Thursday, December 23, 2021

ತೊಗರಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ



ಈ ದಿವಸ ವಾರ್ತೆ ವಿಜಯಪುರ: ಹಿಟ್ಟಿನಹಳ್ಳಿ ಗ್ರಾಮದಲ್ಲಿ ತೊಗರಿ ಬೆಳೆಯ ಕ್ಷೇತ್ರೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎನ್.ರಾಘವೇಂದ್ರ ಉಪ ಕೃಷಿ ನಿರ್ದೇಶಕರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರತ್ನಾಬಾಯಿ ಬಿರಾದಾರ ಭಾಗವಹಿಸಿದ್ದರು. ಕೃಷಿ ಮಹಾವಿದ್ಯಾಲಯದ ಡೀನ್‌ರಾದ ಕಲಘಟಗಿ, ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಬಿ. ದೊಡಮನಿ, ಕೃಷಿ ವಿಜ್ಞಾನಿಗಳಾದ ಗುರುರಾಜ ಯಡಹಳ್ಳಿ, ವಿದ್ಯಾವತಿ ಯಡಹಳ್ಳಿ, ಎಸ್.ಎಮ್.ವಸ್ತçದ, ಟಿ.ಎಚ್. ಶ್ರೀಮತಿ ಶ್ವೇತಾ,ಶ್ರಿಕಾಂತ ಚವ್ಹಾಣ, ಎಸ್.ಎಚ್. ಗೊಲ್ಯಾಳ, ಕೃಷಿ ಅಧಿಕಾರಿಗಳಾದ ಜಯಪ್ರದಾ ದಶವಂತ ಹಾಗೂ ಎಮ್. ಎನ್.ವಡ್ಡರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಅಧ್ಯಕ್ಷರಾದ ಶ್ರೀಕಾಂತ ಚೌಧರಿ, ಪ್ರಗತಿಪರ ರೈತರಾದ ಜ್ಯೋತಿಬಾ ಚವ್ಹಾಣ, ಗುರುರಾಜ ಯಡವಣ್ಣವರ, ಬಸವರಾಜ ಹೆರಲಗಿ, ಸಹಾಯಕ ಕೃಷಿ ಅಧಿಕಾರಿಗಳು ಬಿ.ಎಸ್. ಇಂಡಿ, ಸಿ.ಎಸ್.ಯಾಳವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.