Sunday, May 31, 2020

ಲಾಕಡೌನ್ ಸಮಯದಲ್ಲಿ ಪುಣ್ಯಕೋಟಿಯ ಹಸಿವನ್ನುನಿಗಿಸಿದ ಅಪ್ಪುಗೌಡ ಪಾಟೀಲ ಯತ್ನಾಳ


ಈ ದಿವಸ ವಾರ್ತೆ
ವಿಜಯಪುರ: ಪುಣ್ಯಕೋಟಿ ಗೋ ರಕ್ಷಾ ಕೇಂದ್ರಕ್ಕೆ ಖುದ್ದಾಗಿ ಆಗಮಿಸಿ ಮೇವಿನ ಅಗತ್ಯತೆಯನ್ನು ತಿಳಿದ ಸಹೃದಯಿಗಳು. ಮರುಕ್ಷಣವೇ ಗೋಮಾತೆಯ ಮೇಲಿನ ಕಾಳಜಿಯಿಂದ ಶನಿವಾರ ದಂದು ಬುರಣಾಪೂರದಲ್ಲಿನ ಪುಣ್ಯಕೋಟಿ ಗೋರಕ್ಷಾ ಕೇಂದ್ರಕ್ಕೆ ಐದು ಟ್ರ್ಯಾಕ್ಟರಗಳ ಮೇವನ್ನು ಅಪ್ಪುಗೌಡ ಪಾಟೀಲ ಯತ್ನಾಳರವರು ದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ಬಸನಗೌಡ ಬಿರಾದಾರ ಮಾತನಾಡಿ,  ತಮ್ಮ ಸಹಾಯಕ್ಕೆ ನಮ್ಮ ಇಡೀ ಪುಣ್ಯಕೋಟಿ ತಂಡವು ಋಣಿಯಾಗಿದೆ. ಇಲ್ಲಿಯವರೆಗೂ ತಾವು ನಮ್ಮ ಪುಣ್ಯಕೋಟಿಗಿ ಒಬ್ಬ ಬಂಧುವಾಗಿ ಹಾಗೇಯೆ ಬೆನ್ನೆಲುಬಾಗಿ ಇದ್ದಿರಿ. ನಿಮ್ಮ ಸಹಾಯ ಸಹಕಾರ ಸದಾ ಕಾಲ ಹೀಗೆ ಇರಲಿ ಎಂದು ಆಶಿಸುತ್ತೇವೆ. ತಮಗೆ ತಾಯಿ ಗೋಮಾತೆಯು ಆಯುರಾರೋಗ್ಯ ಮತ್ತು ಸಕಲ ಸಿರಿ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.

01-06-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಇಂದು 26 ಜನರಿಗೆ ಕೋವಿಡ್-19 ಪಾಸಿಟಿವ್ ದೃಢ : ಸೋಂಕಿತರ ಸಂಖ್ಯೆ 122 ಕ್ಕೆ ಏರಿಕೆ


ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಈವರೆಗೆ ಒಟ್ಟು 122 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 62 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು 26 ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, ಮಹಾರಾಷ್ಟ್ರದ ಸಂಪರ್ಕದಿಂದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ 2923 (70 ವರ್ಷ - ಪುರುಷ), ರೋಗಿ ಸಂಖ್ಯೆ 2924 (55 ವರ್ಷ - ಪುರುಷ), ರೋಗಿ ಸಂಖ್ಯೆ 2925 (55 ವರ್ಷ ಮಹಿಳೆ), ರೋಗಿ ಸಂಖ್ಯೆ 2926 (38 ವರ್ಷ ಪುರುಷ), ರೋಗಿ ಸಂಖ್ಯೆ 2927 (28 ವರ್ಷ ಮಹಿಳೆ), ರೋಗಿ ಸಂಖ್ಯೆ 2928 (38 ವರ್ಷ ಪುರುಷ), ರೋಗಿ ಸಂಖ್ಯೆ 2929 (30 ವರ್ಷ ಪುರುಷ), ರೋಗಿ ಸಂಖ್ಯೆ 3011 (51 ವರ್ಷ ಪುರುಷ), ರೋಗಿ ಸಂಖ್ಯೆ 3013 (15 ವರ್ಷ ಬಾಲಕ), ರೋಗಿ ಸಂಖ್ಯೆ 3014 (46 ವರ್ಷ ಪುರುಷ), ರೋಗಿ ಸಂಖ್ಯೆ 3151 (04 ವರ್ಷ ಬಾಲಕಿ) ರೋಗಿ ಸಂಖ್ಯೆ 3152 (45 ವರ್ಷ – ಮಹಿಳೆ), ರೋಗಿ ಸಂಖ್ಯೆ 3153 (35 ವರ್ಷ – ಮಹಿಳೆ), ರೋಗಿ ಸಂಖ್ಯೆ 3154 (23 ವರ್ಷ ಯುವತಿ), ರೋಗಿ ಸಂಖ್ಯೆ 3157 (22 ವರ್ಷ ಯುವಕ), ರೋಗಿ ಸಂಖ್ಯೆ 3171 (33 ವರ್ಷ ಯುವಕ), ರೋಗಿ ಸಂಖ್ಯೆ 3172 (59 ವರ್ಷ ಪುರುಷ), ರೋಗಿ ಸಂಖ್ಯೆ 3173 (37 ವರ್ಷ ಪುರುಷ), ರೋಗಿ ಸಂಖ್ಯೆ 3174 (05 ವರ್ಷ ಬಾಲಕ), ರೋಗಿ ಸಂಖ್ಯೆ 3175 (02 ವರ್ಷ ಬಾಲಕ), ರೋಗಿ ಸಂಖ್ಯೆ 3176 (20 ವರ್ಷ ಯುವತಿ), ರೋಗಿ ಸಂಖ್ಯೆ 3177 (54 ವರ್ಷ ಮಹಿಳೆ) ರೋಗಿ ಸಂಖ್ಯೆ 3178 (30 ವರ್ಷ – ಯುವಕ), ರೋಗಿ ಸಂಖ್ಯೆ 3179 (22 ವರ್ಷ – ಯುವಕ), ರೋಗಿ ಸಂಖ್ಯೆ 3180 (25 ವರ್ಷ ಯುವತಿ), ರೋಗಿ ಸಂಖ್ಯೆ 3181 (03 ವರ್ಷ ಬಾಲಕಿ) ಇವರಿಗೆ ಮಹಾರಾಷ್ಟ್ರದ ಸಂಪರ್ಕದಿಂದ ಕೋವಿಡ್-19 ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27384 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 122 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 6838 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 20486 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 55 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 62 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 24511 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 17047ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 7342 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ. ಹಾಗೂ 21706 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, 3025 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Saturday, May 30, 2020

ಪಟ್ಟಣಶೆಟ್ಟಿಗೆ ಎಂಎಲ್‍ಸಿ ಮಾಡುವಂತೆ ಅಭಿಯಾನ


ಈ ದಿವಸ ವಾರ್ತೆ
ವಿಜಯಪುರ: ಬಿಜೆಪಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರನ್ನು ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡಬೇಕು ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದು, ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.
ಈ ಹಿಂದೆ ಎರಡು ಬಾರಿ ವಿಜಯಪುರ ವಿಧಾನಸಭಾ ನಗರ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿ, ಒಮ್ಮೆ ಜವಳಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿರುವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂಬ ಕೂಗಿ ಕೇಳಿ ಬರುತ್ತಿದೆ.

11 ಜನರಲ್ಲಿ ಸೋಂಕು ಪತ್ತೆ, ಸೋಂಕಿತರ ಸಂಖ್ಯೆ 96 ಕ್ಕೆ ಏರಿಕೆ



ಈ ದಿವಸ ವಾರ್ತೆ 
ವಿಜಯಪುರ: ಜಿಲ್ಲೆಯಲ್ಲಿ ಶನಿವಾರ 11 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವಿಗೀಡಾಗಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 96 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದಿಂದ ಆಗಮಿಸಿದ ಕಾರ್ಮಿಕರಾದ ರೋಗಿ ಸಂಖ್ಯೆ 2784ರ 32 ವರ್ಷದ ಪುರುಷ, ರೋಗಿ ಸಂಖ್ಯೆ 2835ರ 28 ವರ್ಷದ ಪುರುಷ, ರೋಗಿ ಸಂಖ್ಯೆ 2836ರ 20 ವರ್ಷದ ಯುವಕ, ರೋಗಿ ಸಂಖ್ಯೆ 2837ರ 35 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 2838ರ 30 ವರ್ಷದ ಮಹಿಳೆ, ರೋಗಿ ಸಂಖ್ಯೆ 2839ರ 37 ವರ್ಷದ ಮಹಿಳೆ, ರೋಗಿ ಸಂಖ್ಯೆ 2840ರ 14 ವರ್ಷದ ಬಾಲಕಿ, ರೋಗಿ ಸಂಖ್ಯೆ 2841ರ 28 ವರ್ಷದ ಯುವಕ, ರೋಗಿ ಸಂಖ್ಯೆ 2842ರ 35 ವರ್ಷದ ಮಹಿಳೆ, ರೋಗಿ ಸಂಖ್ಯೆ 2843ರ 18 ವರ್ಷದ ಯುವಕ, ರೋಗಿ ಸಂಖ್ಯೆ 2844ರ 15 ವರ್ಷದ ಬಾಲಕ ಸೇರಿದಂತೆ ಒಟ್ಟು 11 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈಗಾಗಲೇ ಸೋಂಕಿನಿಂದ ಬಳಲುತ್ತಿದ್ದವರಲ್ಲಿ 54 ಸೋಂಕಿತರು ಗುಣಮುಖಗೊಂಡು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

31-05-2020 EE DIVASA KANNADA DAILY NEWS PAPER

ವಿಜಯಪುರ: ಒಟ್ಟು 55 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ



ಈ ದಿವಸ ವಾರ್ತೆ
ವಿಜಯಪುರ : ಕೋವಿಡ್ -19 ದಿಂದ ಗುಣಮುಖರಾದ ಓರ್ವ ಮಹಿಳೆ ರೋಗಿ ಸಂಖ್ಯೆ – 2136 (28 ವರ್ಷ ಮಹಿಳೆ) ಅವರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ ಜಿಲ್ಲೆಯ 55 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 96 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 36 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು 11 ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, ಮಹಾರಾಷ್ಟ್ರದ ಸಂಪರ್ಕದಿಂದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ. 

ಅದರಂತೆ ರೋಗಿ ಸಂಖ್ಯೆ 2784 (32 ವರ್ಷ - ಪುರುಷ), ರೋಗಿ ಸಂಖ್ಯೆ 2835 (28 ವರ್ಷ - ಪುರುಷ), ರೋಗಿ ಸಂಖ್ಯೆ 2836 (20 ವರ್ಷ ಯುವಕ), ರೋಗಿ ಸಂಖ್ಯೆ 2837 (35 ವರ್ಷ ಪುರುಷ), ರೋಗಿ ಸಂಖ್ಯೆ 2838 (30 ವರ್ಷ ಮಹಿಳೆ), ರೋಗಿ ಸಂಖ್ಯೆ 2839 (37 ವರ್ಷ ಮಹಿಳೆ), ರೋಗಿ ಸಂಖ್ಯೆ 2840 (14 ವರ್ಷ ಬಾಲಕಿ), ರೋಗಿ ಸಂಖ್ಯೆ 2841 (28 ವರ್ಷ ಪುರುಷ), ರೋಗಿ ಸಂಖ್ಯೆ 2842 (35 ವರ್ಷ ಮಹಿಳೆ), ರೋಗಿ ಸಂಖ್ಯೆ 2843 (18 ವರ್ಷ ಯುವಕ), ರೋಗಿ ಸಂಖ್ಯೆ 2844 (15 ವರ್ಷ ಬಾಲಕ) ಇವರಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27383 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 96 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 6828 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 20496 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 55 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 36 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 24511 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 14263 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 10152 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Friday, May 29, 2020

30-05-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಇಂದು ಮತ್ತೆ ೪ ಜನರಿಗೆ ಕೋವಿಡ್-೧೯ ಸೋಂಕು ದೃಢ – ಸೋಂಕಿತರ ಸಂಖ್ಯೆ ೮೫ ಕ್ಕೆ ಏರಿಕೆ


ಈ ದಿವಸ
ವಿಜಯಪುರ : ಜಿಲ್ಲೆಯಲ್ಲಿ ಇಂದು ಮಹಾರಾಷ್ಟçದಿಂದ ಆಗಮಿಸಿದ್ದ ೪ ಜನರಲ್ಲಿ ಕೋವಿಡ್-೧೯ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು, ಒಟ್ಟು ೮೫ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ. ಸಧ್ಯಕ್ಕೆ ೨೬ ರೋಗಿಗಳು ಮಾತ್ರ ಕೋವಿಡ್-೧೯ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದು ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ,ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೨೭,೩೮೩ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು ೮೫ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. ೬೭೨೬ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೨೦೫೯೯ ಜನರು (೧ ರಿಂದ ೨೮ ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೫ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೫೪ ಜನರು ಕೋವಿಡ್-೧೯ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ೨೬ ಜನರು ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ೨೩,೦೬೩ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೧೧,೮೯೪ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೧೧,೦೮೪ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್ ಕುಮಾರ್ ಅಮಾನತು


ಈ ದಿವಸ ವಾರ್ತೆ
ಸಿಂದಗಿ: ಇಲ್ಲಿಯ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರನ್ನು ಅಮಾನತುಗೊಳಿಸಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಎಸ್.ಹಿರೇಮಠ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಅನುದಾನಿತ ಶಿಕ್ಷಣ ಸಂಸ್ಥೆ ಕೊಂಡಗೂಳಿ ಕೇಶೀರಾಜ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಸಹ ಶಿಕ್ಷಕ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ
ಮಟ್ಟದ ದಿನಪತ್ರಿಕೆಯ ರಾಜ್ಯ ಪುಟದಲ್ಲಿ ಅರ್ಜಿ ಆಹ್ವಾನ ಮಾಡಿಲ್ಲ. ಹೀಗಾಗಿ ರಾಜ್ಯದ ಎಲ್ಲ ಮೆರಿಟ್ ಹೊಂದಿರುವ ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ನಿಯಮ ಉಲ್ಲಂಘನೆ ಆಗಿದ್ದು, ನೇಮಕಾತಿಯಲ್ಲಿ ಲೋಪವಾಗಿದೆ. ಈ ಕುರಿತು ಕಾರಣ ಕೇಳಿ ನೀಡಿದ ನೋಟಿಸ್‌ಗೆ ಸಮಂಜಸ ಉತ್ತರ ನೀಡಿಲ್ಲ. ಹೀಗಾಗಿ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Wednesday, May 27, 2020

ವಿಜಯಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 5 ಪಾಸಿಟಿವ್ ರೋಗಿಗಳ ಸಾವು : ಸೋಂಕು 79ಕ್ಕೆ ಏರಿಕೆ: ಡಿ.ಸಿ. ವೈ.ಎಸ್.ಪಾಟೀಲ್
 ಈ ದಿವಸ ವಾರ್ತೆ
ವಿಜಯಪುರ  : ತೀವ್ರ ಶ್ವಾಸಕೋಶ ತೊಂದರೆಯಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ 82 ವರ್ಷದ ವಯೋವೃದ್ಧ ರೋಗಿ ಸಂಖ್ಯೆ : 2011 ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. 

