Monday, April 20, 2026

ಬುದ್ಧ ಬಸವ ಭೀಮರ ತತ್ವ ದೇಶ ಆಳಿದರೆ ಅಸ್ಪೃಶ್ಯತೆ ನಿವಾರಣೆ ಸಾಧ್ಯ : ಡಾ. ಹೇಮಂತ ಭೂತ್ನಾಳ

ಶರಣ ಅಲ್ಲಮಪ್ರಭು ಶರಣ ಸಿದ್ದರಾಮೇಶ್ವರ ವೇದಿಕೆ

ವಿಜಯಪುರ : ಇವನಾರವ ಇವನಾರವ ಎಂದರೆ ಜಾತಿ ಇವ ಇವ ನಮ್ಮವ, ನಮ್ಮವ ಎಂದರೆ ಧರ್ಮ, ಪ್ರಧಾನಿ ಬಸವಣ್ಣವರಿಂದ ಎರಡು ಸಲ ಶರಣಾರ್ಥಿ ಪಡೆದ ಹರಳಯ್ಯ -ಕಲ್ಯಾಣಮ್ಮ ಮಾಡಿದ ತಮ್ಮ ಚರ್ಮದ ಚಮ್ಮಾವುಗೆಯಲ್ಲಿ ಕಲ್ಯಾಣ ಕ್ರಾಂತಿ ಬೀಜ ಅಡಗಿತ್ತು ದೇಶದಲ್ಲಿ 3600 ಜಾತಿಗಳಿವೆ ಪ್ರತಿ ಜಾತಿ ತನಗಿಂತ ಕೆಳಗ ಒಂದು ಜಾತಿ ಇರಬೇಕಂತ ಬಯಸುತ್ತದೆ, ಒಂದು ಜಾತಿ ಇನ್ನೊಂದು ಜಾತಿಯ ಪಕ್ಕ ಕೂರೂದಿಲ್ಲ ಈ ದೇಶದಲ್ಲಿ ಒಂದು ಜಾತಿ ಇನ್ನೊಂದು ಜಾತಿಯನ್ನು ಅಸ್ಪೃಶ್ಯತೆಯಿಂದ ಕಾಣುತ್ತಿದೆ ಇಡಿ ದೇಶ ಅಸ್ಪೃಶ್ಯತೆಯಿಂದ ಬಳಲುತ್ತಿದೆ ಬುದ್ಧ, ಬಸವ ಭೀಮರ ತತ್ವಗಳು ಈ ದೇಶವನ್ನು ಆಳಿದರೆ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದು ಕಾಲೇಜ್ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಡಾ ಹೇಮಂತ ಭೂತನಾಳ ಹೇಳಿದರು,
ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮAದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದ ಅಂಗವಾಗಿ ಎರಡನೇ ದಿನ ಕಲ್ಯಾಣ ಕ್ರಾಂತಿ ನೆನಪು ರಾಷ್ಟ್ರೀಯ ಬಹು ಭಾಷಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಈ ಸಂದರ್ಭ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಕಲಬುರಗಿಯ ಹಿರಿಯ ಸಾಹಿತಿ ಡಾ ಶ್ರೀಶೈಲ ನಾಗರಾಳ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಅಂಧಕಾರದಲ್ಲಿ ಮುಳುಗಿದ ಸಮಾಜದಲ್ಲಿ ಬಸವಣ್ಣ ಮತ್ತು ಶರಣರು ಹಚ್ಚಿದ ವಚನ ಸಾಹಿತ್ಯ ಜ್ಯೋತಿ ಹಚ್ಚಿದ್ದಾರೆ, ವಚನ ಸಾಹಿತ್ಯವೇ ಕನ್ನಡ ನೆಲದ ಮೊದಲ ಸಾಹಿತ್ಯದ ಫಸಲಾಗಿದೆ, ಶರಣರ ವಚನ ಸಾಹಿತ್ಯ ಪ್ರತಿಭಟನೆಯ ರೂಪವಾಗಿದೆ, ವಚನಗಳು ಬದುಕಿನ ಶೋಧ ಮಾಡುತ್ತವೆ, ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಕಟ್ಟಳೆಗಳನ್ನು ಮೀರಿ ಬಸವಣ್ಣನ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ರಚನೆಯಾದದ್ದು ವಚನ ಸಾಹಿತ್ಯ ಎಂದರು.
ಶರಣರು ಮೆಟ್ಟಿದ ಕಲ್ಯಾಣ ನಾಡು ಭೂ ಕೈಲಾಸವಾಗಿತ್ತು ಜಗತ್ತಿನ ವಿವಿಧ ಭಾಗದ ಜನ ವಚನ ಚಳುವಳಿ ಪ್ರಭಾವಕ್ಕೆ ಒಳಪಟ್ಟು ಕಲ್ಯಾಣಕ್ಕೆ ಬಂದರು, ಕಾವ್ಯ ಏನು ಮಾಡಬಲ್ಲದು ಎಂಬುದಕ್ಕೆ ಉತ್ತರ ವಚನಗಳಲ್ಲಿಯೇ ಇದೆ ಎಂದರು.

