Sunday, May 28, 2023

ಮೇ 9 ಸಮ್ಮೇಳನದಲ್ಲಿ 8 ನಿರ್ಣಯಗಳು

 

ಈ ದಿವಸ ವಾರ್ತೆ
ವಿಜಯಪುರ: ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಸಂಘಟಕ ಹಾಗೂ ಹಿರಿಯ ಚಿಂತಕರಾದ ಬಸವರಾಜು ಸೂಳಿಬಾವಿ ಅವರು ಮೇ 9 ಸಮ್ಮೇಳನದಲ್ಲಿ 8 ನಿರ್ಣಯಗಳನ್ನು ಕೈಗೊಂಡರು. ಅವುಗಳೆಂದರೆ...
1. ವಿಜಯಪುರ ಜಿಲ್ಲೆ ಪಂಚನದಿಗಳ ಬೀಡು, ಉತ್ಕೃಷ್ಟ ಮಣ್ಣಿನ ಗುಣಧರ್ಮ ಹೊಂದಿದ, ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದ ನಾಡು. ಇಂತಹ ಜಿಲ್ಲೆಯಲ್ಲಿ ಒಟ್ಟ ಫಾರ್ಮ ಎಂದೇ ಖ್ಯಾತಿಯಿಂದ 1933 ರಲ್ಲಿಯೇ ಸ್ಥಾಪನೆಯಾದ ಕೃಷಿ ಸಂಶೋಧನಾ ಸಂಶೋಧನೆಯಿAದ ಇಂದು ಅನೇಕ ಕೃಷಿ ಸಂಬAಧಿತ ಸಂಸ್ಥೆಗಳೊAದಿಗೆ ಬೆಳೆದು ಹೆಮ್ಮರವಾಗಿ ನಿಂತಿದೆ. ಈ ಭಾಗದ ರೈತರಿಗೆ ಕೃಷಿ ಸಂಶೋಧನೆ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ವಿಜಯಪುರದಲ್ಲಿ ಕೃಷಿ ಸ್ವಾತಂತ್ರ‍್ಯ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಮತ್ತು ಜಿಲ್ಲೆಯಲ್ಲಿ ಈಗಾಗಲೇ ಹಿಟ್ನಳ್ಳಿಯಲ್ಲಿ ಆರಂಭಿಸಲಾದ ಬಿ.ಟೆಕ್ (ಕೃಷಿ) 'ಮಹಾವಿದ್ಯಾಲಯ ಮತ್ತು ಆಲಮೇಲದಲ್ಲಿ ಮಂಜೂರಾದ ತೋಟಗಾರಿಕೆ ಮಹಾವಿದ್ಯಾಲಯಗಳು ಜಿಲ್ಲೆಯಲ್ಲಿ ಮಾನರಾರಂಭಿಸಬೇಕು.
 2. ಜಿಲ್ಲೆಯಲ್ಲಿ ರೈತರು ವಿವಿಧ ಕೃಷಿ, ತೋಟಗಾರಿಕೆ ವೈವಿದ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಕೃಷಿಯಲ್ಲಿ ನಷ್ಟವನ್ನನುಭವಿಸಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅದಕ್ಕಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನ್ಯಾಯಯುತ ಟೆಂಬಲ ಬೆಲೆ ಘೋಷಿಸಬೇಕು. ಸರಕಾರದಿಂದ ಕೊಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಿ.
3. ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮಂಜೂರಾಗಿರುವ ವಿವಿಧ ಏತನೀರಾವರಿಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸುವದು ಹಾಗೂ ಭೀಮಾ ನದಿಯ ನೀರಿನ ಸಂಪೂರ್ಣ ಸದ್ಬಳಕೆ ಜಿಲ್ಲೆಯ ರೈತರಿಗಾಗಬೇಕು. ಅದೇ ರೀತಿ ಜಿಲ್ಲೆಯ ಜೀವನಾಡಿ ಡೋಣಿ ನದಿ ಹೊಳೆ ಅದರ ಸಂಪೂರ್ಣ ಸದ್ಬಳಕೆ ನದಿ ಪಾತ್ರದಲ್ಲಿರುವ ಜಿಲ್ಲೆಯ ರೈತರಿಗಾಗಬೇಕು.
4, ಜಿಲ್ಲೆಯಿಂದ ಅನೇಕ ಜನ ತಮ್ಮ ಜೀವನೋಪಾಯಕ್ಕಾಗಿ ಪಕ್ಕದ ಮಹಾರಾಷ್ಟ್ರ, ಗೋವಾ, ಆಂದ್ರ ಪ್ರದೇಶಗಳಿಗೆ ಪ್ರತಿ ವರ್ಷ ಗುಳೇ ಹೊಗುತ್ತಿದ್ದು, ಇದನ್ನು ತಪ್ಪಿಸಲು ಅವರ ಜೀವನೋಪಾಯಕ್ಕೆ ನಿರಂತರ ಉದ್ಯೋಗ ಕಲ್ಪಿಸುವಂತಾಗಬೇಕು. ಅದೇ ರೀತಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. 
5. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭೂರಹಿತ ದೀನದಲಿತರು ಬಡ ಕೃಷಿ ಕಾರ್ಮಿಕರು ಇದ್ದು ದುಡಿಯುವ ವರ್ಗಕ್ಕೆ ಕನಿಷ್ಟ 2 ಎಕರೆ ಪ್ರತಿ ಕುಟುಂಬಕ್ಕೆ ಜಮೀನು ಹಂಚಿಕೆ ಮಾಡಬೇಕು.
6. ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು ಮತ್ತು ಒಂದು ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಹಾಗೂ ಕನಿಷ್ಟ ಎರಡು ಜನಸ0ಖ್ಯೆಗಳಿಗುವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಬೇಕು.
7. ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಬಹಳದೊಡ್ಡ ಸಂಖ್ಯೆಯಲ್ಲಿ ವಸತಿ ನ ಕಾರ್ಮಿಕರಿದ್ದು ಇವರೆಲ್ಲರಿಗೂ ನಿವೇಶನ ಹಂಚುವ ಹಾಗೂ ಮನೆ ಕಟ್ಟಿಸಿಕೊಡುವ ಕೆಲಸವಾಗಬೇಕು.
8.5 ಕೆ.ಜಿ. ಗೋಧಿ 5 ಕೆಜಿ .ಜೋಳ ಕೊಡುವ ಕೆಲಸವಾಗಬೇಕು.

ಸರಕಾರ ಜನರಿಗೆ ಜಿಎಸ್‌ಟಿ ಹೆಸರಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆ ಮಾಡುತ್ತಿದೆ: ನೀರಜ್ ಜೈನ್




ವಿಜಯಪುರ: ಶ್ರೀಮಂತರಿಗೆ ಸಬ್ಸಿಡಿ ನೀಡುವ ಮೂಲಕ 30 ಲಕ್ಷ ಕೋಟಿ ಸರಕಾರಕ್ಕೆ ಹೊರೆಮಾಡಿದ್ದಾರೆ. ಲಕ್ಷ ಕೋಟಿ ಬೆಲೆಯ ಏರ್ ಇಂಡಿಯಾ ವನ್ನು ಸರಕಾರ ಕಡಿಮೆ ಅಂದರೆ 2700 ಕೋಟಿ ಬೆಲೆಗೆ ಮಾರುವ ಮೂಲಕ ಜನರಿಗೆ ಪಂಗನಾಮ ಹಾಕಿದೆ. ಸರಕಾರ ಜನರಿಗೆ ಜಿಎಸ್‌ಟಿ ಹೆಸರಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆ ಮಾಡುತ್ತಿದೆ. ರೈತರಗೆ ಸಿಗಬೇಕಾದ ಸವಲತ್ತು ಸಿಗದೆ ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪುಣೆಯ ಹಿರಿಯ ಪ್ರಗತಿಪರ ವಿಚಾರವಾದಿ ನೀರಜ್ ಜೈನ್ ಅವರು ಹೇಳಿದರು.
ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಮಾತುಗಳನ್ನು ಆಡಿದರು.
ದೇಶದಲ್ಲಿ ಇಂತಹ ಅನಾಹುತಗಳಿಗೆ ಕಾರಣವಾದ ಬಿಜೆಪಿ ಒಮ್ಮೆ ಕರ್ನಾಟಕದಲ್ಲಿ ಸೋತರೆ ಸಾಲದು ಅದರ ಬುಡವನ್ನು ಕಿತ್ತು ಹಾಕಬೇಕು ಗಾಂಧಿ ಸ್ವಾತಂತ್ರ‍್ಯ ಚಳುವಳಿಯನ್ನು ಜನ ಅಂದೋಲನವಾಗಿ ಮಾಡಿದರು ಉಪ್ಪಿನ ಸತ್ಯಾಗ್ರಹ ಮೂಲಕ ಜನ ಬ್ರಿಟಿಷರ ವಿರುದ್ಧ ಪ್ರತಿಭಟಿಸುವಂತೆ ಮಾಡಿದರು ಇದಕ್ಕೆ ಬ್ರಿಟಿಷ್ ಪತ್ರಕರ್ತ ಭಾರತೀಯರಿಗೆ ಸ್ವಾಭಿಮಾನ ಬಂದಿದೆ ಎಂದು ಬರೆದದನ್ನು ನಾವು ಗಾಂಧಿಯ ಚಳುವಳಿಯ ಸಂಘಟನಾತ್ಮಕ ಶಕ್ತಿ ಏನು ಎಂದು ತಿಳಿದುಕೊಳ್ಳಬಹುದು. ಗಾಂಧಿ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛ ಮಾಡುತ್ತಿದ್ದರು ತಮ್ಮ ಆಶ್ರಮದಲ್ಲಿ ಎಲ್ಲ ವರ್ಗದ ಜನರಿಗೆ ಇರಲು ಅವಕಾಶ ಮಾಡಿ ಕೊಟ್ಟಿದ್ದರು. ಗಾಂಧಿ ರಾಮನನ್ನು ಸ್ಮರಿಸುತ್ತಿದ್ದರು ಆ ರಾಮ ಅಯೋಧ್ಯೆ ರಾಜಾ ರಾಮನಲ್ಲ ಗಾಂಧೀಜಿ ರಾಮ ರಾಮ ಚರಿತ ಮನಸದ ರಾಮನಾಗಿದ್ದಾನೆ. ಇದು ಗಾಂಧಿ ದೇಶ ಆಗಿದ್ದರಿಂದ ಎಲ್ಲ ರಾಜ್ಯಗಳು ಐಕ್ಯತೆ ಹೆಸರಲ್ಲಿ ಒಂದುಗೂಡಿದೆ ಇದು ನಮ್ಮ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ ನಮ್ಮಲ್ಲಿನ ವಿವಿಧತೆಯಲ್ಲಿನ ಏಕತೆ ಬೇರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಗಾಂಧೀಜಿಯ ಸ್ವರಾಜದ ಬೇರುಗಳು ನಮ್ಮಲ್ಲಿ ಗಟ್ಟಿಯಾಗಿ ನೆಲೆಯೂರಿವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವಿಚಾರವಾದಿ ಜಾನಪದ ವಿದ್ವಾಂಸ ಕಾಳೇಗೌಡ ನಾಗವಾರ ಮಾತನಾಡಿ, ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪ್ರತಿ ಹಳ್ಳಿಗೆ ಕೆರೆ ಕಟ್ಟಿಸಿದರು.1947ರ ನಂತರ ಬಹು ಸಂಖ್ಯಾತರಿಗೆ ಶಿಕ್ಷಣ ದೊರೆಯಿತು ಹೆಣ್ಣುಮಕ್ಕಳ ವಿಚಾರದಲ್ಲಿ ಅಂಬೇಡ್ಕರ್ ಮತ್ತು ಲೋಹಿಯಾ ಅವರಿಗೆ ಇರುವಂತಹ ಕಾಳಜಿ ಮತ್ತೊಬ್ಬರಿಗಿಲ್ಲ ಇವತ್ತಿಗೂ ಕೂಡಾ ಹೆಣ್ಣುಮಕ್ಕಳು ತಮ್ಮ ನಿತ್ಯ ಕರ್ಮಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತ ನಂತರ ಮಾಡುವಂತಹ ದುಸ್ಥಿತಿ ಇದೆ. ಅಧಿಕಾರ ಮತ್ತು ಸಂಪತ್ತು ನಮಗೆ ದೊಡ್ಡ ಅಪಾಯ ಇದನ್ನು ತಲೆಗೆ ಹಚ್ಚಿಕೊಳ್ಳದೆ ವಸಂತ ಮಾಸದ ಕೋಗಿಲೆಯಂತೆ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭೀಷೇಕ ಚಕ್ರವರ್ತಿ, ಫಾ. ಟಿಯೋಲ್, ಚಂದ್ರಶೇಖರ ಘಂಟೆಪ್ಪಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಂಕೇತಿಕ ಪ್ರತಿಭಟನೆ



ವಿಜಯಪುರ : ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಆರೋಪ ಎದಿರುಸುತ್ತಿರುವ ಸಂಸದ ಬ್ರಿಜೇಶ್ ಸಿಂಗ್ ರಾಜೀನಾಮೆ ಹಾಗೂ ಬಂಧನಕ್ಕೆ ಅಗ್ರಹಿಸಿ ಮೇ ಸಾಹಿತ್ಯ ಮೇಳದಲ್ಲಿ ಪಾಲ್ಗೊಂಡಿರುವ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಪ್ರಗತಿಪರ ಚಿಂತಕರು ಹಾಗೂ ಗಣ್ಯರು ವಿಜಯಪುರ ನಗರದ ರಂಗಮAದಿರದ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿದರು. ಇದೆ ಸಂಧರ್ಭದಲ್ಲಿ ಇವತ್ತು ಕೇಂದ್ರ ಸರಕಾರ ಪ್ರತಿಭಟನಾ ನಿರತ ಕುಸ್ತಿ ಪಟಗಳನ್ನು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಸಂಧರ್ಭದಲ್ಲಿ ಬಸವರಾಜ ಸೂಳಿಭಾವಿ ಪ್ರಭುಗೌಡ ಪಾಟೀಲ ಭೀಮಶಿ ಕಲಾದಗಿ ಸುರೇಖಾ ರಜಪೂತ ಅನಿಲ ಹೊಸಮನಿ ಸೇರಿದಂತೆ ಸಾವಿರಾರು ಜನ ಪ್ರಗತಿಪರರು ಉಪಸ್ಥಿತರಿದ್ದರು.

ಸರಕಾರ ಹೊಸ ಸಂಸತ್ತು ಭವನ ಉದ್ಘಾಟನೆಗೆ ಕರೆಯಲು ಮೀನಾಮೇಷ : ಸುಕೀರ್ತ ರಾಣಿ

 

ಈ ದಿವಸ ವಾರ್ತೆ
ವಿಜಯಪುರ : ಭಾರತದ ರಾಷ್ಟ್ರಪತಿಗಳು ಬುಡಕಟ್ಟು ಜನಾಂಗದವರಾಗಿರುವುದರಿAದ ಅವರನ್ನು ಹೊಸ ಸಂಸತ್ತು ಭವನ ಉದ್ಘಾಟನೆಗೆ ಕರೆಯಲು ಸರಕಾರ ಮೀನಾಮೇಷ ಎಣಿಸುತ್ತಿದೆ ಎಂದು ತಮಿಳುನಾಡಿನ ಖ್ಯಾತ ಪ್ರಗತಿಪರ ಸಾಹಿತಿ ಸುಕೀರ್ತ ರಾಣಿ ಅವರು ಹೇಳಿದರು
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ 2ನೇ ದಿನದ 2ನೇ ಗೋಷ್ಠಿ ಕವಿ ಗೋಷ್ಠಿ ಯಲ್ಲಿ ಆಶಯ ಭಾಷಣ ಮಾಡಿ ಮಾತನಾಡಿದರು.
ಬಾಲ್ಯದ ಶಾಲಾದಿನಗಳಲ್ಲಿ ನನ್ನನ್ನು ದಲಿತಳು ಎಂಬ ಕಾರಣಕ್ಕೆ ಹಿಂದಿನ ಬೆಂಚಗಳಲ್ಲಿ ಕೂರಿಸಲಾಗುತಿತ್ತು. ಇದು ಭಾರತದ ಜಾತಿ ವ್ಯವಸ್ಥೆಯ ಕರಾಳ ಮುಖ ತೋರಿಸುತ್ತದೆ.ಇಂಡಿಯನ್ ಎಕ್ಸ್ಪ್ರೆಸ್ ನವರು ಕೊಡುವ ಅಧಾನಿ ಗ್ರೂಪ್ ಪ್ರಯೋಜಿತ ಎಂಬ ಕಾರಣಕ್ಕೆ 10 ಲಕ್ಷ ಮೌಲ್ಯದ ಸಾಹಿತ್ಯ ಪ್ರಶಸ್ತಿ ತಿರಸ್ಕರಿಸಿದೆ ಯಾಕೆಂದರೆ ಅಧಾನಿಯಿಂದ ನಮ್ಮ ಹಕ್ಕಗಳು ದಮನಿತವಾಗುತ್ತಿವೆ ನನ್ನ ಎಲ್ಲ ಕವನಗಳು ಸರಕಾರಿ ವ್ಯವಸ್ಥೆ ಪ್ರಶ್ನಿಸುತ್ತಿವೆ. ತುಳಿತಕ್ಕೆ ಒಳಗಾದವರ ಧ್ವನಿಯಾಗಿ ನನ್ನ ಕವನಗಳು ಮೂಡಿಬಂದಿವೆ. ಅದರಲ್ಲಿ ಮುಖ್ಯವಾದುದು ಎಲ್ಲರು ಹೇಳುತ್ತಾರೆ ಕೇರಿ ಊರ ಹೊರಗೆ ಇರುತ್ತೆ ಎಂದು ನಾನು ಹೇಳುತ್ತೇನೆ ಕೇರಿ ಊರಿನ ಹೆಬ್ಬಾಗಿಲು ಎಂದು ಅವರು ತಮ್ಮ ಕವನದ ಸಾಲುಗಳನ್ನು ಮಾರ್ಮಿಕವಾಗಿ ನುಡಿದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ ಸಾಬಿತಾ ಬನ್ನಾಡಿ ಹಾಗೂ ವಿವಿಧ ಕವಿಗಳು ಇದ್ದರು. ವಾಣಿ ಪೆರಿಯೋಡಿ ಈರಪ್ಪ ಸುತಾರ ಕಾರ್ಯಕ್ರಮ ಸಂಯೋಜಿಸಿದರು. ಕವಿಗೋಷ್ಠಿಯಲ್ಲಿ ದೇವು ಮಾಕೊಂಡ ಫಾತಿಮಾ ರಾಲಿಯಾ ಶುಭಾ ಮರವಂತೆ ದೇವರಾಜ ಹುಣಸಿಕಟ್ಟೆ ಸುಧಾ ಆಡುಕಳ ಅಬ್ದುಲ್ ಹೈ ತೋರಣಗಲ್ಕ್ರ ಕವನ ವಾಚಿಸಿ ಪ್ರೇಕ್ಷಕರ ಜನಮನ ಸೆಳೆದರು. ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಎಚ್ ಎಸ್ ಅನುಪಮಾ ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವ ಸಾಮಾಜಿಕ, ಆರ್ಥಿಕವಾಗಿ ಸಧೃಡಗೊಳಿಸದಿದ್ದರೆ ವಿಫಲ: ಸುಭಾಸ ರಾಜಮಾನೆ

ವಿಜಯಪುರ : ಕಳೆದ 75 ವರ್ಷಗಳಿಂದ ಪ್ರಜಾತಂತ್ರ ಉಸಿರಾಡುತ್ತ ಹಾಗೋ ಹೀಗೋ ಹಾರಾಡುತ್ತಾ ಬಂದಿದೆ ಎಂದು ವಿಚಾರವಾದಿ ಸುಭಾಸ ರಾಜಮಾನೆ ಹೇಳಿದರು.
ಅವರು ನಗರದ ಕಂದಗಲ್ ಹನುಮಂತರಾಯ ರಂಗAದಿರದಲ್ಲಿ ಹಮ್ಮಿಕೊಂಡ ಕುಮಾರ ಕಕ್ಕಯ್ಯ ಪೋಳ ಬಿ. ಗಂಗಾಧರ ವೇದಿಕೆಯಲ್ಲಿ ಪ್ರಜಾಪ್ರಭುತ್ವ : ಯುವ ಸ್ಪಂದನದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಪೀಠಿಕೆಯಲ್ಲಿನ ಆಶಯಗಳು ನಾಮಕೆ ವಾಸ್ತೆ ಸೇರಿಸಿದ್ದಾರೆ. ಅದು ಇಲ್ಲಿಯವರೆಗೆ ಜಾರಿಯಾಗಿಲ್ಲ ಎಂದು ಸ್ವತಃ ಅಂಬೇಡ್ಕರ ಅವರೇ ಹೇಳಿದ್ದರು. ಸಾಮಾಜಿಕ, ಆರ್ಥಿಕವಾಗಿ ಸಧೃಡಗೊಳಿಸದಿದ್ದರೆ ವಿಫಲವಾಗುತ್ತದೆ ಎಂದರು.
ರಾಜಕೀಯ ಪ್ರಜಾತಂತ್ರ ಬಡ ದೀನ ದಲಿತರ ಆರ್ಥಿಕ ಪದ್ದತಿಗಾಗಿ ಕೃಷಿ, ಶಿಕ್ಷಣ ಆರೋಗ್ಯ ಸ್ಟೇಟ್ ಒಡೆತನದಲ್ಲಿರಬೇಕು. ಸಾಮಾಜಿಕವಾಗಿ ಏಳ್ಗೆ ಬಯಸದೆ ಇಲ್ಲದಿದ್ದರೆ. ಬಡವರಾಗಿಯೇ ಇರುತ್ತಾರೆ. ಇಲ್ಲದಿದ್ರೆ ರಾಜಕಾರಣಿಗಳು ತಮ್ಮ ಸ್ವ ಹಿತಾಸಕ್ತಿ ಬೆಳೆಸಿಕೊಂಡು ಹೋಗುತ್ತಾರೆ ಎಂದರು. ಇಂದು ನಾವು ಆರ್ಥಿಕವಾಗಿ ಸಮಾನತೆ ತರಬೇಕಾಗಿದೆ. ಪ್ರಜಾಪ್ರಭುತ್ವ ಉಳಿಸಿಕೊಂಡು ಹೊಗಬೇಕಾಗಿದೆ. ಇದರಿಂದ ಸರ್ವಾಧಿಕಾರಕ್ಕೆ ಮೂಗುದಾರ ಹಾಕಬಹುದು ಎಂದರು. 
ಈ ಸಂದರ್ಭದಲ್ಲಿ ಕಲ್ಯಾಣಿ ಎಂ ಎಸ್ ಮೋಹನ ಮೇಟಿ ಚೆನ್ನು ಕಟ್ಟಿಮನಿ, ಪ್ರಿಯಾಂಕಾ ಮಾವಿನಕಾಯಿ ಇದ್ದರು.

ಕ್ರಾಂತಿಕಾರಿ ಹಾಡು

 


ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ 2ನೇ ದಿನದ ಬೆಳಗಿನ ಅಧಿವೇಶನದಲ್ಲಿ
ಧಾರವಾಡ ಜಿಲ್ಲೆಯ ಹರಾಲಾಪುರದ ಅಗಿಅಆ ಕಲಾತಂಡದ ಶಂಬಯ್ಯಾ ಹಿರೇಮಠ ಬಸವರಾಜ ಶಿಗ್ಗಾoವ ಶರೀಫ್ ದೊಡಮನಿ ಈಶ್ವರ ಅರಳಿ ನಾಗರಾಜ ಗೌಡಣ್ಣವರ ಬಸವರಾಜ ಕರಡಿ ಮಲ್ಲಪ್ಪ ಮುಳಗುಂದ ಹಾಗೂ ಸಂಗಡಿಗರು ಕ್ರಾಂತಿಕಾರಿ ಹಾಡುಗಳ ಕಾರ್ಯಕ್ರಮ ನಡೆಸಿಕೊಟ್ಟರು.
ಭಾರತೀಯ ಪ್ರಜಾತಂತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವಂತಿರುವ ಇವರ ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕಲಾವಿದರನ್ನು ಪ್ರೋತ್ಸಾಹಿಸಿದರು.ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವದ ಮೌಲ್ಯಗಳು ಸರಿಯಾಗಿ ಅನುಷ್ಠಾನವಾಗದಿರುವುದು ದುರಂತ: ಕಲ್ಯಾಣಿ ಎಂ ಎಸ್


ವಿಜಯಪುರ:ಯುವಜನರ ಕನಸು ಪ್ರಜಾಪ್ರಭುತ್ವದ ಕುರಿತು ಕನಸು ಹೇಗಿರಬೇಕೆಂದರೆ ಪ್ರಜಾಪ್ರಭುತ್ವದ ಮೌಲ್ಯಗಳು ಸರಿಯಾಗಿ ಅನುಷ್ಠಾನವಾಗದಿರುವುದು ದುರಂತ ಎಂದು ಯುವ ವಿಚಾರವಾದಿ ಕಲ್ಯಾಣಿ ಎಂ ಎಸ್ ಅವರು ಹೇಳಿದರು.

ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಎರಡನೇ ದಿನದ ಮೊದಲ ಗೋಷ್ಠಿ ಪ್ರಜಾಪ್ರಭುತ್ವ ಯುವ ಸ್ಪಂದನದಲ್ಲಿ ಮಾತನಾಡಿದರು.

ಪ್ರಜಾಪ್ರಬುತ್ವದ ಆಶಯಗಳನ್ನು ಚೆನ್ನಾಗಿ ಹರಡಬೇಕಾಗಿತ್ತು. ಅತ್ಯುತ್ತಮ ಸ್ಥಾನಕ್ಕೆ ಕರೆದುಹೋಗುವುದಾಗಿದೆ. ರಾಜಕೀಯ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ಬಹಳ ಮಹತ್ವವಾದ ಪಾತ್ರ ವಹಿಸುತ್ತದೆ

ಪ್ರಜಾಪ್ರಭುತ್ವದಲ್ಲಿ ಯುವಜನರ ಪಾತ್ರ ಅನನ್ಯವಾಗಿದೆ. ಬೆಲೆ ಏರಿಕೆ ಸೇರಿದಂತೆ ಅನೇಕ ಸವಾಲುಗಳು ನಮ್ಮ ಮುಂದೆ ಇವೆ. ಪ್ರಜಾಪ್ರಭುತ್ವದ ಆಶಯಗಳಿಗೆ ನೀರು ಹಾಕಬೇಕು. ನಮ್ಮ ಮಕ್ಕಳನ್ನು ಸ್ಬತಂತ್ರವಾಗಿ ಬಿಡಬೇಕು. ಆಯ್ಕೆ ಯ ಸ್ವಾತಂತ್ರವನ್ನು ನಾವು ಪಡೆಯಬೇಕು. ಹೊರತು ಯಾರು ನಮಗೆ ಕೊಡುವುದಿಲ್ಲ. ಮಹಿಳೆಯರು ಸ್ವತಂತ್ರ ಕೊಡೋದು ಅಲ್ಲ. ಪಡೆದುಕೊಳ್ಳೋದು ಎಂದರು. 

 ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಎಚ್ಸೇ ಎಸ್ರಿ ಅನುಪಮಾ ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸೂ ಸುಭಾಷ ಮಾನೆ ಟಿ ಎಸ್ ಗೊರವರ ಮೋಹನ ಮೇಟಿ ಮತ್ತು ಚೆನ್ನು ಕಟ್ಟಿಮನಿ ಇದ್ದರು.

Saturday, May 27, 2023

ಡಾ ಎಂ ಎಂ ಕಲಬುರಗಿ ಅವರ ಹತ್ಯೆ ಯನ್ನು ಖಂಡಿಸುತ್ತೇವೆ : ತೀಸ್ತಾ ಸೆಟಲ್ವಾಡ್



ಈ ದಿವಸ ವಾರ್ತೆ

 ವಿಜಯಪುರ : ಡಾ ಎಂ ಎಂ ಕಲಬುರಗಿ ಅವರ ಹತ್ಯೆ ಯನ್ನು ಖಂಡಿಸುತ್ತೇವೆ ಎಂದು ಖ್ಯಾತ ವಿಚಾರವಾದಿ ಮುಂಬಯಿಯ ತೀಸ್ತಾ ಸೆಟಲ್ವಾಡ್ ಅವರು ಹೇಳಿದರು.ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇ 9 ನೇ ಸಮ್ಮೇಳನದಲ್ಲಿ ಮಾತನಾಡಿದರು. ಭಾರತದ ಸಂತ ಪರಂಪರೆ ಪ್ರಮುಖರಾದ ಬಸವಣ್ಣ ಅಲ್ಲಮ ಸೇರಿದಂತೆ ಎಲ್ಲರ ತತ್ವಗಳು ಇಂದು ಬಹಳ ಪ್ರಸ್ತುತವಾಗಿವೆ. ದುಸ್ಕಾಲ ಸಮಯದಲ್ಲಿ ಬೆಳೆದು ಬಂದ ಈ ಪರಂಪರೆಗಳು ನಮಗೆ ಉತ್ತಮ ಚಿಂತನೆಗಳನ್ನು ಕೊಟ್ಟಿವೆ. ಮುಸ್ಲಿಂ ಸಮುದಾಯದ ಝಾಕೀರ ಹುಸೇನ್ ಮೌಲನಾ ಅಬುಲ್ ಕಲಾಂರು ಈ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಯಾರು ಮರೆಯುವಂತಿಲ್ಲ. ಕೆಲವು ದೃಶ್ಯ ಮಾಧ್ಯಮಗಳು ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.ಇದರ ವಿರುದ್ಧ ಒಗ್ಗಟ್ಟಿನ ಹೋರಾಟ ಇಂದು ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ 

ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ ತುಕಾರಾಂ ಚಂಚಲಕರ ವಿಹಾನ್ ಪ್ರಕಾಶ ಅಂಬೇಡ್ಕರ್ ಬಸವರಾಜ ಸೂಳಿಭಾವಿ ರಿಯಾಜ್ ಫಾರುಕಿ ಮಲ್ಲಮ್ಮ ಯಾಳವಾರ ಭಗವಾನ ರೆಡ್ಡಿ  ಕೋಣೇಶ್ವರ ಸ್ವಾಮೀಜಿ ಅಬ್ದುಲ್ ರೆಹಮಾನ್ ಬಿದರಕುಂದಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಖ್ಯಾತ ಹೋರಾಟಗಾರರಿಂದ ಪ್ರಜ್ವಲಿಸುವ ಪಂಜುಗಳನ್ನು ಒಟ್ಟುಗೂಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ



ಈ ದಿವಸ ವಾರ್ತೆ

 ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇ 9 ನೇ ಸಮ್ಮೇಳನವನ್ನು ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ ತುಕಾರಾಂ ಚಂಚಲಕರ ವಿಹಾನ್ ಅವರು ,  ಪ್ರಜ್ವಲಿಸುವ ಪಂಜನ್ನು ಕೈಯಲ್ಲಿ ಹಿಡಿದುಕೊಂಡು ವೇದಿಕೆಗೆ ತೆರಳಿ ಒಂದುಗೂಡಿಸುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಕಾಶ ಅಂಬೇಡ್ಕರ್ ಬಸವರಾಜ ಸೂಳಿಭಾವಿ ರಿಯಾಜ್ ಫಾರುಕಿ ಮಲ್ಲಮ್ಮ ಯಾಳವಾರ ಭಗವಾನ ರೆಡ್ಡಿ  ಕೋಣೇಶ್ವರ ಸ್ವಾಮೀಜಿ ಅಬ್ದುಲ್ ರೆಹಮಾನ್ ಬಿದರಕುಂದಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದಲಿತರಲ್ಲಿ ರಾಜಕೀಯ ಸಬಲೀಕರಣದ ಅವಶ್ಯಕತೆ ಇಂದು ಅನಿವಾರ್ಯ ವಾಗಿದೆ :ಪ್ರಗತಿಪರ ವಿಚಾರವಾದಿ ಕೃಷ್ಣಮೂರ್ತಿ ಚಮರಂ

ಈ ದಿವಸ ವಾರ್ತೆ

ವಿಜಯಪುರ: ಮೀಸಲಾತಿಯ ಒಳ ಹೊಡೆತಗಳು ದಲಿತ ರಾಜಕೀಯ ಅಸ್ಮಿತೆ ತೊಡೆದು ಹಾಕಿದವು. ಅಖಂಡ  ಭಾರತದ ಉದ್ದಗಳಕ್ಕೂ ದಲಿತರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ದಲಿತರಲ್ಲಿ ರಾಜಕೀಯ ಸಬಲೀಕರಣದ ಅವಶ್ಯಕತೆ ಇಂದು ಅನಿವಾರ್ಯ ವಾಗಿದೆ ಎಂದು ಪ್ರಗತಿಪರ ವಿಚಾರವಾದಿ ಕೃಷ್ಣಮೂರ್ತಿ ಚಮರಂ ಅವರು ಹೇಳಿದರು. ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಜಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಪ್ರಜಾತಂತ್ರ ಸಾಗಿದ ದಾರಿ ಅಸ್ಮಿತೆ ರಾಜಕಾರಣ ಎಂಬ ಮೂರನೇ ಗೋಷ್ಠಿ ಯ ಆದಿವಾಸಿ ಮತ್ತು ಅಲೆಮಾರಿ ನೆಲೆ ಎಂಬ ವಿಷಯ ಮಂಡಿಸಿ ಮಾತನಾಡಿದರು.ವೇದಿಕೆಯಲ್ಲಿ ಬಿ ಎಂ ಹನೀಫ್ ರಂಗನಾಥ ಕಂಟನಕುಂಟೆ ಶೈಲಜಾ ಹಿರೇಮಠ ಶಾಂತೇಶ ದುರ್ಗಿ ನಾಗರಾಜ ಲಂಬು ಸಿದ್ರಾಮ ಬಿರಾದಾರ ಇದ್ದರು.ನಾರಾಯಣ ಪವಾರ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯ ಪಕ್ಷ ಬೇಕು: ಹಿರಿಯ ವಿಚಾರವಾದಿ ಪ್ರಕಾಶ ಅಂಬೇಡ್ಕರ

ಈ ದಿವಸ ವಾರ್ತೆ

ವಿಜಯಪುರ: ವಿಜಯಪುರ: ಇಂದಿನ ಜಾತಿ ಆಧಾರಿತ ಪ್ರಜಾಪ್ರಭುತ್ವ ನಿರ್ಮೂಲನೆ ಮಾಡಬೇಕು. ಹೀಗಾಗಿ ನಮ್ಮ ಬಳಿ ಜ್ಯೋತಿಬಾ ಫುಲೆ, ಶಾಹುಮಹಾರಾಜ, ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯ ಒಂದು ಪಕ್ಷ ಬೇಕು. ಆಗ ಅದನ್ನು ತೊಡೆದುಹಾಕಲು ಪ್ರಯತ್ನಿಸಬಹುದು ಎಂದು ಹಿರಿಯ ವಿಚಾರವಾದಿ, ಮಾಜಿ ಸಂಸದ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು. ಎಂದು ಹಿರಿಯ ವಿಚಾರವಾದಿ ಮಾಜಿ ಸಂಸದ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ ಅವರು ಹೇಳಿದರು. 

ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಬಳಗ ವಿಜಯಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಮಾರ ಕಕ್ಕಯ್ಯ ಪೋಳ, ಬಿ.ಗಂಗಾಧರ ಮೂರ್ತಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 9ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.


ಇಂದಿನ ವಿಚಾರ ಸಂವಿಧಾನದ ಕುರಿತಾಗಿದೆ. ಭಾರತದ ಸಂಸ್ಕೃತಿಯೆಂದು ಹೇಳುವ ಪರಿಪಾಠ ಆರಂಭವಾಗಿದೆ. ಹಾಗಿಲ್ಲ, ಇಲ್ಲಿ ಎರಡು ಬಗೆಯ ಪರಂಪರೆಗಳುವೆ. ಒಂದು ಯಾಜಮಾನ್ಯ ಆಳ್ವಿಕೆಯ ದಬ್ಬಾಳಿಕೆಯ ಪರಂಪರೆ ಮತ್ತೊಂದು ಇಂದು ವೇದಿಕೆಯ ಮೇಲೆ ಕುರಿತಿರುವ ಸಂತರು ಶರಣರ ಪರಂಪರೆ, ಇದು ಮಹಾರಾಷ್ಟçದ ಕಬೀರನಿಂದ ಆರಂಭಿಸಿ ಕೇರಳದ ತನಕ ಸಾಗುತ್ತದೆ.