ಈ ರೋಗಿಯು ತೀವ್ರ ಶ್ವಾಸಕೋಶ ತೊಂದರೆ, ಹೃದಯ ಸಂಬಂಧಿತ ಕಾಯಿಲೆ, ಧೀರ್ಘಕಾಲಿನ ಸಕ್ಕರೆ ಕಾಯಿಲೆ, ಮತ್ತು ಕಾಲಿಗೆ ಹುಣ್ಣಾಗಿದ್ದರಿಂದ ಮೈ ಎಲ್ಲಾ ನಂಜೇರಿತ್ತು. ಅದರಂತೆ ನಿಮೋನಿಯಾದಿಂದಲೂ ಬಳಲುತ್ತಿದ್ದ ಅವರು ತಾತ್ಕಾಲಿಕ ಎರಡೂ ಮೂತ್ರಕೋಶಗಳು ವಿಫಲ ಕಾರಣಗಳಿಂದ ತಜ್ಞ ವೈದ್ಯರ ನಿರಂತರ ಪ್ರಯತ್ನ ಫಲಕಾರಿಯಾಗದೇ ರೋಗಿಯ ಸಾವಾಗಿದ್ದು, ಶಿಷ್ಟಾಚಾರದಂತೆ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ಇಂದು ಸಂಜೆಯ ಆರೋಗ್ಯ ಇಲಾಖೆಯ ವರದಿಯಂತೆ 16 ವರ್ಷದ ಬಾಲಕಿ ರೋಗಿ ಸಂಖ್ಯೆ 2411 ಇವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮಹಾರಾಷ್ಟ್ರ ಸಂಪರ್ಕದಿಂದ ದೃಢಪಟ್ಟಿದೆ. ಈವರೆಗೆ ಒಟ್ಟು ಜಿಲ್ಲೆಯಲ್ಲಿ 79 ಜನರು ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇವರಲ್ಲಿ ಈಗಾಗಲೇ 48 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 26 ಜನರು ಕೋವಿಡ್ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ಒಟ್ಟು 5 ಜನ ಕೋವಿಡ್ ಪಾಸಿಟಿವ್ ರೋಗಿಗಳು ಮೃತಪಟ್ಟಿದ್ದಾರೆಂದು ಅವರು ತಿಳಿಸಿದ್ದಾರೆ.
ಕೆ–ಸೆಟ್ 2020 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ತಜ್ಞರಿಂದ ಉಚಿತ ಆನ್‍ಲೈನ್ ತರಬೇತಿ
ಈ ದಿವಸ ವಾರ್ತೆ
ವಿಜಯಪುರ: ಕೆ–ಸೆಟ್ 2020 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವು ತಜ್ಞರಿಂದ ಉಚಿತ ಆನ್‍ಲೈನ್ ತರಬೇತಿ  ಹಮ್ಮಿ
ಕೊಂಡಿದೆ ಎಂದು ಕುಲಸಚಿವೆ ಪ್ರೊ.ಆರ್.ಸುನಂದಮ್ಮ ತಿಳಿಸಿದ್ದಾರೆ.ತರಬೇತಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ನಡೆಯಲಿದೆ. ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಕ್ಕ ಟಿ.ವಿ, ಯುಟ್ಯೂಬ್ ನ್ಯೂಸ್ ಚಾನೆಲ್ ಹಾಗೂ ಫೇಸ್‍ಬುಕ್ ಲೈವ್‍ನಲ್ಲಿ ಜೂನ್ 3ರಿಂದ 19ರ ವರೆಗೆ ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಹಾಗೂ ಸಂಜೆ 4ರಿಂದ 5 ಹಾಗೂ 7ರಿಂದ 8ರ ವರೆಗೆ ಪ್ರಸಾರ ಆಗಲಿದೆ.ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಇ–ಸರ್ಟಿಫಿಕೇಟ್ ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು https://forms.gle/CX6xfkFyEXppgHaN7 ಲಿಂಕ್ ಬಳಸಬೇಕು ಹಾಗೂ ಮಾಹಿತಿಗಾಗಿ jmcakkatv@gmail.com ಗೆ ಇ ಮೇಲ್ ಮಾಡಬಹುದು ಎಂದು  ಪ್ರಕಟನೆ ತಿಳಿಸಿದೆ.

Tuesday, May 26, 2020

27-05-2020 EE DIVASA KANNADA DAILY NEWS PAPER

ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರು 76 ಕ್ಕೆ ಏರಿಕೆ: ಡಿಸಿ ವೈ ಎಸ್. ಪಾಟೀಲ್

ಈ ದಿವಸ ವಾರ್ತೆ
ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಆರು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟದಿಂದ ಆಗಮಿಸಿದ ಕಾರ್ಮಿಕರಾದ ರೋಗಿ ಸಂಖ್ಯೆ 2203ರ 18 ವರ್ಷದ ಯುವಕ, ರೋಗಿ ಸಂಖ್ಯೆ 2204ರ 34 ವರ್ಷದ ಪುರುಷ, ರೋಗಿ ಸಂಖ್ಯೆ 2205ರ 30 ವರ್ಷದ ಪುರುಷ, ರೋಗಿ ಸಂಖ್ಯೆ 2206ರ 60 ವರ್ಷದ ವೃದ್ಧ, ರೋಗಿ ಸಂಖ್ಯೆ 2207ರ 17 ವರ್ಷದ ಯುವಕ ಹಾಗೂ ರೋಗಿ ಸಂಖ್ಯೆ 2283ರ 12 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಸೇವಾ ಸಿಂಧು ಪಾಸ್ ಮೂಲಕ ಮಹಾರಾಷ್ಟದಿಂದ ಜಿಲ್ಲೆಗೆ ಆಗಮಿಸಿದ ಇವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈಗಾಗಲೇ ಸೋಂಕಿನಿಂದ ಬಳಲುತ್ತಿದ್ದವರಲ್ಲಿ 44 ಜನರು ಗುಣಮುಖಗೊಂಡು, ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Monday, May 25, 2020

26-05-2020 EE DIVASA KANNADA DAILY NEWS PAPER

ವಿಜಯಪುರದಲ್ಲಿ 70 ಪಾಸಿಟಿವ್ ಪ್ರಕರಣಗಳು ದೃಢ :  ಇಬ್ಬರು  ಗುಣಮುಖ ರೋಗಿಗಳು  ಆಸ್ಪತ್ರೆಯಿಂದ ಬಿಡುಗಡೆ
ಈ ದಿವಸ ವಾರ್ತೆ ವಿಜಯಪುರ: ಕೋವಿಡ್-19ದಿಂದ ಗುಣಮುಖರಾದ ಇಬ್ಬರು ಇಂದು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ,ಈವರೆಗೆ ಒಟ್ಟು 44 ರೋಗಿಗಳು ಗುಣಮುಖರಾಗಿದ್ದಾರೆ ಎಂದು  ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
ಇಂದು ರೋಗಿ ಸಂಖ್ಯೆ 594(22 ವರ್ಷದ ಯುವ ಕ) ಹಾಗೂ ರೋಗಿ ಸಂಖ್ಯೆ 856(20 ವರ್ಷದ ಯುವತಿ) ಗುಣಮುಖರಾಗಿ,ಬಿಡುಗಡೆ ಹೊಂದಿದ್ದು
ಅದರಂತೆ  ಸಧ್ಯ ಆಸ್ಪತ್ರೆಯಲ್ಲಿ  22 ಸಕ್ರಿಯ ಕೋವಿಡ್-19 ರೋಗಿಗಳಿದ್ದು, ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
 ಜಿಲ್ಲೆಯಲ್ಲಿ ಇಂದು ದಿನಾಂಕ 25-೦5-2020 ರಂದು ಒಬ್ಬರಿಗೆ ಕೋವಿಡ್-೧೯ ಸೊಂಕು ತಗುಲಿರುವುದು ದೃಡಪಟ್ಟಿದೆ. ರೋಗಿ ಸಂಖ್ಯೆ: 2136(28 ವರ್ಷದ ಮಹಿಳೆ ) ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ  ಹೊಂದಿದ್ದಾರೆ.  ಅವರಿಗೆ  ಕ್ವಾರೈಂಟನ್ ಮಾಡಿ ,ಅವಶ್ಯಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 70 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 44 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.


ಇನ್ನುಳಿದ 22ಕೋವಿಡ್ ಸೋಂಕಿತ ರೋಗಿಗಳಿದ್ದು,ನಾಲ್ವರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ.  14,954 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ.  1866  -ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 13,042 ಜನರು (1 ರಿಂದ 28ದಿನಗಳ) ರಿಪೋರ್ಟಿಂಗ್  ಅವಧಿಯಲ್ಲಿದ್ದು, ಈವರೆಗೆ  12,466 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 4,263 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 8133 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಗುಣಮುಖ ರೋಗಿಗಳ ಬಿಡುಗಡೆ  ಸಂದರ್ಭದಲ್ಲಿ ಡಾ ಶರಣಪ್ಪ  ಕಟ್ಟಿ, ಡಾ ಲಕ್ಕಣ್ಣವರ್,ಡಾ ಸಂದೀಪ್ ಸಜ್ಜನ್ ,ಆರ್. ಎನ್ ಸಾವಳಗಿ,ಡಾ ಬಿರಾದಾರ್ ,ಡಾ ಇಂಗಳೆ,ಜಗದೀಶ್  ಮಾಣಕರ್ ,ಜಿ.ಸಿ ಉಪಾಸೆ,ಅಶೋಕ್ ಬೆಳ್ಳಣ್ಣವರ್,ಸಂತೋಷ ಬಿರಾದಾರ್, ಅಜಿತ್ ಕೊಟ್ನಿಸ್ ಉಪಸ್ಥಿತರಿದ್ದರು.

Sunday, May 24, 2020

ಜಿಲ್ಲೆಯಲ್ಲಿ ಈವರೆಗೆ ೬೯ ಪಾಸಿಟಿವ್ ಪ್ರಕರಣಗಳು ದೃಢ : ಇಂದು ಓರ್ವನಲ್ಲಿ ಕೋವಿಡ್-೧೯ ಸೋಂಕು

ಈ ದಿವಸ ವಾರ್ತೆ ವಿಜಯಪುರ: ಜಿಲ್ಲೆಯಲ್ಲಿ ಇಂದು ದಿನಾಂಕ ೨೪-೦೫-೨೦೨೦ ರಂದು ಒಬ್ಬರಿಗೆ ಕೋವಿಡ್-೧೯ ಸೊಂಕು ತಗುಲಿರುವುದು ದೃಡಪಟ್ಟಿದೆ. ರೋಗಿ ಸಂಖ್ಯೆ: ೨೦೧೧ (೮೦ ವರ್ಷದ ವೃದ್ಧ) ಹಾಗೂ ಇವರು ತೀವ್ರ ರೀತಿಯ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಅವಶ್ಯಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ೬೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ೪೨ ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ ೨೩ ಕೋವಿಡ್ ಸೋಂಕಿತ ರೋಗಿಗಳು ಸಕ್ರಿಯ ರೋಗಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೧೧,೧೫೩ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ೧೭೪೪ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೯೩೬೩ ಜನರು (೧ ರಿಂದ ೨೮ ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೪ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೧೧,೬೭೯ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೪೦೬೬ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೭೫೪೪ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜೀವಭಯದೊಳಗೆ ಜೀವನ ತೆವಳುತ್ತಿದೆ, ಸಾಗುತ್ತಿಲ್ಲ!

ಸಾಗುವ ದಾರಿ, 
ಹೊಸತೆನಿಸುತ್ತಿದೆ, 
ಹೆಜ್ಜೆ ಹಾಕಲಾಗದೆ.
ಸಂಶಯ, ಹೆಜ್ಜೆ-ಹೆಜ್ಜೆಗೂ ತಾಕಿ, 
ಹೆಜ್ಜೆ ಹಿಂಜರಿಯುತ್ತಿದೆ.
ಜೀವಭಯದೊಳಗೆ, 
ಜೀವನ ತೆವಳುತಿದೆ,  ಸಾಗುತ್ತಿಲ್ಲ!

ಕೈಮುಟ್ಟಿ, ಕಾಲು ತಾಗಿಸಿ, 
ಜೋಲಿ ಹೊಡೆದು, ಜೋತುಬಿದ್ದು
ಹತ್ತುತ್ತಿದ್ದ, ಬಸ್ಸು ಓಡುತ್ತಿದೆ.
ಜನ ಮುಟ್ಟುತ್ತಿಲ್ಲ,  ಹತ್ತುತ್ತಿಲ್ಲ.
ಬದುಕ ಭಯದೊಳಗೆ, 
ಬದುಕು ನಡೆಯುತ್ತಿದೆ, ಓಡುತ್ತಿಲ್ಲ!

ಮನೆ ತೆರೆದಿದೆ, 
ಮನ ತೆರೆಯುತ್ತಿಲ್ಲ.
ಕಾಲಿಟ್ಟರೆ, ಮುಖವರಳಿಸಿ, 
ನೀರು ಕೊಡುತ್ತಿದ್ದವರು, 
ದೂರವಾಗುತ್ತಿದ್ದಾರೆ!
ಉಸಿರಭಯದೊಳಗೆ, 
ಉಸಿರು ಉಸಿರುತ್ತಿದೆ, ಮಾತಾಗುತ್ತಿಲ್ಲ !

ಅಂಬರೀಷ ಎಸ್. ಪೂಜಾರಿ
ಕಥೆ

ಕೆಂಪು ಅರಮನೆ -ಹಸಿರು ಗುಡಿಸಲು


ಈಶ ಮತ್ತು ವಾಸ ಗೆಳೆಯರು. ಅಕ್ಕ ಪಕ್ಕ ಇದ್ದ ಅವರ ಮನೆಯ ಈರ್ವರು ಶಾಲೆ ವಿದ್ಯಾಭ್ಯಾಸದಲ್ಲಿ ಭಿನ್ನಭಿನ್ನ ರಾಗಿದ್ದರು. ಈಶ ಕನ್ನಡ ಮಾಧ್ಯಮ ಓದುತ್ತಿದ್ದರೆ ವಾಸ ಆಂಗ್ಲಮಾಧ್ಯಮ ಶಾಲೆಗೆ ಪ್ರವೇಶ ಪಡೆದಿದ್ದ. ಸೂಟು-ಬೂಟು ಆತನ ಸಮವಸ್ತ್ರವಾದರೆ ಈಶನದು ನೆಹರೂ ಶರ್ಟ್ ಪೈಜಮಾ ಗಾಂಧಿ ಟೊಪ್ಪಿಗೆ ಕೊಲ್ಹಾಪುರಿ ಪಾದರಕ್ಷೆ.

