ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಸ್ತ್ರೀ ಎಂದರೆ ಅಷ್ಟೇ ಸಾಕೆ
ಸ್ತ್ರೀ ಸ್ತ್ರೀ ಎಂದರೆ ಅಷ್ಟೇ ಸಾಕೆ..
ಕನ್ನಡದಖ್ಯಾತ ಸಾಹಿತಿಡಾ ಶಿವರುದ್ರಪ್ಪನವರ ಈ ಸಾಲು ಸಾರ್ಥಕನೆನ್ನಿಸುತ್ತದೆ. ಹೌದು ಸ್ತ್ರೀ ಕನಸು ಹೌದು, ವಾಸ್ತವವೂ ಹೌದು. ಸ್ತ್ರೀಗೂ ಪ್ರಕೃತಿಗೂ ಅವಿನಾಬವ ಸಂಬಂಧವಿದೆ. ಈಕೆ ಭೂಮಿಯಾಗಿ ಮಿಗಿಲಾಗಿ ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹೀಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ.
ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿಂದಏಕಾಂಗಿಯಾಗಿ ನಡೆದಾಗ ಮಾತ್ರ ಈ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂಬ ಮಾತು ಮಹಾತ್ಮಾಗಾಂಧೀಜಿಯವರ ಹೇಳಿಕೆ ಪ್ರಸ್ತುತವೆನ್ನಿಸುತ್ತದೆ.ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿನ ಕಾಲಕ್ಕಿಂತಲೂ ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆ. ಕೇವಲ ಭೋಗದ ವಸ್ತುವಾಗಿದ್ದ ಈ ಸ್ತ್ರೀ ಕ್ರಮೇಣಅಡುಗೆ ಮನೆಗೇ ಮೀಸಲಾಗಿ ತನ್ನ ಸರ್ವಸ್ವವನ್ನೇಲ್ಲ ನಾಲ್ಕು ಗೋಡೆಗಳ ಮಧ್ಯೆಯೇ ಜೀವಿಸುತ್ತಿದ್ದವಳು ಇಂದುಆಕಾಶದಲ್ಲಿ ಹಾರಾಡುತ್ತಿದ್ದಾಳೆ, ಗಡಿಯಲ್ಲಿ ಶತೃಗಳ ಜೊತೆ ಹೋರಾಡುತ್ತಾ ಯಾವ ಪುರುಷನಿಗೂ ಕಡಿಮೆಯಿಲ್ಲದಂತೆಜೀವನ ಸಾಗಿಸುತ್ತಿದ್ದಾಳೆ ಈ ಸ್ತ್ರೀ.
ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ.ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಸ್ರ್ತೀಗೆ ಅವಳದೇ ಆದಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹು ದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ, ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿಎರಡು ಮಾತಿಲ್ಲ. ಮಹಿಳೆಯರ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯರು ಹಿಂದಿನಿಂದಲೂ ಅಬಲೆಯಂದೇ ಕಡೆಗಣಿಸಲಾಗುತ್ತಿತ್ತು.
ಒಂದುಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆಎಂದಾದರೆಖಂಡಿತವಾಗಿ ಅವಳಲ್ಲಿ ಅಗಾದವಾದ ಶಕ್ತಿ ಇದೆಎಂದರ್ಥ. ಮಾತೃಶಕ್ತಿ ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸಾಂತ್ವಾನ ಗುಣಗಳು ಆಕೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ. ನಮ್ಮದೇಶದಲ್ಲಿ ಕೌಟುಂಬಿಕ ಪದ್ದತಿ, ಸಂಸ್ಕøತಿ, ಸಂಸ್ಕಾರಗಳು ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು ಕಟ್ಟುಪಾಡುಗಳು ಹಾಕಲಾಗುತ್ತದೆ. ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ ನೋಡಬೇಕಾಗುತ್ತದೆ. ಒಂದುಗ್ರಾಮೀಣ ಮಹಿಳೆ ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತುಅನುಭವಿಸಲು ಇಚ್ಛಿಸುವ ಮನೋಭಾವದಲ್ಲಿಇಬ್ಬರಿಗೂ ವ್ಯತ್ಯಾಸವಿದೆ.