ಕವಿಗೋಷ್ಠಿ ಆಶಯ ನುಡಿ ಆಡಿ ಪ್ರೊ ಬಸವರಾಜ ಜಾಲವಾದಿ ಅವರು ಮಾತನಾಡಿ, 21ನೇ ಶತಮಾನದಲ್ಲಿ ಬಸವಣ್ಣನ ಅರ್ಥ ಶಾಸ್ತ್ರವನ್ನು ನಾವೆಲ್ಲ ಅಪ್ಪಿಕೊಳ್ಳಬೇಕು, ಒಪ್ಪಿಕೊಳ್ಳಬೇಕು ಕಾಯಕ ಮಾಡಿದ ಸಂಪಾದನೆಯನ್ನು ಸಮಾಜಕ್ಕೆ ಸದುಪಯೋಗಪಡಿಸಬೇಕು ಎಂದು ಹೇಳಿದ ಬಸವಾದಿ ಶರಣರ ತತ್ವ ಎಲ್ಲರು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಯೋಜಕ ಶಂಕರ ಬೈಚಬಾಳ ಮಾತನಾಡಿ ಕನ್ನಡದ ಕವಿಗಳ ಸಂದೇಶ ಬೇರೆ ಭಾಷೆಗೆ ತಲುಪಿಸುವ ಉದ್ದೇಶದಿಂದ ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.
ಕವಿಗೋಷ್ಠಿಯಲ್ಲಿ ಕನ್ನಡಲ್ಲಿ ಕಲಾವತಿ ಬೈಚಬಾಳ, ಬಸರಾಜ ಗವಿಮಠ, ಶೇಷರಾವ ಮಾನೆ, ಪರಶುರಾಮ ಶಿವಶರಣ, ಶಿವಪುತ್ರ ಅಜಮನಿ, ಕೆ ಎಸ್ ಬಾಗೇವಾಡಿ, ಇಂಗ್ಲಿಷ್‌ನಲ್ಲಿ ಬಸಮ್ಮ ಬಾಗೋಜಿ, ಅನು ಮುಲ್ಲಾ, ಎಸ್.ಬಿ. ಕಮತಿ, ಹಿಂದಿಯಲ್ಲಿ ಶಿವಣ್ಣ ಹದಿಮೂರ, ಸಂಸ್ಕೃತದಲ್ಲಿ ಗೀತಾ ಸನದಿ, ಕೊಂಕಣಿಯಲ್ಲಿ ಪ್ರಶಾಂತ ದೈವಜ್ಞ, ತೆಲಗುದಲ್ಲಿ ಡಿ. ಜೋಸೆಫ್, ಉರ್ದುದಲ್ಲಿ ಎಂ.ಎA.ಕಲಾಸಿ, ಡಾ. ಅಮೀರುದ್ದೀನ ಖಾಜಿ, ಲಂಬಾಣಿಯಲ್ಲಿ ವಸಂತ ಚವ್ಹಾಣ ಕವನ ವಾಚಿಸಿದರು.


ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿನ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


ವೇದಿಕೆಯಲ್ಲಿ ವಿದ್ಯಾವತಿ ಅಂಕಲಗಿ, ದಾನಮ್ಮ ಮಹಾಜನ, ಲಕ್ಷ್ಮೀ ಹೊಸಮನಿ, ಸುಭಾಸ ಕನ್ನೂರ, ಘನಶ್ಯಾಮ ತೋಸ್ನಿವಾಲಾ, ಮಹಾದೇವಿ ತೆಲಗಿ, ರಾಜಶೇಖರ ಉಮರಾಣಿ, ದಾನೇಶ ಅವಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಭುಗೌಡ ಪಾಟೀಲ, ಕೆ.ಎಫ್. ಅಂಕಲಗಿ, ಮಹಾದೇವಿ ಗೋಕಾಕ, ವ್ಹಿ.ಸಿ. ನಾಗಠಾಣ, ಅಡಿವೆಪ್ಪ ಸಾಲಗಲ್ಲ, ಅನಿಲ ಹೊಸಮನಿ, ಭಾರತಿ ಪಾಟೀಲ, ಶಾಂತವೀರ ಥಾಲಬಾವಡಿ, ಲಾಯಪ್ಪ ಇಂಗಳೆ, ಕಲ್ಲು ಶಿವಶರಣ, ಶರಣು ಕಿರಣಗಿ, ಬಸನಗೌಡ ಹರನಾಳ, ವ್ಹಿ.ಡಿ.ಐಹೊಳ್ಳಿ, ಜಂಬುನಾಥ ಕಂಚ್ಯಾಣಿ, ಸುಧಾರಾಣಿ ಬಿರಾದಾರ, ಸಂಗೀತಾ ಪೂಜಾರಿ, ಅನುಪ್ರಿಯಾ ಬಿರಾದಾರ, ಶಿವಾನಂದ ಸಾಂಗೋಲಿ, ಚೆನ್ನು ಕಟ್ಟಿಮನಿ, ತಿಪ್ಪಣ್ಣ ದೊಡಮನಿ, ಯಮನಪ್ಪ ಗುಣಕಿ, ಶ್ರೀನಾಥ ಪೂಜಾರಿ, ಸುಭಾಸ ಯಾದವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Sunday, April 19, 2026

ಪಾಲಿ ಭಾಷೆ ಪರೀಕ್ಷೆ: ಮಲ್ಲಿಕಾರ್ಜುನ ಕೆಳಗಡೆ ವಿಶೇಷ ಸಾಧನೆ

ವಿಜಯಪುರ: ನಗರದ ಕನಕದಾಸ ಬಡಾವಣೆ ನಿವಾಸಿ, ವಾರ್ತಾ ಇಲಾಖೆ ವಿಶ್ರಾಂತ ಉನ್ನತ ಅಧಿಕಾರಿ ಮಲ್ಲಿಕಾರ್ಜುನ ಕೆಳಗಡೆ ಅವರು ತಮ್ಮ 75 ನೇ ಇಳಿವಯಸ್ಸಿನಲ್ಲೂ ಪಾಲಿ ಭಾಷೆ ಪರೀಕ್ಷೆಯಲ್ಲಿ ವಿಶೇಷ ಸಾಧನೆ ತೋರಿದ್ದಾರೆ.

ಪಾಲಿ ಭಾಷೆ ಕಲಿಯುವ ಆಸಕ್ತಿಯಿಂದ ಕಲಬುರಗಿಯ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪಾಲಿ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ, ಒಂದು ವರ್ಷದ ಡಿಪ್ಲೋಮಾ ಪಾಲಿ ಕೋರ್ಸ್ ಅಧ್ಯಯನ ಮಾಡಿ, ಪರೀಕ್ಷೆ ಬರೆದು ಅತ್ಯುತ್ತಮ ಸ್ಥಾನ (500 ಕ್ಕೆ 403 ಅಂಕ) ಪಡೆದಿದ್ದು, ಕರ್ನಾಟಕ ಸಂಸ್ಕೃತಿ ವಿಶ್ವ ವಿದ್ಯಾಲಯ ಪ್ರಮಾಣ ಪತ್ರ ನೀಡಿದೆ.

