Tuesday, October 31, 2023

ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು ನ 1 : ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಘೋಷಣೆ ಮಾಡಿದರು. 

ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ  ಮಾತನಾಡಿದರು. 


ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದರು. 

ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಈ ದಿನ ನಾವು ಒಂದು ಪ್ರತಿಜ್ಞೆ ಮಾಡೋಣ. ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ನಾವು ಮಾಡುವ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸುವ ಕೆಲಸ ಮಾಡೋಣ. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು ಎಂದು ಕರೆ ನೀಡಿದರು. 

ಕನ್ನಡ ನೆಲದಲ್ಲಿದ್ದೂ ಕನ್ನಡ ಮಾತನಾಡದವರು ಹಲವು ಭಾಗಗಳಲ್ಲಿ ಇದ್ದಾರೆ. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಪ್ರತಿಯೊಬ್ಬರ, ಪ್ರತಿಯೊಂದು ಭಾಷೆಗೂ ನಾವು ಗೌರವ ಕೊಡಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯವಹರಿಸುವಾಗ, ಆಡಳಿತದಲ್ಲಿ ಕನ್ನಡ ಬಳಕೆ ಆಗಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯೂ ಚಾಚೂ ತಪ್ಪದೆ ಪಾಲಿಸಬೇಕು ಎಂದರು. 

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದರು. 

ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್ ಕಾನ್ವೆಂಟ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದು ಸರಿಯಲ್ಲ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಉದಾಹರಿಸಿದರು. 

ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಕಲಿಕಾ ವಾತಾವರಣ ಹಾಗೂ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು , ಅಗತ್ಯ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆಧ್ಯತೆ ಎಂದರು. 

ತಮ್ಮ ಮಕ್ಕಳನ್ನು ಅವರ ಇಷ್ಟದ ಭಾಷೆಯಲ್ಲಿ ಕಲಿಸುವುದು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಮಾತೃಭಾಷೆಯ ಮಾಧ್ಯಮದಲ್ಲೇ ಕಲಿಯುವುದು ಅತ್ಯಂತ ವೈಜ್ಞಾನಿಕ ಎನ್ನುವುದನ್ನು ಗ್ರಹಿಸಬೇಕು ಎಂದರು. 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಶಾಸಕ ರಿಜ್ಷಾನ್ ಹರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

ಗುಲಮೋಹರ ಕನ್ನಡತಿ ನನ್ನವಳು

 


