Friday, November 3, 2023

04-11-2023 EE DIVASA KANNADA DAILY NEWS PAPER

ವಿಜಯಪುರ ಜಿಲ್ಲೆಯನ್ನು ವಿಶ್ವಗುರು ಬಸವೇಶ್ವರ ಜಿಲ್ಲೆ ಅಂತ ಹೆಸರಿಡಲು ರಾಷ್ಟ್ರೀಯ ಬಸವ ಸೈನ್ಯ ಆಗ್ರಹ

 

ಈ ದಿವಸ ವಾರ್ತೆ

ವಿಜಯಪುರ:12ನೇ ಶತಮಾನದಲ್ಲಿ ವಚನದ ಮೂಲಕ ಸಮಾನತೆಯ ಸಾರುವುದರ ಜೊತೆಗೆ ಸಾಮಾಜಿಕ ಕ್ರಾಂತಿಯನ್ನು ಮಾಡಿದ ವಿಶ್ವಗುರು  ಬಸವಣ್ಣನವರ ಜನಿಸಿದ ವಿಜಯಪುರ ಜಿಲ್ಲೆಯ ಹೆಸರನ್ನು ಬದಲಾಯಿಸಿ ಬಸವೇಶ್ವರ ಜಿಲ್ಲೆಯನ್ನಾಗಿ ಮಾಡಬೇಕೆಂಬುದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಆಗ್ರಹಿಸಿದರು ಇಂದು ವಿಜಯಪುರ ಜಿಲ್ಲಾಧಿಕಾರಿಗಳಿಗೆ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಗೆ ಬಸವೇಶ್ವರ ಚೆಲ್ಲಿ ಅಂತ ಮರುನಾಮಕರಣ ಮಾಡಲು ಮನವಿ ಸಲ್ಲಿಸಿ ಮಾತನಾಡಿದ ಅವರು 

ನಾಡಿನ ಜನತೆಯ ಬಹುದಿನದ ಬೇಡಿಕೆ ಆಗಿದ್ದು ಈಗ ಕರ್ನಾಟಕ ಘನ ಸರ್ಕಾರ ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆ ಅಂತ ಹೆಸರಿಡಲು ತೀರ್ಮಾನಿಸಿದ್ದು ಸ್ವಾಗತ ಮಾಡುತ್ತೇವೆ ಹೆಸರು ಬದಲಾವಣೆ ಮಾಡುವುದರಿಂದ ವಿಶ್ವಗುರು ಬಸವಣ್ಣನವರು ಯಾರು ಅವರು ಮಾಡಿದ ಸಮಾನತೆಯ ಕ್ರಾಂತಿ. ವಚನ ಸಾಹಿತ್ಯ. ಕಾಯಕ ದಾಸೋಹದ ಪರಿಚಯವನ್ನು ಇಡೀ ಜಗತ್ತಿಗೆ ತಿಳಿಸಿದಂತೆ ಆಗುತ್ತದೆ ಈಗಾಗಲೇ ದೇಶದ ಅನೇಕ ನಗರಗಳ ಹೆಸರುಗಳನ್ನು ಬದಲಾವಣೆ ಮಾಡಿದ್ದಾರೆ ಉದಾಹರಣೆಗೆ ಮಹಾರಾಷ್ಟ್ರದ ಔರಂಗಾಬಾದ್ ಮರುನಾಮಕರಣಗೊಂಡು ಛತ್ರಪತಿ ಸಾಮಾಜಿನಗರವಾಗಿದೆ  ಬಿಹಾರದ ಒಂದು ಜಿಲ್ಲೆಗೆ ಗೌತಮ ಬುದ್ಧರ ಹೆಸರನ್ನು ನಾಮಕರಣ ಮಾಡಲಾಗಿದೆ ಈ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಬಸವ ನಾಡಿನ ಜನರು ಸ್ವಾಗತಿಸುತ್ತೇವೆ 

ಅದೇ ರೀತಿ ಬಸವ ಜನ್ಮ ಸ್ಥಳ ಬಸವನಬಾಗೇವಾಡಿ ಪ್ರತೇಕ ಅಭಿರುದ್ಧಿ ಪ್ರಾದಿಕಾರ ರಚನೆ ಮಾಡಿ ಸಮಸ್ತ ಬಸವನಬಾಗೇವಾಡಿ ಅಭಿರುದ್ದಿ ಪಡಿಸಬೇಕು.ಬಸವ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ನವದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಬಸವಣ್ಣನವರ ಜೀವನ ಸಂದೇಶಗಳನ್ನು ಸಾರುವ ಬೃಹತ್ ಮ್ಯೂಸಿಯಂ ನಿರ್ಮಾಣ ಮಾಡಬೇಕು,ರಾಮಜನ್ಮಭೂಮಿ ಅಯೋಧ್ಯಾ ಮಾದರಿಯಲ್ಲಿ ವಿಶೇಷ ಅನುಧಾನ ಬಿಡುಗಡೆ ಮಾಡಿ ದೇಶ ವಿದೇಶದಿಂದ ಪ್ರವಾಶಿಗರು ಬಸವ ಜನ್ಮಸ್ಥಳಕ್ಕೆ ಬರುವುಹಾಗೆ ಮಾಡಲು ಸರ್ಕಾರ ವಿಶೇಷ ಕಾಳಜಿ ವಹಿಸಬೇಕು ಬಸವನಬಾಗೇವಾಡಿ ಪಟ್ಟಣದಲ್ಲಿ ಪ್ರವಾಸೋದ್ದಮ ಇಲಾಖೆಯಿಂದ ತ್ರೀ ಸ್ಟಾರ್ ಹೋಟೆಲ ನಿರ್ಮಾಣ ಮಾಡಬೇಕು. ಬಸವ ಜಯಂತಿಯಂದು ರಾಷ್ಟ್ರೀಯ ಬಸವೋತ್ಸವವನ್ನು ಪ್ರತಿ ವರ್ಷ ಸರ್ಕಾರ ಕಡ್ಡಾಯವಾಗಿ ಬಸವನಬಾಗೇವಾಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋಗೆ ಬಸವೇಶ್ವರ ಮೆಟ್ರೋ ಅಂತ ಹೆಸರಿಡಬೇಕು ಸರ್ಕಾರವನ್ನು ಎಂದು ಸರಕಾರಕ್ಕೆ ಅಗ್ರಹಿಸುತ್ತೇವೆ ಎಂದು ಹೇಳಿದರು

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ಸಂಚಾಲಕರಾದ ಶ್ರೀಕಾಂತ್ ಕೊಟ್ರಶೆಟ್ಟಿ ಮನ್ನನ್ ಶಾಬಾದಿ ದಯಾನಂದ್ ಜಾಲಗೇರಿ ಪ್ರಶಾಂತ್ ಮುಂಜಾನೆ ನಿಂಗನಗೌಡ ಸೋಲಾಪುರ್ ಸಂತೋಷ್ ಬಿರಾದಾರ್  ವಿಶ್ವನಾಥ್ ಹಾರಿವಾಳ ಶಿವಪ್ರಸಾದ್ ಮಿಂಚಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು