ವಿಜಯಪುರ: ನಗರದ ಡಾ|| ರಾಜಕುಮಾರ ಲೇಔಟನಲ್ಲಿರುವ ಸಮೃದ್ದಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದಿAದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ವಿಜೃಂಭಣೆಯಿAದ ಆಚರಿಸಿದರು. ಸಂಸ್ಥೆಯ ಮುಖ್ಯಸ್ಥ ರಮೇಶ ಮಾತನಾಡಿ, ವಿಶ್ವ ಕಂಡ ಅಪರೂಪದ ಮಹಾನ್ ಚೇತನ, ಇಡೀ ವಿಶ್ವವೇ ಭಾರತದತ್ತ ಕಣ್ಣು ತೆರೆದುನೋಡುವಂತೆ ಮಾಡಿದ ಮಹಾನ್ ಶಕ್ತಿ ಸ್ವಾಮಿ ವಿವೇಕಾನಂದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಗುರುಮಾತೆ ಶ್ರೀಮತಿ ಕಾಂತಾ ಬಿಂದುರಾವ ಕುಲಕರ್ಣಿ ಮಾತನಾಡಿದರು. ಈ ಒಂದು ಕಾರ್ಯಕ್ರಮದಲ್ಲಿ ಶ್ರೀಮತಿ ಸವಿತಾ ಭಜಂತ್ರಿ, ಶ್ರಿಮತಿ ಪರಿಮಳಾ ಕುಲಕರ್ಣಿ, ಶ್ರಿದೇವಿ ಶಿಂದೆ, ಜ್ಯೊತಿ ಬಸರಗಿ, ಅರಚನಾ ಕನಮಡಿ, ಕವಿತಾ ರಾಠೋಡ, ಭವಾನಿ ದೊಡ್ಡ ಪತ್ತಾರ, ವಿಶಾಲಾಕ್ಷಿ ಅಥಣಿ ಮುಂತಾದವರು ಪಾಲ್ಗೋಂಡಿದ್ದರು.