      ವಾಸ ಶಾಲೆಗೆ ಹೋಗಬೇಕಾದರೆ ವಾಹನ ಬಂದು ಕರೆದುಕೊಂಡು ಹೋಗಿ ಸಾಯಂಕಾಲ ಮರಳಿ ಮನೆಗೆ ಬಂದುಬಿಡುತ್ತಿತ್ತು. ಆದರೆ ಈಶನ ವಾಹನ ವೆಂದರೆ ಆತನ ಕಾಲುಗಳೇ. ಸರ್ಕಾರ ಕೊಡುವ ಬಿಸಿಊಟ ಮೊಟ್ಟೆ ಕುಡಿಯಲು ಹಾಲು ಆತನ ಉದರ ತುಂಬುತ್ತಿದ್ದವು.ಆದರೆ ವಾಸನದು  ಇಡ್ಲಿ-ಸಾಂಬಾರ್ ಚಪಾತಿ ಪಲ್ಲೆ ಜೀರಾ ರೈಸ್ ಮೃಷ್ಟಾನ್ನ ಭೋಜನ ವಾಗಿತ್ತು.

      ಹೀಗಿರುವಾಗ ಅವರು ಪ್ರೌಢಶಾಲೆಗೆ ಕಾಲಿಡುತ್ತಲೇ ವಾಸನಿಗೆ ಮೋಟಾರ್ಸೈಕಲ್, ಶಾಲೆಯಲ್ಲಿ ಆಡಲು ಕ್ರಿಕೆಟ್, ಜಿಮ್, ಕೇರಂ, ಕುಡಿಯಲು ಸಂಸ್ಕರಿಸಿದ ನೀರು. ಆದರೆ ಈಶ ಶಾಲೆಯ ಪಕ್ಕ ಹರಿಯುವ ಕೃಷ್ಣಾನದಿಯ ನೀರುಕುಡಿದು ತೋಟ ಪಟ್ಟಿಯಲ್ಲಿ ಆಟವಾಡಿ ಮನೆಯಲ್ಲಿ ರೊಟ್ಟಿ ಪುಂಡಿಪಲ್ಯ ಮೇಲೆ ಕುಡಿಯಲು ಮಜ್ಜಿಗೆ ಶಾಲೆಗೆ ಹೋಗಲು ಸೈಕಲ್ ಇವನಿಗೊದಗಿದವು. ಈಶ ನೇಗಿಲಯೋಗಿಯ ಮಗನಾದರೆ ವಾಸ ಧನಿಕನ ಮಗ.

     ಶಾಲೆಯ ಅಕಾಡೆಮಿಕ ವರ್ಷ ಮುಗಿಯುವ ಸಂದರ್ಭದಲ್ಲಿ ವಾಸನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಏರ್ಪಡಿಸಲಾಗಿತ್ತು ಆ ಸವಿನೆನಪಿಗಾಗಿ ಈಶ ಕಲಿಯುವ ಕನ್ನಡ ಮಾಧ್ಯಮ ಶಾಲೆ ವಾಸ ಓದುವ ಆಂಗ್ಲಮಾಧ್ಯಮ ಶಾಲೆಯವರೆಗೆ ರಸಪ್ರಶ್ನೆ , ಕಬಡ್ಡಿ ಭಾರದ ಗುಂಡು ಎಸೆತ ಸ್ಪರ್ಧೆ ಏರ್ಪಡಿಸಲಾಗಿತ್ತು.  ಪ್ರಾರಂಭವಾದಾಗ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು .ಮಾತೃಭಾಷೆಯಲ್ಲಿ ನದಿ ನೀರು ಕುಡಿದು ತೋಟಪಟ್ಟಿ ಸುತ್ತಾಡಿದ ಮಕ್ಕಳು ಸೋಲಿಲ್ಲದ ಸರದಾರ ರಾದರು

       ಅಂತೂ ಇಂತೂ ಡಿಗ್ರಿ ಓದಿ ಮುಗಿಸಿದ ಈರ್ವರ ದಾರಿ ವಿರುದ್ಧವಾಗಿದ್ದವು. ಈಶ ಚೆನ್ನಾಗಿ ಓದಿ ಡಿಗ್ರಿ ಪಾಸಾಗಿ ಸರ್ಕಾರದ ಉದ್ಯೋಗ ಅರಸದೆ ಭಾರತದ ಬೆನ್ನೆಲುಬಾದ. ಆದರೆ ವಾಸ ಮಾತ್ರ ಡಾಲರ್ ಸಂಬಳ ಗಳಿಸಲು ಉದ್ಯೋಗ ಪಡೆದು ಅಮೆರಿಕ ವಿಶ್ವದ ದೊಡ್ಡಣ್ಣನ ನೆಲ ಸ್ಪರ್ಶಿಸಿದ. ಕಾರು ಬಂಗಲೆ ಮತ್ತು ರತ್ನ ಎಲ್ಲವೂ ಅವನ ಪಾಲಿಗೆ ಬಂದವು. ಬಡವರ ಬಂಧು ತನ್ನ ತೋಟದಲ್ಲಿ ಬೆಳೆದ ದವಸ ಧಾನ್ಯ ಹಣ್ಣು-ಹಂಪಲು ದೀನದಲಿತರಿಗೆ ಬಡವ ನಿರ್ಗತಿಕರಿಗೆ ದಾನ ಮಾಡಿ ಕರ್ಣನಾದ . ವಾಸ ದೈತ್ಯ ಕಂಟಕ ತಂದೊಡ್ಡಿದ ಕೊರೋಣ ಹೆಮ್ಮಾರಿಯಿಂದ ಅಮೆರಿಕಾದಲ್ಲಿನ ಉದ್ಯೋಗ ಕಳೆದುಕೊಂಡು ಮರಳಿಗೂಡಿಗೆ ಬಂದ. ಅರಮನೆಯಲ್ಲಿ ಹುಟ್ಟಿ ಬೆಳೆದವ ಬೆಂಕಿ ಉಂಡು ನಾಲಿಗೆ ಸುಟ್ಟುಕೊಂಡ . ಕೈಕೆಸರು ಮಾಡಿಕೊಂಡವ ಮೊಸರುಂಡು ಹಾಯಾಗಿದ್ದ.                           -  ಮಂದಾಕಿನಿ  ಎಸ್.ಬಿರಾದರ್
           ವಿಜಯಪುರ
ಪವಿತ್ರ ಹಬ್ಬ ರಂಜಾನ್


ಆ ಭಗವಂತನ ಸೃಷ್ಟಿಯಲ್ಲಿ ನಾವೆಲ್ಲಾ ಒಂದೇ ಅಂದ ಮೇಲೆ ಯಾವ ಧರ್ಮವು ಮೇಲಲ್ಲ ಕೀಳಲ್ಲ, ನಾವೆಲ್ಲರೂ ಒಂದೇ. ಮನುಷ್ಯ ಹುಟ್ಟಿದ ತಕ್ಷಣ ಒಂದು ಜಾತಿಯ ಹೆಸರು ಸೂಚಿಸಬೇಕಾಯಿತು. ಧರ್ಮಗಳು ಹಲವು ಇದ್ದರೇನು ಎಲ್ಲರೂ ಪೂಜಿಸುವ ದೇವರು ಒಂದೇ ತಾನೆ?ಆದರೆ ಆಚರಿಸುವ ಪದ್ಧತಿಗಳು ಸಂಪ್ರದಾಯಗಳು ಬೇರೆ ಬೇರೆಯಷ್ಟೇ.
 ಬೌದ್ಧ, ಜೈನ ,ಹಿಂದೂ, ಕ್ರೈಸ್ತ, ಮುಸ್ಲಿಂ, ಎಂದು ನಾನಾ  ಧರ್ಮಗಳು ಇರುವವು.