ಮಲ್ಲಿಕಾರ್ಜುನ ಕೆಳಗಡೆ ಅವರ ವಿಶೇಷ ಸಾಧನೆಗೆ ಸ್ನೇಹಿತರ ಬಳಗ, ಕುಟುಂಬ ವರ್ಗ ಹಾಗೂ ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ :  9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



ಬಸವಣ್ಣನ ಆರ‍್ಶ ಎಲ್ಲರಿಗೂ ಮಾಧರಿ- ಸುಭಾಸ ಯಾದವಾಡ


ಶರಣ ಅಲ್ಲಮಪ್ರಭು, ಶರಣ ಸಿದ್ದರಾಮೇಶ್ವರ ವೇದಿಕೆ
ವಿಜಯಪುರ: ಆಧುನಿಕ ಎಲ್ಲ ಕವಿಗಳಿಗೆ ಬಸವಣ್ಣ ಆವರಿಸಿದ್ದಾನೆ.ಬಸವಣ್ಣನ ಸಮ ಸಮಾಜದ ಆರ‍್ಶ ಎಲ್ಲರಿಗೂ ಇಂದಿಗೂ ಮಾದರಿಯಾಗಿದ್ದಾವೆ ಎಂದು ಹಿರಿಯ ಕವಿ ಸುಭಾಸ ಯಾದವಾಡ ಹೇಳಿದರು.
ಅವರು ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ಕನ್ನಡ ಕಾವ್ಯಲೋಕದಲ್ಲಿ ಬಸವಣ್ಣನ ಪ್ರಭಾವ ಅತೀವ ಗಾಢವಾಗಿದೆ. ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಸಾರಿದ ಬಸವಣ್ಣನ ವಚನಗಳು ಇಂದಿಗೂ ಎಲ್ಲ ಕವಿಗಳಿಗೆ ಪ್ರೇರಣೆಯಾಗಿವೆ. ವರ್ಣಭೇದ, ಜಾತಿ ಅಸಮಾನತೆ, ಅಂಧಶ್ರದ್ಧೆಗಳ ವಿರುದ್ಧ ಬಸವಣ್ಣ ಹೋರಾಡಿದ ರೀತಿ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದೆಯೆಂದು ಹೇಳಿದರು. ದುಡಿಮೆ ಮತ್ತು ಸತ್ಯನಿಷ್ಠ ಜೀವನದ ಮಹತ್ವವನ್ನು ಪ್ರತಿಪಾದಿಸುತ್ತದೆ. ಆಧುನಿಕ ಕವಿಗಳು ತಮ್ಮ ಕಾವ್ಯಗಳಲ್ಲಿ ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು, ಸಮಾಜದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾನತೆ ಮತ್ತು ಸಹಿಷ್ಣುತೆ ಎಂಬ ಮೌಲ್ಯಗಳು ಇಂದಿನ ಜಗತ್ತಿನಲ್ಲಿ ಅತ್ಯಂತ ಅಗತ್ಯವಾಗಿವೆ. ಈ ಹಿನ್ನೆಲೆಯಲ್ಲಿ ಬಸವಣ್ಣನ ಆದರ್ಶಗಳು ಮಾದರಿಯಾಗಿವೆ  ಎಂದರು.  .ಸಾಹಿತಿ ಶೇಷರಾವ ಮಾನೆ ಅವರು ಮಾತನಾಡಿ ಕವಿಗಳಲ್ಲಿ ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಕಾಣುತ್ತಿವೆ, ಕನ್ನಡದಲ್ಲಿ ಮೊದಲ ಬಾರಿಗೆ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯದ ಮಾದರಿ ಪುರುಷ ಎಂದರು.
ಸವಿತಾ ಬಿ ಎನ್

