ಬೆಂಗಳೂರಿನಲ್ಲಿ ನಡೆಯುತ್ತಿರುವ 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಸ್ಪೆಷಲ್ ಜ್ಯೂರಿ ಪ್ಯಾನಲ್ ಅಡಿ ಆಯ್ಕೆಯಾಗಿರುವ "ಧಗೆ" ಚಲನಚಿತ್ರವು ನಾಳೆ ಸಂಜೆ 6 ಗಂಟೆಗೆ ಲೂಲು ಮಾಲ್ ನ ಥರ್ಡ್ ಸ್ಕ್ರೀನ್ ಪ್ರದರ್ಶನ ಕಾಣಲಿದೆ.
ಧಗೆ ಚಲನಚಿತ್ರವು ಉತ್ತರಕರ್ನಾಟಕದ ನೆಲ ಸಂಸ್ಕೃತಿಯ ಕಥೆಯನ್ನು ಹೊಂದಿದೆ. ಬೇಸಿಗೆಯ ಬಿಸಿಲು ಕೂಡಾ ಒಂದು ಪಾತ್ರವಾಗಿ ಚಿತ್ರದಲ್ಲಿ ಕಂಗೊಳಿಸಿದೆ.
ಸಿನಿಸ್ಟಾರ್ ನಿರ್ಮಾಣದ ಧಗೆ ಚಲನಚಿತ್ರ ನಿರ್ಮಾಪಕರು ಶ್ರೀ ಈಶ್ವರಪ್ಪ. ಕೆ ಮತ್ತು ಶ್ರೀಮತಿ ದೀಪ ಬಿ. ಎಂ.. ಸಹ ನಿರ್ಮಾಪಕರು ಮಂಜುನಾಥ್ ಎಂ. ಸಿ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ನಿರ್ದೇಶನವನ್ನು ಕೆರ್ನಳ್ಳಿ ಈಶ್ವರ್ ಅವರು ನಿರ್ವಹಿಸಿದ್ದಾರೆ. ಆನಂದ್ ದಿಂಡ್ವರ್ ಅವರ ಛಾಯಾಗ್ರಹಣವಿದೆ. ಸಂಗೀತ ಕೆ. ಎಂ. ಇಂದ್ರ, ಸಂಕಲನ ಜೀವನ್ ಪ್ರಕಾಶ್, ಸಹ ನಿರ್ದೇಶನ ಬಸು ನರೋಣಿ, ಡಾ. ಸಂಗಮೇಶ ಉಪಾಸೆ, 5.1;ಪಳನಿ ಡಿ ಸೇನಾಪತಿ, ನೃತ್ಯ ಮಾಲೂರು ಶ್ರೀನಿವಾಸ್, ಪ್ರಸಾದನ ಪ್ರಭಾಕರ, ವಸ್ತ್ರವಿನ್ಯಾಸ ಬಾಬುರಾಯ ರಾಮಚಂದ್ರ ಬಿರಾದಾರ, ಸಾಹಸ ಜಾನಿ, ಕಲೆ ಅಂಬಣ್ಣ ದೇಸಾಯಿ, ಸಹಾಯಕ ನಿರ್ದೇಶನ ನಾಗೇಂದ್ರ ಹೊಸಪೇಟೆ, ಪ್ರಚಾರ ಕಲೆ ವಾದಿರಾಜ್. ವಿ, ಚೌಡ್ಕಿ ಪದ ಸಿದ್ದಮ್ಮ ಮನಗೂಳಿ ಮತ್ತು ತಂಡದವರು ಒದಗಿಸಿದ್ದಾರೆ. ಲೈವ್ ಮಿಕ್ಸಿಂಗ್ ಸ್ಟುಡಿಯೋ ಹಂಸಲೇಖ, ಸುನೀಲಕುಮಾರ ಸುಧಾಕರ ಅವರ ಸ್ಥಿರ ಚಿತ್ರಣ ಚಲನಚಿತ್ರಕ್ಕಿದೆ.
ಈ ಚಿತ್ರದಲ್ಲಿ ಬಹುತೇಕ ಕಲಾವಿದರು, ತಂತ್ರಜ್ಞರು, ವಿಜಯಪುರ ಜಿಲ್ಲೆಯವರಾಗಿದ್ದಾರೆ. ಚಿತ್ರದ ನಾಯಕರಾಗಿ ಡಾ. ಸಂಗಮೇಶ ಉಪಾಸೆ, ಜೋಗತಿ ಮಂಜಮ್ಮ, ನೀತು ಪಾಟೀಲ್, ಡಾ. ಪಲ್ಲವಿ ಪಾಟೀಲ್ ( ಸೇಡಂ ), ಮುತ್ತು, ಪರಶು, ಸಚಿನ್ ಅಳ್ಳಿಕಟ್ಟಿ, ಸುನೀಲಕುಮಾರ ಸುಧಾಕರ, ಕಪಿಲ್, ಮಲ್ಲಿಕಾರ್ಜುನ ಮೇತ್ರಿ, ಸುರೇಶ್ ಅವರು ಅಭಿನಯಿಸಿದ್ದಾರೆ.