Wednesday, November 2, 2022

ನಂ. 6 ರಂದು ಪ್ರಶಸ್ತಿ ಪ್ರದಾನ ಹಾಗೂ ಊರ್ಧ್ವ ರೇತ ಕಿರುಚಿತ್ರ ಬಿಡುಗಡೆ

ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ
ಡಾ. ವೀರಣ್ಣ ದಂಡೆ 

ಡಾ. ಚನ್ನಪ್ಪ ಕಟ್ಟಿ
ಡಾ. ಚನ್ನಪ್ಪ ಕಟ್ಟಿ


ಈ ದಿವಸ ವಾರ್ತೆ ವಿಜಯಪುರ:

ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ (ರಿ) ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ ಅವರಿಗೆ 2022 ನೇ ಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನೆಲೆ ಸಿನಿ ಕ್ರಿಯೇಷನ್  ಅರ್ಪಿಸುವ 'ಊರ್ಧ್ವ ರೇತ' ಕಿರುಚಿತ್ರ ಬಿಡುಗಡೆ ಸಮಾರಂಭವು ನವೆಂಬರ್ 6 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಾಂಗಲ್ಯ ಭವನ ವಿಜಯಪುರ ರಸ್ತೆ ಸಿಂದಗಿಯಲ್ಲಿ ಜರುಗಲಿದೆ.



ಸಾನ್ನಿಧ್ಯ ಹಾಗೂ ಕಿರುಚಿತ್ರ ಬಿಡುಗಡೆಯನ್ನು ಸಾರಂಗಮಠದ ಪರಮಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ನೆರವೇರಿಸಲಿದ್ದಾರೆ.

ಬಿ.ಎಲ್.ಡಿ. ಇ. ಸಂಸ್ಥೆ ಯ ನಿರ್ದೇಶಕರಾದ ಅಶೋಕ ವಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವೀರಣ್ಣ ದಂಡೆ ಬದುಕು - ಬರಹ ಕೃತಿ ಬಿಡುಗಡೆ ಯನ್ನು  ಅಸ್ಕಿಯ ಪ್ರಗತಿಪರ ರೈತರಾದ  ಎಸ್.ಎಸ್.ಪಾಟೀಲ ಅವರ ನೆರವೇರಿಸಲಿದ್ದಾರೆ.

ಪತ್ರಕರ್ತರಾದ ಡಾ. ಶಿವರಂಜನ ಸಂತ್ಯಪೇಟೆ ಅವರು ಮಾತನಾಡಲಿದ್ದಾರೆ. ಕಾರ್ಯದರ್ಶಿ ಡಾ.ಎಂ.ಎಸ್. ಮದಭಾವಿ ಅಭಿನಂದನ ನುಡಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ  ಹಿರಿಯ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ, ಮುಖ್ಯ ಅತಿಥಿಗಳಾಗಿ ವಿಜಯಪುರ ಹಿರಿಯ ಚಿಂತಕರು ಡಾ. ಆರ್. ಕೆ. ಕುಲಕರ್ಣಿ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕರಾದ ಎನ್.ಎಂ.ಬಿರಾದಾರ, ಚಲನಚಿತ್ರ ನಿರ್ದೇಶಕರಾದ ಸುನೀಲಕುಮಾರ ಸುಧಾಕರ ಅವರು ಭಾಗವಹಿಸಲಿದ್ದಾರೆ ಎಂದು ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ನೆಲೆ ಪ್ರಕಾಶನ ಸಂಸ್ಥೆಯ ಸಂಚಾಲಕರಾದ ಡಾ. ಚನ್ನಪ್ಪ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment