Saturday, July 25, 2020

ಪಂಚಮಿ

 

ಆಸೆಯ  ಮನದಲಿ 
ಜೀಕುತಾ  ಜೋಕಾಲಿ
ಪಂಚಮಿ ಬಂದಿತು ನಾಗರಠೇವಲಿ 
ಸಡಗರ ಸಂಭ್ರಮತಂದಿತು ಊರಲ್ಲಿ

ನಾಡಿನ ಹಿರಿಮೆಯ ಸಿರಿಗೆ
ಶ್ರಾವಣ ಮಾಸದ ಸೊಗಡಿಗೆ
ಪಂಚಮಿ ನಿಂತಿದೆ ಚೆಲುವಾಗಿ
ಹರುಷದಿತೂಗಿದೆ ಉಯ್ಯಾಲೆಯಾಗಿ

ತಂಗಿಯ ತ್ಯಾಗವ ಹೇಳುತ
ಅಣ್ಣನ ಪ್ರೀತಿಯ ಸಾರುತ
ಸರ್ಪಯಜ್ಞವ ನೆನಪಿಸುತ 
ಹಾಲುಹರಿಯುತ್ತಿದೆ ಸಂಸ್ಕಾರ ತೋರುತ

ಊರಿಗೆ ಬರಲು ಹಾದಿಯಾಗಿ 
ಹೆಣ್ಣಿಗೆ ಆಸೆಯ ತವರಾಗಿ 
ಸಂಸ್ಕೃತಿ ಸಾರಲು ನೆಪವಾಗಿ 
ಪಂಚಮಿ ಬಂದಿದೆ ಬಂಧುವಾಗಿ

ಬಳೆಗಳತೊಟ್ಟು ಸೀರೆಯನ್ನುಟ್ಟು
ಆಡುತ ಹಾಡುತ ಗೆಳತಿಯರೊಟ್ಟು 
ಸಂಭ್ರಮಿಸುವ ಹೆಣ್ಣಿನ ಗುಟ್ಟು
ಪಂಚಮಿಯಾಗಿದೆ ಹಬ್ಬದ ತಿನಿಸುಗಳೊಟ್ಟು

ಅಂಬರೀಷ್ ಎಸ್. ಪೂಜಾರಿ. 

ಪಂಚಮಿ ಹಬ್ಬಕೆ ಕರಿತಾನ ಅಣ್ಣಯ್ಯ


ಅಣ್ಣ ಕರಿಯೋ ನೀ ಬಂದು
ತಂಗಿಯ ತವರಿಗೆ ಬಾ ಎಂದು
ಕಾದು ಕೂತಿಹಳು ನಿನ್ನ ಕೂಗಿಗಾಗಿ
ನಾಗರ ಪಂಚಮಿ ಹಬ್ಬಕ ಬರಲೆಂದು।

ದೇವರ ಪಾಲು 
ದಿಂಡಿರ ಪಾಲು
ಗುರುವಿನ ಪಾಲೆಂದು
ಹಾಲೆರೆಯುವಳು ತಂಗಿ 
ನಾಗರ ಹುತ್ತಕ।

ನಾಗಪ್ಪಗೆ ಕೈ ಮುಗಿದು ಬೇಡುವಳು
ಅಣ್ಣನ ಬಾಳ ಸಿರಿಯು
ಕರಗದಿರಲಿ ಎಂದೆಂದು ಎನ್ನುತ
ಮೊರೆಹೋಗುವಳು ತಂಗಿ ನಾಗದೇವನಲ್ಲಿ।

ತೂಗುಯ್ಯಾಲೆಯಲಿ ಕೂರಿಸಿ
ತೂಗುವನು ಅಣ್ಣಯ್ಯ ತಂಗಿಯನು
ಹರಸುವನು ತಂಗಿ ಬದುಕಿನ ಸುಖವು
ಸಂತಸದ ಹೊನಲಲಿ ಜೀಕುತಿರಲೆಂದು।

ಏಳೇಳು ಜನುಮಕು
ನೀನೆನ್ನ ಒಡಹುಟ್ಟಿದವಳಾಗಿ ಇರು ಎಂದು
ಕೋರಿಕೊಳ್ಳುವನಣ್ಣ ತಂಗಿಯ
ಬಾಯಿಗೆ ಸಿಹಿ ಉಂಡೆಯ ತಿನಿಸಿ।

ಹಬ್ಬದ ಮೇರಗು ನೀನಮ್ಮ
ನೀ ಹುಟ್ಟಿ ಬೆಳೆದ ಮನೆಯು
ನಿನ್ನ ತವರಮ್ಮ
ಸದಾ ಈ ಮನೆಯ ಮನಗಳು 
ನಿನ್ನ ಒಲವಿಗಾಗಿ ಇರುವವಮ್ಮ
ನಿನ್ನ ಬರುವಿಕೆಗಾಗಿ ಸದಾ
ತೆರೆದಿರುವದು ನೋಡು 
ನಿನ್ನ ತವರಿನ ಬಾಗಿಲಿಗಳಮ್ಮ॥

ಮಮತಾ ಗುಮಶೆಟ್ಟಿ
ವಿಜಯಪುರ

Monday, July 20, 2020

ಬಲು ಎಚ್ಚರದಿಂದಿರು ಮನುಜ



ಓ ಮನುಜ
ನೀ ಇರು ಬಲು ಎಚ್ಚರದಿಂದ 
ತುಸು ನೀ ಎಚ್ಚರ ತಪ್ಪಿದರ
ಹೋಗತಿ ನೀ
ಯಾರ ಕೈಗೂ ಸಿಗದಂಗ।

ಮಹಾಮಾರಿ ಕೊರೋನಾ
 ವಕ್ರಸೈತಿ ನೋಡು ಈ ಜಗದ ತುಂಬ
ಹಬ್ಬಿ ನಿಂತೈತಿ ನಮ್ಮನ ಬಿಡದಂಗ
ಬೆನ್ನಿಗಿ ಬಿದ್ದ ಬೇತಾಳದಂಗ।

ನೀ ಸಿಕ್ಕರ ಕೊರೋನಾ ಕೈಗಿ
ಹೇಳದಂಗ ಹೊಗತಿ ನೀ ದೂಳಿಪಟದಂಗ
ದುಷ್ಟ ಕೊರೋನಾ ಕಣ್ಣಿಗೆ ಬಿದ್ದರ
 ಆಗತಿ ನೀ ಅನಾಥ ಶವದಂಗ।

ಎಷ್ಟಿದ್ದರ ಏನು ಬಂಧುಬಳಗ
ಆಗ ಬರುದಿಲ್ಲ  ನೋಡ 
ಯಾರು ನಿನ್ನ ನೋಡಾಕ
ನೀ ಸೇರತಿ ನೋಡ ಮಣ್ಣಾಗ
ಶವಸಂಸ್ಕಾರದ ಯಾವ ಆಚಾರ ವಿಚಾರ ಸಂಪ್ರದಾಯವಿಲ್ಲದಂಗ ।

ಅದಕ ಹೇಳುದು ನೋಡು
ಬರಬ್ಯಾಡ ನೀ ಮನಿ ಬಿಟ್ಟು ಹೋರಗ
ನೀ ಬಂದರ ಹೊರಗ 
ಕಾದು ಕುತದ ಅನಿಷ್ಠ
ಈ ಕೊರೋನಾ ಎಂಬ ಜಡ್ಡ 

ಎಚ್ಚರದಿಂದ ಇರು ನೀನು
ಜರ ತಪ್ಪಿದರ ನೀ ಎಚ್ಚರ
ಹೇಗಲೇರಿ ಕುರುತದ ನೋಡು
ಈ ದರಿದ್ರ  ಕೊರೋನಾ ರೋಗ
ಬಿಡುದಿಲ್ಲ ನೋಡು ನಿನ್ನ 
 ನೀ ವಿನಾಶವಾಗುವತನಕ॥


ಮಮತಾ ಗುಮಶೆಟ್ಟಿ
ವಿಜಯಪುರ

21-07-2020 EE DIVASA KANNADA DAILY NEWS PAPER

Saturday, July 18, 2020

ನಡೆದಾಡುವ ದೇವರು



ಗೊಮ್ಮಟಕ್ಕೂ ಎತ್ತರದ
ತತ್ವಜ್ಞಾನದ ಮೇರುಶಿಖರ. 
ಕೃಷ್ಣೆಗೂ ಮಿಗಿಲಾದ 
ಜ್ಞಾನದ ಸಾಗರ. 

ಸ್ವಚ್ಛ ಬಿಳುಪಿನೊಳಗೆ
ಶಾಂತಮೂರ್ತಿ. 
ಶುಭ್ರ ಹೊಳಪಿನೊಳಗೆ 
ಸಹಜಕೀರ್ತಿ. 

ಅರಸಿ ಬಂದ ಪದ್ಮವ 
ತ್ಯಾಗ ಮಾಡಿದ ತ್ಯಾಗಿ. 
ಹರಸಿಬಂದ ಆಸೆಗಳೆಲ್ಲವ
ದೂರ ಮಾಡಿದ ಯೋಗಿ

ಬಂಧನದ ಭವದೊಳಗೆ
ಮುಕ್ತಿಯ ಓಂಕಾರ.
ಆಡಂಬರದ ಜಗದೊಳಗೆ
ಸರಳತೆಯ ಜೇಂಕಾರ. 

ಹೇಳುತಿರೆ ಮೃದು ಸ್ವರದಿ 
ಅನುಭವ'ದ ಅನುಭಾವ. 
ಹೊಳೆಯುವುದು ಮನದಿ 
ಅನಂತತೆಯ ಅನುಭವ.

ನುಡಿ-ನುಡಿಗೂ  ಹೂವೆಂದ
ಹೂವಂತ ಮನದವರು.
ನಡೆ-ನುಡಿ ಸಮವೆಂದ
ನಡೆದಾಡುವ ದೇವರು.

ಅಂಬರೀಷ ಎಸ್. ಪೂಜಾರಿ. 

Friday, July 17, 2020

18-07-2020 EE DIVASA KANNADA DAILY NEWS PAPER

ಕೋರೋನಾವನ್ನು ತಡೆಗಟ್ಟಲು ವಿದ್ಯಾರ್ಥಿಗಳು ವಾರಿಯರ್ಸ್ ಮಾದರಿಯಲ್ಲಿ ಶ್ರಮಿಸಬೇಕಿದೆ ಕೆ.ಎನ್. ರಮೇಶ


ಈ ದಿವಸ ವಾರ್ತೆ
ವಿಜಯಪುರ: ಜಗತ್ತನೆ ಕಾಡುತ್ತಿರುವ ಕೊರೋನ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು ಇದನ್ನು ತಗ್ಗಿಸಲು ವಿದ್ಯಾರ್ಥಿಗಳು ವಾರಿಯರ್ಸ್ ಮಾದರಿಯಲ್ಲಿ ಶ್ರಮಿಸಬೇಕಿದೆ ಎಂದು ವಿಜಯಪುರ ಜಿಲ್ಲೆಯ ವಿಜಯವಾಣಿ, ಕನ್ನಡ ದಿನಪತ್ರಿಕೆಯ ಸ್ಥಾನಿಕ ಸಂಪಾದಕರು, ರಮೇಶ ಕೆ ಎನ್ ಹೇಳಿದರು.
ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ  ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಿಜಯಪುರ ಮತ್ತು ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ (ದರಬಾರ) ಮಹಾವಿದ್ಯಾಲಯ, ವಿಜಯಪುರ, ಇವರ ಸಹಯೋಗದಲ್ಲಿ ಕೋವಿಡ್ 19 ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಅಂತರ್ಜಾಲ ಸಂವಾದ ಕರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇತನಕ ಸರಿಸುಮಾರಿ ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾಗಿ ಬಲಿಯಾಗಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ದೇಶದಲ್ಲಿ ಸೆಪ್ಟೆಂಬರ್ ವೇಳೆಗೆ 35 ಲಕ್ಷಕ್ಕೂ ಅಧಿಕ ಮತ್ತು ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕರೋನಾ ವೈರಸ್ ನಿಯಂತ್ರಣಕ್ಕೆ ಸರಕಾರಗಳು, ವೈದ್ಯರ ಜೊತೆಗೆ  ಸಮಾಜದ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ. ಇಂದಿನ ಯುವ ಪೀಳಿಗೆ ಅದರಲ್ಲೂ ವಿದ್ಯಾರ್ಥಿಗಳೂ ಈ ನಿಟ್ಟಿನಲ್ಲಿ ಚಿಂತನೆ ಮಾಡುವ ಅವಶ್ಯಕತೆ ಅಧಿಕವಾಗಿದೆ. ಮೊದಲನೆಯದಾಗಿ ಯಾರಿಗೂ ಕರೋನಾ ವೈರಸ್ ಹರಡದಂತೆ ಎಚ್ಚರಕೆ ವಹಿಸುವ ಅವಶ್ಯಕತೆ ಹೆಚ್ಚಿದೆ. ಸ್ವಚ್ಛತೆ, ಮುಖಗವಸು ಬಳಸುವುದು, ಕಣ್ಣು, ಬಾಯಿ, ಮೂಗನ್ನು ಮುಟ್ಟಿಕೊಳ್ಳುವ ಸಂದರ್ಭ ಬಂದಾಗ ಕೈಯನ್ನು ಸೋಪಿನಿಂದ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು.  ಬಿಸಿ ನೀರು ಸೇವನೆ, ಸಮಾಜಿಕ ಅಂತರ ಪಾಲನೆ ಹಲವು ವಿಷಯಗಳ ಬಗ್ಗೆ ಇತರರಿಗೆ ಸಾಧ್ಯವಾದಷ್ಟು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಕುಮಾರಿ ಸುಶ್ಮಾ ನಾಯಕ, ಸಂಶೋಧನಾ ವಿದ್ಯಾರ್ಥಿ, ವಿಜಯಪುರ ಇವರು ಸಹ ಮಾತಾನಾಡಿದರು.
ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯ, ವಿಜಯಪುರದ ಪ್ರಾಚಾರ್ಯರಾದ ಗಿರೀಶ್ ಎಂ ಮಣ್ಣೂರ, ಅಧ್ಯಕ್ಷೀಯ ಭಾಷಣ ಮಾಡಿದರು.
ಉಪನ್ಯಾಸಕರಾದ ಮಂಜುನಾಥ ಜನಗೊಂಡ, ಅರುಣ್ ಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಜಿ ತುಕಾರಾಮಗೌಡ ಪ್ರಾಸ್ತಾವಕವಾಗಿ ಮಾತನಾಡಿದರು.
ಸಿ ಕೆ ಸುರೇಶ್ ಸ್ವಾಗತಿಸಿ ವಂದಿಸಿದರು.

