನ್ನುವ ಹಾಡನ್ನು ಪತ್ರಕರ್ತ ಹಾಗೂ ಸಾಹಿತಿ ಪರಶುರಾಮ ಶಿವಶರಣ ಅವರು ಬಿಡುಗಡೆಗೊಳಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವ ಸಾಹಿತಿ ಸೋಮು ಎಚ್. ಹಿಪ್ಪರಗಿ ಅವರು ರಚಿಸಿದ ಹಲವು ಹಾಡುಗಳು ನಾಡಿನ ಖ್ಯಾತ ಸಂಗೀತ ಸಂಗೀತಗಾರರಿAದ ಸಂಯೋಜನೆಗೊAಡು ಈಗಾಗಲೇ ಬಿಡುಗಡೆಗೊಂಡು ಜನಪ್ರಿಯತೆಗಳಿಸಿವೆ. ವಿಜಯಪುರದ ಇತಿಹಾಸ ಸಾರುವ ವಿಜಯಪುರ ಗುಮ್ಮಟಗಳ ನಾಡು ನಮ್ಮೂರು.... ಕಲೆ ಸಿರಿಯ ಕಾವ್ಯದ ಬೀಡು ನಮ್ಮೂರು ಹಾಡು ಕೂಡ ಮುಂದಿನ ದಿನಗಳಲ್ಲಿ ಜನಪ್ರಿಯತೆಗಳಿಸಿ ಸೋಮು ಅವರು ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಹಾಗೂ ಸಾಹಿತಿ ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಬಸವರಾಜ ಬೆಲ್ಲದ, ವಿಜಯ ಹಿರೇಮಠ, ರಾಹುಲ ಟೋಣೆ, ರಾಹುಲ ಮೆಳ್ಳಿ, ಅಭಿಷೇಕ ಭಜಂತ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ( ಅಮೃತ ಭಾರತಿ ಯೂಟ್ಯೂಬ್‌ನಲ್ಲಿ ಹಾಡು ಕೇಳಲು https://youtu.be/VyZaKv-oN3I ಲಿಂಕ್ ಮೇಲೆ ಕ್ಲಿಕ್ ಮಾಡಿ).