ಧರ್ಮವೊಂದೇ ಪ್ರತಿಪಾದಿಸುವುದು ಎಲ್ಲರೂ ಒಂದೇ, ಅಹಿಂಸಾ ತತ್ವದಿಂದ ನಡೆಯಿರಿ. ದೇವರ ಪ್ರಾರ್ಥನೆಯಲ್ಲಿ ಭಾಗಿಯಾಗಿ ಶುದ್ಧ ಮನಸ್ಸುಗಳಿಂದ ಮಾನವೀಯತೆಯ ವ್ಯಕ್ತಿತ್ವ ಬೆಳೆಸಿಕೊಂಡು ಸತ್ಯ ನಿಷ್ಠೆಯಿಂದ ನಡೆದುಕೊಳ್ಳುವುದೇ ಧರ್ಮ.

ಅಹಿಂಸಾಥಾಯ ಲೋಕನಾಂ ಧರ್ಮ ಪ್ರವಚನಂ* ಎಂದು ಇನ್ನೊಬ್ಬರನ್ನು ಹಿಂಸಿಸಿ ಬದುಕಬಾರದು ಎಂಬುದು ಇದರ ತಾತ್ಪರ್ಯ.

ಪ್ರಭುವಾರ್ತಾಯ ಭೂತಾನಾಂ
ಧರ್ಮ ಪ್ರವಚನ ಗೃತಂ
ಏಷ್ಯ ಪ್ರಭವ ಸವಿಯುಕ್ತಾಹ
ಸಧರ್ಮ ಇತಿ ನಿಷ್ಞ
ಎಲ್ಲ ಧರ್ಮಗಳು ಎತ್ತರಕ್ಕೆ ಇರುವುದು ಎಲ್ಲ ಧರ್ಮೀಯರು ಕೈ ಹಿಡಿದು ಪ್ರತಿಯೊಬ್ಬರು ಮೇಲಕ್ಕೇರಬೇಕು ಮತ್ತೊಬ್ಬರನ್ನು ತುಳಿದು ನಾವು ಮೇಲಕ್ಕೆ ಎರುವುದಲ್ಲ ಅದು ಅಧರ್ಮ ಎಂಬುವುದು ತಿಳಿಯಬೇಕು.

ಹಾಗೆ ಮುಸ್ಲಿಮರ ಹಬ್ಬ ರಂಜಾನ್ ವು ಒಂದು ವಿಶೇಷವಾದ ಪವಿತ್ರವಾದ ಹಬ್ಬವಾಗಿದೆ.
 ಈದ್ ಮುಬಾರಕ್ ಈದ್ಎಂದರೆ ಹಬ್ಬ ,ಮುಬಾರಕ್ ಎಂದರೆ ಶುಭಾಶಯ, ಹಾಗೆ ನನ್ನ ಎಲ್ಲ ಮುಸ್ಲಿಂ ಬಂಧುಗಳಿಗೆ ರಂಜಾನ್ ಹಬ್ಬದ ಶುಭಾಶಯಗಳು ಕೋರುತ್ತಾ

ರಂಜಾನ್ ಹಬ್ಬದ ಮಹತ್ವವನ್ನು ಪ್ರಸ್ತಾಪಿಸುವೆ.
ಮಾನವ ತನ್ನ ಬದುಕಿನಲ್ಲಿ ಮಾಡುವ ಎಲ್ಲಾ ಪಾಪಗಳನ್ನು ವಿಮುಕ್ತಿಗೊಳಿಸಿಕೊಳ್ಳಲು, ಅಂದರೆ ಪರಿಹರಿಸಿಕೊಳ್ಳಲು ಇದೊಂದು ಸನ್ಮಾರ್ಗ ವೆಂದು ಈ ಹಬ್ಬ ಆಚರಿಸುವರು. ಎಲ್ಲ ಧರ್ಮಗಳಲ್ಲಿ ಅವರವರ ಸಂಪ್ರದಾಯದ ಕುರಿತಂತೆ ದೇವರಲ್ಲಿ ಪ್ರಾರ್ಥಿಸುವರು.

ಒಂದು ತಿಂಗಳು ರಂಜಾನ್ ತಿಂಗಳ ವಾಗಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಉಪವಾಸ  (ರೋಜಾ) ಮಾಡುವುದುಂಟು ಕಟ್ಟುನಿಟ್ಟಿನ ಉಪವಾಸ ಮಾಡಿ ಈ ಒಂದು ತಿಂಗಳು ಸಹಾನುಭೂತಿಯ ತಿಂಗಳು ಸಹನೆಯ ತಿಂಗಳು ಎಂದೇ ಹೇಳಬಹುದಾಗಿದೆ.  ಈ ತಿಂಗಳಲ್ಲಿ ದಾನ ಧರ್ಮಗಳನ್ನು ಮಾಡುವುದು ಹೆಚ್ಚು.ಬಡವರಿಗೆ ನಿರ್ಗತಿಕರಿಗೆ ಅಬಲೆಯರಿಗೆ ಅಸಹಾಯಕ ಸ್ಥಿತಿಯಲ್ಲಿರುವ ಎಲ್ಲ ಜನರಿಗೂ ಈ ತಿಂಗಳ ಪೂರ್ತಿ ದಾನವನ್ನು ಮಾಡುತ್ತಾರೆ.ಅಲ್ಲಾಹ್ ಕೊಟ್ಟ ದುಡ್ಡನ್ನು ಇಂತಹ ದಾನ ಧರ್ಮಗಳನ್ನು ಮಾಡಿ  ಪಾಪಗಳನ್ನು ವಿಮುಕ್ತಿ ಗೊಳಿಸುವಂತಹ ಕಾರ್ಯ ಇದಾಗಿದೆ.
           ರಂಜಾನ್ ಆಚರಿಸುವ ದಿನದ ಹಿಂದಿನ ದಿನ ಚಂದ್ರ ಕಂಡಾಗಲೇ ಈ ಹಬ್ಬವನ್ನು  ಆಚರಿಸುತ್ತಾರೆ.
14 ಗಂಟೆಗಳ ಕಾಲ ಒಂದು ಹನಿ ನೀರು ಆಹಾರವನ್ನು ಸೇವಿಸದೆ ಕಟ್ಟುನಿಟ್ಟಿನ ಉಪವಾಸವನ್ನು ಕೈಗೊಂಡು, ಈ ತಿಂಗಳಲ್ಲಿ ಪ್ರತಿ ದಿನ ಕುರಾನ್ನನ್ನು ಸಹ ಓದುವವರು. ಕುರಾನ್ ಇದೊಂದು ಮಹಾ ಪವಿತ್ರವಾದ ಗ್ರಂಥ ಈ ಪುರಾಣವು ಮಾನವನ ಬದುಕಿನ ಬಗ್ಗೆ ಚಲಿಸಲಾಗುತ್ತದೆ ಮಹಮ್ಮದ್ ಪೈಗಂಬರ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಕೊಡಾ ತಿಳಿಯಬಹುದು.  ಕುರಾನ್ ಆಶಯದಂತೆ ಜೀವನ ಸಾಗಿಸಬೇಕಾದರೆ ಅದಕ್ಕೆ ವಿಶೇಷ ತರಬೇತಿ ಬೇಕು. ಕುರಾನ್ ರೀತಿಯಲ್ಲಿ ಬದುಕಿದ ಮಹಮ್ಮದ್ ಪೈಗಂಬರ್ ಅವರ ಜೀವನ ಹೇಗಿತ್ತು, ಎಂದರೆ ಕುರಾನ್ ಪ್ರತಿ ಆದೇಶವೂ ಚಾಚು ತಪ್ಪದೆ ಪಾಲಿಸುತ್ತಿದ್ದರು ಅವರ ಜೀವನದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದರು.
1450 ವರ್ಷಗಳ ಹಿಂದೆ ನಿರಂತರ 23 ವರ್ಷಗಳ ಅವಧಿಯಲ್ಲಿ ನೀಡಿದ ಕಾಲಘಟ್ಟ ಮತ್ತು ಆಯಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪ್ರವಾದಿ ಮಹಮ್ಮದರು ಹಂತ ಹಂತವಾಗಿ ಕುರಾನ್ ಅವಿರ್ಭಾವ ಗೊಳಿಸಿದ್ದರು.