Wednesday, July 15, 2020

16-07-2020 EE DIVASA KANNADA DAILY NEWS PAPER

ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ


ಈ ದಿವಸ ವಾರ್ತೆ
ವಿಜಯಪುರ : ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಅನೇಕ ಸಮಸ್ಯೆಗಳು ಉದ್ಭಣಗೊಳ್ಳುತ್ತಿರುವುದಕ್ಕೆ ಕಾರಣವಾಗುತ್ತಿದೆ. ಈ ಕಾಣದಿಂದಾಗಿ ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ವರಿ ಗೋಲಗೆರಿ ಅವರು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಜನಸಂಖ್ಯಾ ಸ್ಥಿತಿಗತಿ ಹಾಗೂ ಕುಟುಂಬ ಕಲ್ಯಾಣ ಸೇವೆಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಳದ ಪರಿಣಾಮ ನಾವು ಹಾಗೂ ನಮ್ಮ ಮುಂದಿನ ತಲೆಮಾರುಗಳು ಹೆಚ್ಚಿನ ತೊಂದರೆಗಳನ್ನು ಅನುಭವಿಸುವಂತಾಗಿದೆ. ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ಕೊಳಚೆ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪೌಷ್ಠಿಕೆ, ಸಾಂಕ್ರಾಮಿಕ ರೋಗಗಳು ಹೆಚಳಕ್ಕೆ ಕಾರಣವಾಗಿದೆ. ಬಡತನ ಹೆಚ್ಚಳ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಜನಸಂಖ್ಯೆ ಕಾರಣವಾಗಿದೆ ಎಂದು ತಿಳಿಸಿದರು. 
ಜಿಲ್ಲಾ ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅನೇಕ ರೀತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು. ವಿವಾಹಿತರು, ಮಹಿಳೆಯರು, ಯುವಕ/ಯುವತಿಯರಿಗೆ ಜನಸಂಖ್ಯೆ ಹೆಚ್ಚಳದಿಂದಾಗುವ ಪರಿಣಾಮಗಳನ್ನು ತಿಳಿಸಲಾಗುತ್ತಿದೆ. ವಿವಾಹಿತರು ಜನನ ಅಂತರವನ್ನು ಕಾಪಾಡಿ, ಜನನ ಅಂತರವನ್ನು ಕನಿಷ್ಠ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ 4 ವರ್ಷ ಅಂತರವಿರಬೇಕು, ಎರಡು ಮಕ್ಕಳಾದ ಮೇಲೆ ಸ್ವಪ್ರೇರಿತವಾಗಿ ಬರುವ ಪುರುಷರಿಗೆ ಎನ್‍ಎಸ್‍ವಿ(ಪುರುಷರ ಸಂತಾನ ಹರಣ ಚಿಕಿತ್ಸೆ) ಮಾಡಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. 
ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಚಿಕ ್ಕಕುಟುಂಬ ಚೊಕ್ಕ ಕುಟುಂಬ ಎನ್ನುವ ಘೋಷವಾಖ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜಿಲ್ಲೆಯಲ್ಲೂ ವಿವಿಧ ರೀತಿಯಲ್ಲಿ ಗ್ರಾಮಿಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. 
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅನೇಕ ಕುಟುಂಬ ಕಲ್ಯಾಣ ಯೊಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ನವ ವಿವಾಹಿತರು ಈ ವಿಧಾನಗಳನ್ನು ಅಳವಡಿಸುವುದರಿಂದ ಮೊದಲ ಮಗುವನ್ನು 2 ವರ್ಷಗಳ ನಂತರ ಪಡೆಯಬಹುದು. ಮಕ್ಕಳ ಮಧ್ಯೆ ಮೂರರಿಂದ ನಾಲ್ಕು ವರ್ಷಗಳ ಅಂತರವನ್ನು ಕಾಯ್ದುಕೊಳ್ಳಬಹುದು, ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಜೈಬುನಿಸಾ ಬೀಳಗಿ, ಟಿ.ಎಚ್.ಇ.ಓ ಬಾಗವಾನ, ಕುಂಬಾರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tuesday, July 14, 2020

15-07-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ 3 ಕೋವಿಡ್ ಸೋಂಕಿತರ ನಿಧನ : ಶಿಷ್ಟಾಚಾರದಂತೆ ಅಂತ್ಯಕ್ರಿಯೆ


ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ಮೂವ್ವರು ಕೋವಿಡ್-೧೯ ಪಾಸಿಟಿವ್ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ವಿಜಯಪುರ ನಗರದ ಶಾಪೇಟಿ, ಸ್ಟೇಶನ್ ಹಿಂದಿನ ರಸ್ತೆಯ ನಿವಾಸಿಯಾದ ೫೫ ವರ್ಷದ ಪುರುಷ (ರೋಗಿ ಸಂಖ್ಯೆ – ೨೪೭೭೩) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೫-೦೭-೨೦೨೦ ರಂದು ನಿಮೋನಿಯಾ, ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೧-೭-೨೦೨೦ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಿಜಯಪುರ ನಗರದ ಮುರಾಣಕೇರಿ ಕಾಲನಿಯ ನಿವಾಸಿಯಾದ ೫೦ ವರ್ಷದ ಪುರುಷ (ರೋಗಿ ಸಂಖ್ಯೆ – ೩೧೮೮೦) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೧೦-೦೭-೨೦೨೦ ರಂದು ೧೨.೪೨ ಗಂಟೆಗೆ ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ನಾಲ್ಕು ವರ್ಷಗಳಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ೨ ವರ್ಷಗಳಿಂದ ಹೃದಯ ಸಂಬAಧಿ ಕಾಯಿಲೆಗಳಿಂದ ಬಳಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೦-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅದೇ ರೀತಿ ವಿಜಯಪುರ ನಗರದ ಕಾಳಿಕಾ ನಗರ, ಆಶ್ರಮದ ನಿವಾಸಿಯಾದ ೬೮ ವರ್ಷದ ಪುರುಷ (ರೋಗಿ ಸಂಖ್ಯೆ – ೩೫೨೧೬) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೭-೦೭-೨೦೨೦ ರಂದು ಕೆಮ್ಮು, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ಏಳು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೩-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೃತರ ಅಂತ್ಯಕ್ರಿಯೆಯನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಅವರು ತಿಳಿಸಿದ್ದಾರೆ.

Monday, July 13, 2020

ಸೇವೆಯ ಮಾಡುವ ಭಾಗ್ಯವಿದು...



ಎಲ್ಲೆಲ್ಲೂ ಕೊರೊನ ಅವಾಂತರ.... 
ಕಾಪಾಡಲೇ ಬೇಕು ಸಾಮಾಜಿಕ ಅಂತರ.. 

ಕೊರೊನ ಅವಾಂತರದಲಿ  ಬಡವನ ಪಾಡ ಕೇಳೋರು ಯಾರು?? 
ಸೀಲ್ ಡೌನ್ ಲೊಕ್ಡೌನ್ ನಡುವಿನ ಜೀವನದ ಬೇಗೆಯ ಅನುಭವಿಸೋರಾ ಪಾಡ ಗಮನಿಸೋರು ಯಾರು?? 
ತುತ್ತಿನ ಚೀಲವ ತುಂಬಿಸೋ ಕೈಗಳ ಕಟ್ಟಿ ಹಾಕಿ ಅವರದಲ್ಲದ ತಪ್ಪಿಗೆ ಪರಿತಪಿಸೋ ಜೀವಕೆ ಆಧಾರ ಆಗೋರು ಯಾರು?? 
 ಒಂದು ಹೊತ್ತಿನ ತುತ್ತಿಗೆ ದುಡಿಯೋ ಜೀವಕೆ ಮರುಜೀವವ ಕೊಡಲು ಸಂಜೀವಿನಿಯ ಕೊಡೋರು  ಯಾರು?? 

ಸಂಕಷ್ಟ ಕಾಲದಲ್ಲೂ ಅಳಿದವರ ಹೆಸರ ಉಳಿಸಲು ಕಟ್ಟಿಸೋ ಸ್ಮಾರಕಗಳ ಹೆಸರಲಿ ನೋಟುಗಳ ಸುರಿಯುವಿರಿ... 
ಬದುಕಿರುವವರ ಉಸಿರ ಉಳಿಸುವ ಕಾರ್ಯಕ್ಕಾಗಿ ನೋಟುಗಳ ಸುರಿಯಿರಿ... 
ಉಸಿರ ಉಳಿಸಿದರೆ ನಿಮ್ಮ ಹೆಸರು ಅಮರವಾಗೋದು. 

ರಾಜನಂತೆ ಮೆರೆಯೋ ರಾಜಕಾರಣಿಗಳೇ... 
ಬೇಡವಾದನೆ ನಿಮ್ಮ ಮತಭಾಂದವ ನಿಮಗೀಗಾ..
ಅಧಿಕಾರದ ಗದ್ದುಗೆ ಏರಲು ಕಂತೆ ಕಂತೆ ನೋಟುಗಳ ಸುರಿದಿರಲ್ಲ ಅಭಿಮತಗಳಿಗಾಗಿ...

ಜನಪ್ರತಿನಿಧಿ ಎಂಬ ಬಿರುದು ಹೊತ್ತ ನಿಮಗೀಗಾ.. 
ಬಿರುದು ಕೊಟ್ಟೋರಾ ಹಿತ ಕಾಯುವ ಸಮಯವೀಗಾ..
ಸುರಿಯಿರಿ ಕಂತೆ ಕಂತೆ ನೋಟುಗಳ ಇದೀಗಾ.. 
ಬಡವರ ಜೀವವ ಉಳಿಸಿಕೊಡುವ ಪುಣ್ಯದ ಕಾರ್ಯಕ್ಕಾಗಿ 
ತುತ್ತಿನ ಚೀಲವ ತುಂಬಿಸಿ ಕೊಡುವ ಸಲುವಾಗಿ.. 
ಬಡವನ ಆರೋಗ್ಯವ ಕಾಪಾಡುವುದಾಕ್ಕಾಗಿ... 

ಗದ್ದುಗೆ ಏರಿರುವ ನಿಮಗೀಗಾ.. 
ಮತದಾರನ ಸೇವೆಯ ಮಾಡುವ ಭಾಗ್ಯ ದೊರಕಿರುವಾಗ..
ನಿಮ್ಮಯ ನೋಟುಗಳ ಸುರಿಯಿರಿ ಬಡವನ ಜೀವನಕ್ಕಾಗಿ
ಕಂತೆ ಕಂತೆ ನೋಟುಗಳ ಸುರಿಯಿರಿ ಬಡವನ ಆರೋಗ್ಯಕ್ಕಾಗಿ.. 
ಮತದಾನದ ವೇಳೆಯಲಿ ಅಮೂಲ್ಯ ಮತವೆಂದು ಬಣ್ಣಿಸುವ ನೀವುಗಳೇ.. 
ಅಮೂಲ್ಯ ಜೀವಕೆ ಬೆಲೆ ಕೊಡುವುದಾ ನೋಡಿದರೆ ಮುಂದಿನ ಚುನಾವಣೆಯಲಿ ನಿಮ್ಮ ಮತಬೇಟೆಯ ಕಾರ್ಯದ ಚಿಂತೆ ನಿಮಗಿಲ್ಲ.. 

ನಿಮ್ಮ ಮತದಾರರ ಕ್ಷೇತ್ರವ ದತ್ತುಪಡೆಯುವ ಮನಸ ಮಾಡಿ...
ಕೊರೊನ ಮುಕ್ತ ಕ್ಷೇತ್ರಕ್ಕಾಗಿ ನಿಮ್ಮ  ಅಧಿಕಾರವ ಮುಡಿಪಾಗಿಡಿ..
ಜನತಾ ಸೇವೆಯೇ ಜನಾರ್ಧನ ಸೇವೆಯೇ ಎಂಬುದ ತಿಳಿಯಿರಿ..
ಸಂಕಷ್ಟ ಕಾಲದಲಿ ತೋರಿಸಿ ನಿಮ್ಮ ಪೌರುಷವ.. 
ದ್ವೇಷದ ರಾಜಕಾರಣವ ಬಿಟ್ಟು, ಪಕ್ಷಭೇದವ ತೊರೆದು ಜನರಿಗಾಗಿ ಹೋರಾಡಿ
ಜೀವನ ಪರ್ಯಂತ ಹಣವ ಸುರಿಯದೆ ಗದ್ದುಗೆಯಲಿ ಮೆರೆದಾಡುವಿರಿ.. 

ಸಮಿತ ಶೆಟ್ಟಿ 
ಸಿದ್ಧಕಟ್ಟೆ

Friday, July 10, 2020

11-07-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಇಂದು ಮತ್ತೆ ೮೯ ಜನರಿಗೆ ಕೋವಿಡ್ ಪಾಸಿಟಿವ್ ದೃಢ



ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ಮತ್ತೆ ಒಟ್ಟು ೮೯ ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಇದರಲ್ಲಿ ನಾಲ್ವರು ಮಹಾನಗರ ಪಾಲಿಕೆಯ ಮೂವ್ವರು ಪೌರಕಾರ್ಮಿಕರು, ಓರ್ವ ಪೌರಕಾರ್ಮಿಕ ಮೇಲ್ವಿಚಾರಕರು , ಒಬ್ಬರು ಪೊಲೀಸ್ ಹಾಗೂ ನಾಲ್ವರು ಆರೋಗ್ಯ ಆರೈಕೆ ಕಾರ್ಯಕರ್ತರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೭೧೦ ಕೋವಿಡ್ ೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ೪೬೩ ಗುಣಮುಖರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಸದ್ಯ ೨೩೪ ಕೋವಿಡ್ -೧೯ ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ೧೩ ಜನ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು ಸಂತಸದ ವಿಷಯ



ಈ ದಿವಸ ವಾರ್ತೆ
ವಿಜಯಪುರ: ಜಿಲ್ಲೆಯ ಬಹುದಿನದ ಕನಸಾಗಿದ್ದ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಾಮಗಾರಿಗೆ ನೆನ್ನೆ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು ಸಂತಸದ ವಿಷಯವಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಎಸ್ ಬಿರಾದಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಶ್ವವಿಖ್ಯಾತ ಗೋಳಗುಮ್ಮಟ ವಿಶ್ವಗುರು ಅಣ್ಣ ಬಸವಣ್ಣನವರು  ಜನ್ಮಸ್ಥಳ ಆಲಮಟ್ಟಿ ಜಲಾಶಯ ಸೇರಿದಂತೆ ಪಾರಂಪರಿಕ ಸ್ಮಾರಕಗಳನ್ನು ಒಳಗೊಂಡಿರುವ ಹಾಗೂ ದ್ರಾಕ್ಷಿ ಒಣದ್ರಾಕ್ಷಿ ದಾಳಿಂಬೆ ಲಿಂಬೆ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳ ರಫ್ತಿಗೆ ಹೆಸರಾಗಿರುವ ವಿಜಯಪುರ ಜಿಲ್ಲೆಗೆ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಕ್ಕೆ ಸಚಿವ ಸಂಪುಟ ಸಭೆಯಲ್ಲಿ ಚಾಲನೆ ಸಿಕ್ಕಿತು ಬಹಳ ಸಂತೋಷವಾಗಿದೆ ಈ ಮಹಾನ್ ಕಾರ್ಯಕ್ಕೆ ಶ್ರಮಿಸಿದ ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ  ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.

ಅಮೃತ ಯೋಜನೆಯಡಿ ಶೇ 100 ರಷ್ಟು ಕಾಮಗಾರಿ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ



ಈ ದಿವಸ ವಾರ್ತೆ
ವಿಜಯಪುರ : ಕೇಂದ್ರ ಪುರಸ್ಕøತ ಅಮೃತ ಯೋಜನೆಯಡಿ ನಗರದಲ್ಲಿ ಜಾರಿಯಿರುವ ಕುಡಿಯುವ ನೀರು ಸರಬರಾಜು ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೂಳಿಸಲು ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
 
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಅಮೃತ ಯೋಜನೆಯಡಿ ಸಾಧಿಸಿದ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು 177 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಈವರೆಗೆ 6 ವಲಯಗಳಲ್ಲಿ ಮಾತ್ರ ಶೇ100 ರಷ್ಟು ಪ್ರಗತಿ ಸಾಧಿಸಿದ್ದು, ಇನ್ನುಳಿದ ವಲಯಗಳಲ್ಲಿ ಆರ್ಥಿಕ ಗುರಿಗೆ ತಕ್ಕಂತೆ ಭೌತಿಕ ಸಾಧನೆ ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಇನ್ನುಳಿದ 9 ವಲಯಗಳಲ್ಲಿ ಶೇ100 ರಷ್ಟು ಪ್ರಗತಿ ಸಾಧಿಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದರು.

