ಗೊಮ್ಮಟಕ್ಕೂ ಎತ್ತರದ
ತತ್ವಜ್ಞಾನದ ಮೇರುಶಿಖರ.
ಕೃಷ್ಣೆಗೂ ಮಿಗಿಲಾದ
ಜ್ಞಾನದ ಸಾಗರ.
ಸ್ವಚ್ಛ ಬಿಳುಪಿನೊಳಗೆ
ಶಾಂತಮೂರ್ತಿ.
ಶುಭ್ರ ಹೊಳಪಿನೊಳಗೆ
ಸಹಜಕೀರ್ತಿ.
ಅರಸಿ ಬಂದ ಪದ್ಮವ
ತ್ಯಾಗ ಮಾಡಿದ ತ್ಯಾಗಿ.
ಹರಸಿಬಂದ ಆಸೆಗಳೆಲ್ಲವ
ದೂರ ಮಾಡಿದ ಯೋಗಿ
ಬಂಧನದ ಭವದೊಳಗೆ
ಮುಕ್ತಿಯ ಓಂಕಾರ.
ಆಡಂಬರದ ಜಗದೊಳಗೆ
ಸರಳತೆಯ ಜೇಂಕಾರ.
ಹೇಳುತಿರೆ ಮೃದು ಸ್ವರದಿ
ಅನುಭವ'ದ ಅನುಭಾವ.
ಹೊಳೆಯುವುದು ಮನದಿ
ಅನಂತತೆಯ ಅನುಭವ.
ನುಡಿ-ನುಡಿಗೂ ಹೂವೆಂದ
ಹೂವಂತ ಮನದವರು.
ನಡೆ-ನುಡಿ ಸಮವೆಂದ
ನಡೆದಾಡುವ ದೇವರು.
ಅಂಬರೀಷ ಎಸ್. ಪೂಜಾರಿ.