Monday, April 13, 2026

ಪದ್ಮಶ್ರೀ ಕಾಕಾ ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು -ನ್ಯಾಯವಾದಿ ಕೆ ಎಫ್ ಅಂಕಲಗಿ

ವಿಜಯಪುರ :  ಪದ್ಮಶ್ರೀ ಕಾಕಾ ಕಾರ್ಖಾನೀಸ್ ಅವರನ್ನು ನೋಡಿದರೆ ಗಾಂಧೀಜಿ ಅವರನ್ನು ನೋಡಿದಂತೆ ಆಗುತ್ತಿತ್ತು ಅವರು ಶೋಷಿತರ ಮಕ್ಕಳಿಗೆ ಶಿಕ್ಷಣ ಕೊಡಲು ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ನ್ಯಾಯವಾದಿ ಕೆ ಎಫ್ ಅಂಕಲಗಿ ಅವರು ಹೇಳಿದರು.  

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಅಂಗವಾಗಿ 4ನೇ ದಿನ ಕಾಕಾ ಕಾರಖಾನೀಸ್ ಬೋರ್ಡಿಂಗ್ ನಲ್ಲಿದ್ದು ವಿದ್ಯಾರ್ಜನೆ ಮಾಡಿದವರು, ಅವರ ಕುಟುಂಬಸ್ಥರಿಂದ ಕಾಕಾ ಕಾರಖಾನೀಸ್ ಸ್ಕೂಲ್‌ ನಿಂದ ಪುಸ್ತಕ ಮೇಳ ಸ್ಥಳದವರೆಗೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಕಾಕಾ ಅವರ ಶತಮಾನೋತ್ಸವ ಆಚರಿಸಿದ ಸಂದರ್ಭದಲ್ಲಿ ಉಳಿದ ದೇಣಿಗೆಯ ಹಣದಲ್ಲಿ ಕನ್ಯಾ ಮಂದಿರ ಜಗದಲ್ಲಿ ಅವರ ಸ್ಮಾರಕ ಪ್ರೌಢ ಶಾಲೆ ನಿರ್ಮಿಸಿದ್ದು ಅತ್ಯಂತ ಮಹತ್ವದ ಕೆಲಸವಾಗಿದೆ ಅವರು ಹೇಳಿದರು.


ಮೆರವಣಿಗೆಯುದ್ಧಕ್ಕೂ ದಲಿತ ಮತ್ತು ಮಹಿಳೆಯರಿಗೆ ಶಿಕ್ಷಕಣ ನೀಡಿದ ಕಾಕಾ ಅವರಿಗೆ ಜಯಘೋಷ ಮೊಳಗಿದವು .
ಈ ಸಂದರ್ಭದಲ್ಲಿ ಬಿ ಆರ್ ಬನಸೋಡೆ, ರಾಜಶೇಖರ ಯಡಹಳ್ಳಿ, ವಿದ್ಯಾವತಿ ಅಂಕಲಗಿ, ವೈ.ಎಚ್. ಲಂಬು, ಮಿಲನಕುಮಾರ ನಾಮದಾರ, ಮಲ್ಲಿಕಾರ್ಜುನ ಕೆಂಗನಾಳ, ಸುರೇಶ ಸಿಂಧೂರ, ಶಂಕರ ಚಲವಾದಿ, ರಾಜೇಶ ತೊರವಿ, ಸವಿತಾ ವಗ್ಗರ, ಈಶ್ವರ ಅವಧಿ, ಸಾಬು ಚಲವಾದಿ, ಸುಲೋಚನಾ ಮಾಮಾದಾಪುರ, ನಾಗರಾಜ ಲಂಬು, ಕೆ ಎಂ ಕೂಡಲಗಿ, ಅನಿಲ ಹೊಸಮನಿ, ಬಸವರಾಜ ಸೂಳಿಬಾವಿ, ವೈ ಎಸ್ ಗುಣಕಿ, ಸೋಮು ರಣದೇವಿ, ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ, ಪರಶುರಾಮ ಶಿವಶರಣ, ನೀಲಾಂಬಿಕಾ ಬಿರಾದಾರ, ಶಾರದಾ ಹೊಸಮನಿ, ಸವಿತಾ ವಾಘಮೋರೆ,ಸಂಘರ್ಷ ಹೊಸಮನಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್ ಟಿ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಶರಣು ಕಿರಣಗಿ, ಬಸವರಾಜ ಕಾಂಬಳೆ ಸೇರಿದಂತೆ ಪದ್ಮಶ್ರೀ ಕಾಕಾ ಕಾರ್ಖಾನೀಸ್ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಮತ್ತು ಅವರ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು  ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.