ಈ ಯೋಜನೆಯಡಿ 53,453 ಕುಡಿಯುವ ನೀರು ಸಂಪರ್ಕ ಸ್ಥಳಗಳನ್ನು ಜೋಡಿಸುವ ಗುರಿ ಇದ್ದು, ಆರ್ಥಿಕ ಸಾಧನೆಗೆ ತಕ್ಕಂತೆ ಭೌತಿಕ ಪ್ರಗತಿ ಸಾಧಿಸಿಲ್ಲ. ಅಧಿಕಾರಿಗಳು ಯಾವುದೇ ರೀತಿಯ ಸಬೂಬು ನೀಡದೆ ಮುಂದಿನ ಅಕ್ಟೋಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಿ ನಾಗರಿಕರಿಗೆ ನೆರವಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಅದರಂತೆ ಈ ಯೋಜನೆಯ ಅನುಷ್ಠಾನ ಜವಾಬ್ದಾರಿ ಹೊಂದಿರುವ ಜೈನ್‍ಸಂಸ್ಥೆ ಮಂದಗತಿ ಕಾಮಗಾರಿ ಕುರಿತಂತೆ ಸಂಬಂಧಪಟ್ಟ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ರವಾನಿಸುವುದರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಅದರಂತೆ ಸಂಬಂಧಿಸಿದ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು ಕೂಡಾ ಈ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ನಗರದಲ್ಲಿ ಒಟ್ಟು 15 ವಲಯಗಳ ಪೈಕಿ 6 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಜುಲೈ ಅಂತ್ಯಕ್ಕೆ ಇನ್ನು ಮೂರು ವಲಯಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ಅಂತ್ಯಕ್ಕೆ ಎಲ್ಲ 15 ವಲಯಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಯ
ನಿರ್ವಾಹಕ ಅಭಿಯಂತರ ಪಟ್ಟಣಶೆಟ್ಟಿ ಅವರು ಸಭೆಗೆ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ವಾಟರ್‍ಬೋರ್ಡ್ ಅಧಿಕಾರಿಗಳು ಉಪಸ್ಥಿತರಿದ್ದರು.

Tuesday, July 7, 2020

ಜಿಲ್ಲೆಯಲ್ಲಿ ಕೋವಿಡ್ ಗೆ ಮತ್ತೊಂದು ಬಲಿ



ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ೩೫ ವರ್ಷದ ಕೋವಿಡ್-೧೯ ಪಾಸಿಟಿವ್ ರೋಗಿ(ರೋಗಿ ಸಂಖ್ಯೆ  16985)ಯು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ವಿಜಯಪುರ ನಗರದ ಬಸವ ನಗರ ನಿವಾಸಿಯಾದ ೩೫ ವರ್ಷದ ಈ ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೨೩-೦೬-೨೦೨೦ ರಂದು ಜ್ವರ, ನೆಗಡಿ, ಕೆಮ್ಮು ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೬-೭-೨೦೨೦ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇವರು ತೀವ್ರ ಉಸಿರಾಟ ತೊಂದರೆ, ತೀವ್ರ ರಕ್ತದೊತ್ತಡ ಕಾಯಿಲೆಗಳಿಂದ ಬಳಲುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ  ಇಂದು ಮತ್ತೆ ೨೨ ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ೬೧೬ ಕೋವಿಡ್ ೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ೪೪೨ ಗುಣಮುಖರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಸದ್ಯ ೧೬೩ ಕೋವಿಡ್ -೧೯ ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ೧೧ ಜನ ಮೃತಪಟ್ಟಿದ್ದಾರೆ.ಇಂದಿನ ಮೃತ ವ್ಯಕ್ತಿಯ ಕುರಿತು  ರಾಜ್ಯ  ಬುಲೆಟಿನ್ ದಲ್ಲಿ  ಸೇರ್ಪಡೆಯಾಗಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Saturday, July 4, 2020

ಅನಕ್ಷರಸ್ಥ ಅಭಿಜಾತ ಕಾಮೇಗೌಡ



ಕುರಿಗಳು ಮಾರಿ ಕಟ್ಟೆ ಕಟ್ಟಿಸಿದ
ಕರುನಾಡಿನ ಭಗೀರಥ
ಪ್ರಕೃತಿ ರಕ್ಷಣೆಗೆಂದೆ ಪಣತೊಟ್ಟ
ಕಾಮೇಗೌಡ ಅನಿಕೇತ

ಅಕ್ಷರ ಕಲಿಯದ ಓದು ಬಾರದ
ಅನಕ್ಷರಸ್ಥ ಈ ತಾತಾ
ಮೂಕ ಜೀವಿಗಳ ನರಳಾಟವ
ಅರಿತ ಅಭಿಜಾತ

ಪ್ರಾಣಿ, ಪಕ್ಷಿಗಳ ಉಳಿವಿಗಾಗಿ
ತನ್ನ ಮನದ ಇಂಗಿತ
ಸಮಾಜಕ್ಕೆ ತಿಳಿಸಿ, ಜನರಿಂದ
ಎನಿಸಿಕೊಂಡ ಉನ್ಮತ

ಅವಮಾನ ಸಹಿಸಿ, ಪರಿಸರ
ಸಂರಕ್ಷಣೆಗಾಗಿ ನಿರತ
ಕೂಡಿಟ್ಟ ಹಣದಿ ಕೆರೆ, ಕಟ್ಟೆ 
ನಿರ್ಮಿಸಿದ ಪಂಡಿತ 

ಕಾಮೇಗೌಡರ ನಿಸ್ವಾರ್ಥತೆ 
ಕಾಡು ಇಂದು ಚೈತ್ರರಥ
ಪ್ರಾಣಿ ಸಂಕುಲ ವರ್ಷವೀಡಿ
ಇಲ್ಲಿವೇ ನಲಿಯುತ

ಅಜ್ಜನ ಈ ಅದ್ಭುತ ಕಾರ್ಯಕ್ಕೆ
ಪ್ರಶಂಸೆಗಳ ಅನವರತ
ಇತಿಹಾಸದಲ್ಲಿ ಹಸಿರಾಯಿತು
ಇವರ ಉಸಿರು ಅಮೃತ.

ಮೌಲಾಲಿ ಕೆ ಆಲಗೂರ (ಬೋರಗಿ)
ಸಾ.ಸಿಂದಗಿ ಜಿ.ವಿಜಯಪುರ

ಗುರು ಕೃಪೆ



ಕತ್ತಲೆಯ ಗೆದ್ದು ನಿಲ್ಲುವಂತ
ಸಾಮರ್ಥ್ಯವ ಒದಗಿಸಿದವನಾತ
ಜ್ಞಾನಿಯಾಗಿ ಮುನ್ನಡೆಸುವನು
ಈ ಮನುಜಕುಲಕೆ ಎಂದೆಂದು।

 ಮನುಜ ಬಾಳಿನ ಪ್ರತಿ ಹೆಜ್ಜೆಗೂ ಸ್ಪೂರ್ತಿದಾಯಕನಿತ
ಗೆದ್ದೆಗೆಲ್ಲುವೆ ನೀ ಎಂದು ಹರಸಿದವನಿತ
ಅಚಲ ನಂಭಿಕೆಯನು ತುಂಬಿದಾತ।

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
 ಎಂಬ ಈ ಮಾತು 
ಅರಿತು ನಡೆದವರು ಖ್ಯಾತಿಯಾಗಿ ಮೆರೆದರಣ್ಣ।

ನಿಶ್ಕಲ್ಮಷ ಭಾವದಿ ಭೋಧಿಸುವನಾತ
ಶಿಷ್ಯನ ಮನಕೆ ನಾಟುವಂತೆ
ಬೆಳಕಿನ ಹಾದಿಯ ತೋರುವನಿತ।

ಬಿಳಿಹಾಳೆಯಾಗಿದ್ದ ಮನಕೆ 
ಸುಂದರ ಚಿತ್ರವನು ಬಿಡಿಸಿ
ಉನ್ನತ ವ್ಯಕ್ತಿತ್ವದೆಡೆಗೆ
ಕೊಂಡೊಯ್ಯುವನೇ ಈ ಗುರು।

ಬಾಳಿನ ಸಮಸ್ಯೆಗಳ ಗಂಟನು 
ಬಿಚ್ಚುತ ಭವ್ಯ ಬದುಕಿನ 
ಸುಂದರ ನೋಟವ ಕಾಣುವಂತೆ
ಕೃಪೆಯ ತೋರಿ ಸಲಹುವನಿತ।

ನಾ ಪಡೆದ ಜ್ಞಾನವು
ಗುರು ಕೊಟ್ಟ ಭಿಕ್ಷೆಯು
ನಂಬಿ ನಡೆವೆ ನಾ 
ಸದಾ ಗುರುವು ತೋರಿದ ಹಾದಿಯನಿಡಿದು।

ಕೈ ಬಿಡದೆ ಕಾಪಾಡುತ
ಶಿಷ್ಯನ ಏಳ್ಗೆಯ ನೋಡುತ
ಸಂತಸ ಪಡುವನೆ ನನ್ನ ಗುರು
ಈ ಉಸಿರು ನಿಲ್ಲುವ ತನಕ ಬಿಡೆನು ಗುರುವಿನಾ ಸ್ಮರಣೆಯು।

ನಮ್ಮ ಬಾಳ ಜ್ಯೋತಿ ಬೆಳಗಿದಾ ಗುರುವಿಗೆ 
ವಂದಿಸುವೆ ನಾ
ಶಿರಸಾಸ್ಟಾಂಗದಿ
ಗುರುಪೌರ್ಣಿಮೆಯ ದಿನದಂದು॥

