Saturday, July 15, 2023

ಅಧ್ಯಕ್ಷರಾಗಿ ರಾಘವೇಂದ್ರ ಕಾಮನಕೇರಿ ನೇಮಕ



ಈ ದಿವಸ ವಾರ್ತೆ

 ವಿಜಯಪುರ: ಅಲೆಮಾರಿ ಅರೇ ಅಲೆಮಾರಿ ಸೂಕ್ಷ್ಮ ಅತಿಸೂಕ್ಷ್ಮ ಚನ್ನದಾಸರ ಸಮಾಜದ ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷರನ್ನಾಗಿ ರಾಘವೇಂದ್ರ ಕಾಮನಕೇರಿ, ಉಪಾಧ್ಯಕ್ಷನ್ನಾಗಿ ಶಿವಾನಂದ ಬೆಲ್ಲದ, ಪ್ರಧಾನ ಕಾರ್ಯದರ್ಶಿಯನ್ನಾಗಿ ಅಕ್ಷಯ ಹೊಸಮನಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಅಲೆಮಾರಿ ಚೆನ್ನದಾಸರ ಸಮುದಾಯದ ವಿಜಯಪುರ ಜಿಲ್ಲಾಧ್ಯಕ್ಷರಾದ ಸಂಜೀವಕುಮಾರ ದಶವಂತ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪುಸ್ತಕ ಮಳಿಗೆಗೆ ಆಹ್ವಾನ



ಈ ದಿವಸ ವಾರ್ತೆ ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ವಿಜಯಪುರದಲ್ಲಿ ಬೆಳ್ಳಿ ಸಂಭ್ರಮದ ನಿಮಿತ್ಯ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಜುಲೈ 29 ಹಾಗೂ 30 -2023 ರಂದು ಎರಡು ದಿನಗಳ ಕಾಲ ನಡೆಯುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಹಾಕಲು ಪ್ರಕಾಶಕರು,ಲೇಖಕರು ಹಾಗೂ ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜುಲೈ 22 ರ ಒಳಗಾಗಿ ಒಂದು ಪುಸ್ತಕ ಮಳಿಗೆಗೆ 1000-/ ರೂಪಾಯಿ ನೀಡಿ ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ ಮೊ: 9449292062 ಹಾಗೂ ಸಮ್ಮೇಳನದ ಸಹ ಸಂಯೋಜಕರಾದ ಉಮೇಶ ಶಿವಶರಣ ಮೊ: 9900378892 ಅವರನ್ನು ಸಂಪರ್ಕಿಸಲು ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.