6236 ವಚನಗಳಿಂದ ಕೂಡಿರುವ ಅರಬ್ಬಿ ಭಾಷೆಯಲ್ಲಿರುವ ಈ ಗ್ರಂಥದಲ್ಲಿ 30 ವಿಭಾಗಗಳನ್ನು 114ಅಧ್ಯಾಯಗಳು ಇವೆ. ವಿಶ್ವದಲ್ಲಿರುವ ಜನತೆಗೆ ಮಾರ್ಗದರ್ಶಿ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಈ ಕುರಾನ್, ವಿಶ್ವದಲ್ಲಿ ಹೆಚ್ಚು ಓದುಗರನ್ನು ಹೊಂದಿದೆ ದುರಂತ ಎನ್ನುವ ಶ್ರೇಯ ಪಡೆದಿದೆ. ಕುರಾನ್ ಎಂಬ ಪದಕ್ಕೆ ವಿಶಿಷ್ಟವಾದ ಮಹತ್ವವಿದೆ ಕುರಾನ್ ಪ್ರತಿ ವಿಷಯದ ಬಗ್ಗೆ ಮಾತನಾಡುತ್ತದೆ.
ಜಗತ್ತಿನ ಸೃಷ್ಟಿ ವೈವಿಧ್ಯ ನೋಡಿ ಪಾಠ ಕಲಿಯಲು ಮನುಷ್ಯನಿಗೆ ಕರೆ ನೀಡುತ್ತದೆ ಮೂಲ ಅರಬಿ ಭಾಷೆಯಲ್ಲಿರುವ ಕುರಾನ್ ಇಂದು ಜಗತ್ತಿನ ಎಲ್ಲ ಭಾಷೆಗಳಿಗೆ ಭಾಷಾಂತರಗೊಂಡಿದೆ.ತನ್ನ ಆಕಾಂಕ್ಷೆಗಳನ್ನು ದೇವರ ಆದೇಶಗಳಿಗೆ ಅಧೀನ ಬರಿಸುವ ಶಕ್ತಿ ಮನುಷ್ಯನಿಗೆ ಸಿಗಬೇಕು, ಇದನ್ನು ಕುರಾನ್ ಕಲಿಸುತ್ತದೆ. ಜಾಗರೂಕತೆಯಿಂದ ಜೀವನ ಸಾಗಿಸಲು ಬೇಕಾದ ತರಬೇತಿ ಪ್ರತಿ ವರ್ಷ ರಂಜಾನ್ ತಿಂಗಳ ಪೂರ್ತಿ ಸಿಗುತ್ತದೆ. ಹಾಗಾಗಿ ಈ ಹಬ್ಬ ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ ಎಲ್ಲರೂ ಸಂತಸದಿಂದ ಹೊಸ ಉಡುಪುಗಳನ್ನು ಧರಿಸಿ, ಖುಷಿಯಿಂದ ಸುರ್ಕುಂಬಾ ಎಂಬ ಪಾನೀಯವನ್ನು ಮಾಡಿ ಆಪ್ತ ಸ್ನೇಹಿತರಿಗೆ ಕರೆದು ಅಪ್ಪುಗೆಯಿಂದ ಪ್ರೀತಿಯಿಂದ ಶುಭಾಶಯ ಕೋರಿ  ಕುಡಿದು ಕುಪ್ಪಳಿಸುವ ಹಬ್ಬ ರಂಜಾನ್ ಹಬ್ಬ ಇದಾಗಿದೆ.

-ಮಮತಾ ಗುಮಶೆಟ್ಟಿ
 ವಿಜಯಪುರ

Saturday, May 23, 2020

ಈ ದಿವಸ ಸೆಲ್ಫಿ ವಿತ್ ಬ್ರದರ್..


---------------------------------------------------------------------


ಪ್ರಿಯಾಂಕಾ ಅನಂತ ಪೂರ್ ಸಹೋದರ ಬಸವರಾಜ್
---------------------------------------------------------------------


ಅಣ್ಣ ಅಪ್ಪುಗೌಡ ಪಾಟೀಲ (ಯತ್ನಾಳ) ಜೊತೆ ತಮ್ಮಾ ಪ್ರವೀಣಗೌಡ ಪಾಟೀಲ
---------------------------------------------------------------------


ಸದಾ "ರಕ್ಷಾ ಕವಚ" ನನ್ನ ಸಹೋದರ ಬಸವರಾಜ ಪಾಟೀಲ. ಮನೀಷಾ
---------------------------------------------------------------------
ಮಲ್ಲಿಕಾರ್ಜುನ ಕುಂಬಾರ ಅರಷಣಗಿ ಅವರು  ಅಣ್ಣ ತಮ್ಮಂದಿರೊಡನೆ ತೆಗೆದುಕೊಂಡ ಸೆಲ್ಪಿಯಲ್ಲಿ ಶ್ರೀಕಾಂತ್ ಹಾಗೂ ರಮೇಶ
---------------------------------------------------------------------




ನನಗೆ ಯಾವ ಯಾವುದೇ ಅಣ್ಣ-ತಮ್ಮಂದಿರರು   ಇಲ್ಲ. ನಾನೊಬ್ಬನೇ ಇರೋದು ನನ್ನ ಆತ್ಮೀಯ ಸ್ನೇಹಿತ ಪ್ರಾಣಸ್ನೇಹಿತ ಇವನೇ ನನಗೆ ಅಣ್ಣ ಮತ್ತು ತಮ್ಮ ನಾಗಿರುತ್ತಾನೆ.    
- ಚಂದ್ರಶೇಖರ ಹಾಗೂ ವಿನೋದ್ 

---------------------------------------------------------------------



ಹರೀಶ ಹಾಗೂ ತಂಗಿ ಹರ್ಷಿತಾ ಧಾಮಣ್ಣವರ
---------------------------------------------------------------------





ಡಾ. ರೇಶ್ಮಾ ಹಾಗೂ ತಮ್ಮ ಆದಿತ್ಯ


------------------------------------------------------------------




ಮಲ್ಲಿಕಾರ್ಜುನ ಹಾಗೂ ಅಕ್ಕ  ಸಾಹಿತ್ಯ

------------------------------------------------------------------




ಅಕ್ಷತಾ ಹಾಗೂ ಆದಿತ್ಯ

------------------------------------------------------------------




ತಂಗಿ ಪಲ್ಲವಿಯನ್ನು ಹೊತ್ತುಕೊಂಡ ಅಣ್ಣ ಅಮಿತ್


------------------------------------------------------------------


ಉಪಕಾರಾಗ್ರಹ ಗೋಕಾಕನ ಅಧೀಕ್ಷಕರು
 ಅಂಬರೀಷ ಪೂಜಾರಿ, ಅಣ್ಣಂದಿರಾದ
ಬೈಲಹೊಂಗಲ ತಾಲೂಕಿನ
 ಸರ್ಕಾರಿ ಪಿ.ಯು. ಕಾಲೇಜ್ ಸಂಪಗಾವ್ ಉಪನ್ಯಾಸಕ
 ಮಾರುತಿ ಪೂಜಾರಿ, ಯಕ್ಕುಂಡಿ. ತಾ ಬಬಲೇಶ್ವರನ
ಪ್ರಗತಿಪರ ರೈತರಾದ ಉದಯ ಪೂಜಾರಿ.

