Wednesday, November 2, 2022

ಶೀಘ್ರ ಮನೆ ಮನೆಗೆ ಸಮಪ೯ಕ ಕುಡಿಯುವ ನೀರಿನ ಸೌಲಭ್ಶ: ಶಾಸಕ ಭೂಸನೂರ

 



ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಶಾಸಕ ರಮೇಶ ಭೂಸನೂರ ಮಾತನಾಡಿದರು.ಸಂತೋಷಗೌಡ ಪಾಟೀಲ,ಸಿದ್ದು ಬುಳ್ಳಾ ಇತರರಿದ್ದರು.


ಈ ದಿವಸ ವಾರ್ತೆ

ಬ್ರಹ್ಮದೇವನಮಡು : ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರಿನ ಪೂರೈಸುವ ಮಹತ್ತರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದು,ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರಮೇಶ ಭೂಸನೂರ ಹೇಳಿದರು.

  ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗೆ ಮಂಗಳವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆ ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು.2021-22ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪಕ೯ ಯೋಜನೆ ಪೂಣ೯ಗೊಂಡರೆ ನೀರಿನ ಸಮಸ್ಶೆ ದೂರವಾಗಲಿದೆ ಎಂದರು.ಈ ವೇಳೆ ಚನ್ನಮಲ್ಲಯ್ಶ ಹಿರೇಮಠ, ಪ್ರಮುಖರಾದ ಸಂತೋಷಗೌಡ ಪಾಟೀಲ ಡಂಬಳ,ಸಿದ್ದು ಬುಳ್ಳಾ,ದೇವಿಂದ್ರ ತೋನಶ್ಶಾಳ,ಸಿದ್ದಪ್ಪ ಮನಗೂಳಿ,ನಾಗಣ್ಣ ಪಡೇಕನೂರ,ದೇವಿಂದ್ರ ಮನಗೂಳಿ,ಗುರುಸಿದ್ದಪ್ಪ ಮನಗೂಳಿ,ಪತ್ರಕತ೯ ಮಲ್ಲು ಕೆಂಭಾವಿ,ನಾನಾಗೌಡ ಪಾಟೀಲ, ಡಾ.ಎನ್.ಪಿ.ನಾಯ್ಕೋಡಿ,ಸಂತೋಷ ಕರಿಕಲ್ಲ್,ಶರಣು ಮನಗೂಳಿ,ನಡಗೇರೆಪ್ಪ ತಳವಾರ,ಕೆ.ಡಿ.ಸೀತನೂರ,ನಾಗಪ್ಪ ಪೂಜಾರಿ,ಇಪಾ೯ನ ಚಂಡ್ರಕಿ,ಪ್ರವೀಣ ರಾಠೋಡ,ದೇವಿಂದ್ರ ರತ್ಶಾಳ ಸೇರಿದಂತೆ ಇತರರಿದ್ದರು.

No comments:

Post a Comment