Wednesday, March 15, 2023

ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಲಕ್ಷ್ಮಣ ನೇಮಕ

 



ಈ ದಿವಸ ವಾರ್ತೆ

ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ ರವರ ಹಾಗೂ ವಿಜಯಪೂರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ  ರಾಜು ಆಲಗೂರ ಅವರ ಆದೇಶದ ಮೇರೆಗೆ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷರನ್ನಾಗಿ  ಲಕ್ಷ್ಮಣ ಶರಣಪ್ಪ ಚಲವಾದಿ ಅವರನ್ನು ನೇಮಕ ಮಾಡಿ‌  ಆದೇಶ ಹೊರಡಿಸಲಾಗಿದೆ.

ಲಕ್ಷ್ಮಣ ಅವರ ಸಮಾಜ ಸೇವೆ ಕಾರ್ಯ ಗಳನ್ನು ಗುರುತಿಸಿ ಅವರನ್ನು ಈ ಗುರುತರ ಜವಾಬ್ದಾರಿಯನ್ನು ನೀಡಲಾಗಿದೆ.

ಕೂಡಲೇ ತಮ್ಮ ಅಧಿಕಾರ ವಹಿಸಿಕೊಂಡು ವಿಜಯಪುರ ನಗರ ಬ್ಲಾಕ್ ಪ್ರದೇಶದಲ್ಲಿ ಸ್ಥಳೀಯ ನಾಯಕರ ಸಹಯೋಗದಿಂದ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಕರಾಗಬೇಕೆಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. 

ಆದೇಶ ಪತ್ರವನ್ನು ವಿಜಯಪುರ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸೈಯ್ಯದ ಜಮೀರ ಅಹ್ಮದ ಬಕ್ಷಿ, ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ ನೀಡಿದರು.