ಮೊದಲನೇದ್ದು ಹಿಟ್ಲರ್ ಶಾಹಿಯಾದದ್ದು, ಇದರಲ್ಲಿ ನಿಮಗೆ ಚಿಂತಿಸುವ ಅವಕಾಶವಿಲ್ಲ. ಇದನ್ನು ವಿವರಿಸುವಾಗ ನಾವು ಮನುಸ್ಮೃತಿಯನ್ನು ನಾವು ಉದಾಹರಣೆಯಾಗಿ ನೀಡುತ್ತೇವೆ. ಅಂದರೆ ಇಲ್ಲಿ ಯಾಜಮಾನ್ಯ ಮಾತ್ರವಲ್ಲ, ಅಸಹಿಷ್ಣುತೆ ಇದೆ ಎಂಬುದು,.

ಮತ್ತೊAದೆಡೆ ಸಂತರ ಪರಂಪರೆಯಿದೆ, ಇಲ್ಲಿ ಶಾಂತಿಯಿದೆ, ಪರಸ್ಪರರನ್ನು ಒಪ್ಪಿಕೊಳ್ಳುವುದಿದೆ, ಸಹಬಾಳ್ವೆಯಿದೆ. ಜಾತಿ ಪದ್ಧತಿಯ ವಿರುದ್ಧ ಹೋರಾಟವಿದೆ. ಉದಾಹರಣೆಗೆ- ಸಂತರ ಸಂಸ್ಕೃತಿಯಲ್ಲಿ ಪುನರ್ವಿವಾಹವಿದೆ, ಇದನ್ನು ಗಾಂಧರ್ವ ವಿವಾಹದ ರೂಪದಲ್ಲೂ ನಡೆಯುತ್ತದೆ

ವೈದಿಕಶಾಹಿಯಲ್ಲಿ ಮಹಿಳೆಯರಿಗೆ ಮರುವಿವಾಹದ ಅವಕಾಶವಿಲ್ಲ.

ಸಂವಿಧಾನ ಇವುಗಳಲ್ಲಿ ಯಾವ ಸಂಸ್ಕೃತಿಯ ಪ್ರತಿನಿಧೀ? ನಾವು ಸಂವಿಧಾನದ ಪೀಠಿಕೆ ಓದಿದೆವು, ಆದರೆ ಇದರಲ್ಲಿ ಒಂದು ದೋಷವಿದೆ ಎಂದು ನಾನು ಭಾವಿಸುತ್ತೀನಿ, ಈ ಶಪಥಗ್ರಹಣದ ಪದ್ಧತಿ ಯಾರು ಆರಂಭಿಸಿದರು? ನನ್ನ ಅಧ್ಯಯನದ ಪ್ರಕಾರ ಇದನ್ನು ಹಿಟ್ಲರ್ ಆರಂಭಿಸಿದ್ದು ನಂತರ ಆರೆಸ್ಸೆಸ್ ಮುಂದುವರೆಸಿದ್ದು, ನಾವು ಕೈಮುಂದೆ ಮಾಡುತ್ತೇವೆ, ಇಲ್ಲಿ ಕೈ ಶಪಥ ತೆಗೆದುಕೊಳ್ಳುವಿದಿಲ್ಲ, ಮನಸ್ಸು ತೆಗೆದುಕೊಳ್ಳುವುದು, ಇದು ಅನುಕರಣೆಯ ಸಂಗತಿ.

ಇಲ್ಲಿ ಯಾಜಮಾನ್ಯದ ವಿಷಯಗಳು ಚಿಹ್ನೆಗಳ ಮೂಲಕ ಸಾಗುತ್ತವೆ, ಇಲ್ಲಿ ಚಿಹ್ನೆ ಗಮನಿಸಿ, ಪಗಡಿ ಹಾಕುವ ಪರಂಪರೆ, ಇದು ಮೊದಲು ಯಾರ ಪದ್ಧತಿಯಾಗಿತ್ತು? ಪಗಡಿಯನ್ನು ಮೊದಲು ಮೇಲಿನ ವರ್ಗಗಳಷ್ಟೇ ಧರಿಸಲು ಸಾಧ್ಯವಿತ್ತು, ಉಳಿದವರಿಗೆ ಅವಕಾಶ ಇರಲಿಲ್ಲ, ಒಂದು ವೇಳೆ ಸಮಾನತೆಯೇ ತರುವುದಾದ್ರೆ, ನೀವು ಏಣ ಶ್ರೇಣ ಯಲ್ಲಿ ಸಮಾಜದ ಕಟ್ಟಕಡೆಯಲ್ಲಿರುವವರ ಪದ್ಧತಿಯಲ್ಲಿ ಪಗಡಿಯನ್ನು ಎಲ್ಲರೂ ಧರಿಸುವುದನ್ನು ಆರಂಭಿಸಿದರೆ ಅದನ್ನು ನಾನು ಸಮಾನತೆಯ ಪ್ರಯೋಗವೆಂದು ಒಪ್ಪುತ್ತೇನೆ


1990ರಲ್ಲಿ ಒಂದು ಪುಸ್ತಕ- ಕ್ಲಾಶ್ ಆಫ್ ಸಿವಿಲೈಸೇಶನ್, ಅದೇ ರೀತಿ ಇಂದು ಸಂವಿಧಾನದ ಮಾಧ್ಯಮದ ಮೂಲಕ ಮತ್ತೊಮ್ಮೆ ಕ್ಲಾಶ್ ಆಫ್ ಸಿವಿಲೈಶೇನ್ ಆರಂಬವಾಗುತ್ತಿದೆ. ಒಂದು ವೈದಿಕಶಾಹಿ, ಅದನ್ನು ನಾವು ಒಪ್ಪುವುದಿಲ್ಲ, ಇನ್ನೊಂದು ಸಂತರ ಪರಂಪರೆ. ಸಂವಿಧಾನವಾಗಲೀ ಪ್ರಜಾತಂತ್ರವಾಗಲೀ ನಮ್ಮ ಜೀವನ ಅಂಗವಾಗಿ ಇನ್ನೂ ಬದಲಾಗಿಲ್ಲ, ಅವಿನ್ನೂ ಅಂಗವಾಗುವ ಪ್ರಕ್ರಿಯೆಯಲ್ಲಿವೆ, ಇದರಲ್ಲಿ ನಮಗೆ ಸ್ಪಷ್ಟತೆಯಿರುವುದು ಬಹಳ ಮುಖ್ಯ. ನಮ್ಮ ಬದುಕಿನಲ್ಲಿ ಈ ವಿಚಾರಗಳು ಪ್ರವೇಶದಿದ್ದರೆ ನಾವು ಸಂವಿಧಾನವನ್ನೂ ರಕ್ಷಿಸಲು ಆಗುವುದಿಲ್ಲ, ಪ್ರಜಾತಂತ್ರವನ್ನೂ ಕೂಡಾ. ಈಗ ನಾವು ಮೀಸಲಾತಿ ವಿಚಾರವನ್ನು ತೆಗೆದುಕೊಂಡರೆ, ಯಾರು ನಗರಪಾಲಿಕೆ ಅಥವಾ ಸರ್ಕಾರಿ ಶಾಲೆಗಳಲ್ಲಿ ಕಲಿತು ಬಂದಿದ್ದಾರೋ, ಅವರೇ ಅವುಗಳನ್ನು ಹೀನವಾಗಿ ಕಾಣುತ್ತಾರೆ, ಇದೇ ಶಾಲೆಗಳಿಲ್ಲದಿದ್ದರೆ ನೀವು ಓದಲು ಸಾಧ್ಯವಿತ್ತೇ? ಈಗ ಓದಿದ ನಂತರ ನಿಮಗೆ ಸಾಮಾಜಿಕ ಆರ್ಥಿಕ ಸುಭದ್ರತೆ ಬಂದ ನಂತರ ಈಗ ಬೇರೆ ವಿಷಯಗಳ ಕಾಣುತ್ತಿವೆ, ಖಾಸಗೀಕರಣ ಎಂದು ಯಾವುದನ್ನು ಹೇಳುತ್ತೇವೋ ಅದರ ಸಮರ್ಥಕರಾಗಿಬಿಟ್ಟಿದ್ದೀರಿ.

