Saturday, July 25, 2020

ಪಂಚಮಿ

 

ಆಸೆಯ  ಮನದಲಿ 
ಜೀಕುತಾ  ಜೋಕಾಲಿ
ಪಂಚಮಿ ಬಂದಿತು ನಾಗರಠೇವಲಿ 
ಸಡಗರ ಸಂಭ್ರಮತಂದಿತು ಊರಲ್ಲಿ

ನಾಡಿನ ಹಿರಿಮೆಯ ಸಿರಿಗೆ
ಶ್ರಾವಣ ಮಾಸದ ಸೊಗಡಿಗೆ
ಪಂಚಮಿ ನಿಂತಿದೆ ಚೆಲುವಾಗಿ
ಹರುಷದಿತೂಗಿದೆ ಉಯ್ಯಾಲೆಯಾಗಿ

ತಂಗಿಯ ತ್ಯಾಗವ ಹೇಳುತ
ಅಣ್ಣನ ಪ್ರೀತಿಯ ಸಾರುತ
ಸರ್ಪಯಜ್ಞವ ನೆನಪಿಸುತ 
ಹಾಲುಹರಿಯುತ್ತಿದೆ ಸಂಸ್ಕಾರ ತೋರುತ

ಊರಿಗೆ ಬರಲು ಹಾದಿಯಾಗಿ 
ಹೆಣ್ಣಿಗೆ ಆಸೆಯ ತವರಾಗಿ 
ಸಂಸ್ಕೃತಿ ಸಾರಲು ನೆಪವಾಗಿ 
ಪಂಚಮಿ ಬಂದಿದೆ ಬಂಧುವಾಗಿ

ಬಳೆಗಳತೊಟ್ಟು ಸೀರೆಯನ್ನುಟ್ಟು
ಆಡುತ ಹಾಡುತ ಗೆಳತಿಯರೊಟ್ಟು 
ಸಂಭ್ರಮಿಸುವ ಹೆಣ್ಣಿನ ಗುಟ್ಟು
ಪಂಚಮಿಯಾಗಿದೆ ಹಬ್ಬದ ತಿನಿಸುಗಳೊಟ್ಟು

ಅಂಬರೀಷ್ ಎಸ್. ಪೂಜಾರಿ. 

ಪಂಚಮಿ ಹಬ್ಬಕೆ ಕರಿತಾನ ಅಣ್ಣಯ್ಯ


ಅಣ್ಣ ಕರಿಯೋ ನೀ ಬಂದು
ತಂಗಿಯ ತವರಿಗೆ ಬಾ ಎಂದು
ಕಾದು ಕೂತಿಹಳು ನಿನ್ನ ಕೂಗಿಗಾಗಿ
ನಾಗರ ಪಂಚಮಿ ಹಬ್ಬಕ ಬರಲೆಂದು।

ದೇವರ ಪಾಲು 
ದಿಂಡಿರ ಪಾಲು
ಗುರುವಿನ ಪಾಲೆಂದು
ಹಾಲೆರೆಯುವಳು ತಂಗಿ 
ನಾಗರ ಹುತ್ತಕ।

ನಾಗಪ್ಪಗೆ ಕೈ ಮುಗಿದು ಬೇಡುವಳು
ಅಣ್ಣನ ಬಾಳ ಸಿರಿಯು
ಕರಗದಿರಲಿ ಎಂದೆಂದು ಎನ್ನುತ
ಮೊರೆಹೋಗುವಳು ತಂಗಿ ನಾಗದೇವನಲ್ಲಿ।

ತೂಗುಯ್ಯಾಲೆಯಲಿ ಕೂರಿಸಿ
ತೂಗುವನು ಅಣ್ಣಯ್ಯ ತಂಗಿಯನು
ಹರಸುವನು ತಂಗಿ ಬದುಕಿನ ಸುಖವು
ಸಂತಸದ ಹೊನಲಲಿ ಜೀಕುತಿರಲೆಂದು।

ಏಳೇಳು ಜನುಮಕು
ನೀನೆನ್ನ ಒಡಹುಟ್ಟಿದವಳಾಗಿ ಇರು ಎಂದು
ಕೋರಿಕೊಳ್ಳುವನಣ್ಣ ತಂಗಿಯ
ಬಾಯಿಗೆ ಸಿಹಿ ಉಂಡೆಯ ತಿನಿಸಿ।

ಹಬ್ಬದ ಮೇರಗು ನೀನಮ್ಮ
ನೀ ಹುಟ್ಟಿ ಬೆಳೆದ ಮನೆಯು
ನಿನ್ನ ತವರಮ್ಮ
ಸದಾ ಈ ಮನೆಯ ಮನಗಳು 
ನಿನ್ನ ಒಲವಿಗಾಗಿ ಇರುವವಮ್ಮ
ನಿನ್ನ ಬರುವಿಕೆಗಾಗಿ ಸದಾ
ತೆರೆದಿರುವದು ನೋಡು 
ನಿನ್ನ ತವರಿನ ಬಾಗಿಲಿಗಳಮ್ಮ॥

ಮಮತಾ ಗುಮಶೆಟ್ಟಿ
ವಿಜಯಪುರ