ಮಹಿಳೆ ಇಂದು ಇಷ್ಟು ಯಶಸ್ವಿಯಾಗಲು ಮುಖ್ಯಕಾರಣ ಶಿಕ್ಷಣ.ಇಂದಿನ ಶಿಕ್ಷಣದಲ್ಲಿ ಮಹಿಳೆ ಕುರಿತುತನ್ನ ಸ್ವಂತ ಬಲದಿಂದ ಬದುಕು ವಂತವಳಾಗಿದ್ದಾಳೆ. ಭಾರತೀಯ ರಾಜಕಾರಣದಲ್ಲಿ ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಇವರೊಬ್ಬ ಯಶಸ್ವಿ ರಾಜಕಾರಣಿಯಾಗಿಇವರು ಹತ್ತು ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲ ರಾಷ್ಟ್ರವನ್ನು ಆಳಿದ್ದಾರೆ. ಸಂಸತ್ತಿನಲ್ಲಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದಿರಾ ಗಾಂಧಿ ಅವರಿಗಿದೆ. ಇಂದಿರಾಗಾಂಧಿ ಪಡೆದಿದ್ದ ಶಿಕ್ಷಣ ಮತ್ತುರಾಜಕೀಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಅವರು ನಿಕಟವಾಗಿರಾಜಕೀಯದ ಒಳಹೊಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆಕಾರಣ.
ಉತ್ತರಪ್ರದೇಶದ ಮುಖ್ಯಮಂತಿ ್ರಯಾಗಿ ಮಾಯಾವತಿ ಯಶಸ್ವಿ ರಾಜಕಾರಣಿ.ಆದರೆಇದಕ್ಕೆಅವರಜಾತಿಅಥವಾ ಮೀಸಲಾತಿ ಮಾತ್ರಕಾರಣವಲ್ಲ. ಅವರು ಪಡೆದಿರುವಉತ್ತಮಶಿಕ್ಷಣವೂ ಕಾರಣ.ಐ. ಎ.ಎಸ್ಅಧಿಕಾರಿಯಾಗಬೇಕೆಂದು ಬಯಸಿದ್ದ ಅವರುರಾಜಕೀಯಕ್ಕೆ ಇಳಿದದ್ದೇ ಕಾಕ ತಾಳೀಯ. ಸುಶಿಕ್ಷಿತ ಮಹಿಳಾ ರಾಜಕರಣ Âಗಳು ಮತ್ತು ಇತರ ರಾಜಕಾರಣಿ ಗಳು ಕಾರ್ಯವೈಖರಿಯನ್ನು ಗಮನಿಸಿದಾಗ ಮೀಸಲಾತಿ ಬರಿಯ ಸ್ಥಾನವನ್ನುಗಿಟ್ಟಿಸಲು ಮಾತ್ರ ಸಹಾಯಕವಾಗುತ್ತದೆ ಎಂಬ ಅಂಶ ವೈಧ್ಯವಾಗುತ್ತದೆ.
