Saturday, March 27, 2021

ಕಲೆಗೆ ಪುನರ್‍ಜನ್ಮ ದೊರೆಯಲಿ: ಜೋಶಿ



ವಿಜಯಪುರ : ಕಲೆಯು ಒಂದು ಅಭೂತಪೂರ್ವ ಸಿದ್ಧಿ, ರಂಗ ಕಲೆ ಒಂದು ಸಾಮಾಜಿಕ ಮಾಧ್ಯಮವಾಗಿದೆ  ಎಂದು ರಂಗವೈಭವದ ಅಧ್ಯಕ್ಷ ಅಂಬಾದಾಸ ಜೋಶಿ ಹೇಳಿದರು.

ನಗರದ ವಿರೇಶ್ವರ ನಾಟ್ಯ ಸಂಘದ ರಂಗ ಮಂದಿರದಲ್ಲಿ ರಂಗವೈಭವ ಮತ್ತು ಕರ್ನಾಟಕ ಕಬ್ಲಿಕ್ ಪವರ್ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚಾರಣೆ ನಿಮಿತ್ಯ ಹಾಸ್ಯ ಕಲಾವಿದ ಸಿದ್ದು ನಾಲವತವಾಡ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. 

ವಿಶ್ವರಂಗಭೂಮಿ ದಿನಾಚಾರಣೆ ಬರಿ ದಿನಾಚರಣೆಯಾಗಬಾರದು, ಕಲಾವಿದರ ಬದುಕು ಇಂದಿನ ಅನಾರೋಗ್ಯ ವಾತವಾರಣದಲ್ಲಿ ಆತಂಕದ ಪರಿಸ್ಥಿತಿಯಲ್ಲಿದ್ದರೂ ಕೂಡ ಎದೆಗುಂದದೆ, ನಮ್ಮ ಕಲೆಯ ಮೇಲೆ ನಮ್ಮ ಪ್ರಯತ್ನದ ಮೇಲೆ ನಮ್ಮ ಮೇಲೆ ವಿಶ್ವಾಸ ಇನ್ನು ಗಟ್ಟಿಯಾಗುತ್ತಾ ಹೋಗಬೇಕು. ಎದೆ ಗುಂದಬಾರದು ಇದಕ್ಕೆ ನಮ ಕಲಾ ತಪಸ್ಸು ನಮ್ಮ ಪರಂಪರೆ, ನಮ್ಮ ಕಲಾ ಪ್ರಯತ್ನ ಹಾಗೂ ಜನ ಸಂಪರ್ಕ ಕಳೆದುಕೊಳ್ಳದೇ ವಿಸ್ವಾದದಿಂದ ಜೀವನ ಸಾಗಿಸುವಂತೆ ಈ ರಂಗಭೂಮಿ ಕಲಾವಿದರಿಗೆ ಭಗವಂತ ಅನುಗ್ರಹಿಸಲಿ ಎಂದರು.

ಈ ಸಂದರ್ಭ ಕೆಪಿಪಿ ಅಧ್ಯಕ್ಷ ಪ್ರಕಾಶ ಕುಂಬಾರ ಮಾತನಾಡಿ, ಅಂತರಜಾಲದ ಮೋಹದಲ್ಲಿ ಇಂದು ಇಂತಹ ಅಪರೂಪದ ಜಾನಪದ ಕಲೆ, ದೇಶಿಕ್ರೀಡೆ ಮತ್ತು ಗ್ರಾಮೀಣ ಭಾಗದ ಮನರಂಜನೆಯ ಅನೇಕ ಮಾಧ್ಯಮಗಳು ಮಾಯವಾಗಿ ಇಂದು ಎಲ್ಲರ ಕೈಯಲ್ಲಿ ಪ್ರಪಂಚವನ್ನೇ ತೋರುವ ಮೊಬೈಲ್‍ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರಂಗ ಮಾಧ್ಯಮ ಸೊರಗಿ ಹೋಗಿ ಇಂದು ರಂಗಭೂಮಿ ಕಲಾವಿದರು ಸಹ ಬೀದಿಗೆ ಬಿದ್ದಿದ್ದಾರೆ. ಹಲವಾರು ನಾಟ್ಯ ಸಂಘಗಳು ಬಾಗಿಲು ಮುಚ್ಚಿಕೊಂಡಿವೆ. ಚಲನ ಚಿತ್ರ ಮಾಧ್ಯಮವೇ ಇಂದು ನಮ್ಮಿಂದ ದೂರುವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿ ಸಮುದಾಯಗಳನ್ನು ಓಲೈಸುವ ಕೆಲಸದಲ್ಲಿ ತೊಡಗಿದ ಸರ್ಕಾರಗಳು ಸೊರಗಿ ಹಾಗೂ ನಶಿಸಿ ಹೋಗುತ್ತಿರುವ ಇಂತಹ ನಾಟ್ಯ ಸಂಘಗಳನ್ನ ಹಾಗೂ ರಂಗಭೂಮಿ ಕಲಾವಿದರನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ. 

ಕರವೇ ಮುಖಂಡ ರವಿ ಕಿತ್ತೂರ, ಫಯಾಜ್ ಕಲಾದಗಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಇರುವ 2 ರಂಗಮಂದಿರಗಳು ಇದ್ದು, ಅದರಲ್ಲಿ ವಿಜಯಪುರದ ಕಿತ್ತೂರು ಚೆನ್ನಮ್ಮ ನಾಟ್ಯಮಂದಿರ ಬಹಳಷ್ಟು ಕಲಾವಿದರ ಬದುಕಿಗೆ ಆಸರೆಯಾಗಿತ್ತು. ಅಲ್ಲದೇ ಈ ನಾಟ್ಯಮಂದಿರದಲ್ಲಿ ಅನೇಕ ಹೆಸರಾಂತ ಖ್ಯಾತ ಚಲನಚಿತ್ರ ನಟರು ಸಹ ಇಲ್ಲಿ ಅಭಿನಯಿಸಿ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅದರಲ್ಲಿ ಕಲ್ಪನಾ, ಸುದೀರ, ಎನ್.ಬಸವರಾಜ, ದೀರೇಂದ್ರ ಗೋಪಾಲ, ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಸಚಿವೆ ಉಮಾಶ್ರೀ ಸಹಿತ ಹಲವಾರು ನಟರು ನಟಿಸಿದಂತಹ ಅಮೂಲ್ಯವಾದ ನಾಟ್ಯ ಮಂದಿರ ಸದ್ಯ ಸರ್ಕಾರ ಮತ್ತು ಜಿಲ್ಲಾಡಳತದ ದಿವ್ಯ ನಿರ್ಲಕ್ಷ್ಯದ ಪರಿಣಾಮ ಪೂರ್ಣ ನಿರ್ನಾಮವಾಗಿದೆ. ಇಂತಹ ರಂಗಭೂಮಿ ದಿನಾಚಾರಣೆಯನ್ನು ನೆಪಕ್ಕೆ ಆಚರಿಸಿದೆ ರಂಗ ಕಲಾವಿದರು, ರಂಗಾಸಕ್ತರು, ರಂಗಾಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿ ಈ ನಾಟ್ಯಮಂದಿರವನ್ನು ಉಳಿಸಬೇಕಿದೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕೆಂದು ಈ ವೇದಿಕೆಯ ಮುಖಾಂತರ ಮನವಿ ಮಾಡಿದರು. 

ಈ ಸಂದರ್ಭದ ಸುಭಾಸ ಕನ್ನೂರ, ಪರ್ತಕತ್ರ ಪರಶುರಾಮ ಶಿವಶರಣ, ಶಿವಾನಂದ ದುದ್ದಗಿ, ರಜಾಕ ಕಾಖಂಡಕಿ, ಕಲಾವಿದ ಅಮೋಘಸಿದ್ದ ಆಜೂರ ಇನ್ನಿತರರು ಇದ್ದರು. 


ಸ್ವಾತಂತ್ರ್ಯದ ಅಮೃತ ಮಹೋತ್ಸವ ನಾಳೆ



ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶವು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಎಂಬ ವಿಶೇಷ ಕಾರ್ಯಕ್ರಮವನ್ನು ಮಾ.28ರಂದು ಬೆಳಿಗ್ಗೆ 10 ಗಂಟೆಗೆ ವಿವಿಯ ಕನ್ನಡ ಸಭಾ ಭವನದಲ್ಲಿ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಹರ್ಷವರ್ಧನ್ ಶೀಲವಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ವಹಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾ ಅಧಿಕಾರಿ ಪ್ರೊ.ನಾಮದೇವ್ ಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಲರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ.

 

ಯುಜಿಸಿ-ನೆಟ್/ಕೆ-ಸೆಟ್-2021 ಪರೀಕ್ಷೆಗೆ ಸಿದ್ಧತೆ

 ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿಯು ಯುಜಿಸಿ-ನೆಟ್/ಕೆ-ಸೆಟ್-2021 ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗಾಗಿ ಸಾಮಾನ್ಯ ಪತ್ರಿಕೆ-1 ವಿಷಯಕ್ಕೆ ಸಂಬಂಧಿಸಿದಂತೆ ಮಾ.29ರಿಂದ ಏ.9 ರವರೆಗೆ ಉಚಿತ ಆನ್‍ಲೈನ್ ಲೈವ್ ತರಗತಿಗಳನ್ನು ನಡೆಸಲು ಆಯೋಜಿಸಿದೆ. 

ಪ್ರತಿದಿನ ಬೆಳಿಗ್ಗೆ 8ರಿಂದ 10ಗಂಟೆಯವರೆಗೆ ಹಾಗೂ ಸಾಯಂಕಾಲ 6ರಿಂದ 8ಗಂಟೆಯವರೆಗೆ ಪ್ರತಿದಿನ ಒಟ್ಟು ಎರಡು ತರಗತಿಗಳು ನಡೆಯಲಿದ್ದು, ರಾಜ್ಯದ ಎಲ್ಲ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ತರಗತಿಗಳನ್ನು ಪ್ರತಿದಿನ ಯುಟ್ಯೂಬ್/ ಫೇಸ್‍ಬುಕ್ ಲೈವ್‍ನಿಂದ ನಡೆಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಗೂಗಲ್ ಫಾರಂ ಲಿಂಕ್: https://forms.gle/ix594hL7N4seu3rw5 ಮೂಲಕ ತರಗತಿಗಳಿಗೆ ನೊಂದಾಯಿಸಿಕೊಳ್ಳಬಹುದು ಎಂದು ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿ ಸಂಯೋಜಕ ಡಾ. ಪ್ರಕಾಶ.ಕೆ.ಬಡಿಗೇರ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.