ಮಮತಾ ಗುಮಶೆಟ್ಟಿ
*ವಿಜಯಪುರ

‌ಅಪ್ಪನ ಅಂಗಿ ಮತ್ತು ನಾನು



‌ಅಪ್ಪ  ಬೆಳಗಾದರೆ ಎದ್ದು ಸ್ನಾನ ಮುಗಿಸಿ ಹಣಿಗೆ ಮೂರು ಬೆರಳು ವಿಭೂತಿ ಬಳಿದು ಶಾಂತ ಚಿತ್ತನಾಗಿ ಧ್ಯಾನ ಮಾಡಿ ಎದ್ದು, ಚಹಾ ಕುಡಿದು ಸ್ವಲ್ಪ ಹೊತ್ತು ವಿಶ್ರಮಿಸಿ. ಆಸ್ಪತ್ರೆ ಕಡೆ ದಾಪು ಗಾಲು ಹಾಕಿ ಓಡುತ್ತಿದ್ದ. ಅವ್ವ ಅಪ್ಪನ ಹಿಂದೆ ಮುಂದೆ ಸುತ್ತೊದು, ಹೊರಟರೆಂದರೆ 'ಬೇಗ ಬಾ 'ಎಂದು ಹೇಳುವುದು. ಸಾಯಂಕಾಲವಾದರೆ ಅವ್ವನಿಗೆ ವಾಚಮನ ಡ್ಯೂಟಿ . ಐದುವರೆ ಆದರೆ ಸಾಕು ಗೇಟ ಹತ್ತಿರ ಹಾಜರಿ ಹಾಕಲು ಬಂದು ನಿಲ್ಲುತ್ತಿದ್ದಳು. ಸಾಯಂಕಾಲದ ಹೊತ್ತಲ್ಲಿ ಅಪ್ಪನ ಕೈಯಲ್ಲಿ ಲಕ್ಕುಂಡಿಯ ದುಂಡುಮಲ್ಲಿಗೆ ,  ಗದಗಿನ ತೊಂಟದಾರ್ಯ ಮಠದ ಮುಂದಿನ ತರಾವರಿ ಬಜಿ , ಹಾಗೆ ಬೆಳಗ್ಗಿನಿಂದ ಸಾಯಂಕಾಲ ಊಟ, ಟಿಫನ  ಚಹಾ ಏನೇ  ತಿಂದ ನಂತರ ಮೆಲುಕು ಹಾಕಲು ಎಲೆ ಅಡಿಕೆ, ಒಂದಿಷ್ಟು ಹೊಗೆಸೂಪ್ಪು , ಒಂದು ಚೀಲ ಹಿಡಿದುಕೊಂಡು ಅಪ್ಪಾ ಬರುವದನ್ನು ಕಂಡ ಅವ್ವನ ಕಣ್ಣುಗಳು ಮೊಗ್ಗು ಅರಳಿದಂತೆ ಅರಳುತ್ತಿತ್ತು. ಅದನ್ನು ನೊಡಿನ ನಾನು ಕೂಡಾ ಎದ್ದು ಓಡಿ ಹೋಗಿ ಅಪ್ಪನ ಎದುರುಗೊಂಡು , ಕೈಯಲ್ಲಿಯ ಚೀಲವನ್ನು ತಂದು ಅವ್ವನ ಕೈಗಿರಿಸಿ ಮತ್ತೇ ಅಪ್ಪನ ಹತ್ತಿರ ಓಡುತ್ತಿದ್ದೆ. ಎಷ್ಟೆ ದಣಿವಾದರೂ ಒಂದು ದಿನವೂ ತೊರಗಡದ ಸದಾ ಹಸನ್ಮುಖಿಯಾಗಿರುತ್ತಿದ್ದ. ಮುಖ ತೊಳೆದು ಚಹಾ ಕುಡಿದು ಆರಾಮ ಚೇರ ಮೇಲೆ ಅಪ್ಪ ಕುಳಿತು ಕೊಳ್ಳುವದನ್ನೇ ಕಾಯುತ್ತಿದ್ದ ನಾನು ಓಡಿಹೊಗಿ ಅವನನ್ನು  ಬಾಚಿ ತಬ್ಬಿ ಅವನ ಎದೆಗೆ ತಲೆಕೊಟ್ಡು ಅಪ್ಪನ ಮೇಲೆ ಮಲಗಿ ಮಾತು ಪ್ರಾರಂಭಿಸುತ್ತಿದ್ದೆ. ನಗುತ್ತಲೇ ಅಪ್ಪ ಎಲ್ಲ ಮಾತು ಕೇಳುತ್ತ ಹುಂ ಗುಡುತ್ತಿದ್ದ.ನಿಧಾನಕ್ಕೆ ಎದ್ದು ಅಪ್ಪ ಹಾಕಿಕೊಂಡು ಬಿಚ್ಚಿಟ್ಟ ಶಟ್೯ ಮತ್ತು ಪ್ಯಾಂಟ ಹಾಕಿಕೊಂಡು ಬಂದು ಅವನ ಎದುರಿಗೆ ನಿಂತು 'ಹೇಗಿದೆ ನೊಡು' ಎಂದು ಕೇಳುತ್ತಿದ್ದೆ.ಅಪ್ಪನಿಗೊ ಎಲ್ಲಿಲ್ಲದ ಸಂಭ್ರಮ .ಎಷ್ಟ ದೊಡ್ಡವಳು ಆಗಿ ಬಿಟ್ಟಳು ನಮ್ಮ ಅವ್ವಿ ಎಂದು , ಹಾಕಿಕೊಂಡ ಬಟ್ಟೆಯನ್ನು ನಿಟಾಗಿ ತಿಡಿ ತಮ್ಮ ಪ್ಯಾಂಟಿನ ಬೆಲ್ಟನ್ನು  ತಗೆದು ನನ್ನ ಸೊಂಟಕ್ಕೆ ಜೊರಾಗಿ ಬಿಗಿದು, ಈಗ ಪ್ಯಾಂಟ ಬಿಚ್ಚಲ್ಲ ಹೊಗು ಆಟ ಆಡು ಎಂದು ಹೇಳಿ ಕಳಿಸುತ್ತಿದ್ದ. ಖುಷಿಯಿಂದ ಜಿಗಿಯುತ್ತಲೇ ಹೊರ ಓಡುತ್ತಿದ್ದೆ. ಒಂದು ದಿನ ಹೀಗೆ ಅಪ್ಪ ಬರುವ ಹೊತ್ತಲ್ಲಿ ಮುಖ ಊದಿಸಿಕೊಂಡು ಹೊಸ್ತಲ ಮೆಲೆ ಕುಳಿತು ಬಿಟ್ಟಿದ್ದೆ " ಯಾಕೊ ಹಿಂಗ ಕುಂತಿ, ಎ ಏನಾಯಿತು ಅವ್ವಿ ಯಾಕ ಹಿಂಗ ಕುಂತಾಳ ಎಂದು ಕೇಳುತ್ತಲೇ, ಓಡಿ ಹೊಗಿ 'ಕೈ ಎಲ್ಲಾ ನೋವು ಬಾಬಾ. ನನಗೆ ಇವತ್ತು ಕಸ ಗುಡಿಸಲು ಅವ್ವ ಹೇಳದ್ದಳು ಎನ್ನುತ್ತಲೆ ಕೈ ತೊರಿಸುತ್ತ ಅಳತೊಡಗಿದೆ. ಅಯ್ಯೊ ಇದೆನು ಯಾವತ್ತು ಇಲ್ಲದೆ ಇವತ್ತೊಂದು ದಿನ ಕಸ ಗುಡಿಸಿದ್ದಕ್ಕೆ ಅಳೊದಾ ,ಕೈ ನೊಯತಾ ಎಂದು ಪಕ್ಕದ ಮನೆಯ ಆಂಟಿ ಕಿಟಲೆ ಶುರು ಹಚ್ಚಗೊಂಡರು. ಅಪ್ಪನಿಗೆ ತುಂಬಾ ಕೊಪ ಬಂದಿತ್ತು . ಅವ್ವನಿಗೆ " ಕರೆದು ನಿನಗೆ ಆದರೆ ಕೆಲಸ ಮಾಡು ಇಲ್ಲ ಅಂದ್ರೆ ಬಿಡು , ಅವಳಿಗೆ ಹೇಳಬೇಡಾ ಎಂದು ಗದರಿದರು, ಅವ್ವ ಮಾತನಾಡದೆ ನಗುತ್ತಲೇ " ಅಪ್ಪಾ ಮಗಳು ಚಲೊ" ಇದಿರಿ ಎಂದು ಹೊರನಡೆದಳು. ಮುಗಿತು ನೊಡಿ ಅಲ್ಲಿಗೆ ಮೊದಲ ದಿನದ ಕೆಲದ ಕೊನೆ ದಿನವಾಯಿತು. ಅಪ್ಪ ಸುಮ್ಮೆನೆ ಕುಳಿತ ಎಂದರೆ ಸಾಕು ಅವನೊಟ್ಟಿಗೆ ಮನೆಯ ಎಲ್ಲರೂ ಸೇರಿ ಆಟವಾಡುತ್ತಿದ್ದೆವು. ಆಗ ನನಗೆ ಕ್ರಿಕೇಟಿನ ಹುಚ್ಚು ಅಪ್ಪನಿಗೊ ನ್ಯೂಜ ನೊಡುವ ಕಾತರ, ಹಾಗೂ ಹೀಗೂ ಒಬ್ಬರಿಂದ ಒಬ್ಬರನ್ನು ಕ್ರಿಕೇಟ ಆಟಗಾರರನ್ನು ತೊರಿಸುತ್ತ ಕ್ರಿಕೇಟಿನ ಹುಚ್ಚು ಹಿಡಿಸಿಯೇ ಬಿಟ್ಟೆ .ನಾ ನೊಡದಿದ್ದರು ಅಪ್ಪ ನನ್ನನ್ನು ಕರೆದು ತಾವು ಕುಳಿತು ನೋಡುತ್ತಿದ್ದರು. ಈಗಲೂ ಮರೆಯಲು ಸಾಧ್ಯವಾಗದ ದಿನಗಳವು. ಎಷ್ಟು ಸಲುಗೆ ಇತ್ತೊ ಅಷ್ಟೇ ಕೋಪ ಕೂಡಾ ಇತ್ತು. ಒಂದು ದಿನ ಶಾಲೆಗೆ ಬಂಕ ಮಾಡಿ ಸಿನಿಮಾ ನೋಡಲು ಹೋಗಿದ್ದೆ, ಬರುವಷ್ಟರಲ್ಲಿ ವೇದಿಕೆ ಸಿದ್ದವಾಗಿತ್ತು, ಕಿಟಕಿಯಲ್ಲಿ ಇಣುಕುತ್ತಲೇ ನೋಡಿದೆ, ಅವ್ವ ಹಣಿಗೆ ಕೈ ಹಚ್ಚಿ ಕುಂತಿದ್ದಳು, ಅಪ್ಪ ಚೇರ ಮೇಲೆ ಕುಳಿತು ವಜ್ರಮುನಿಯ ಹಾಗೆ ಬುಸುಗುಟ್ಟುತ್ತಿದ್ದ ನೊಡಿದ ಕೂಡಲೇ ಕಾಲು ಕಿತ್ತೆ, ಅದನ್ನು ನೊಡಿದ ಅಪ್ಪ 'ಬಾ ಒಳಗೆ ಓಡ ಬೇಡಾ' ಎಂದು ಗದರಿದರು . ಹುಂ ಎಂದು ಅಳುತ್ತಲೇ ಒಳನಡೆದೆ, " ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ ಅಪ್ಪ, ನಿಧಾನಕ್ಕೆ ಬಿಕ್ಕಳಿಸುತ್ತ, ಸೀ...ನಿಮಾ ಕ್ಕ ಎಂದು ಹೇಳಿದೆ, ಸೀನಿಮಾಕ್ಕ ಹೇಳದ ಹೊಗಿದ್ದಿ, ಅಂದಾ ಗದರುತ್ತಲೇ ಕೆಂಪು ಕಣ್ಣುಗಳು ನನ್ನನ್ನೆ ತಿನ್ನುವ ಹಾಗೆ ಇತ್ತು . ನನ್ನ ಅಳು ಇನ್ನೂ ಜೊರಾಯಿತು. ಕೈಯಲ್ಲಿದ್ದ ಒಡಗಟೆಗೆ ಇಂದ ಎರಡು ದೊಡ್ಡ ಎಟು ಬಿತ್ತು ".ಸತ್ತನೊ ,ಇನ್ನೊಮ್ಮೆ ಹಿಂಗ ಹೇಳದ ಹೊಗಂಗಿಲ್ಲ ಬಾಬಾ "ಎಂದು ಮತ್ತೊಂದು ಕೊಣಿಯಿಂದ ಓಡಿ ಹೊದೆ. ಅಪ್ಪ ಓಣಿಯಲ್ಲಾ ತಿರುಗಾಡಿ ಬಂದರು ನಾನು ಸಿಗಲೇ ಇಲ್ಲ . ಮರುದಿನ ಬೆಳಿಗ್ಗೆ 'ಅವ್ವಿ ಬಾ ಇಲ್ಲಿ ಎಂದು ಕರೆದರು ಮೆತ್ತಗೆ ಮುಖ ಕುವುಚುತ್ತಲೇ ಹೊದೆ , ಅಪ್ಪ ನನ್ನನ್ನು ತಬ್ಬಿ ಅಳ ತೊಡಗಿದ ಅಪ್ಪನೊಟ್ಟಿಗೆ ನಾನು ಮತ್ತು ಅವ್ವ ಅಳತೊಡಗಿದೆವು. ಬೆಳೆದು ಅಷ್ಟು ದೊಡ್ಡವಳಾದರು ಅಪ್ಪ ಅವ್ಬ ಒಂದು ದಿನವಾದರೂ ಹೊಡೆದದ್ದು ಗೊತ್ತೇ ಇಲ್ಲ . ಅವತ್ತು ಹೊಡೆದದ್ದಕ್ಕೆ ಅಪ್ಪನಿಗೆ ಅದು ಎಲ್ಲಿತ್ತೊ "ಅಳು" ಹೇಳದೆ ಕೇಳದೆ ಆಚೆ ಬಂದಿತ್ತು. ಅಪ್ಪನ್ನು ಅಳಿಸಿದ್ದಕ್ಕೆ ನಾನು ಅತ್ತಿದ್ದೆ. ನಮ್ಮಿಬ್ನರನ್ನು ನೊಡಿ ಅವ್ವ ಅತ್ತಿತ್ತು.  ಸಮಾಧಾನಿಸುತ್ತಲೆ ತಿಳಿ ಹೇಳಿ 'ಹೊಗುವಾಗ ಹೇಳಿ ಹೊಗು' ಎಂದು ಹೇಳಿ, ಶಾಲೆಗೆ ಚಕ್ಕರ ಹಾಕಿದರೆ ಮುಂದೆ ಇದೆ ತರಹ ಶಿಕ್ಷೆಯೆಂದು ಹೇಳಿ ನಗ ತೊಡಗಿದ ಅಪ್ಪ. ಆವತ್ತಿನಿಂದ ಶಾಲೆಗೆ ಚಕ್ಕರ ಹೊಡೆದದ್ದೆ ಇಲ್ಲ. ಅಪ್ಪ ಶಿಸ್ತನ್ನು ಕಲಿಸಿದ ನನ್ನ ಮೊದಲ ಗುರುವಾದ . ದಿನ ಬೆಳಗಾದರೆ ಅಪ್ಪ ಒಂದು ಪೇಜ ನಾನು ಒಂದು ಪೇಜ ಪೇಪರ ಓದುತ್ತಿದ್ದೇವು. ತಮ್ಮನಿಗೆ ಬೈಗುಳ ತಪ್ಪುತ್ತಿರಲಿಲ್ಲ. ಮನೆಯಲ್ಲಿ ಬಿದ್ದ ಪೇಪರ ಮೇಲೆ ಎಂದಾದರೂ ನಿನ್ನ ಕಣ್ಣು ಹೊಗಿದೆಯೆ ಎಂದು ಓದುವಂತೆ ಬೈಯ್ಯುತ್ತಿದ್ದ. ತಮ್ಮ ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಅಪ್ಪನ ಅಂಗಿಯ ವಾಸನೆ ಇನ್ನು ಮನದಲ್ಲಿ ಹಸಿ ಹಸಿಯಾಗಿದೆ. ನೆನಪಾದಾಗ ಅವನ ಕೊಟಿನ, ಅಂಗಿಯ ತೊಳನು ಏರಿಸಿದಾಗ ಅದೇ ಖುಷಿ ಇಮ್ಮಡಿಯಾಗುತ್ತೆ ಅಪ್ಪನ ಮುಗುಳು ನಗೆ ಕಣ್ಣಮುಂದೆ ಬಂದು ಹೊಗುತ್ತೆ. ಇವತ್ತು ಅಪ್ಪ ನನ್ನೊಂದಿಗಿಲ್ಲ ನಾನು ಮಾಡುವ ಪ್ರತಿ ಕೆಲಸದಲ್ಲಿ ಅವನ ಶಿಸ್ತು , ಸಂಯಮ ನನ್ನನ್ನು ಸದಾ ಎಚ್ಚರಿಸುತ್ತಲೇ ಇರುತ್ತೆ.ಮಿಸ್ ಯು ಅಪ್ಪಾ 
‌ಡಾ.ಸುಜಾತಾ.ಸಿ

