Monday, April 14, 2025

ಮೆರವಣಿಗೆ: ಗಮನ ಸೆಳೆದ ಬೊಂಬೆಗಳು ಮತ್ತು ಸಂಸತ್ತಿನ ಸ್ತಬ್ದ ಚಿತ್ರ

 





ಸಿಂದಗಿ: ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಭವ್ಯ ಮೆರವಣಿಗೆ ಜರುಗಿತು.  ಮೆರವಣಿಗೆಯಲ್ಲಿ ಮಹಾರಾಷ್ಟ್ರದ ನಾಶಿಕ್‌ನ ಡೋಲು ವಾದ್ಯಗಳು, ಗೊಂಬೆಗಳು, ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿತು. ನೀಲಿ ಧ್ವಜ, ಜಯಘೋಷ ಎಲ್ಲೆಡೆ ಮೊಳಗಿದ್ದು ವಿಶೇಷವಾಗಿದ್ದವು.

ಜನಾಕರ್ಷಿಸಿತ ಸ್ತಭ್ದ ಚಿತ್ರ: ಮೆರವಣಿಗೆಯಲ್ಲಿ ಸಂಸತ್ತ ರೂಪಕ ವಾಹನದಲ್ಲಿ ಡಾ.ಅಂಬೇಡ್ಕರ್ ಅವರ ಕುಳಿತ ಬಂಗಿಯ ಭಾವಚಿತ್ರವನ್ನು ಇಟ್ಟು ಅಲಂಕರಿಸಲಾಗಿತ್ತು. ನಾನಾ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.       ಅಂಬೇಡ್ಕರ್ ಜಯಂತಿ ಅಂಗವಾಗಿ ಸಿಂದಗಿಯಲ್ಲಿ ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.

ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಶ್ರೀಕಾಂತ ಸೋಮಜಾಳ, ಪರುಶರಾಮ ಕಾಂಬಳೆ, ರವಿ ಹೋಳಿ, ಮಲ್ಲು ಕೂಚಬಾಳ, ದತ್ತು ನಾಲ್ಕಮಾನ, ರಮೇಶ ನಡುವಿನಕೇರಿ, ಶ್ರೀನಿವಾಸ ಓಲೇಕಾರ, ರಾವುತ ತಳಕೇರಿ, ಶ್ರೀಶೈಲ ಜಾಲವಾದಿ, ರಾಕೇಶ ಕಾಂಬಳೆ, ಶಿವಾನಂದ ಆಲಮೇಲ, ನಿಂಗರಾಜ, ಹರ್ಷವರ್ಧನ ಪೂಜಾರಿ ಸೇರಿದಂತೆ ಅಭಿಮಾನಿಗಳು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಇಂದಿನಿಂದ ಗರಗದ ಮಡಿವಾಳೇಶ್ವರ ಪುರಾಣ ಆರಂಭ

 



ಬ್ರಹ್ಮದೇವನಮಡು : ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ - ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರೆ ಅಂಗವಾಗಿ ಏ.15ರಿಂದ ಏ.29ರವರೆಗೆ ಪ್ರತಿದಿನ ಸಂಜೆ 7-30ರಿಂದ ಪವಾಡ ಪುರಷ ಗರಗದ ಶ್ರೀ ಮಡಿವಾಳೇಶ್ವರ ಮಹಾಪುರಾಣವನ್ನು ರಟಕಲ್ ದ ಮಾಣಿಕ್ಶ ಶ್ರೀ ಪ್ರಶಸ್ತಿ ಪುರಸ್ಕ್ರತ್ ಪ್ರವಚನಕಾರ ಶಂಭುಲಿಂಗ ಹಿರೇಮಠ ಶಾಸ್ತ್ರಿಗಳು ನಡೆಸಿಕೊಡುವರು. ಪಡದಳ್ಳಿಯ ಸಿದ್ದಯ್ಶಸ್ವಾಮಿ ಸಂಗೀತ ಸೇವೆ ನೀಡಲಿದ್ದಾರೆ.ಚಡಚಣದ ಮಹಾಂತೇಶ ಟಾಕಳಿ ತಬಲಾ ಸಾಥ್ ನೀಡುವರು. ಯಡ್ರಾಮಿ ತಾಲೂಕಿನ ಸುಕ್ಷೇತ್ರ ಮಾಗಣಗೇರಿಯ ಬೃಹನ್ಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಡಾ.ವಿಶ್ವರಾಧ್ಶ ಶಿವಾಚಾಯ೯ರು, ಕಡಕೋಳ ಮಡಿವಾಳೇಶ್ವರ ಸಂಸ್ಥಾನ ಮಠದ ಡಾ.ರುದ್ರಮುನಿ ಶಿವಾಚಾಯ೯ರು,ಖಾನಾಪೂರ ಮಡಿವಾಳೇಶ್ವರ ಮಠದ ಮೌನಯೋಗಿ ಕಲ್ಶಾಣದಯ್ಶ ಸ್ವಾಮೀಜಿ,ಕುರಳಗೇರಾ ಸಜ್ಜಾದೆ ದಗಾ೯ದ ಹಜರತ್ ಸಯ್ಶದ್ ಹುಸೇನಪಾಷಾ ಮೋದಿನಪಾಷಾ ದಗಾ೯,ಚಾಮನಾಳದ ಬಸಯ್ಶ ಸ್ವಾಮೀಜಿ,ವಡಗೇರಿಯ ವೀರಯ್ಶ ಸ್ವಾಮೀಜಿ ಸಾನಿಧ್ಶವಹಿಸುವರು. ಶಾಸಕ ಅಶೋಕ ಮನಗೂಳಿ ಪುರಾಣ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ. ಖಾನಾಪುರದ ಸಂಗನಗೌಡ ಪಾಟೀಲ, ಜಿಪಂ ಮಾಜಿ ಉಪಾಧ್ಶಕ್ಷ ಎಂ.ಎನ್.ಸಾಲಿ ಜ್ಶೋತಿಬೆಳಗಿಸುವರು. ಗ್ರಾಪಂ ಅಧ್ಶಕ್ಷ ಉಮಾಜಿ ಚವ್ಹಾಣ ಅಧ್ಶಕ್ಷತೆ ವಹಿಸುವರು. ರಾಮರಾವ್ ದೇಶಮುಖ ಪೋಟು ಪೂಜೆ ಮಾಡಲಿದ್ದಾರೆ. ಯುವ ಮುಖಂಡ ಯಂಕನಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಶಕ್ಷ ಹಳ್ಳೆಪ್ಪಗೌಡ ಚೌಧರಿ ಪುರಾಣ ಪೂಜೆ ಮಾಡುವರು. ಕೆಇಬಿ ಎಇಇ ಚಂದ್ರಕಾಂತ ನಾಯಕ,ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ,ಕಲಕೇರಿ ಠಾಣೆಯ ಪಿಎಸ್ಐ ಸುರೇಶ ಮಂಟೂರ,ಬಾಪುಗೌಡ ದೇಶಮುಖ ಕಲಕೇರಿ,ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ, ಮುಖಂಡ ಮುರಗೆಪ್ಪಗೌಡ ರದ್ದೇವಾಡಗಿ,ಶಿವು ಹತ್ತಿ,ವಿಜುಗೌಡ ಬಿರಾದಾರ,ಬಸವರಾಜ ಮಾರಲಭಾವಿ,ಮಾಜಿ ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ ಕರವಿನಾಳ,ಬಸನಗೌಡ ಪಾಟೀಲ,ಬಸನಗೌಡ ಉಳ್ಳೆಸೂರ,ಸೋಮಶೇಖರ ಚಿರಲದಿನ್ನಿ,ಪತ್ರಕತ೯ ಮಲ್ಲಿಕಾಜು೯ನ ಕೆಂಭಾವಿ,ಗಾಪಂ ಉಪಾಧ್ಶಕ್ಷೆ ಯಾಸ್ಮಿನಬಾನು ನಾಯ್ಕೋಡಿ,ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ,ಸ್ಶಯದ್ ಮುಲ್ಲಾ,ಮೇಘರಾಜ ಚವ್ಹಾಣ,ಮುಖಂಡ ಶ್ರೀಶೈಲ್ ಜಾಲವಾದಿ ಮುಖ್ಶಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪೀಠಾಧ್ಶಕ್ಷ ಕಲ್ಶಾಣದಯ್ಶ ವೀರಘಂಟಯ್ಶ ಗದ್ದುಗೆಮಠ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

15-04-2025 EE DIVASA KANNADA DAILY NEWS PAPER