ವಿಜಯಪುರ : ಮಕ್ಕಳ ಪ್ರತಿಭ ಅನಾವರಣಗೊಳಿಸಲು ,ಹೊರತರಲು,ಗುರುತಿಸಲು ರಾಜ್ಯದಲ್ಲಿ ಮಕ್ಕಳ ಸ್ಟೂಡಿಯೋ ಸ್ಥಾಪಿಸಲಾಗುವುದು ಎಂದು ರಾಜ್ಯ ಬಾಲಕರ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಅವರು ಹೇಳಿದರು.
ಅವರು ಜಲನಗರದಲ್ಲಿ ಸೋಮುವಾರ ಭೃಂಗಿಮಠ ಫೌಂಡೇಶನನಿAದ ಆಯೋಜಿಸಿದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಸ್ಟೂಡಿಯೋ ಅಗತ್ಯವಿದ್ದು, ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗಲಿರುವ ಮಕ್ಕಳ ಪ್ರತಿಭೆ ಪರಿಚಯಕ್ಕೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ತಜ್ಞರವ,ಸಾಹಿತಿಗಳ , ಮಕ್ಕಳ ಕಲ್ಯಾಣ ಚಿಂತಿಸುವವರ ಸಲಹೆಯಂತೆ ಸ್ಟೂಡಿಯೋ ಸ್ಥಾಪನೆಗೆ ಅಗತ್ಯವಾದ ವಿಚಾರ ಮಾಡಲಾಗಿದ್ದು ಶೀಘ್ರವೇ ರಾಷ್ಟ್ರವೇ ಗಮನಿಸುವಂತಹ ಕೆಲಸ ನಮ್ಮ ಬಾಲವಿಕಾಸ ಅಕಾಡೆಮಿಯಿಂದ ಮಾಡಲಾಗುವುದುಎಂದು ಬಬಲೇಶ್ವರ ತಿಳಿಸಿದರು.
ಭೃಂಗಿಮಠ ಅವರ ಸುಧೀರ್ಘ ಸೇವೆಯನ್ನು ಬಣ್ಣಿಸಿದ ಬಬಲೇಶ್ವರ ತಮ್ಮ ಜೊತೆಗಿನ ಭೃಂಗಿಮಠರ ಸ್ನೇಹಪರತೆ,ಸಲಹೆಯನ್ನು ನೆನಪಿಸಿ ,ನಾಡಿನಾದ್ಯಂತ ಭೃಂಗಿಮಠರ ಸೇವೆಗೆ ಶ್ಲಾಘಿಸಿದ ಅವರು ಭೃಂಗಿಮಠರ ವಕಾಲತ್ತು ಸೇವೆ ಅದ್ಭುತ ಎಂದರು.
ಅಹಿAದ ನಾಯಕ ಸೋಮನಾಥ ಕಳ್ಳಿಮನಿ ಅವರು ಮಾತನಾಡಿ ಬಬಲೇಶ್ವರ ಅವರಿಂದ ಕ್ರಿಯಾತ್ಮಕ ಕಾರ್ಯಗಳು ನಡೆಯುತ್ತಿರುವುದು ಸಂತೋಷದ ಸಂಗತಿ ಯಾಗಿದೆ, ಇವರಿಂದ ಬಾಲಕರ ಕಲ್ಯಾಣ ಯೋಜನೆಗಳು ಇನ್ನಷ್ಟು ಜಾರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಹಿರಿಯ ವಕೀಲರಾದ. ಸಾಹಿತಿ. ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ಮಕ್ಕಳ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಅಕಾಡೆಮಿಗೆ ಸಂಗಮೇಶ್ವರ ಬಬಲೇಶ್ವರ ಅವರಿಗೆ ನೇಮಿಸಿದ್ದು ಸೂಕ್ತ ಮತ್ತು ಅರ್ಹತೆಗೆ ನೀಡಿದ ಹುದ್ದೆಯಾಗಿದ್ದು ಇವರು ಮಕ್ಕಳ ಕಲ್ಯಾಣಪರ ಕ್ರಿಯಾತ್ಮಕ ಯೋಜನೆ ಮತ್ತು ಯೋಚನೆ ಮಾಡುತ್ತಿರುವುದು ಸ್ವಾಗತಕರವಾಗಿದೆ,ಮಕ್ಕಳ ಹಕ್ಕುಗಳನ್ಮು ರಕ್ಷಿಸುವಲ್ಲಿ ಅಕಾಡೆಮಿ ಪಾತ್ರ ಮಹತ್ವದ್ದಾಗಿದೆ ,ರಾಜ್ಯದಾದ್ಯಂತ ವಿಶೇಷ. ಕಾರ್ಯಕ್ರಮಗಳ ಮೂಲಕ ಅಕಾಡೆಮಿ ಇನ್ನು ಉತ್ತಮ ಸೇವೆ ಮಾಡಲಿ ಎಂದರು
ಬಾಲಕರ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರಿಗೆ ಬಾಲಕ ಋಷೀಲ್ ಭೃಂಗಿಮಠ ಶಾಲು ಹೊದಿಸಿ ಸನ್ಮಾನಿಸಿದರು.ಜಗನಾಥ ಯಾತಗೀರಿ ಇತರರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