05-07-2020 EE DIVASA KANNADA DAILY NEWS PAPER

Wednesday, July 1, 2020

ಭಾವ ಮಿಲನ


ಸೂರ್ಯಂಗೂ ನನಗೂ 
ಅದುಏನೇನೋ ನಂಟು 
ನಾಮಲಗಿದ್ದರೊಳ ಬಂದು
ನನ್ನ ಎಬ್ಬಿಸುವುದುಂಟು

ಕಿಟಕಿ ಬಾಗಿಲುಗಳೊಳಗವ
ಇಣುಕೀ ಬರುವುದು
ಉಂಟೂ.
ಬಂದರ  ಹೋಗದೆ ನನ್ನ ಜೊತೆಗೇ
ದಿನವೂಇರುವುದೂ  ಉಂಟೂ..

ನನ್ನಮೈಗವನಕಿರಣದೊಳು ಬಂದು
ಅಪ್ಪಿಮುದ್ದಾಡುವುದುಂಟು
ಅವನಬಿಸಿಯುಸಿರಿಗೆ ನಾ ಸೋತೂ
ಕರಗೀ ಹೋಗುವುದುಂಟು

ಅವನ  ಜೊತೆ ಸೇರಲು ನಾನಿಲ್ಲೀ
ನನ್ನೇ ನಾಕಳೆಯುವುದುಂಟು
ನನ್ನೊಳಗೇ ನಾಬೆವೆತು ನಿಂತಲ್ಲೇ ನಿಲ್ಲಲಾರದೇ
ನಾನಾಗವನಾಗುವುದುಂಟು

ರಚನೆ: ಶಾಂತಾ ಕುಂಟಿನಿ ಶಕುಂತಲಾ

02-07-2020 EE DIVASA KANNADA DAILY NEWS PAPER

ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ.. ದುಡಿಯುವ ವೀರರೆ ನಿಮಗೊಂದು ಸಲಾಮು...

ಎಲ್ಲೆಲ್ಲೋ ಚದುರಿರುವ ಮಾಹಿತಿಗಳ  ಹೆಕ್ಕಿ.. 
ತಿದ್ದಿ ತೀಡಿ ಸುದ್ಧಿಯನ್ನಾಗಿಸಿ ನಮ್ಮೆದುರಲಿ ಬಿತ್ತರಿಸಿ.. 
ನಮ್ಮೂರ ಪರವೂರ ಸುದ್ಧಿಯ ಜೊತೆಯಲಿ... 
ಮನರಂಜನೆಗೊಂದು, ಜ್ಞಾನದ ಹಸಿವಿಗೊಂದು ಅಂಕಣ.. 
ನೊಂದವರ ಕಣ್ಣೊರೆಸುವ ಕಾಯಕವಾ ಮಾಡುತ...
ತಪ್ಪು ಮಾಡಿದವರ ತಪ್ಪ ಅರ್ಥ ಮಾಡಿಸುತ್ತಾ... 
ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಹೋರಾಡುತ್ತಾ.. 

ಸುದ್ಧಿಯ ಬಿತ್ತರಿಸಲು ಮುನ್ನುಗ್ಗುವರು  ಅಡೆತಡೆಯ ತೊಡೆದು ಧೀರತನದಲಿ.. 
ಮಳೆಯಿರಲಿ, ಚಂಡಮಾರುತ ಬರಲಿ, ಸುನಾಮಿ ಆರ್ಭಟಿಸಲಿ..
ಯುದ್ಧವೇ ಇರಲಿ, ಕರ್ಪ್ಯೂ ಹೇರಲಿ,  ಸಾಂಕ್ರಾಮಿಕ ರೋಗಗಳ ಹರಡುವಿಕೆ ಇರಲಿ.. 
ಸುದ್ದಿಯ ಸಂಗ್ರಹ ಸಾಗುವುದು ನಿರಂತರವೂ, ವಾರದ ರಜೆಯಲ್ಲೂ  ಕಾಯಕವೇ ಕೈಲಾಸ ಎನ್ನುತ್ತಾ...
ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ.. 
ದುಡಿಯುವ ವೀರರೆ ನಿಮಗೊಂದು ಸಲಾಮು...

ಸಮಿತ ಶೆಟ್ಟಿ 
ಸಿದ್ಧಕಟ್ಟೆ