Tuesday, October 21, 2025

22-10-2025 EE DIVASA KANNADA DAILY NEWS PAPER

21-10-2025 EE DIVASA KANNADA DAILY NEWS PAPER

ದೀಪದಲ್ಲಿ ಸರಕಾರಕ್ಕೆ ಧಿಕ್ಕಾರ ಎಂದು ಬರೆದು ; ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಕರಾಳ ದೀಪಾವಳಿ ಆಚರಣೆ

ವಿಜಯಪುರ : ನಗರದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಇಂದು 34ನೇ ದಿನ ಪೂರೈಸಿದೆ,

ದೀಪಾವಳಿ ಹಬ್ಬದ ಮಧ್ಯೆಯು ಹೋರಾಟ ನಡೆಯುತ್ತಿದೆ. ಸರಕಾರ ಹೋರಾಟಕ್ಕೆ ಸ್ಪಂದನೆ ಮಾಡದ ಹಿನ್ನೆಲೆಯಲ್ಲಿ ಹೋರಾಟಗಾರರು ದೀಪದಲ್ಲಿ ಸರಕಾರಕ್ಕೆ ಧಿಕ್ಕಾರ ಎಂದು ದೀಪದಲ್ಲಿ ಬರೆದು ಕರಾಳ. ದೀಪಾವಳಿ ಆಚರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಸರಕಾರ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿದ ಮುಖಂಡರು ಸರಕಾರದ ಬೇಜವಾಬ್ದಾರಿತನವನ್ನು ಕಟು ಮಾತಿನಲ್ಲಿ ಟೀಕಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ, ಅರವಿಂದ ಕುಲಕರ್ಣಿ, ಭಗವಾನ ರೆಡ್ಡಿ ಡಾ ಟಿ ಎಸ್ ಸುನೀತಕುಮಾರ, ಸುರೇಶ ಬಿಜಾಪುರ, ಬೋಗೇಶ ಸೋಲಾಪುರ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ,ಲಕ್ಷ್ಮಣ ಹಂದ್ರಾಳ ಲಲಿತಾ ಬಿಜ್ಜರಗಿ, ಭರತಕುಮಾರ ಎಚ್ ಟಿ,ಸುರೇಶ ಜೇಬಿ, ಅಕ್ರಂ ಮಾಶಾಳಕರ, ಸಿದ್ದರಾಮಯ್ಯ ಹಿರೇಮಠ ಗೀತಾ ಎಚ್, ಜ್ಯೋತಿ ಮಿಣಜಗಿ, ಲಕ್ಷ್ಮಣ ಕಂಬಾಗಿ, ಭೀಮು ಉಪ್ಪಾರ ಶಿವಬಾಳಮ್ಮ ಕೊಂಡಗೂಳಿ, ಗಿರೀಶ ಕಲಘಟಗಿ, ಪೂಜಾ ಜೋಮಿವಾಲೆ,ಫಯಾಜ್ ಕಲಾದಗಿ, ಶಿವಾನಂದ ಸುತಗುಂಡಿ, ಎ ಎಂ ಪಟೇಲ್ ಚಂದ್ರಶೇಖರ ಗಬ್ಬೂರ ಸೇರಿ ಹಲವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು