Sunday, October 17, 2021

ಕೆಆರ್ ಎಸ್ ಪರ ಮತ ಯಾಚನೆ

 



ಈ ದಿವಸ ವಾರ್ತೆ

ವಿಜಯಪುರ: ಸಿಂದಗಿ ವಿಧಾನಸಭಾ ವ್ಯಾಪ್ತಿಯ  ಮಲಘಾಣ, ಸೋಮಜಾಳ ಆಸಂಗಿಹಾಳ ದೇವರ ನಾವದಗಿ ಕುಮಸಿ ಗ್ರಾಮಗಳಲ್ಲಿ KRS ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಪರ ಮತಯಾಚಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ರಹಳ್ಳಿ, ಸೋಮಸುಂದರ, ಜಿಲ್ಲಾಧ್ಯಕ್ಷರಾದ ಅಪ್ಪನಗೌಡ ಕೆ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಯಡಹಳ್ಳಿ ಭಾಗವಹಿಸಿದ್ದರು.

ಲಂಚ ಮುಕ್ತ ಸಮಾಜಕ್ಕೆ ಕೆಆರ್ ಎಸ್ ಬೆಂಬಲಿಸಿ: ಡಾ. ಸುನೀಲಕುಮಾರ ಹೆಬ್ಬಿ

 




ಈ ದಿವಸ ವಾರ್ತೆ

ವಿಜಯಪುರ: ಉತ್ತಮ ಹಾಗೂ ಲಂಚ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಅಮೂಲ್ಯ ಮತವನ್ನು ತಮಗೆ ನೀಡುವಂತೆ ಸಿಂದಗಿ ಉಪ ಚುನಾವಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಡಾ.ಸುನೀಲಕುಮಾರ ಹೆಬ್ಬ ಸಿಂದಗಿ ಪಟ್ಟಣದಲ್ಲಿ ಮತಯಾಚನೆ ಮಾಡಿದರು.

ಇಲ್ಲಿನ ಬಸವೇಶ್ವರ ವೃತ್ತದಿಂದ ಚುನಾವಣೆ ಪ್ರಚಾರ ಆರಂಭಿಸಿ, ಮೋರಟಗಿ, ಮನ್ನಾಪುರ, ಯಂಕಂಚಿ, ಕೈನೂರ, ಕುಲೇಕುಮಟಗಿ, ಹಿರೇಸಾವಳಗಿ ಭಾಗದಲ್ಲಿ ಕೆಆರ್ ಎಸ್ ಪಕ್ಷದ ವತಿಯಿಂದ ಪ್ರಚಾರ ನಡೆಸಿದರು.

ಈ ಸಂದರ್ಭ ಸೋಮಸುಂದರ,  ಕೆಆರ್ ಎಸ್ ಜಿಲ್ಲಾಧ್ಯಕ್ಷ ಅಪ್ಪನಗೌಡ ಪಾಟೀಲ ಮತ್ತಿತರರು ಇದ್ದರು.

ವರದಿ: ಕಲ್ಲಪ್ಪ ಶಿವಶರಣ

ಮೊ: 7204279187

18-10-2021 EE DIVASA KANNADA DAILY NEWS PAPER