ಶಿಕ್ಷಣ ಅಂಥ ಬಂದಾಗ ಮೊದಲು ನೆನಪಿಗೆ ಬರುವುದುಮಹಾತ್ಮಾಜ್ಯೋತಿಬಾ ಪುಲೆ ಮತ್ತುತಾಯಿ ಸಾವಿತ್ರಿಬಾಯಿ ಪುಲೆ. ಇವರು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು. 1948ರಲ್ಲಿ ಪತಿಜ್ಯೋತಿಬಾ ಪುಲೆಯವರೊಂದಿಗೆ ಸಾವಿತ್ರಿಬಾಯಿ ಪುಲೆ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು.ಸಾವಿತ್ರಿಬಾಯಿ ಪುಲೆ ಮೊತ್ತಮೊದಲ ಮಹಿಳಾ ಶಿಕ್ಷಕಿ. ವಿದ್ಯೆಕೊಟ್ಟ ಸರಸ್ವತಿ, ಮಹಿಳಾ ಶಿಕ್ಷಣದ ಬಗ್ಗೆ ಮೊತ್ತ ಮೊದಲಿಗೆರೂಢಿಗತ, ಸಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸ್ತ್ರೀಯರಿಗೆ ಶಾಲೆ ತೊರೆದು ಶಿಕ್ಷಣ ನೀಡಿದಷ್ಟೇಅಲ್ಲ, ವಿಧವಾ ವಿವಾಹವನ್ನುಎತ್ತಿ ಹಿಡಿಯುತ್ತಾ, ಬಹುಪತ್ನಿತ್ವದ ಬಗ್ಗೆ ಖಂಡಿಸುತ್ತ, ಸಾಮಾಜಿಕ ಅನಿಷ್ಠಗಳಿಗೆ ವೈಚಾರಿಕ ಪರ್ಯಾಯಗಳನ್ನು ವಾಸ್ತವ ದಲ್ಲಿತಂದ ಧೀಮಂತ ವ್ಯಕ್ತಿತ್ವಜ್ಯೋತಿಬಾ ಪುಲೆ ದಂಪಂತಿಅವರದು. ಮಹಿಳೆಯರ ಕುರಿತು ಸ್ವಾಂತಂತ್ರ ಪೂರ್ವದಲ್ಲಿರೂಢಿಯಲ್ಲಿದ್ದ ಮನುಸ್ಮøತಿಯಲ್ಲಿ ಅನಿಷ್ಟ ಪದ್ದತಿ, ವೈಚಾರಿಕತೆಯಕುರಿತು ಮನು ಎಂಬುವನು ಹೀಗೆ ಹೇಳುತ್ತಾನೆ. ‘ಮಾತ್ರಾಸ್ಪಸ್ತ್ರಾ ಮಹಿತ್ರಾವಾದ ವಿವಕ್ತಸನೋ ಭಧೇತೆ’ ‘ಬಲವಾನಿಂದ್ರಿಯಗ್ರಾಮೊವಿ ದಾಂಸಮಡಿ ಕರ್ಷತಿ’ ಮನುವಿನ ದೃಷ್ಟಿಯಲ್ಲಿ ಮಹಿಳೆ ಶಿಕ್ಷಣವನ್ನು ಕಲಿಯುವುದು ಬೇಡವಾಗಿತ್ತು. ಗುಲಾಮಳಾಗಿಯೇ ಇರಬೇಕು.ಅವಳು ಅಕ್ಷರ ಲೋಕ ಪ್ರವೇಶ ಮಾಡಿದರೆ ಅವಳು ತೃತೀಯಜಗತ್ತಿನಲ್ಲಿ ನಡೆಯುವ ಸಮಾಚಾರ ತಿಳಿದುಕೊಂಡು ಮುಂದುವರೆದರೆ ಸ್ವಂತ ವಿಚಾರ ಮಾಡುವುದನ್ನು ಕಲಿಯುತ್ತಾಳೆ. ಈ ಮಹಿಳಾ ಸಬಲೀಕರಣ ಮನುವಿಗೆ ಬೇಡವಾಗಿತ್ತು. ಡಾ. ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ ಅವಳ ಉಜ್ವಲ ಭವಿಷ್ಯವನ್ನುಕುರಿತು ಸಂವಿಧಾನಿP Àವಾಗಿ ಚಿಂತಿಸಿದರು. ಅವರಚು ನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದೂಕೋಡ್ ಬಿಲ್ನ್ನು ಮಂಡಿಸುವುದರ ಮೂಲಕ ಸ್ವತಂತ್ರ ಭಾರತದ ನಾರಿಯ ಬಂಧನವನ್ನು ಮುಕ್ತ ಮಾಡಲು ಪ್ರಯತ್ನಿಸಿದರು. ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ. ಬಿ. ಆರ್ಅಂಬೇಡ್ಕರಅವರಿಗೆ ಬಲವಾದ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಆಕೆಯ ಹಕ್ಕಿನ ಕುರಿತುಗೌತಮ ಬುದ್ದರ, ಜ್ಯೋತಿಬಾ ಪುಲೆ ಮುಂತಾದ ಮಹತ್ಮರು ಸಂದರ್ಭಾನುಸಾರವಾಗಿ ಅವರ ವಿಚಾರಗಳ ಕುರಿತುಮಾತನಾಡಿದರು. ಅದರಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು ಅಧ್ಯಯನ ಮಾಡಿದಡಾ. ಬಿ. ಆರ್ಅಂಬೇಡ್ಕರವರು ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳ ಕುರಿತು ಮಹತ್ವ ಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಅವರು ಸಂವಿಧಾನದಲ್ಲಿ ಬರೆದಿಟ್ಟ ಮಹಿಳಾಪರ ಚಿಂತನೆಗಳು ಪ್ರಸ್ತುತ ಸಂದರ್ಭದಲ್ಲಿಕ್ರಮೇಣ ಜಾರಿಗೆ ಬರುತ್ತಿರುವುದು ಭಾರತೀಯರು ಸಂವಿಧಾನಕ್ಕೆ ಕೊಟ್ಟಿರುವಗೌರವೇಂದೇ ತಿಳಿದಿಕೊಳ್ಳಬೇಕಾಗುತ್ತದೆ.