ಹಾಲರಾಜನ ಗಾಥಾಸಪ್ತಸತಿ ಪದ್ಯ ಕಾವ್ಯದಲ್ಲಿ ಹಾಲುಂಡವಳು

ಶ್ರವಣಬೆಳಗೊಳದ ಶಾಸನದಲ್ಲಿ ಉಪಮೆಗಳ ಸೊಗಡಿನ

ಗುಲಮೊಹರ ಕನ್ನಡತಿ ನನ್ನವಳು


ವಡ್ಡಾರಾಧನೆಯ ಗಾಹೆಗಳ ಗಾಥೆಯಾದವಳು

ಆದಿ ಕವಿಯ ಆಗಮಿಕ-ಲೌಕಿಕದೊಳಗೆ ಚಂಪೂವಾಗಿ

ಕಂಪಿಸಿದ ಗುಲಮೊಹರ ಕನ್ನಡತಿ ನನ್ನವಳು


ಕಾಯಕವೇ ಕೈಲಾಸದ ಬಸವನ ವಚನ ವೈಚಾರಿಕ ಪ್ರಜ್ಞೆಗೆ

ನಿಬ್ಬೆರಗಾಗಿ ನಿಂತ ಅಕ್ಕ ಮಹಾದೇವಿಯ ಮಲ್ಲಿಕಾರ್ಜುನನ ಹುಡುಕಾಟಕ್ಕೆ

ದಿಟ್ಟೆಯಾಗಿನಿಂತ ಗುಲಮೊಹರ ಕನ್ನಡತಿ ನನ್ನವಳು


ಬೇಂದ್ರೆ ಅಜ್ಜನ ನಾಕುತಂತಿ ಮೀಟಿ

ಕುವೆಂಪುವಿನ ಶ್ರೀರಾಮಾಯಣ ದರ್ಶನದಲ್ಲಿ

ವಿಹರಿಸಿದ ಗುಲಮೊಹರ ಕನ್ನಡತಿ ನನ್ನವಳು


ಕಾರಂತಜ್ಜನ ಮೂಕಜ್ಜಿಯ ಕನಸುಗಳ ಲೋಕದ ಸಪ್ನ ಸುಂದರಿಯಾಗಿ

ಚುಂಬಕರಾಣಿ ಗುಲಮೊಹರ ಕನ್ನಡತಿ ನನ್ನವಳು

ಅನಂತರ ಸಂಸ್ಕಾರ ಊಣಬಡಿಸಿ

ಗಿರೀಶರ ಬಲಿಯ ಹಿಟ್ಟಿನ ಕೋಳಿಯಾಗಿ

ಕೂಗಿದಾಕೆ ಗುಲಮೊಹರ ಕನ್ನಡತಿ ನನ್ನವಳು


ತಮಟೆ ಜಾಗಟೆಯ ಧೂಳೆಬ್ಬಿಸಿ ಚೋಮನನ್ನು ಶಿವರಾಮರಲ್ಲಡಗಿಸಿ

ಮಲೆಗಳಲ್ಲಿ ಮದುಮಗಳನ್ನು ಹುಡುಕುವ ಶೂದ್ರಜ್ಜನ

ಗುಲಮೊಹರ ಕನ್ನಡತಿ ನನ್ನವಳು


ಸಿದ್ದಲಿಂಗಯ್ಯರ ಸಾವಿರಾರು ನದಿಗಳ ಒಂದೆಡೆ ಸೇರಿಸಿ

ದೇವನೂರರ ಒಡಲಾಳದ ಕಿಚ್ಚಿಗೆ ಕುಸುಮಬಾಲೆಯಾಗಿ

ಬಂದವಳು ಗುಮಮೊಹರ ಕನ್ನಡತಿ ನನ್ನವಳು


ಪಟ್ಟದಕಲ್ಲು ವೀರಗಲ್ಲುಗಳ ವೀರಾವೇಶ ನೋಡಿ

' ಐ' ಹೋಳೆ ಎಂದು ಗೊಲಗುಮ್ಮಜಿನ ತುತ್ತ ತುದಿಗೇರಿದವಳು

ಗುಲಮೊಹರ ಕನ್ನಡತಿ ನನ್ನವಳು


ಯವ್ವಾ ಎನ್ನುವ ಸಿಹಿ ತುತ್ತು ಜೇನ ತುಟಿಗಳಿಗೆ ವರಸಿ

ಹುಡಿಗಾಲ ಎಳ ನೀರನಿಂದ ತೊಳೆದ ಜಾನಪದದ

ಸಿರಿ ಗುಲಮೊಹರ ಕನ್ನಡತಿ ನನ್ನವಳು


ಇಳೆ ಹೊತ್ತಲ್ಲಿ ಚುಕ್ಕಿ ಚಂದ್ರಮರನ್ನು ಬಡಿದೆಬ್ಬಿಸಿ

ಮಕ್ಕಳಲಾಲಿ ಹಾಡಾಗಿ ಹೊತ್ತು ಹೊತ್ತಿಗೆ ಅನ್ನ ತಿನ್ನುವಾಗ

ಇಣುಕಿಣುಕಿ ನೋಡುವ ಗುಲಮೊಹರ ಕನ್ನಡತಿ ನನ್ನವಳು


ಎಲುಬಿನ ಹಂದರಕ್ಕೆ ತಾಯ್ ಕರುಳಿನ ಚಪ್ಪರವಾಗಿ ನಿಂತವಳು

ಹಳದಿ-ಕೆಂಪಿನ ಬಾವುಟ ಹಾರಿಸಿ ಕನ್ನಡ ಕಂಪನ್ನು ಸೂಸಿದ ಗುಲಮೊಹರ ಕನ್ನಡತಿ ನನ್ನವಳು


ಡಾ.ಸುಜಾತಾ.ಸಿ , ಸಾಹಿತಿಗಳು

ವಿಜಯಪುರ

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

01-11-2023 EE DIVASA KANNADA DAILY NEWS PAPER

ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ


                                 ರಫೀ ಭಂಡಾರಿ

                           ಪ.ಗು.ಸಿದ್ದಾಪೂರ

                                     ಎ.ಎಂ.ಮದರಿ

 ಈ ದಿವಸ ವಾರ್ತೆ

ವಿಜಯಪುರ: ಜಿಲ್ಲೆಯ ಮೂರು ಮಂದಿ ಸಾಧಕರಿಗೆ ವಿವಿಧ ವಿಭಾಗದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸಾಹಿತ್ಯ ಕ್ಷೇತ್ರಕ್ಕೆ ಪ.ಗು. ಸಿದ್ದಾಪುರ, ಪತ್ರಿಕಾ ಕ್ಷೇತ್ರಕ್ಕೆ ರಫೀ ಭಂಡಾರಿ, ಸಂಕೀರ್ಣ ವಿಭಾಗದಲ್ಲಿ ಸಾಹಿತಿ ಎ.ಎಂ. ಮದರಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ.ಗು. ಸಿದ್ದಾಪುರ:

ಜಿಲ್ಲೆಯ ಮುಳವಾಡದ ಪ.ಗು. ಸಿದ್ದಾಪುರ ಅವರು ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ಜುಲೈ 1, 1985 ರಂದು ಜನಿಸಿದ ಪ.ಗು. ಸಿದ್ದಾಪುರ ಅವರು ಚಿತ್ರಕಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದವರು.

ಪ.ಗು. ಸಿದ್ದಾಪುರ ಸಹಜವಾಗಿಯೇ ಮಕ್ಕಳ ಸಾಹಿತ್ಯದಲ್ಲಿಯೇ ಅಪಾರ ಕೃಷಿ ಮಾಡಿದ್ದಾರೆ. ಬಣ್ಣದ ಚಿಟ್ಟೆ, ಹಸಿರು ತೋರಣ, ಪಣತೊಟ್ಟ ಪ್ರಾಣಿಗಳು, ಕಲ್ಲು ಸಕ್ಕರೆ, ಅಕ್ಕರೆಯ ಅಜ್ಜ, ಮಂಗಳನ ಅಂಗಳಕೆ, ಚಿನ್ನದ ಜಿಂಕೆ ಹೀಗೆ ಮಕ್ಕಳ ಸಾಹಿತ್ಯಕ್ಕೆ ಸಂಬAಧಿಸಿದ 32 ಕೃತಿಗಳನ್ನು ರಚಿಸಿದ್ದಾರೆ.

ರಫೀ ಭಂಡಾರಿ:

ಪತ್ರಿಕೋದ್ಯಮ, ಉರ್ದು ಸಾಹಿತ್ಯ, ಸಂಘಟನೆಯಲ್ಲಿ ರಫೀ ಭಂಡಾರಿ ಅವರದ್ದು ಪ್ರಸಿದ್ಧ ಹೆಸರು. ಅವರು ಕಳೆದ 37 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ರಫೀ ಭಂಡಾರಿ ಅವರು ಉರ್ದು ಪತ್ರಿಕೋದ್ಯಮದಲ್ಲಿ ಕೃಷಿ ಮಾಡಿದ್ದಾರೆ.

ಭಂಡಾರಿಯವರು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಸದಸ್ಯರಾಗಿ, ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ಕರ್ನಾಟಕ ವಿವಿ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ಉರ್ದು ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಎ.ಎಂ. ಮದರಿ:

ಸಿಂದಗಿ ತಾಲೂಕಿನಲ್ಲಿ ಜನಿಸಿ, ಕೊಪ್ಪಳ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುವ ಎ.ಎಂ. ಮದರಿ ಶಿಕ್ಷಕರಾಗಿ, ಜಿಲ್ಲಾ ಖಜಾನೆ ಅಧಿಕಾರಿಯಾಗಿ ಬೆಳೆದು ನಿರಂತರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.

1952 ರಲ್ಲಿ ಸಿಂದಗಿ ತಾಲೂಕಿನ ಮದರಿಯಲ್ಲಿ ಜನಿಸಿದ ಎ.ಎಂ. ಮದರಿ ಅವರು ಬಲು ಕಷ್ಟದಿಂದ ಜೀವನ ಸವೆಸಿದವರು. 38 ವರ್ಷಗಳ ಕಾಲ ಸರ್ಕಾರಿ ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.