ವಿಜಯಪುರ : ತೋಟಗಾರಿಕೆ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ವಿಜಯಪುರ, ತೋಟಗಾರಿಕೆ ಇಲಾಖೆ,ವಿಜಯಪುರ ಕರ್ನಾಟಕ ರಾಜ್ಯಲಿಂಬೆ ಅಭಿವೃದ್ಧಿಮಂಡಳಿ, ಇಂಡಿ, ಜಿಲ್ಲಾಹಾಪ್ಕಾಮ್ಸ್, ವಿಜಯಪುರ ಹಾಗೂ ವಿಜಯಪುರ ಜಿಲ್ಲಾತೋಟಗಾರಿಕೆ ಸಂಘ (ರಿ) ಇವರ ಸಹಯೋಗದೊಂದಿಗೆ ನಗರದ ಬಸವವನದಲ್ಲಿ ಜನೇವರಿ 13, 14 ಹಾಗೂ 15 ರಂದು ಫಲ ಫುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫಲ ಪುಷ್ಪ ಪ್ರದರ್ಶನವನ್ನು ಕಾರ್ಯಕ್ರಮವನ್ನು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ (ಯತ್ನಾಳ) ಉದ್ಘಾಟಿಸಿದರು. ಫಲ ಪುಷ್ಪಪ್ರದರ್ಶನದಲ್ಲಿ ಹೂವಿನಲ್ಲಿ ಅರಳಿದ 14ಅಡಿ ನಂದಿ, ದ್ರಾಕ್ಷಿಹಣ್ಣಿನಲ್ಲಿ ನಿರ್ಮಾಣಗೊಂಡ ಗೋಳಗುಮ್ಮಟ, ವಿವಿಧಬಗೆಯ ಹೂಗಳಿಂದ ನಿರ್ಮಾಣವಾಗುವ ಕಲಾಕೃತಿಗಳು, ತರಕಾರಿಯಲ್ಲಿ ಮಹಾಪುರುಷರ ಆಕೃತಿ ಕೆತ್ತನೆಗಳನ್ನು ಪ್ರದರ್ಶಿಸಲಾಗುತ್ತದೆ. ಶಾಲಾಮಕ್ಕಳಿಗೆ ತೋಟಗಾರಿಕೆ ವಿಷಯಗಳ ಕುರಿತ ಹೆಚ್ಚಿನ ಅಧ್ಯಯನ ಪಡೆಯಲು ಜಿಲ್ಲೆಯ ರೈತರುಬೆಳೆದಂತಹ ಎಲ್ಲ ಬಗೆಯ ಹಣ್ಣುಗಳು, ತರಕಾರಿಗಳು, ಪುಷ್ಪಗಳಪ್ರದರ್ಶನ, ಹೈಡ್ರೋಫೋನಿಕ್ಸ್ನಲ್ಲಿ ಬೆಳೆದತದಹ ತರಕಾರಿಗಳ ಪ್ರದರ್ಶಿನ, ಶಾಲಾ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನೀಯರಿಗೆ ಸಾರ್ವಜನಿಕರಿಗೆ ಕುಬ್ಜ ಗಿಡಗಳಬೇಸಾಯ, ಅಣಬೆ ಬೇಸಾಯ, ಕೈತೋಟ ತಾರಸಿತೋಟ, ಜಲಕೃಷಿ ಬೇಸಾಯ, ಸಾವಯವ ಕೃಷಿ ಕುರಿತು ರೈತರಿಗೆ ಮಾಹಿತಿ ಹಾಗೂ ತೋಟಗಾರಿಕೆ ಸೇವಾಕೇಂದ್ರ, ವಿವಿಧಯೊಂತ್ರೋಪಕರಣ, ಹನಿ ನೀರಾವರಿ ಉಪಕರಣಗಳು ಹಾಗೂ ಇತರ ಪರಿಕರಗಳ ಮಳಮಳಿಗೆಗಳನ್ನು ಸ್ಥಾಪಿಸಿದೆ. ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ಸೀಬೆ ಮತ್ತು ಸೀತಾಫಲ ಹಾಗೂ ಲಿಂಬೆ ಬೆಳೆಗಳ ಕುರಿತು ವಿಚಾರ ಸಂಕೀರ್ಣ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ಹಣ್ಣು ಹಂಪಲಗಳನ್ನು ರೈತರಿಂದ ನೇರವಾಗಿ ಒದಗಿಸಲು ವ್ಯವಸ್ಥೆಕಲ್ಪಿಸಲಾಗಿದೆ. ಪ್ರತಿ ದಿನಸಾಯಂಕಾಲ ವಿವಿಧ ಕಲಾತಂಡ, ಶಾಲಾಕಾಲೇಜಿನವಿದ್ಯಾರ್ಥಿ/ ವಿದ್ಯಾರ್ಥಿನೀಯರಿಂದ ಮನೋರಂಜನೆ ಕಾರ್ಯಕ್ರಮ ಜರುಗಲಿವೆ.
ಉದ್ಘಾಟಣಾ ಕಾರ್ಯಕ್ರಮದಲ್ಲಿ ನಾಗಠಾಣ ಮತ ಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೋಂಡ, ಮಹಾನಗರ ಪಾಲಿಕೆ ಮಹಾಪೌರಾದ ಶ್ರೀಮತಿ ಮಹೇಜಬೀನ್ ಅಬ್ದುಲ ರಜಾಕ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ, ಎನ್.ಎಚ್.ಬಿ ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಎಮ್ ಕೋಕರೆ, ಹಾಫ್ ಕಾಮ್ಸ ಅಧ್ಯಕ್ಷರಾದ ಸುಭಾಸ ಗೌಡ ಪಾಟೀಲ, ದ್ರಾಕ್ಷಿ ಬೆಳೆಗಾರರ ಅಧ್ಯಕ್ಷರಾದ ಡಾ. ಕೆ.ಎಚ್. ಮುಂಬಾರೆಡ್ಡಿ, ತೋಟಗಾರಿಕೆ ಉಪ ನಿರ್ದೇಶಕರಾದ ರಾಹುಲ ಬಾವಿದೊಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.