Wednesday, July 1, 2020

ಭಾವ ಮಿಲನ


ಸೂರ್ಯಂಗೂ ನನಗೂ 
ಅದುಏನೇನೋ ನಂಟು 
ನಾಮಲಗಿದ್ದರೊಳ ಬಂದು
ನನ್ನ ಎಬ್ಬಿಸುವುದುಂಟು

ಕಿಟಕಿ ಬಾಗಿಲುಗಳೊಳಗವ
ಇಣುಕೀ ಬರುವುದು
ಉಂಟೂ.
ಬಂದರ  ಹೋಗದೆ ನನ್ನ ಜೊತೆಗೇ
ದಿನವೂಇರುವುದೂ  ಉಂಟೂ..

ನನ್ನಮೈಗವನಕಿರಣದೊಳು ಬಂದು
ಅಪ್ಪಿಮುದ್ದಾಡುವುದುಂಟು
ಅವನಬಿಸಿಯುಸಿರಿಗೆ ನಾ ಸೋತೂ
ಕರಗೀ ಹೋಗುವುದುಂಟು

ಅವನ  ಜೊತೆ ಸೇರಲು ನಾನಿಲ್ಲೀ
ನನ್ನೇ ನಾಕಳೆಯುವುದುಂಟು
ನನ್ನೊಳಗೇ ನಾಬೆವೆತು ನಿಂತಲ್ಲೇ ನಿಲ್ಲಲಾರದೇ
ನಾನಾಗವನಾಗುವುದುಂಟು

ರಚನೆ: ಶಾಂತಾ ಕುಂಟಿನಿ ಶಕುಂತಲಾ

02-07-2020 EE DIVASA KANNADA DAILY NEWS PAPER

ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ.. ದುಡಿಯುವ ವೀರರೆ ನಿಮಗೊಂದು ಸಲಾಮು...

ಎಲ್ಲೆಲ್ಲೋ ಚದುರಿರುವ ಮಾಹಿತಿಗಳ  ಹೆಕ್ಕಿ.. 
ತಿದ್ದಿ ತೀಡಿ ಸುದ್ಧಿಯನ್ನಾಗಿಸಿ ನಮ್ಮೆದುರಲಿ ಬಿತ್ತರಿಸಿ.. 
ನಮ್ಮೂರ ಪರವೂರ ಸುದ್ಧಿಯ ಜೊತೆಯಲಿ... 
ಮನರಂಜನೆಗೊಂದು, ಜ್ಞಾನದ ಹಸಿವಿಗೊಂದು ಅಂಕಣ.. 
ನೊಂದವರ ಕಣ್ಣೊರೆಸುವ ಕಾಯಕವಾ ಮಾಡುತ...
ತಪ್ಪು ಮಾಡಿದವರ ತಪ್ಪ ಅರ್ಥ ಮಾಡಿಸುತ್ತಾ... 
ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಹೋರಾಡುತ್ತಾ.. 

ಸುದ್ಧಿಯ ಬಿತ್ತರಿಸಲು ಮುನ್ನುಗ್ಗುವರು  ಅಡೆತಡೆಯ ತೊಡೆದು ಧೀರತನದಲಿ.. 
ಮಳೆಯಿರಲಿ, ಚಂಡಮಾರುತ ಬರಲಿ, ಸುನಾಮಿ ಆರ್ಭಟಿಸಲಿ..
ಯುದ್ಧವೇ ಇರಲಿ, ಕರ್ಪ್ಯೂ ಹೇರಲಿ,  ಸಾಂಕ್ರಾಮಿಕ ರೋಗಗಳ ಹರಡುವಿಕೆ ಇರಲಿ.. 
ಸುದ್ದಿಯ ಸಂಗ್ರಹ ಸಾಗುವುದು ನಿರಂತರವೂ, ವಾರದ ರಜೆಯಲ್ಲೂ  ಕಾಯಕವೇ ಕೈಲಾಸ ಎನ್ನುತ್ತಾ...
ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ.. 
ದುಡಿಯುವ ವೀರರೆ ನಿಮಗೊಂದು ಸಲಾಮು...

ಸಮಿತ ಶೆಟ್ಟಿ 
ಸಿದ್ಧಕಟ್ಟೆ