Sunday, September 20, 2026

ದಿ.೨೩ ರಂದು ಝೂಲೂಸ್ ಏ. ಗೌಸಿಯಾ ಎಂಬ ಬೃಹತ್ ಶಾಂತಿಯಾತ್ರೆ : ಧರ್ಮಗುರು ಮೌಲಾನಾ ನೌಷಾದ್ ಆಲಂ

 ವಿಜಯಪುರ : ವಿಜಯಪುರದ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಶ್ರದ್ಧಾ ಭಕ್ತಿಯಿಂದ ಜರುಗಲಿದ್ದು, ಇದರಂಗವಾಗಿ ದಿ.೨೩  ರಂದು ಝೂಲೂಸ್ ಏ. ಗೌಸಿಯಾ ಎಂಬ ಬೃಹತ್ ಶಾಂತಿಯಾತ್ರೆ ನಡೆಯಲಿದೆ ಎಂದು ಧರ್ಮಗುರು ಮೌಲಾನಾ ನೌಷಾದ್ ಆಲಂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉರುಸು ಅಂಗವಾಗಿ ಅನೇಕ ಸಿದ್ದತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ, ಮಾನವೀಯತೆ, ಶಾಂತಿ, ಸಹೋದರತೆ ತತ್ವ ಸಾರಿದ ಅರ್ಕಾಟ್ ದರ್ಗಾದ ಹಜರತ್ ಸೈಯ್ಯದ್ ನಾ ಅಬ್ದುಲ್ ಷಾ ಖಾದ್ರಿ ಅವರ ಉರುಸಿನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಸಿದವರಿಗೆ ಅನ್ನ, ಆರೋಗ್ಯ ಸಮಸ್ಯೆ ಎದುರಿಸುವವರಿಗೆ ಪಾರಂಪರಿಕ ಆಯುರ್ವೇದ ಔಷಧಿ ದೊರಕುವ ಮೂಲಕ ದವಾ ಹಾಗೂ ದುವಾ ಎರಡು ಇಲ್ಲಿ ಲಭ್ಯ ಎಂದರು.

ಉರುಸು ಅಂಗವಾಗಿ ಶಾಂತಿ ಯಾತ್ರೆ ದಿ.೨೩ ರಂದು ನಡೆಯಲಿದ್ದು, ದರ್ಗಾದ ಪ್ರಸ್ತುತ ಸಜ್ಜಾದೆ ನಷೀನ್ ಹಜರತ್ ಇಕ್ಬಾಲ್ ಪೀರಾ ಹುಸೈನಿ ಹಾಗೂ ಅವರ ಪುತ್ರ ಡಾ.ಸೈಯ್ಯದ್ ತಕೀ ಪೀರಾ ಹುಸೈನಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ದಿ.೨೩ ರಂದು ಭವ್ಯ ಯಾತ್ರೆ ಸೊಲ್ಲಾಪೂರ ನಾಕಾದಿಂದ ಆರಂಭಗೊಳ್ಳಲಿದೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಯಾತ್ರೆ ಶಹಾಪೂರ ದರ್ವಾಜಾ, ಸರಾಫ್ ಬಜಾರ್, ಗಾಂಧಿವೃತ್ತ, ಅತಾವುಲ್ಲಾ ಸರ್ಕಲ್, ಬಡಿಕಮಾನ್, ಜಾಮೀಯಾ ಮಸೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರ್ಗಾ ತಲುಪಲಿದೆ ಎಂದರು.

ಶಾAತಿಯಾತ್ರೆಗೂ ಮುನ್ನಾ ದಿನ ದಿ.೨೨ ರಂದು ವಿಚಾರ ಸಂಕಿರಣ ನಡೆಯಲಿದ್ದು, ದಿ.೨೩ ರಂದು ಪವಿತ್ರ ಸಂದಲ್ ಕಾರ್ಯಕ್ರಮಗಳು ದರ್ಗಾದ ಆವರಣದಲ್ಲಿ ನಡೆಯಲಿದೆ. ನಂತರ ಮುಷಾಯಿರಾ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು. ಉರುಸು ಅಂಗವಾಗಿ ನೆರೆಯ ಮಹಾರಾಷ್ಟç, ಗುಜರಾತ್, ತಮಿಳುನಾಡು, ಕೇರಳ, ಗುಜರಾತ್, ಆಂದ್ರ ಪ್ರದೇಶ ಮೊದಲಾದ ಭಾಗಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ. 

ಪ್ರಮುಖರಾದ ಡಾ.ಎಂ.ಎಸ್. ಮುಜಾವರ, ಇರಾಪ ಸುನ್ನೆವಾಲೆ, ಮಹೇಪೊಜ ಅಲಿ ಬಾಗವಾನ, ಮೌಲಾನಾ ಹುಸೇನ ರಜ್ವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, September 19, 2026

ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಪ್ರಾರಂಭ ಕೆಲಸ ಕಾರ್ಯಗಳು ಭರದಿಂದ ಸಾಗಿವೆ : ಡಾ ಜಾನಕಿ ತೊರವಿ


 ವಿಜಯಪುರ : ನಗರದ ಸರಕಾರಿ ಆಸ್ಪತ್ರೆಯಲ್ಲಿ ಇಂದು ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಅಧಿಕಾರಿಗಳಾದ ಡಾ ಜಾನಕಿ ತೊರವಿ ಅವರನ್ನು ಭೇಟಿಯಾಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಕುರಿತು ಸರಕಾರ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.

ಆಡಳಿತಾಧಿಕಾರಿಗಳಿಗೆ ಆದಷ್ಟು ಬೇಗನೆ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಬೇಕು ಜೊತೆಗೆ ಎಲ್ಲ ಸಿಬ್ಬಂದಿಗಳನ್ನು ಸರಕಾರದಿಂದಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

ಸರಕಾರದ ಹಂತದಲ್ಲಿ ಕಾಲೇಜು ಸ್ಥಾಪನೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಭರದಿಂದ ಸಾಗಿವೆ. ಆದಷ್ಟು ಬೇಗನೆ ಕಾಲೇಜು ಪ್ರಾರಂಭ ಮಾಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಡಾ ಜಾನಕಿ ತೊರವಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರರಾದ ಮಲ್ಲಿಕಾರ್ಜುನ ಬಟಗಿ, ವಿನೋದ ಖೇಡ, ಲಾಯಪ್ಪ ಇಂಗಳೆ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Thursday, September 17, 2026

ಸಿಂದಗಿಯಲ್ಲಿ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಅಕ್ಟೋಬರ್ 3 ರಂದು ಸ್ವಾಮಿ ರಾಮಾನಂದ ತೀರ್ಥರ ಜಯಂತಿ ಸರಕಾರ ಆಚರಿಸಲಿ -ಅಶೋಕ ಅಲ್ಲಾಪುರ


ಸಿಂದಗಿ : ಹೈದ್ರಾಬಾದ್ ಪ್ರಾಂತ ವಿಮೋಚನೆ ಆಗಲು ಮುಖ್ಯ ಕಾರಣಿಕರ್ತರು ಸ್ವಾಮಿ ರಾಮಾನಂದ ತೀರ್ಥರು ವಿಮೋಚನಾ ದಿನದಂದು ಅವರ ಸ್ಮರಣೆ ಮಾಡುವುದು ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಂದು ರಾಷ್ಟ್ರ ವೀರ ಸ್ವಾಮಿ ರಾಮಾನಂದ ತೀರ್ಥ ಸೇವಾ ಸಮಿತಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.

ಅವರು ಸಿಂದಗಿಯ ಸ್ವಾಮಿ ರಾಮಾನಂದ ತೀರ್ಥರ ಸ್ಮಾರಕದಲ್ಲಿ ರಾಷ್ಟ್ರ ವೀರ ಸ್ವಾಮಿ ರಾಮಾಂನಂದ ತೀರ್ಥ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಚಳುವಳಿಗೆ ದೊಡ್ಡ ಕೊಡುಗೆ ನೀಡಿದವರ ಸಾಲಿನಲ್ಲಿ ನಿಲ್ಲುವ ಪ್ರಮುಖ ನಾಯಕರೆಂದರೆ ಸ್ವಾಮಿ ರಾಮಾನಂದ ತೀರ್ಥರಾಗಿದ್ದಾರೆ. ಸರಕಾರ ಅವರ ಜನ್ಮ ದಿನವಾದ ಅಕ್ಟೋಬರ್ 3ರಂದು ಸರ್ಕಾರಿ ಜಯಂತಿಯಾಗಿ ಘೋಷಣೆ ಮಾಡಿ ಆಚರಿಸಿ ಸ್ವಾಮಿ ರಾಮಾನಂದ ತೀರ್ಥರಿಗೆ ಗೌರವಿಸಲ್ಲಿಸಬೇಕು, ಹಾಗೂ ಸಿಂದಗಿ ಯಲ್ಲಿರುವ ಅವರ ಸ್ಮಾರಕವನ್ನು ಅಭಿವೃದ್ಧಿಪಡಿಸಬೇಕೆಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ ಹಾಗೂ ಎನ್ ಸುರೇಶಕುಮಾರ ಅವರು ಮಾತನಾಡಿ  ಸಿಂದಗಿಯು ಹೈದ್ರಾಬಾದ್ ಪ್ರಾಂತ ವಿಮೋಚನಾ ಚಳುವಳಿಯ ಕೇಂದ್ರ ಸ್ಥಾನವಾಗಿದೆ. ಸಿಂದಗಿಯಲ್ಲಿ ಜನಸಿದ ಸ್ವಾಮಿ ರಾಮಾನಂದ ತೀರ್ಥರು ಚಳುವಳಿಯ ನೇತೃತ್ವ ವಹಿಸದೆ ಹೋದಲ್ಲಿ ಹೈದ್ರಾಬಾದ್ ಪ್ರಾಂತ ವಿಮೋಚನೆ ಆಗುತ್ತಿರಲಿಲ್ಲ ಅಂತಹ ಮಹಾತ್ಮರಿಗೆ ಗೌರವಿಸುವ ಕೆಲಸ ವಿಜಯಪುರ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಮಾಡಬೇಕು ಎಂದರು.