-ಯಶಸ್ವಿ ಮಹಿಳೆಯರು :
ಯಶಸ್ವಿ ಮಹಿಳೆಯರು ಅಂಥ ಬಂದಾಗಚಾರಿತ್ರಿಕಪುಟದಲ್ಲಿ ನೋಡಿದರೆ ಹಲವಾರು ಮಹಿಳೆಯರು ಯಶಸ್ಸು ಪಡೆದದ್ದು ತಿಳಿದು ಬರುತ್ತದೆ. ಕೆಳದಿ ಚನ್ನಮ್ಮ, ಕಿತ್ತೂರಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರನ್ನುಉದಾಹರಿಸಬಹುದು. ಇವರುಆಪತ್ಕಾಲದಲ್ಲಿಗದ್ದುಗೆ ಹಿಡಿದು ರಾಜ್ಯಾಡಳಿತ ಸೂತ್ರಗಳನ್ನು ಅರಿತು ಯಶಸ್ವಿಯಾಗಿ ಆಡಳಿತ ನಡಿಸಿ ಹೆಸರು ವಾಸಿಯಾಗಿದ್ದಾರೆ.
ಆಧುನಿಕಯುಗದಲ್ಲಿ ನೋಡುವುದಾದರೆ ಇಂದಿನ ಸಮಾಜದಲ್ಲಿರಾಜಕೀಯದಲ್ಲಿ, ಶೈಕ್ಷÂಕದಲ್ಲಿ, ಆರ್ಥಿಕವಾಗಿ ಹೆಚ್ಚು ಸಬಲರಾಗಿದ್ದಾರೆ. ರಾಜಕೀಯದಲ್ಲಿಇಂದಿರಾಗಾಂಧಿ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಎಂಬ ದಾಖಲೆಯೊಂದಿಗೆ ಹೆಣ್ಣು ಸಿಂಹದಂತೆ ಘರ್ಜಿಸಿ ಕೆಲವುಕಾಲ ಮಹಾರಾಣಿಯಾಗಿ ಮೆರೆದರು. ಪ್ರತಿಭಾ ಪಾಟೀಲ್ ಪ್ರಥಮ ಮಹಿಳಾ ಅಧ್ಯಕ್ಷರಾದರು.ಉತ್ತರ ಭಾರತದ ಉಕ್ಕಿನ ಮಹಿಳೆ ಎಂದೇ ಹೆಸರುವಾಸಿಯಾದ ಮಾಯಾವತಿಯವರು 3 ಬಾರಿಮಹಿಳಾ ಮುಖ್ಯಮಂತ್ರಿಯಾಗಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದರು.
