Thursday, March 5, 2026

ವಿಜಯಪುರ ಮೆಡಿಕಲ್ ಕಾಲೇಜು ನನಸಾಗುವುದೇ ಕನಸು

ವಿಜಯಪುರ ಜಿಲ್ಲೆಯ ಐತಿಹಾಸಿಕವಾಗಿ ಸಾಂಸ್ಕೃತಿಕವಾಗಿ ಕೃಷಿ ಪ್ರಧಾನವಾದ ಜಿಲ್ಲೆ. 1956ರಲ್ಲಿ ಜಿಲ್ಲೆಯಾಗಿ ಆಡಳಿತ ನಡೆಸಿಕೊಂಡು ಬಂದರೂ ಇಲ್ಲಿ ಇನ್ನೂ ಸರ್ಕಾರಿ ವೈದ್ಯಕೀಯ ಕಾಲೇಜು ಆಗಿರಲಿಲ್ಲ; ಸುಮಾರು ಎರಡು ದಶಕಗಳಿಂದಲೂ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಪ್ರಗತಿಪರ ಸಂಘಟನೆಗಳು ಸರಕಾರಕ್ಕೆ ಮತ್ತು ಈ ಭಾಗದ ಶಾಸಕರಿಗೆ, ಸಚಿವರುಗಳಿಗೆ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನ ಆಗಿರಲಿಲ್ಲ; ಇಲ್ಲಿ ಎಲ್ಲ ಸೌಲಭ್ಯಗಳುಳ್ಳ ದೊಡ್ಡ ಜಿಲ್ಲಾ ಸರಕಾರಿ ಆಸ್ಪತ್ರೆ ಇದೆ. ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು ಸಾವಿರದ ಐದುನೂರು ಹೊರರೋಗಿಗಳು ಮತ್ತು ಒಳರೋಗಿಗಳು ಬಂದು ಹೋಗುತ್ತಿದ್ದಾರೆ, ಉತ್ತಮ ಚಿಕಿತ್ಸೆ,ಮತ್ತು ರೋಗಿಗಳ ಮುತುವರ್ಜಿ ವಹಿಸಿ ಕಾಳಜಿ ಮಾಡುವ ದಾರಿಯರು ಮತ್ತು ವೈದ್ಯರಿದ್ದಾರೆ. ತಾಯಿ ಮಕ್ಕಳ ಆರೋಗ್ಯ ಆಸ್ಪತ್ರೆ ಇದೆ. ಆಧುನಿಕ ಉಪಕರಣಗಳುಳ್ಳ ಸ್ಕ್ಯಾನಿಂಗ್ ಸೆಂಟರ್ ಇದೆ. 149 ಎಕರೆ ಭೂಮಿ ಇದೆ. ಇಷ್ಟೆಲ್ಲಾ ಸಂಪನ್ಮೂಲಗಳುಳ್ಳ ಆಸ್ಪತ್ರೆ ಇದ್ದರೂ ಸರ್ಕಾರ ಆಸ್ಪತ್ರೆಯ ಪಕ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲು ಹಿಂದೇಟು ಹಾಕುತ್ತಿತ್ತು ಸಾರ್ವಜನಿಕ ಸಂಘ ಸಂಸ್ಥೆಗಳು ಹಲವು ವರ್ಷಗಳಿಂದ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗಬೇಕೆಂದು ಒತ್ತಾಯಿಸುತ್ತಾ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಜಯಪುರದಲ್ಲಿ ಸರ್ಕಾರಿ ವೈದ್ಯಕಿಯ ಮಹಾವಿದ್ಯಾಲಯ ಸ್ಥಾಪಿಸಲು ನಿರ್ಧರಿಸಿತು. 

ದುರ್ದೈವದ ಸಂಗತಿ ಎಂದರೆ ಅದನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಮುಂದಾಗಿರುವುದನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ 106 ದಿನಗಳ ಕಾಲ ಸುದೀರ್ಘ ಹೋರಾಟವನ್ನು ಮಾಡಿದ್ದರ ಪರಿಣಾಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾವೇರಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಸಮ್ಮುಖದಲ್ಲಿ ಸಾರ್ವಜನಿಕವಾಗಿ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ ಜೊತೆಗೆ ವಿಜಯಪುರ ನಗರದಕ್ಕೆ ಆಗಮಿಸಿದಾಗ ಮತ್ತೆ ಪುನಃ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುತ್ತೇನೆ ಎಂದು ಹೇಳಿರುವುದು ಸಂತಸದ ವಿಷಯ.

ಹೋರಾಟದ ಸಂದರ್ಭದಲ್ಲಿ ಆರು ಜನ ಹೋರಾಟಗಾರರು 14 ದಿನಗಳ ಕಾಲ ಸೆರೆಮನೆವಾಸ. 27 ಜನ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ಕೂಡ ಈಗ ಇತಿಹಾಸ. ಇಂತಹ ಸುದೀರ್ಘ ಹೋರಾಟದ ಫಲವಾಗಿ ಇಂದು ಮಂಡಿಸುವ ಬಜೆಟ್ ನಲ್ಲಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗುತ್ತದೆ ಎಂಬ ಬಹುದೊಡ್ಡ ನಿರೀಕ್ಷೆಯನ್ನು ಜಿಲ್ಲೆಯ ಜನ ಇಟ್ಟುಕೊಂಡಿದ್ದಾರೆ. ಜನರ ನಿರೀಕ್ಷೆಯನ್ನು ಹುಸಿಮಾಡದೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಯ್ಯವ್ಯಯದಲ್ಲಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಘೋಷಿಸಿ ಅನುದಾನ ಕಾಯ್ದಿರಿಸಿ ಜಿಲ್ಲೆಯ ಜನರ ಬಹುದಿನದ ಕನಸು ನನಸುಮಾಡುತ್ತಾರೆ ಕಾಯ್ದು ನೋಡಬೇಕಿದೆ.