ವಿಜಯಪುರ ಜಿಲ್ಲಾ 371 ಜೆ ಹೋರಾಟಗಾರ ಲಾಯಪ್ಪ ಇಂಗಳೆ ಅವರು ಮಾತನಾಡಿ ವಿಜಯಪುರ ಜಿಲ್ಲಾಡಳಿತ ಸಿಂದಗಿ ತಾಲೂಕು ಆಡಳಿತ ಮತ್ತು ರಾಜ್ಯ ಸರಕಾರ ವಿಮೋಚನಾ ದಿನದಂದು ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು ಸರಕಾರ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅವರಿಗೆ ಗೌರವ ಸಲ್ಲಿಸದೆ  ಅಗೌರವ ತೋರಿಸುವ ಕೆಲಸ ಮಾಡಿದೆ. ಕೂಡಲೇ ಸರಕಾರ ಸ್ವಾಮಿ ರಾಮಾನಂದ ತೀರ್ಥರ ಸಿಂದಗಿಯ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಬೇಕು ಜೊತೆಗೆ ಅಕ್ಟೋಬರ್ 3 ರ ಅವರ ಜನ್ಮ ದಿನವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಘೋಷಣೆ ಮಾಡಿ ಆಚರಣೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೈದ್ರಾಬಾದ್ ವಿಮೋಚನಾ ಚಳುವಳಿ ಪಿತಾಮಹ ಸ್ವಾಮಿ ಶ್ರೀ ರಾಮಾಂನಂದ ತೀರ್ಥರ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ  ಸ್ವಾಮಿ ರಾಮಾನಂದ ತೀರ್ಥರ ವಂಶಸ್ಥರಾದ ರಂಗರಾವ ಖೇಡಗಿ, ಸಮಿತಿಯ ಕಾರ್ಯದರ್ಶಿ ಪ್ರದೀಪ ದೇಶಪಾಂಡೆ, 371 ಜೆ ಹೋರಾಟಗಾರರಾದ ವಿನೋದ ಖೇಡ ಕಲ್ಲಪ್ಪ ಶಿವಶರಣ, ಚಂದ್ರಶೇಖರ ಹೊಸಮನಿ,ಬಸವರಾಜ ಕುಂಬಾರ, ಧರ್ಮಣ್ಣ ಗಬಸಾವಳಗಿ, ಬಸನಗೌಡ ಧರ್ಮಗೊಂಡ, ಶಿವಪ್ಪ ಸುಲ್ಪಿ, ಎಮ್ ಎಚ್ ಪಟೇಲ, ರಮೇಶ ದೊಡಮನಿ, ಶಬ್ಬೀರ ಪಟೇಲ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ವಿಜಯಪುರದಲ್ಲಿ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ನಮ್ಮ ಯುವಜನಾಂಗಕ್ಕೆ ಸ್ಫೂರ್ತಿ : ಜಗದೇವ ಸೂರ್ಯವಂಶಿ

ವಿಜಯಪುರ : ನಗರದ   ವಲ್ಲಭಾಯಿ ಪಟೇಲ ವೃತ್ತದಲ್ಲಿ ವಿಜಯಪುರ ಜಿಲ್ಲಾ 371 (ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ  ಸ್ವಾಭಿಮಾನಿ ಸೇನೆ ವತಿಯಿಂದ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ಜಗದೇವ ಸೂರ್ಯವಂಶಿ ಅವರು ಮಾತನಾಡಿ  ಆಪರೇಷನ್ ಪೋಲೊ ಮೂಲಕ ಹೈದ್ರಾಬಾದ್ ಪ್ರಾಂತವನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿದ ಕೀರ್ತಿ ಸರದಾರ ವಲ್ಲಭಾಯಿ ಪಟೇಲ ಅವರಿಗೆ ಸಲ್ಲುತ್ತದೆ. ಅಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ನಮ್ಮ ಯುವಜನಾಂಗಕ್ಕೆ ಸ್ಫೂರ್ತಿ ಎಂದು ಹೇಳಿದರು.

ವಿಜಯಪುರ ಜಿಲ್ಲೆಯು ಹೈದ್ರಾಬಾದ್ ರಾಜ್ಯದ ಭಾಗವಾಗಿತ್ತು ಜಿಲ್ಲೆಯ ಸ್ವಾಮಿ ರಾಮಾನಂದ ತೀರ್ಥರು ವಿಮೋಚನಾ ಚಳುವಳಿಯ ನೇತೃತ್ವ ವಹಿಸಿ ವಿಮೋಚನಾ ಚಳುವಳಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

371 (ಜೆ ) ಹೋರಾಟಗಾರರಾದ ವಿನೋದ ಖೇಡ, ಕರವೇ ಸ್ವಾಭಿಮಾನಿ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಎಮ್ ಆರ್ ಗುರಿಕಾರ ಅವರು ಮಾತನಾಡಿ , ಹೈದ್ರಾಬಾದ್ ಪ್ರಾಂತ ವಿಮೋಚನಾ ಚಳುವಳಿಗೆ  ಜಿಲ್ಲೆಯ ಸಾವಿರಾರು ಜನ ಯೋಧರು ಬಲಿದಾನ ಗೈದಿದ್ದಾರೆ. ಸರ್ದಾರ ಬಸವರಾಜ ನಾಗೂರ , ಸಿದ್ದಗೊಂಡಪ್ಪಗೌಡ‌ ಪಾಟೀಲ, ಸಂಗಯ್ಯ ಹಿರೇಮಠ ಸೇರಿದಂತೆ ಹಲವರು ವಿಮೋಚನಾ ಚಳುವಳಿಗೆ ಅವಿರತವಾಗಿ ಶ್ರಮಿಸಿದ ಫಲವಾಗಿ ಹೈದ್ರಾಬಾದ್ ಪ್ರಾಂಥವು ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 371 ಜೆ ಹೊರಾಟಗಾರ ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಮಾತನಾಡಿ, ವಿಜಯಪುರ ಜಿಲ್ಲೆಯು  ಅಖಂಡ ಹೈದ್ರಾಬಾದ ಪ್ರಾಂತದ ಸ್ವಾತಂತ್ರ್ಯ ಚಳುವಳಿಯ ಹೆಬ್ಬಾಗಿಲಾಗಿದೆ. ಇಲ್ಲಿನ ಚಳುವಳಿಗಾರರು ನೇತೃತ್ವ ವಹಿಸಿದ್ದಕ್ಕಾಗಿ ಹೈದ್ರಾಬಾದ್ ಪ್ರಾಂತ ವಿಮೋಚನೆಗೊಂಡಿದೆ. ವಿಮೋಚನೆ ಚಳುವಳಿಯ ಶ್ರೇಯಸ್ಸು ಸ್ವಾಮಿ ರಾಮಾನಂದ ತೀರ್ಥರಿಗೆ ಸಲ್ಲಬೇಕು ಎಂದು ಹೇಳಿದ ಅವರು ವಿಜಯಪುರ ಜಿಲ್ಲೆಯನ್ನು ಸರ್ಕಾರ 371 ಜೆ ಮೀಸಲಾತಿ ಅಡಿ ಸೇರಿಸಿ ಜಿಲ್ಲೆಯ ಹೈದ್ರಾಬಾದ ವಿಮೋಚನಾ ಚಳುವಳಿಗಾರರಿಗೆ ಗೌರವ ಸಲ್ಲಿಸಬೇಕೆಂದರು.

ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಮಲ್ಲಿಕಾರ್ಜುನ ಬಟಗಿ, ಅನಿಲ ಇಕ್ಕಡೆ, ಚಂದ್ರಶೇಖರ ಹೊಸಮನಿ, ಮಲ್ಲನಗೌಡ ಬಿರಾದಾರ,ಮಲ್ಲಿಕಾರ್ಜುನ ಲಂಗೋಟಿ, ಅಂಬಣ್ಣ ಗುನ್ನಾಪೂರ, ನೀಲಾಂಬಿಕಾ ಬಿರಾದಾರ , ಈಶ್ವರ ಚಂದ್ರ ಪಡಗಾನೂರ, ಶಂಕರ ಸಾತಪೋತೆ, ಶರಣಪ್ಪ ಕಟ್ಟಿ, ತಿಮ್ಮನಗೌಡ ಪಾಟೀಲ, ರಾಜಕುಮಾರ ಉಪ್ಪಾರ, ಚಿದಾನಂದ ಹಳ್ಳಿ, ವಿಠ್ಠಲ ಕರಿಗಾರ, ಉಮೇಶ ದೊಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.