ರಾಜಸ್ತಾನದಲ್ಲಿ ವಸುಂಧರ ರಾಜೇಯವರು ದಶಕಗಳಿಗಿಂತಲೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದರು. 4,500 ಉದ್ಯೋಗಸ್ಥರಿಗೆಆಶ್ರಯದಾತೆಯಾಗಿರುವ ಬಯೋಕಾನ್ನ ಒಡತಿಕಿರಣ ಮಜುಮ್ದಾರ್ ಶಾ ಕೇವಲ 10,000 ರೂಪಾಯಿಯೊಂದಿಗೆ ಏಕಾಂಗಿಯಾಗಿ ಸ್ಥಾಪಿಸಿದ ಸಂಸ್ಥೆ ಇಂದುಜೈವಿಕತಂತ್ರಜ್ಞಾನದಲ್ಲಿ ವಿಶ್ವದಲ್ಲೇ 7ನೇ ಸ್ಥಾನದಲ್ಲಿದೆ.ಇದರ ವಾರ್ಷಿಕಆಧಾಯ 2,405 ಕೋಟಿ.ಬಟ್ಟೆ ತೊಳೆದು, ಅಡುಗೆ ಮಾಡಿಕೊಂಡು, ಮಕ್ಕಳ ಆರೈಕೆ ಮಾಡು ವವರೂ ಕೂಡಆಕಾಶÀದಲ್ಲಿ ಹಾರಾಡಬ ಹುದು ಎಂದು ತೋರಿಸಿಕೊಟ್ಟ ವರು ಕಲ್ಪನಾಚಾವ್ಲಾ, ದಕ್ಷಿಣಐರಣ್ ಲೇಡಿಎಂತಲೆ ಕರಿಸಿಕೊಂಡ ದಿ-ಜಯಲಲಿತಾ ತಮಿಳನಾಡಿನ ಅಮ್ಮನಾಗಿ ಸೂಸೂತ್ರವಾಗಿ ಆಡಳಿತ ನಡೆಸಿ ಸೈ ಎನಿಕೊಂಡರು.
ಮಾಹಿತಿತಂತ್ರಜ್ಞಾನದಲ್ಲಿ ಇನ್ಪೋಸಿಸ್ ಕಂಪನಿ ಬಹುದೊಡ್ಡ ಹೆಸರು. ದೇಶವಿದೇಶಗಳಲ್ಲಿ ತಮ್ಮ ಶಾಖೆಯನ್ನುತರೆದು ಲಕ್ಷಾಂತರಜನರಿಗೆಉದ್ಯೋಗವನ್ನು ನೀಡಿದಲ್ಲದೇ ನಮ್ಮ ಭಾರತದೇಶಕ್ಕೆಕೀರ್ತಿ ಯನ್ನುತಂದರು. ಇಂಥ ಸಂಸ್ಥೆಯನ್ನು ಸ್ಥಾಪಿಸಿದ ಸೂಧಾಮೂರ್ತಿಯವರು ದೇಶದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಹೆಣ್ಣು ಮಕ್ಕಳು ಮನೆಬಿಟ್ಟು ಹೊರಗೆ ಬರಲು ಹೆದರುತ್ತಿದ್ದ ಕಾಲದಲ್ಲಿ ದೇಶದಅತ್ಯುನ್ನತ ಹುದ್ದೆ ಐ.ಪಿ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಥಮ ಮಹಿಳಾ ಪೋಲಿಸ್ ಅಧಿಕಾರಿಯಾಗಿಕಿರಣ್ ಬೇಡಿಯವರು ಇಂದಿನ ಮಕ್ಕಳಿಗೆ ಮಾದರಿಯಾಗಿದ್ದಾರೆ.ಇತಿಹಾಸದ ಪುಟಗಳಲ್ಲಿ ಹಲವಾರು ಮಹಿಳೆಯರು ಸಾಧನೆ ನಮಗೆ ದೊರೆಯುತ್ತದೆ.
ಅದೇರೀತಿಬಲಿಷ್ಠ ಯಶಸ್ವಿ ಮತ್ತುಜಾಗತಿಕವಾಗಿ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ 10 ಜನ ಭಾರತೀಯ ಮಹಿಳೆಯರು ಕುರಿತು ನೋಡುವುದಾದರೆಈ ಕೆಳಗಿನ ಮಹಿಳೆಯರ ಸಾಧನೆಒಮ್ಮೆ ಮೆಲಕು ಹಕಿದಾಗ ಸಂಪೂರ್ಣ ಮಾಹಿತಿ ನಮಗೆ ದೊರೆಯುತ್ತದೆ.
1. ಅವನಿ ಚೆತುರ್ವೇದಿ :ಭಾರತೀಯ ವಾಯುಪಡೆಯಲ್ಲಿಯುದ್ದ ಪೈಲೆಟ್ಆದ ಮೊದಲ ಮಹಿಳೆಯರಲ್ಲಿ ಒಬ್ಬರು.