- ಲಲಿತಾ ಬಿಜ್ಜರಗಿ 

ಲೇಖಕಿ ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ವಿಜಯಪುರ.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ವಿಜಯಪುರದಲ್ಲಿ ಚಾಲುಕ್ಯರ ಶರಭದ ಉಬ್ಬು ಶಿಲ್ಪ ಪತ್ತೆ : ಸಂರಕ್ಷಣೆಗೆ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಆಗ್ರಹ

ವಿಜಯಪುರ : ನಗರದ ಪುರಾತನ ಕೋಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶರಭ ದ ಉಬ್ಬು ಶಿಲ್ಪ ಪತ್ತೆಯಾಗಿದ್ದು, ವಿಜಯಪುರದ ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಉಬ್ಬು ಶಿಲ್ಪವನ್ನು ಗುರುತಿಸಿದ್ದು. ವಿಜಯಪುರ ನಗರದ ಕೋಟೆಯು ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರು ನಿರ್ಮಿಸಿರುವುದಕ್ಕೆ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ. ಎಂದು ಅವರು ತಿಳಿಸಿದ್ದಾರೆ.

ಶರಭ ಎಂದರೆ ಹಿಂದೂ ಪುರಾಣಗಳಲ್ಲಿ ವರ್ಣಿಸಲಾದ, ಸಿಂಹದ ಮುಖ ಮತ್ತು ಹಕ್ಕಿಯ ರೆಕ್ಕೆಗಳು ಹಾಗೂ ಎಂಟು ಕಾಲುಗಳನ್ನು ಹೊಂದಿರುವ ಶಕ್ತಿಶಾಲಿ ಪ್ರಾಣಿಯಾಗಿದೆ. ಇದು ಆನೆ ಮತ್ತು ಸಿಂಹಕ್ಕಿAತ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿದೆ. ನರಸಿಂಹನ ಕೋಪವನ್ನು ಶಾಂತಗೊಳಿಸಲು ಶಿವನು ಶರಭನ ಅವತಾರ (ಶರಭೇಶ್ವರ) ತಾಳಿದನು ಎಂದು ಶೈವ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಇದು ಒಂದೇ ಜಿಗಿತದಲ್ಲಿ ಬೃಹತ್ ಕಣಿವೆಗಳನ್ನು ಜಿಗಿಯಬಲ್ಲಂತಹ ವೇಗ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಲಾಗಿದೆ.

ಹಿರಣ್ಯಕಶ್ಯಪನನ್ನು ವಧಿಸಿದ ನಂತರ ಉಗ್ರರೂಪಿಯಾಗಿದ್ದ ನರಸಿಂಹನನ್ನು ಪಳಗಿಸಲು ಶಿವನು ಈ ಅವತಾರ ಧರಿಸಿದ್ದು ಶರಭದ ಪೌರಾಣಿಕ ಹಿನ್ನಲೆಯಾಗಿದೆ.

ಬೌದ್ಧ ಜಾತಕ ಕಥೆಗಳಲ್ಲಿ, ಶರಭನು ಬುದ್ಧನ ಹಿಂದಿನ ಜನ್ಮದ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ, ಇದು ಶಕ್ತಿ ಮತ್ತು ಕರುಣೆಯನ್ನು ಪ್ರತಿನಿಧಿಸುತ್ತದೆ. 

ಕೆಲವೊಮ್ಮೆ ಇದನ್ನು ಗಂಡಭೇರುAಡದೊAದಿಗೆ ಹೋಲಿಸಲಾಗುತ್ತದೆ, ಗಂಡಭೇರುAಡವು ವಿಷ್ಣುವಿನ ಸಂಕೇತವಾದರೆ ಶರಭವು ಮುಖ್ಯವಾಗಿ ಶಿವನ ಶಕ್ತಿಯ ಸಂಕೇತವಾಗಿದೆ. 

ಪ್ರತಿಮಾಶಾಸ್ತ್ರದ ಪ್ರಕಾರ ಶರಭ ಎಂದರೆ ಬೇಟೆಗಾರ ಭಾಗಶಃ ಪ್ರಾಣಿ, ಭಾಗಶಃ ಪಕ್ಷಿ ಮತ್ತು ದೊಡ್ಡ ಕಿರೀಟವನ್ನು ಧರಿಸಿರುವ ಎರಡು ತಲೆಗಳೊಂದಿಗೆ ದೇಹವನ್ನು ಹೊಂದಿದ್ದಾನೆ ಎಂದು ವಿವರಿಸುತ್ತದೆ.

ಇಂತಹ ಅಪರೂಪದ ಐತಿಹಾಸಿಕ, ಪಾರಂಪರಿಕ ಹಿನ್ನಲೆ ಹೊಂದಿರುವ ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರ ಇತಿಹಾಸ ಸಾರುವ ಶರಭದ ಉಬ್ಬು ಶಿಲ್ಪವು ವಿಜಯಪುರ ಕೋಟೆಯಲ್ಲಿ ಕೆತ್ತಿಸಿರುವುದು ಚಾಲುಕ್ಯರು ಮತ್ತು ಯಾದವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ತಿಳಿಸಿರುವ ಅವರು ಐತಿಹಾಸಿಕ ಶರಭದ ಶಿಲ್ಪ ಇರುವ ಕೋಟೆ ಭಾಗವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


06-03-2026 EE DIVASA KANNADA DAILY NEWS PAPER