------------------------------------------------------------------



ಮುರಳಿಧರ್ ಅವರೊಂದಿಗೆ ಗುರುರಾಜ್

------------------------------------------------------------------


ಶಿವಾನಂದ.ಕಲಗೊಂಡ, ಉಮೇಶ.ಕಲಗೊಂಡ.                ಭರತೇಶ.ಕಲಗೊಂಡ.

------------------------------------------------------------------


ಅಣ್ಣನಾದ ಸಂತೋಷ ಗೆಳತಿಯ ಮದುವೆ ಸಂದರ್ಭದಲ್ಲಿ ತಂಗಿಯರಾದ ಭವಾನಿ ಪುಪ್ಪಾ ಕನ್ಯಾಕುಮಾರಿ ಲಕ್ಷ್ಮೀರೊಂದಿಗೆ ತೆಗೆದುಕೊಂಡ ಭಾವಚಿತ್ರ
------------------------------------------------------------------


ಮುದ್ದಿನ ತಂಗಿ ಆದ್ಯ ಜೊತೆ ವಿರಾಟ್ ಚಡಚಣ 
------------------------------------------------------------------



ಸಹೋದರ: ವಿನಾಯಕ ಪಾಟೀಲ  ಸಹೋದರಿ:ಮಂದಾಕಿನಿ 
------------------------------------------------------------------


ಅಣ್ಣ ಮನೋಜ ಅವರೊಂದಿಗೆ ತಂಗಿ ವಸುಂಧರಾ

-----------------------------------------------------------------



ಒಂದೇ ತಾಯಿಯ ಮಕ್ಕಳಲ್ಲ ಆದರೂ ಅಣ್ಣ ಅಕ್ಕ ತಮ್ಮ ತಂಗಿಯ ಹಾಗೆ ಎಲ್ಲರೂ ಇದ್ದೇವೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ  ಸಿದ್ರಾಮ ಜೋಗುರ, ನಿಂಗಯ್ಯ ಮಠ, ಮುಕ್ತಾಯಕ್ಕ ಕತ್ತಿ, ಲಕ್ಷ್ಮಿ ಗೋಗಿ, ಅಶ್ವಿನಿ ಜೋಗುರ ಹಾಗೂ ಮಾಹಾಂತೇಶ ನೂಲಾನವರ 
-----------------------------------------------------------------



ಅಣ್ಣ ಶಿವಾನಂದ ಅವರೊಂದಿಗೆ ತಂಗಿ ಡಾ. ಅನುಸೂಯ
-------------------------------------------------------------


ಗುರುಪ್ರಸಾದ ಮತ್ತು ಮಾಲಿಂಗೇಶ್  ಬಸರಕೋಡ  ವಿಜಯಪುರ
-------------------------------------------------------------



ಹಳೆ ಹುಬ್ಬಳ್ಳಿ ಬ್ರದರ್ಸ್
-------------------------------------------------------------------



ನಾನು ವಿಜುಗೌಡ ಕಾಳಶೆಟ್ಟಿ
ನನ್ನ ಆತ್ಮೀಯ ಸಹೋದರರು
ಕಿರಣ್ ಮತ್ತು ರಾಜು..

----------------------------------------------------

ತಂಗಿ ಆರಾಧ್ಯಳೊಂದಿಗೆ ಅಣ್ಣ ಅಲೋಕ 

----------------------------------------------------


ಸಿಂದಗಿಯ ಮಾಹಾಂತೇಶ ನೂಲಾನವರ, ಭಾಗ್ಯಶ್ರೀ ನಂದಿಮಠ, ಅಶ್ವಿನಿ ಅಂಕದ ಪ್ರಜ್ವಲ್ ಬಿರಾದಾರ್
----------------------------------------------------


ಹಳೇ ಹುಬ್ಬಳ್ಳಿ ಬ್ರದರ್ಸ್‌
----------------------------------------------------


ಅಕ್ಕ ಸ್ನೇಹಾಳೊಂದಿಗೆ ತಮ್ಮ ಪ್ರಶಾಂತ್
---------------------------------------------------


ವಿಜಯಪುರದ ಡಾ: ಸುರೇಶ, ಪ್ರಯೋಗಾಲಯ ತಂತ್ರಜ್ಞ ,ರಮೇಶ  ಪತ್ರಕರ್ತ ಪ್ರಕಾಶ ಕುಂಬಾರ ಸಹೊದರರು.
---------------------------------------------------


ಮುದ್ದೇಬಿಹಾಳ  ಶ್ರೀದೇವಿ ಬಡಿಗೇರ ತಮ್ಮ ಮೌನೇಶ ಬಡಿಗೇರ ಜೊತೆ ಒಂದ್ ಸೆಲ್ಫಿ
---------------------------------------------------


ತಮ್ಮ ಚೆನ್ನಯ್ಯ ನೊಂದಿಗೆ ಅಕ್ಕ ಭಾಗ್ಯ ಸಿಂದಗಿ
--------------------------------------------------


 ಸಹೋದರರೊಂದಿಗೆ ಅಕ್ಕ ಜ್ಯೋತಿ 

--------------------------------------------------

ಜಂಬಗಿ ಬ್ರದರ್ಸ್ ಆನಂದ ಗೌಡ, ಮಲ್ಲನಗೌಡ, ಅಮಿತ್ ಕುಮಾರ್

---------------------------------------------------




ಅಕ್ಕ ಭಾಗ್ಯಳೊಂದಿಗೆ ತಮ್ಮ ತುಷಾರ್



---------------------------------------------------


ಅಣ್ಣ ಅಮಿತ್ ಜೊತೆ ತಂಗಿಯರಾದ ಪಲ್ಲವಿ ಹಾಗೂ ಉಷೆ 

---------------------------------------------------



ತಮ್ಮ ಸುಮಿತ್ ನೊಂದಿಗೆ ಅಣ್ಣ ಸುಶಾಂತ್
---------------------------------------------------



ಸಹೋದರ ಜಗದೀಶನೊಂದಿಗೆ ತಂಗಿ ಜ್ಯೋತಿ.. ಸಿಂದಗಿ 
---------------------------------------------------


ಪುಟ್ಟ ಸಹೋದರಿ ಅವನಿ ಜೊತೆ ಪುಟಾಣಿ ಅನಿಕೇತ ಸಹೋದರದಿನದ ಸಂಭ್ರಮದಲ್ಲಿ.
---------------------------------------------------


ಪ್ರೀತಿಯ ತಂಗಿ ಪ್ರಿಯಾಂಕ ಜೊತೆ ಅಣ್ಣ ಚೇತನ ಸರಶೆಟ್ಟಿ, ವಿಜಯಪುರ 
---------------------------------------------------


ಗಿರಿಜಾ ಪಟ್ಟಣಶೆಟ್ಟಿ ಅವರು ಸಹೋದರ ಡಾ. ಮಹೇಶ್ ಅವರೊಂದಿಗೆ
---------------------------------------------------


ಮುದ್ದಿನ ಅಣ್ಣ ವಿಶ್ವ ನ ಜೊತೆ ಅಕ್ಕರೆಯ ತಂಗಿ ಅಕ್ಷತಾ ಬಸವನ ಬಾಗೇವಾಡಿ  ವಿಜಯಪುರ. 
---------------------------------------------------

ಅಣ್ಣ ಸಚಿನ್ ನೊಂದಿಗೆ ತಂಗಿ ಪ್ರಿಯಾಂಕ

---------------------------------------------------