2. ಸ್ನೇಹಾದುಬೆ : ಪಾಕಿಸ್ತಾನಿ ಪ್ರಧಾನಿಯವರ ವಿಶ್ವಸಂಸ್ಥೆಯ ಭಾಷಣಕ್ಕೆ ನೀಡಿದತೀಕ್ಷ್ಣ ಪ್ರತಿಕ್ರಿಯೆ
ವೈರಲ್ಆದಾಗ ಸ್ನೇಹಾಖ್ಯಾತಿಆದವರು.
- ವಿದೇಶಾಂಗ ಸಚಿವಾಲಯದಲ್ಲಿಅಂಡರ್ ಸೆಕ್ರೆಟರಿಯಾಗಿ ಮತ್ತು ಮ್ಯಾಡ್ರಿಡ್ ನಲ್ಲಿರುವ ಭಾರತೀಯರಾಯಬಾg Àಕಛೇರಿಯಲ್ಲಿ 3ನೇ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
-ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿಯಾಗಿ ತಮ್ಮ ಪ್ರಸ್ತುತ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
3.ಕೃತಿಕಾರಂತ : ಪ್ರಸ್ತುತ ಬೆಂಗಳೂರಿನಲ್ಲಿ ವನ್ಯಜೀವಿ ಅಧ್ಯಯನಕೇಂದ್ರದಲ್ಲಿ ಮುಖ್ಯ ಸಂರಕ್ಷಣಾ ವಿಜ್ಞಾನಿ ಮತ್ತು ನಿರ್ದೇಶಕಿಯಾಗಿದ್ದಾರೆ.
-ಡ್ಯೂಕ್ ವಿಶ್ವವಿದ್ಯಾಲಯದ ಮತ್ತುರಾಷ್ಟ್ರೀಯಜೈವಿಕ ವಿಜ್ಞಾನಕೇಂದ್ರದಲ್ಲಿ ಸಹಾಯಕಅಧ್ಯಾಪಕರಾಗಿಕಾರ್ಯನಿರ್ವಹಿಸಿದ್ದಾರೆ.
4.ತುಳಸಿಗೌಡ : ಹಲವು ದಶಕಗಳಿಂದ ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು 2020ರಲ್ಲಿ ಮಾತ್ರದೇಶ ಮತ್ತುಜಗತ್ತು ತುಳಸಿಗೌಡ ಅವರನ್ನು ಗಮನಿಸುತ್ತಿದೆ.
-ಸಾಮಾನ್ಯವಾಗಿ ‘ಅರಣ್ಯ ವಿಶ್ವಕೋಸ’ ಎಂದುಕರೆಯಲ್ಪಡುವ ತುಳಸಿ 30000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.
5. ಟೆಸ್ಸಿ ಥಾಮಸ್ : ದಿವಗಂತಡಾ ಎ ಪಿ ಜೆಅಬ್ದುಲ್ ಕಲಾಂ ಅವರುಇವರನ್ನು ಪ್ರಾಜೆಕ್ಟ್ಅಗ್ನಿಗಾಗಿ ನೇಮಿಸಿದರು.
- ನಂತರಅಗ್ನಿ 4 ಮತ್ತು 5ನೇ ಕಾರ್ಯಾಚರಣೆಯಲ್ಲಿಯೋಜನಾ ನಿರ್ದೇಶಕರಾದರು.
- 2018ರಲ್ಲಿ ಅವರು ಡಿ ಆರ್ ಡಿ ಓದಏರೋನಾಟಿಕಲ್ ಸಿಸ್ಟ್ಟ್ಟಮ್ಸ್ನ ಮಹಾ ನಿರ್ದೇಶರಾದರು.
6. ವಾಣಿ ಕೋಲಾ : ವ್ಯವಹಾರದಲ್ಲಿಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬಳು.
-ಸಿಲಿಕಾನ್ ವ್ಯಾಲಿಯಲ್ಲಿಉನ್ನತ ಸ್ಥಾನಕ್ಕೆ ಏರಿದವರು.
- ಇಂಡೋ- ಯುಎಸ್ ವೆಂಚರ್ ಪಾರ್ಟನಸ್ ಸ್ಥಾಪನೆ.
- ಕಲಾರಿಕ್ಯಾಪಿಟಲ್ ಸ್ಥಾಪಿಸಲು ದಾರಿ ಮಾಡಿಕೊಟ್ಟವರು.
7. ರಿಚಾಕರ್: ಕಳೆದ ಕೆಲವು ವರ್ಷಗಳಲ್ಲಿ ಝಿವಾಮೆ ಮಹಿಳೆಯರ ನಿಕಟ ಉಡುಪುಗಳು ಜಗತ್ತಿನಲ್ಲಿ
ಅತ್ಯಂತಜನಪ್ರಿಯ ಮತ್ತು ಬೇಡಿಕೆಯ ಬ್ರ್ಯಾಂಡ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
8.ಫಲ್ಗುಣಿ ನಾಂiÀiರ್ : ಫಲ್ಗುಣಿತಮ್ಮ ಬ್ರ್ಯಾಂಡ್ ನೈಕಾಗಿಂದಾಗಿ ಮನೆ ಮಾತಾಗಿದ್ದಾರೆ. -ಅವರುರಾತ್ರೋರಾತ್ರಿ ಸಂಚಲನ ಮೂಡಿಸಿದ ಮತ್ತುದೇಶದಅತ್ಯಂತ ಯಶಸ್ಚಿ ವ್ಯಾಪಾರ ಮಹಿಳೆಯರಲ್ಲಿ ಒಬ್ಬರಾದರು. 9. ಅರುಣಿಮಾ ಸಿನ್ಹಾ: ಪ್ರಬಲ ಮೌಂಟ್ಎವರೆಸ್ಟ್ಎರಿದ ಮೊದಲ ಅಂಗವಿಕಲ ಮಹಿಳೆ
-2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿಗೌರಿಸಲಾಯಿತು.
- ದೇಶಾದ್ಯಂತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. 10. ಗೀತಾ ಗೋಪಿನಾಥ : ಭಾರತೀಯ ಮೂಲದಅಮೆರಿಕನ್ ಗೋಪಿನಾಥ್ ವಿಶ್ವಪ್ರಸಿದ್ದ ಅರ್ಥಶಾಸ್ತ್ರಜ್ಞೆ - ಅಂತರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪವ್ಯವಸ್ಥಾಪಕ ನಿರ್ದೇಶಕಿ ಹಾಗೂ ಐ ಎಂ ಏಫ್ ಮುಖ್ಯಅರ್ಥಶಾಸ್ತ್ರಜ್ಞೆ.
ಶಿಕ್ಷಣ ಮತ್ತು ಸಂಸ್ಕಾರಒಂದಿದ್ದರೆ ಮಹಿಳೆ ಏನ್ ಬೇಕಾದರೂ ಮಾಡಬಹುದುಅಂತ ತೋರಿಸಿ ಕೊಟ್ಟವರೆ ಈ ಮೇಲಿನ ಜನಪ್ರಿಯ ಮಹಿಳೆಯರು.ಇವರೆಲ್ಲರ ಸಾಧನೆ ನೋಡಿದ ಮೇಲೆ ನಾವು ಏನಾದರೂ ಈ ದೇಶಕ್ಕೆಅಥವಾ ನನ್ನ ನಾಡಿಗೆಕೊಡುಗೆ ನೀಡಲೇಬೇಕುಅಂತ ಮನೋಭಾವನೇ ಹುಟ್ಟಬೇಕುಅಂತನೇ ಈ ಲೇಖನವನ್ನು ಪ್ರಸ್ತುತ ಪಡಿಸಿದ್ದೇನೆ.
ಡಾ ಪೂರ್ಣಿಮಾ ಕೆ. ಧಾಮಣ್ಣವರ
ಅತಿಥಿ ಉಪನ್ಯಾಸಕರು
ಕನ್ನಡ ಅಧ್ಯಯನ ವಿಭಾಗ
ರಾಣಿಚನ್ನಮ್ಮ ವಿಶ್ವವಿದ್ಯಾಲಯ
ಡಾ. ಫ. ಗು ಹಳಕಟ್ಟಿ ಸ್ನಾತಕೋತ್ತರ
ಕೇಂದ್ರ ವಿಜಯಪುರ.