ಕವಿಗೋಷ್ಠಿಯಲ್ಲಿ ಸವಿತಾ ಬಿ ಎನ್, ಶಿವಬಾಳಮ್ಮ ಕೊಂಡಗೂಳಿ, ಲಾಯಪ್ಪ ಇಂಗಳೆ , ಕಲ್ಲಪ್ಪ ಶಿವಶರಣ, ದೀಪಕ ಶಿಂಧೆ, ಮಯೂರ ಸಜ್ಜನ, ಲಕ್ಷ್ಮಿ ಗೋಡೆಕರ, ಭರತಕುಮಾರ ಎಚ್ ಟಿ, ಅನುಪ್ರಿಯಾ ಬಿರಾದಾರ, ಸುನೀತಾ ಮೋರೆ, ಕಾವೇರಿ ಹೊಸಮನಿ, ವಿದ್ಯಾಶ್ರೀ ಪೂಜಾರಿ, ಯಲ್ಲಾಲಿಂಗ ಜಮಾದಾರ, ಸುಧಾರಾಣಿ ಬಿರಾದಾರ, ಶಿವಾಜಿ ಮೋರೆ, ಮುರುಗೇಶ ಸಂಗಮ, ಬಿ.ಎಸ್. ಪೂಜಾರಿ, ಚೇತನ ಹಿರೇಕುರುಬರ., ಬೋರಮ್ಮ ಬೇನೂರ, ಮಲ್ಲಿಕರ‍್ಜುನ ಹಡಪದ, ಮಹಾದೇವಿ ಪಾಟೀಲ, ಚಂದ್ರಶೇಖರ,ಅಕ್ಷಯ ಬಲತಿ, ಸುರೇಖಾ ಜಾಲವಾದಿ, ಡಾ. ವನಜಾಕ್ಷಿ ಬಡಿಗೇರ, ದಾನಮ್ಮ ಹೂಗಾರ , ಶಿವರಾಜ ಬಡಿಗೇರ, ತೇಜಸ್ವಿನಿ ಚಾಂದಕವಟೆ,ಅರುಣಕುಮಾರ ರಾಜಮಾನೆ, ರೇಣುಕಾ ಬಿಸನಾಳ, ಗೀತಾ ದೊಡಮನಿ, ಮಂಜುಳಾ ಜಾಲವಾದಿ, ಸುನಂದಾ ಕೋರಿ, ರುಕ್ಷಿಣಿ ಅಗಸರ, ರತ್ನಾ ಬೊಮ್ಮನಹಳ್ಳಿ, ಸುಜ್ಞಾನಿ ಪಾಟೀಲ,ಸಂತೋಷ ಎಸ್.ಎನ್,ವಿದ್ಯಾಶ್ರೀ ರಾಠೋಡ ಸೇರಿದಂತೆ 41 ಜನ ಕವಿಗಳು ಕವಿತೆ ವಾಚಿಸಿದರು.
ಶಿವಬಾಳಮ್ಮ ಕೊಂಡಗೂಳಿ

ವೇದಿಕೆಯಲ್ಲಿ ನಂದಾ ತಿಕೋಟಿ, ರಾಜಶೇಖರ ಉಮರಾಣಿ, ವಿಜಯಕುಮಾರ ಘಾಟಗೆ ಬಸವರಾಜ ಜಾಲವಾದಿ ಕುಮಾರಗೌಡ ಹರನಾಳ ದಾನೇಶ ಅವಟಿ, ಉಪಸ್ಥಿತರಿದ್ದರು.
ಕರ‍್ಯಕ್ರಮದಲ್ಲಿ ಪ್ರಭುಗೌಡ ಪಾಟೀಲ ವಿ ಸಿ ನಾಗಠಾಣ,ಜಂಬನಾಥ ಕಂಚಾಣಿ ಡಾ ವಿ ಡಿ ಐಹೊಳ್ಳಿ, ಭಾರತಿ ಪಾಟೀಲ ಮಹಾದೇವಿ ಗೋಕಾಕ, ಶರಣಗೌಡ ಪಾಟೀಲ ದಾನೇಶ ಅವಟಿ, ಸವಿತಾ ಶಹಾಪುರ, ಶ್ರೀಧರ ಕನ್ನೂರ, ಶರಣು ಕಾಟಕರ,ಶರಣು ಕಿರಣಗಿ, ಚಂದ್ರಶೇಖರ ಹೊಸಮನಿ, ತನ್ಮಯ ಚಂದಕಾವಟೆ ಸೇರಿ ಹಲವರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.