Friday, May 22, 2020

ನಾಗಠಾಣ ಶಾಸಕರಿಂದ ಆಹಾರ ಕಿಟ್ ವಿತರಣೆ


ವಿಜಯಪುರ : ನಾಗಠಾಣ ವಿಧಾನಸಭಾ ಕ್ಷೇತ್ರದ  ಶಾಸಕ  ಡಾ.ದೇವಾನಂದ ಫೂ.ಚವ್ಹಾಣ ಅವರಿಂದ ಕ್ಷೇತ್ರ ವ್ಯಾಪ್ತಿಯ ಉತ್ನಾಳ ಎಲ್.ಟಿ.1,ಉತ್ನಾಳ ಎಲ್.ಟಿ 2, ಹೆಗಡಿಹಾಳ, ಮದಬಾವಿ, ಮದಬಾವಿ ಎಲ್.ಟಿ.2,      ಕುಮಟಗಿ ತಾಂಡಾ.ಕಗ್ಗೋಡ.  ಹಡಗಲಿತಾಂಡಾ 1&,2&3, ಆಹೇರಿತಾಂಡಾ1. ಶಿವಣಗಿ,ಹಾಗೂ  ಅಂಕಲಗಿ ಗ್ರಾಮಗಳಲ್ಲಿ ಕೊರೋನಾ ಕೋವಿಡ-19 ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ ಮಾಡಲಾದ ಜನರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ನಂತರ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಆಹಾರ ಧಾನ್ಯಗಳ ವಿತರಣೆ ಮಾಡಿದರು.  ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಶ್ರೀಮತಿ.ಡಾ.ಸುನಿತಾ ದೇವಾನಂದ ಚವ್ಹಾಣ, ವಿಜಯಪುರ ತಹಶೀಲ್ದಾರ್ ಶ್ರೀಮತಿ. ಮೋಹನ ಕುಮಾರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು, ಗ್ರಾಮಗಳ ಪ್ರಮುಖರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಕಣ್ಣಿಗೆ ಕಂಡಿದ್ದು


ವಿಜಯಪುರ : ಸಂಚಾರಿ ಠಾಣೆಯ ಪೇದೆ, ಶಿವಾನಂದ ಕಟ್ಟಿಮನಿ ಬೀದಿ ಶ್ವಾನಗಳ ಹಸಿವು ತಣಿಸಲು ಬ್ರೇಡ್ ಹಾಕಿ ಪ್ರಾಣಿ ಪ್ರೇಮ ಮೆರಯುತ್ತಿರುವುದು....
ಕಣ್ಣಿಗೆ ಕಂಡದ್ದು...



ವಿಜಯಪುರ: ಸುಡುವ  ರಣ ರಣ ಬಿಸಿಲಿನಲ್ಲಿ  ಬಸವಳಿದ ಗೋವಿಗೆ ನೀರುಣಿಸಿ ತಮ್ಮ ಕರ್ತವ್ಯ ಪ್ರಜ್ಞೆ ಯೊಂದಿಗೆ ಮಾನವೀಯ ಮೌಲ್ಯ ಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿ ಸಂಗಮೇಶ ಜೋಗಿನ್..

ಈ ದೃಶ್ಯದ ಹಿಂದೆ  ಗೋವು ತನ್ನ ಕರುವಿಗೆ ಹಾಲುಣಿಸುತ್ತಿರುವ  ಮನಮೋಹಕ  ದೃಶ್ಯ .. ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ...