Wednesday, November 2, 2022

ಶೀಘ್ರ ಮನೆ ಮನೆಗೆ ಸಮಪ೯ಕ ಕುಡಿಯುವ ನೀರಿನ ಸೌಲಭ್ಶ: ಶಾಸಕ ಭೂಸನೂರ

 



ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಶಾಸಕ ರಮೇಶ ಭೂಸನೂರ ಮಾತನಾಡಿದರು.ಸಂತೋಷಗೌಡ ಪಾಟೀಲ,ಸಿದ್ದು ಬುಳ್ಳಾ ಇತರರಿದ್ದರು.


ಈ ದಿವಸ ವಾರ್ತೆ

ಬ್ರಹ್ಮದೇವನಮಡು : ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರಿನ ಪೂರೈಸುವ ಮಹತ್ತರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದು,ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರಮೇಶ ಭೂಸನೂರ ಹೇಳಿದರು.

  ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗೆ ಮಂಗಳವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆ ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು.2021-22ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪಕ೯ ಯೋಜನೆ ಪೂಣ೯ಗೊಂಡರೆ ನೀರಿನ ಸಮಸ್ಶೆ ದೂರವಾಗಲಿದೆ ಎಂದರು.ಈ ವೇಳೆ ಚನ್ನಮಲ್ಲಯ್ಶ ಹಿರೇಮಠ, ಪ್ರಮುಖರಾದ ಸಂತೋಷಗೌಡ ಪಾಟೀಲ ಡಂಬಳ,ಸಿದ್ದು ಬುಳ್ಳಾ,ದೇವಿಂದ್ರ ತೋನಶ್ಶಾಳ,ಸಿದ್ದಪ್ಪ ಮನಗೂಳಿ,ನಾಗಣ್ಣ ಪಡೇಕನೂರ,ದೇವಿಂದ್ರ ಮನಗೂಳಿ,ಗುರುಸಿದ್ದಪ್ಪ ಮನಗೂಳಿ,ಪತ್ರಕತ೯ ಮಲ್ಲು ಕೆಂಭಾವಿ,ನಾನಾಗೌಡ ಪಾಟೀಲ, ಡಾ.ಎನ್.ಪಿ.ನಾಯ್ಕೋಡಿ,ಸಂತೋಷ ಕರಿಕಲ್ಲ್,ಶರಣು ಮನಗೂಳಿ,ನಡಗೇರೆಪ್ಪ ತಳವಾರ,ಕೆ.ಡಿ.ಸೀತನೂರ,ನಾಗಪ್ಪ ಪೂಜಾರಿ,ಇಪಾ೯ನ ಚಂಡ್ರಕಿ,ಪ್ರವೀಣ ರಾಠೋಡ,ದೇವಿಂದ್ರ ರತ್ಶಾಳ ಸೇರಿದಂತೆ ಇತರರಿದ್ದರು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾಗಿ ಲೇಖಕಿ ಹೇಮಾ ವಸ್ತ್ರದ ಆಯ್ಕೆ

ಹೇಮಾ ವಸ್ತ್ರದ

ಲೇಖಕಿ ಹೇಮಾ ವಸ್ತ್ರದ

 ಈ ದಿವಸ ವಾರ್ತೆ

ವಿಜಯಪುರ: ಕರ್ನಾಟಕ ಲೇಖಕಿಯರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಲೇಖಕಿ ಹೇಮಾ ವಸ್ತ್ರದ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ರಚನೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ಹೇಮಾ ವಸ್ತ್ರದ, ಉಪಾಧ್ಯಕ್ಷರಾಗಿ ವನಮಾಲಾ ರಾಠೋಡ, ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ, ಖಜಾಂಚಿಯಾಗಿ ದಾಕ್ಷಾಯಣಿ ಬಿರಾದಾರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಲೇಖಕಿ ಡಾ. ಎಚ್ ಎಲ್ ಪುಷ್ಪಾ ಅವರು ಇದಕ್ಕೆ ಅನುಮೋದಿಸಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರಭಾವತಿ ದೇಸಾಯಿ, ಭಾರತಿ ಪಾಟೀಲ, ಇಂದುಮತಿ ಲಮಾಣಿ, ಕೆ ಸುನಂದಾ, ಶೋಭಾ ಗುನ್ನಾಪುರ ಇತ್ಯಾದಿ ಹಿರಿಯ ಲೇಖಕಿಯರಾದಿಯಾಗಿ ಕಲೇಸಂ ನ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

03-11-2022 EE DIVASA KANNADA DAILY NEWS PAPER

ನಂ. 6 ರಂದು ಪ್ರಶಸ್ತಿ ಪ್ರದಾನ ಹಾಗೂ ಊರ್ಧ್ವ ರೇತ ಕಿರುಚಿತ್ರ ಬಿಡುಗಡೆ

ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ
ಡಾ. ವೀರಣ್ಣ ದಂಡೆ 

ಡಾ. ಚನ್ನಪ್ಪ ಕಟ್ಟಿ
ಡಾ. ಚನ್ನಪ್ಪ ಕಟ್ಟಿ


ಈ ದಿವಸ ವಾರ್ತೆ ವಿಜಯಪುರ:

ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ (ರಿ) ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ ಅವರಿಗೆ 2022 ನೇ ಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನೆಲೆ ಸಿನಿ ಕ್ರಿಯೇಷನ್  ಅರ್ಪಿಸುವ 'ಊರ್ಧ್ವ ರೇತ' ಕಿರುಚಿತ್ರ ಬಿಡುಗಡೆ ಸಮಾರಂಭವು ನವೆಂಬರ್ 6 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಾಂಗಲ್ಯ ಭವನ ವಿಜಯಪುರ ರಸ್ತೆ ಸಿಂದಗಿಯಲ್ಲಿ ಜರುಗಲಿದೆ.



ಸಾನ್ನಿಧ್ಯ ಹಾಗೂ ಕಿರುಚಿತ್ರ ಬಿಡುಗಡೆಯನ್ನು ಸಾರಂಗಮಠದ ಪರಮಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ನೆರವೇರಿಸಲಿದ್ದಾರೆ.

ಬಿ.ಎಲ್.ಡಿ. ಇ. ಸಂಸ್ಥೆ ಯ ನಿರ್ದೇಶಕರಾದ ಅಶೋಕ ವಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವೀರಣ್ಣ ದಂಡೆ ಬದುಕು - ಬರಹ ಕೃತಿ ಬಿಡುಗಡೆ ಯನ್ನು  ಅಸ್ಕಿಯ ಪ್ರಗತಿಪರ ರೈತರಾದ  ಎಸ್.ಎಸ್.ಪಾಟೀಲ ಅವರ ನೆರವೇರಿಸಲಿದ್ದಾರೆ.

ಪತ್ರಕರ್ತರಾದ ಡಾ. ಶಿವರಂಜನ ಸಂತ್ಯಪೇಟೆ ಅವರು ಮಾತನಾಡಲಿದ್ದಾರೆ. ಕಾರ್ಯದರ್ಶಿ ಡಾ.ಎಂ.ಎಸ್. ಮದಭಾವಿ ಅಭಿನಂದನ ನುಡಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ  ಹಿರಿಯ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ, ಮುಖ್ಯ ಅತಿಥಿಗಳಾಗಿ ವಿಜಯಪುರ ಹಿರಿಯ ಚಿಂತಕರು ಡಾ. ಆರ್. ಕೆ. ಕುಲಕರ್ಣಿ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕರಾದ ಎನ್.ಎಂ.ಬಿರಾದಾರ, ಚಲನಚಿತ್ರ ನಿರ್ದೇಶಕರಾದ ಸುನೀಲಕುಮಾರ ಸುಧಾಕರ ಅವರು ಭಾಗವಹಿಸಲಿದ್ದಾರೆ ಎಂದು ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ನೆಲೆ ಪ್ರಕಾಶನ ಸಂಸ್ಥೆಯ ಸಂಚಾಲಕರಾದ ಡಾ. ಚನ್ನಪ್ಪ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.