ಮೊದಲೂ ಕೂಡಾ ಶಿಕ್ಷಣ ಖಾಸಗೀಕರಣದಲ್ಲೇ ಇತ್ತು, ಅದರಿಂದಲೇ ಅದನ್ನು ಧರ್ಮದ ಅಡಿಯಾಳಾಗಿ ಮಾಡಲಾಗಿತ್ತು, ಈ ಸಮುದಾಯ ಓದಬಹುದು, ಇವರು ಓದಬಾರದು ಎಂದು, ಧಾರ್ಮಿಕ ಯಥಾಸ್ಥಿತಿ- ಇದನ್ನು ಮುರಿದವರು ಯಾರು? ಇದನ್ನು ಬ್ರಿಟೀಶ್ ಸರ್ಕಾರ ಇಲ್ಲಿ ಬಂದದ್ದು ಮುರಿಯಿತು, ಅವರು ಸರ್ಕಾರಿ ಶಾಲೆಗಳನ್ನು, ನಗರಪಾಲಿಕೆ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಎಲ್ಲ ಶಾಲೆಗಳನ್ನು ಮುಕ್ತಗೊಳಿಸಿದರು. 400, 600 ವರ್ಷಗಳ ಹಿಂದೆ ಧರ್ಮದ ಆಧಾರದಲ್ಲಿ ಸಮುದಾಐಗಳನ್ನು ಶಿಕ್ಷಣವನ್ನು ವಂಚಿತಗೊಳಿಸಿದರು, ಈಗ ಹೊಸ ವÀ್ಯವಸ್ಥೆಯಲ್ಲಿ ಬೇರೆ ಪದ್ಧತಿ ತರಲು ಸಾಧ್ಯವೇ? ಈಗಿನ ವ್ಯವಸ್ಥೆ ಹೇಳುತ್ತದೆ- ನೀವು ಎಷ್ಟು ಬೇಕಾದರೂ ಓದಿ ನಾವು ಬೇಡ ಎನ್ನುವುದಿಲ್ಲ, ಆದರೆ ಅದರ ಖರ್ಚು ನೀವು ಭರಿಸಬೇಕು. ಈಗ ಯೋಚಿಸಿ ಒಂದುವೇಳೆ ಎಲ್ಲ ಸರ್ಕಾರಿ ವ್ಯವಸ್ಥೆಯ ಶಿಕ್ಷಣ ನಿಂತುಹೋದರೆ ವೆಚ್ಚ ಭರಿಸಿ ನಾವು ನಮ್ಮ ಮಕ್ಕಳನ್ನು ಓದಿಸಲು ಸಾಧ್ಯವೇ? 

ಬಾಬಾಸಾಹೇಬರು ಹೇಳಿದರು, ಪ್ರತಿ ತಲೆಮಾರು ಒಂದು ಹೊಸ ಮಿಶನ್, ಈಗ ಈ ತಲೆಮಾರಿನ ಸಮಸ್ಯೆಗಲ ಜೊತೆ ನಾವು ಗುರುತಿಸಿಕೊಳ್ಳದಿದ್ದರೆ ಅವರ ಮಿಶನ್ ನಮ್ಮ ಉದ್ದೇಶ ಹೇಗಾಗುತ್ತದೆ? ನಮಗೆ ನಿಜಕ್ಕೂ ಸಂವಿಧಾನ ಮತ್ತು ಪ್ರಜಾತಂತ್ರ ಉಳಿಸಬೇಕಾದರೆ, ಈಗಿನ ಸಂದರ್ಭದ ಪರಿಸ್ಥಿತಿಗಳ ಜೊತೆ ಹೊಂದಾಣ ಕೆಯಾಗುವಂತಹ ವಿಚಾರಗಳನ್ನು ಹೊಂದಿರಬೇಕು, ಈಗಿನ ತಲೆಮಾರಿಗೆ ಬೇಕಾದ ವಿಷಯಗಳು.


ಜಾತಿ ಇಂದು ಸಮಸ್ಯೆ ಅಲ್ಲ ಎಂದಲ್ಲ, ಅದಲ್ಲದೆ ಇನ್ನೂ ಎರಡು ವಿಷಯಗಳು ಮುಖ್ಯವಾಗಿವೆ, 

ಮೀಸಲಾತಿಯಿಂದ ಸರ್ಕಾರದ ಖಜಾನೆಯಲ್ಲಿ ಒಂದು ಅಂಶ- ಸಿಬ್ಬಂದಿಯ ವೇತನ, ಇದು ಒಟ್ಟು ಬೊಕ್ಕಸದ 35% ಇದೆ. ಇದರಲ್ಲಿ ಮೀಸಲಾತಿಯಿಂದ ದೊರೆಯುವ ಸಂಬಳ ಕೂಡಾ ಇದರಿಂದಲೇ ಬರಬೇಕು, ಈ ವೇತನದಲ್ಲಿ ಎಷ್ಟು ಪರಿಶಿಷ್ಟ ಜಾತಿ, ವರ್ಗ, ಸಮುದಾಯಗಳ ಪಾಲೂ ಅಲ್ಲಿಂದಲೇ ಬರುತ್ತದೆ, ಆರ್ಥಿಕವಾಗಿ ಸಂಬಳದಾರ ವರ್ಗಗಳಿಂದ ಮಾರುಕಟ್ಟೆಯ ನಿಯಂತ್ರಣವಿತ್ತು. ಇವತ್ತು ಸರ್ಕಾರಿ ನೌಕರಿಗಳು ಕುಂಠಿತವಾಗುತ್ತಿವೆ, ಇಂತಹ ಉದ್ಯೋಗಗಳು ಕಡಿಮೆಯಾದಂತೆ, ಮೀಸಲು ಉದ್ಯೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅದರಿಂದಾಗಿ ವೇತನದ ಮೂಲಕ ಆರ್ಥಿಕ ವಿನಿಮಯದ ಪ್ರಮಾಣವೂ ಕಡಿಮೆಉಯಾಗಿದೆ, ನಾಳೆ ಮೀಸಲಾತಿ ನಿಂತೇ ಹೋದರೆ ಬೊಕ್ಕಸ ಮತ್ತು ಆರ್ಥಿಕ ವಿನಿಮಯದ ಮೇಲೂ ನಮ್ಮ ನಿಯಂತ್ರಣ ಪೂರ್ತಿ ಇಲ್ಲವಾಗುತ್ತದೆ. ಶೀಕ್ಷಣದ ಜೊತೆಗೆ ಬಾಬಾಸಾಹೇಬರು ಇನ್ನೆರಡು ವಿಚಾರ ಹೇಳಿದರು, ಸಂಘಟನೆ ಮತ್ತು ಹೋರಾಟ. ಎಲ್ಲಿಯತನಕ ಸಂಘಟನೆ ಇಲ್ಲ, ಅಲ್ಲಿಯತನಕ ನಮ್ಮ ದನಿಯಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಬದಲಾವಣೆ ಬಂದಿದೆ, ಬಿಜೆಪಿ ಹೋಗಿ ಕಾಂಗ್ರೆಸ್ ಬಂದಿದೆ, ಆದರೆ ಫುಲೆ ಮತ್ತು ಅಂಬೇಡ್ಕರ್‌ವಾದಿಗಳ ದೃಷ್ಟಿಯಿಂದ, ಎಷ್ಟೆಲ್ಲ ವಿಶ್ಲೇಷಣೆಗಳು ಇಲ್ಲಿನ ಈ ಸಮುದಾಯಗಳ ಪಾತ್ರ ಏನು ಎಂಬುದನ್ನು ತೋರಿಸುತ್ತಿವೆಯಾ? ಯಾಕೆ ತೋರಿಸುತ್ತಿಲ್ಲ, 

ರಾಜನೈತಿಕ ಒಪ್ಪಂದ ಬೇರೆ ವಿಚಾರ, ಆದರೆ ಈ ವಿಚಾರಧಾರೆಯ ಮೇಲೆ ನಿಯಂತ್ರಣ ಇಡುವುದು, ಸರ್ಕಾರ ಯಾವ ಹಾದಿಯಲ್ಲಿ ಹೋಗಬೇಕೆಂಬುದನ್ನು ನಿರ್ಧರಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ, ಮುಸ್ಲಿಮರಿಗೆ ಅತ್ಯಂತ ಮುಖ್ಯವಾದ ಸಂಗತಿ ಪೈಗಂಬರರು ಮತ್ತು ಮಸೀದಿ, ಅದು ಅವರ ಹೃದಯಕ್ಕೆ ಹತ್ತಿರಾದ ಸಂಗತಿ, ಇದನ್ನು ಯಾವುದೇ ಪಕ್ಷವೂ ಮುಟ್ಟಲು ಸಿದ್ಧರಿಲ್ಲ, ಈ ವಿಷಯಮುಂದೊಡುವ ಕೆಲಸ ಯಾವಾಗ ಆಗುತ್ತದೆ, ಸಂಘಟನೆ ಇದ್ದಾಗ ಆಗುತ್ತದೆ,ಅದಕ್ಕೇ ಬಾಬಾಸಾಹೇಬರು ಹೇಳಿದರು, ನೀವು ನಿಮ್ಮನ್ನು ನೀವು ಉಳಿಸಿಕೊಳ್ಳಬೇಕು ಸರಿ ಆದರೆ ಈ ವ್ಯವಸ್ಥೆಯನ್ನೂ ಉಳಿಸಿಕೊಳ್ಳಬೇಕು, ಇದು ನಿಮ್ಮ ರಾಜನೈತಿಕ ನೆಲೆ, ಅದನ್ನು ರಕ್ಷಿಸಿಕೊಳ್ಳಬೇಕು ಎಂದು, ಆಧರೆ ಇಲ್ಲಿ ನಮ್ಮ ರಾಜನೈತಿಕ ನೆಲೆ ಏನು? ಬೇರೆಯವರ ಝೋಪಡಿಯಲ್ಲಿ ನಾವು ಇದ್ದಷ್ಟು ದಿನ ಅವರು ಬೇಕೆಂದಾಗ ಇರಿಸಿಕೊಳ್ಳಬಹುದು ಬೇಡವಾದಾಗ ಹೊರದೂಡಬಹುದು, ಅದಕ್ಕೆ ನಮ್ಮದೇ ಮನೆ ಕಟ್ಟಿಕೊರ್ಳಳಬೇಕು

ಈಗ ಹೊಸ ವ್ಯವಸ್ಥೆ ಏನು? ಈಗಿನ ರಾಝನೈತಿಕ ಪರಿಸ್ಥಿತಿಯಲ್ಲಿ ಪಾತ್ರವಹಿಸಬೇಕು ಇದರಲ್ಲೇನೂ ಪ್ರಶ್ನೆಯಿಲ್ಲ, ಈಗ ಸತ್ತೆಯಲ್ಲಿ ಕೂತವರನ್ನು ನಾವು 40 ವರ್ಷಗಳಿಂಧ ನೋಡಿದ್ದೇವೆ, ಇವರು ಪರಿಶಿಷ್ಟ ಜಾತಿ ವರ್ಗಗಳನ್ನು, ಅಲ್ಪಸಂಖ್ಯಾತರನ್ನು ಊಟದಲ್ಲಿ ಉಪ್ಪಿನಕಾಯಿಯ ರೂಪದಲ್ಲಿ ಪರಿಗಣ ಸುವವರು, ಇದೇ ಪರಿಸ್ಥಿತಿ ಉಳಿದರೆ, ಆರೆಸ್ಸೆಸ್ ಆಟವಾಡಿಸುವವರು, ಅವರಿಗೆ ವೈದಿಕ ವಿಚಾರಧಾರೆ ತರಬೇಕು ಸಂತರ ವಿಚಾರಧಾರೆ ಮುಗಿಸಬೇಕು ಅದಕ್ಕೆ ಸಂವಿಧಾನ ತೆಗೆಯಬೇಕು.

ಬಾಬಾಸಾಹೇಬರ ಕಾಲ ಬೇರೆ ಇತ್ತು, ಆ ಕಾಲದ ಎರಡು ಪಕ್ಷಗಳ ಪದಧತಿ ಬೇರೆಯಿತ್ತು, ಇಂದು ಆರೆಸ್ಸೆಸ್ ಪರಿಸ್ಥಿತಿ ಬೇರೆ, ಆಗ ಅವರು ಹಳ್ಳಿಗೆ ಹೋದರೆ ಜನರು ಮಹಾತ್ಮ ಗಾಂಧಿಯನ್ನು ಕೊಂಧವರೆAದು ಅವರನ್ನು ಸೇರಿಸುತ್ತಿರಲಿಲ್ಲ ಇಂದಿನ ಸ್ಥಿತಿ ಬೇರೆ.

ಇಂದು ಅವರ ಪೂರ್ತಿ ಬಹುಮತ ಇದೆ, ವಾಸ್ತವವನ್ನು ಅರಿಯದಿದ್ದರೆ ನಾವು ಹೋರಾಡಲು ಸಾಧ್ಯವಿಲ್ಲ, ಇಂದಿನ ಪರಿಸ್ಥಿತಿ ಕೇಂದ್ರದ ಸರ್ಕಾರವು, ಅನೇಕ ರಾಜಕೀಯ ನಾಯಕರನ್ನು ಇಡಿ, ಸಿಬಿಐ ಇತ್ಯಾದಿಗಳ ಮೂಲಕ ನಿಯಂತ್ರಿಸಲು ನೋಡುತ್ತದೆ, ಒಂದು ಪ್ರಶ್ನೆಗೆ ಉತ್ತರಿಸಬೇಕು, ಎಲ್ಲ ರಾಜಕೀಯ ನಾಯಕರೂ ಸೇರಿ ಒಂದು ತಂಢವಾಗಬೇಕು

ಇAದು ಹೊಸ ದೇವಸ್ಥಾನ, ಹೊಸ ಪೂಜಾರಿ, ಅದು ಸಂಸತ್ ಭವನ ಮತ್ತು ಅದರ ಹೊಸ ಪೂಜಾರಿಗಳು

ರಸ್ತೆಯಲ್ಲಿ ಕೂಗಾಡುವುದರಿಂದ ಪ್ರಯೋಜನವಿಲ್ಲ, ಜನರು ಎಚ್ಚರಗೊಂಡಿದ್ದಾರೆ, ಅವರಿಗೆ ಹೆಚ್ಚಿನದೇನನ್ನಾದರೂ ತಿಳಿಸುತ್ತಿದ್ದೀರಾ? ಅವರಿಗೆ ವಿಷಯ ಗೊತ್ತಿದೆ, ಅದನ್ನು ವ್ಯಕ್ತಪಡಿಸುವ ಸಾಧನ ಅವರ ಬಳಿ ಇಲ್ಲ, ಇಂದು ಬೇಕಿರುವುದು ಕಾರ್ಯಾಚರಣೇಯ ಸಾಧನವನ್ನು ತಯಾರಿಸುವುದು ಇಂದಿನ ಕೆಲಸ, ಅದನ್ನು ಸಿದ್ಧಪಡಿಸುವ ಯೋಜನೆ ನಮ್ಮ ಬಳಿಯಿರಬೇಕು, ಇಲ್ಲವಾದರೆ ಈ ಬಗ್ಗೆ ಚರ್ಚಿಸುವುದು ವ್ಯರ್ಥ ಎಂದೆನಿಸುತ್ತದೆ

ಇAದು ಏನು ಪರಿಸ್ಥಿತಿಯಲ್ಲೀದ್ದೇವೆಂಧರೆ ಒಂದೋ ಸಂವಿಧಾನ ಉಳಿಯುತ್ತದೆ ಅಥವಾ ಉಳಿಯುವುದಿಲ್ಲ, ಪ್ರಾದೇಶಿಕ ಪಕ್ಷಗಳಿಗೆ ಸಂವಿಧಾನದ ಅಗತ್ಯ ಇರಬಹುದು, ಆದರೆ ರಾಷ್ಟಿçÃಯ ಪಕ್ಷಗಳ ಬದ್ಧತೆ ಸಾಂವಿಧಾನಿಕ ಪ್ರಜಾತಂತ್ರದ ಕಡೆಗಿಲ್ಲ,. ಸಾಂವಿಧಾನಿಕ ಪ್ರಜಾತಂತ್ರದ ಸೌಂದರ್ಯ ಇರುವುದು ಎಷ್ಟೇ ಸಣ್ಣ ಸಮುದಾಯಗಳ ವ್ಯಕ್ತಿಯೂ ನಿಲ್ಲಬಹುದು, ಆದರೆ ರಾಷ್ಟಾçಧ್ಯಕ್ಷರ ಪ್ರಜಾತಂತ್ರದ ಮಾದರಿಯಲ್ಲಿ ಅದು ಸಾಧ್ಯವಿಲ್ಲ, ಇಲ್ಲಿನ ಲಿಂಗಾಯತ ಸಮುದಾಯ ಬೇರೆ ಕಡೆ ನಿಮಗೆ ಕಾಣುತ್ತದೆಯೇ? ರಾಷ್ಟಾçಧ್ಯಕ್ಷರ ಮಾದರಿ ಪ್ರಜಾತಂತ್ರ ಜಾತಿ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ನಾವು ಈಗಲೂ ಮತದಾನವನ್ನು ಅಡ್ಡಡ್ಡಕ್ಕೆ ಮಾಡುತ್ತೇವೆ, ನೇರವಾದ ಮತದಾನ ಮಾಡುವುದೇ ಇಲ್ಲ ಮತ್ತು ಮೇಲಿನಿಂದ ಕೆಳಕ್ಕೆ ಮತದಾನದ ಪದ್ಧತಿಯಂತೂ ಇಲ್ಲೇ ಇಲ್ಲ, ಸಣ್ಣ ಸಣ್ಣ ಸಮುದಾಯಗಳು ಕುಂಬಾರ ಕಮ್ಮಾರ ಅಕ್ಕಸಾಲಿಗ ಇಂತಹ ಯಾರಿಗಾದರೂ ಅಭ್ಯರ್ಥಿ ಪಟ್ಟ ಸಿಕ್ಕಿದೆಯಾ? ಇದೇ ಪ್ರಶ್ನೆ ಬರುತ್ತದೆ, ನಿನ್ನ ಸಮುದಾಯದ ಮತ ಎಷ್ಟಿದೆ? 300 ಮನೆ ಅಂಧರೆ 1000 ಓಟು, ಹೇಗೆ ಗೆಲ್ಲುತ್ತೀ ಎಂಬ ಪ್ರಶ್ನೆ. ಪ್ರಜಾತಂತ್ರ ಬೇಕು ಇದರಲ್ಲಿ ಅನುಮಾನವಿಲ್ಲ, ಆದರೆ ಜಾತಿ ಆಧಾರಿತ ಪ್ರಜಾತಂತ್ರವನ್ನು ನಿರ್ಮೂಳನೆ ಮಾಡಬೇಕು, ಅದಕ್ಕೆ ನಿಮ್ಮ ಹತ್ತಿರ ಇರುವ ಸಾಧನ ಏನು? ನಿಮ್ಮ ಹತ್ತಿರ ಇಂತಹ ಒಂದು ಸಾಧನ ಇರಬೇಕು ಅದರ ಆಧಾರದಲ್ಲಿ ನೀವು ಟಿಕೆಟ್ ಹಂಚಬೇಕು, ಅದಕ್ಕೆ ನಿಮ್ಮ ಬಳಿ ಒಂದು ಪಕ್ಷ ಇರಬೇಕು

ಅಭ್ಯರ್ಥಿಯ ಪ್ರಜಾತಾಂತ್ರೀಕರಣದ ಒಂದು ಹೊಸ ಮಾನದಂಡವನ್ನೂ ನಾವು ಸೇರಿಸಬೇಕು, ಅದನ್ನು ನಾವು ಪ್ರತಿಪಾದಿಸಿದರೆ ಧರ್ಮವು ರಾಜನೀತಿಯಿಂದ ಹೊರಗಾಗುತ್ತದೆ, ಆಗ ರಾಜಕೀಯದ ಕೇಂದ್ರ ಪ್ರಶ್ನೆ ಅಭಿವೃದ್ಧಿ ಮತ್ತು ಜನಸಮುದಾಯಗಳ ಮುನ್ನಡೆ.

ಚರ್ಚೆಗಳು ದೇಶದ ರಾಜ್ಯದ ಆರ್ಥಿಕತೆ ಎಷ್ಟು ಬೆಳೆಯಿತು ಎಂಬ ವಿಷಯದ ಸುತ್ತ ನಡೆಯುವುದಿಲ್ಲ, ಕುಟುಂಬಗಳ ಕ್ಷೇಮ ಯಾವ ಮಟ್ಟದಲ್ಲಿದೆ ಎಂಬುದರ ಸುತ್ತ ಚರ್ಚೆ ನಡೆಯುತ್ತದೆ, ಜಿಡಿಪಿ ಸುತ್ತ ಅಲ್ಲ, ಮನುಷ್ಯರ ಮುಖಗಳ ಮೇಲೆ ಸಂತೃಪ್ತಿಯ ಸುತ್ತ ವಿಚಾರ ಇರುತ್ತದೆ. ಎಷ್ಟು ಕಾರ್ಖಾನೆಗಳು ಬಂದವೆAಬುದಲ್ಲ, ಒಂದು ಕುಟುಂಬ ಸಂತೋಷವಾಗಿದೆಯೇ ಎಮಭುದು ಮುಖ್ಯವಾಗುತ್ತದೆ, ನಾವು ಮಾನದಂಡಗಳನ್ನು ಬದಲಿಸಬಹುದು, ಅದಕ್ಕೆ ಬದ್ಧತೆ ಇರಬೇಕು

ಇನ್ನೊಂದು ವಿಷಯ ಬರುತ್ತದೆ, ಕುಟುಂಬದ ದೃಷ್ಟಿಯಿಂದ ನಾನು ಖುಷಿಯಾಗಿದ್ದೇನೆ ಎಂಬುದು, ಅದನ್ನು ಒಪ್ಪೋಣ, ಆದರೆ ನೀವು ಬದುಕುತ್ತಿರುವ ಸಮಾಜದಲ್ಲಿ ನೀವು ಸುರಕ್ಷಿತರಾಗಿದ್ದೀರಾ? ಯಾಕಿಲ್ಲ ಎಂದರೆ ಅದು ಕುಂಠಿತಗೊಳ್ಳುತ್ತಾ ಹೋಗುತ್ತಿದೆ. ಇಂದು ಸುಪ್ರೀಮ್ ಕೋರ್ಟ್ ಕೂಡಾ ಜಾತ್ಯಾಧಾರಿತ ಜನಗಣತಿ ಬೇಡ ಎನ್ನುತ್ತಿದೆ, ಯಾಕೆ ಬೇಡ? ಯಾಕೆ ನಿಮಗೆ ಭಯ? 

ಏಕೆಂದರೆ 50ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ, ಆರ್ಥಿಕ ಜನಾಂಗಹತ್ಯೆಯ ವಿಚಾರದ ಬಗ್ಗೆ ನಾವು ಮಾತಾಡುವುದಿಲ್ಲ, ನಂತರ 90ರ ದಶಕದಲ್ಲಿ ಖಾಸಗೀಕರಣ ಬಂತು, 1930ರ ಸಮಯದಲ್ಲಿ ಎಷ್ಟು ಜಾತಿಗಳಿದ್ದವೋ ಅಷ್ಟೇ ಜಾತಿಗಳು ಈಗಲೂ ಗುರುತಿಸಲ್ಪಟ್ಟವು

ನೀವು ಯಾವ ಗ್ರಾಮದಿಂದ ಬಂದಿದ್ದೀರೋ ಅಲ್ಲಿ ಎಷ್ಟು ಜಾತಿಗಳಿದ್ದವೆಂದು ಕೇಳಿರಿ, ಈಗ ಅಷ್ಟೇ ಜಾತಿಗಳು ಸಿಗುತ್ತವಾ ನೋಡಿ, 1950ರ ಸಮಯದಲ್ಲಿ 15 ಜಾತಿಗಳಿದ್ದವು ಎಂದುಕೊಳ್ಲಿ, ಈಗ 10 ಮಾತ್ರ ಇವೆ, ಅಂದರೆ ಉಳಿದವು ಎಲ್ಲಿ ಹೋದವು, ಯಾಕೆ ಜಾತಿಗಣತಿ ಬೇಡ ಎನ್ನುತ್ತಿದ್ದಾರೆಂದರೆ, 50ರಲ್ಲಿ ಆರ್ಥಿಕ ಕ್ರಾಂತಿಯ ಸಮಯದಲ್ಲಿ ಅನೇಕ ಸಮುದಾಯಗಳ ಆರ್ಥಿಕ ಮೂಲಗಳನ್ನು ಇಲ್ಲವಾಗಿಸಿ ಅವರುಗಳು ನಾಶವಾಗುವಂತೆ ಮಾಡಲಾಯಿತು, ಹಸಿವಿನ ಸಾವುಗಳಾದವು, ಇದೆಲ್ಲ ಇಂದು ಸರ್ಕಾರಕ್ಕಾಗಲೀ ನ್ಯಾಯಾಲಯಕ್ಕಾಗಲೀ ಬೇಕಿಲ್ಲ ಎಂದರು.

ಇAದು ಸಂವಿಧಾನವನ್ನು ಉಳಿಸಬೇಕೆಂದರೆ ಅದನ್ನು ಉಳಿಸುವುದು ಯಾರು? ಫುಲೆ, ಬಾಬಾಸಾಹೇಬ್ ಶಾಹು ಮಹಾರಾಜ್ ಮುಂತಾದವರ ಚಿಂತನೆಗಲು ಮುಂದಕ್ಕೆ ಹೋಗಬೇಕು, ನಾನು ಉಳಿದವರ ಸಮಯ ತೆಗೆದುಕೊಂಡು ಅವರಿಗೆ ಅನ್ಯಾಯ ಮಾಡದೆ ಇಲ್ಲಿಗೇ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೀನಿ.

ಈ ಸಂಧರ್ಭದಲ್ಲಿ ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ, ತುಕಾರಾಂ ಚಂಚಲಕರ, ಬಸವರಾಜ ಸೂಳಿಭಾವಿ, ರಿಯಾಜ್ ಫಾರೂಕಿ, ಮಲ್ಲಮ್ಮ ಯಾಳವಾರ, ಭಗವಾನ ರೆಡ್ಡಿ, ಕೋಣೇಶ್ವರ ಸ್ವಾಮೀಜಿ, ಅಬ್ದುಲ್ ರೆಹಮಾನ್ ಬಿದರಕುಂದಿ, ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Friday, May 19, 2023

ಹೃದಯಾಘಾತದಿಂದ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ನಿಧನ

ಬೆಂಗಳೂರು: ನಾರಾಯಣ ನೇತ್ರಾಲಯ ಮುಖ್ಯಸ್ಥ ಹಾಗೂ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ (69) ಅವರು ಇಂದು ನಿಧನರಾಗುವು ಮೂಲಕ ಇನ್ನಿಲ್ಲವಾಗಿದ್ದಾರೆ.

ಇಂದು ಸಂಜೆ 6 ಗಂಟೆಯ ವೇಳೆಯಲ್ಲಿ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ಅವರು ನಾರಾಯಣ ನೇತ್ರಾಲಯಕ್ಕೆ ತೆರಳಿ, ರೋಗಿಗಳಿಗೆ ಕಣ್ಣಿನ ಚಿಕಿತ್ಸೆ ನೀಡಿ ಬಂದಿದ್ದರು.

ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾದಂತ ಅವರಿಗೆ, ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಯಶವಂತಪುರದಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಅಂದಹಾಗೇ, ಡಾ.ಕೆ ಭುಜಂಗಶೆಟ್ಟಿ ಅವರು, ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ಅವರು 1978ರಲ್ಲಿ ಎಂಬಿಬಿಎಸ್ ಮಾಡಿದರು. ಅವರು 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ನೇತ್ರ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ರೆಸಿಡೆನ್ಸಿ ಮಾಡಿದರು. ಅವರು ಎಂಬತ್ತರ ದಶಕದಲ್ಲಿ ಒಂದು ಸಣ್ಣ ಚಿಕಿತ್ಸಾಲಯದಲ್ಲಿ ನೇತ್ರಶಾಸ್ತ್ರ ಅಭ್ಯಾಸವನ್ನು ಪ್ರಾರಂಭಿಸಿದರು.

ನಾರಾಯಣ ನೇತ್ರಾಲಯದಲ್ಲಿ ವಿವಿಧ ಉಪ ವಿಶೇಷತೆಗಳ ಅಭಿವೃದ್ಧಿಗೆ ಅವರು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ ಮತ್ತು ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಒಬ್ಬ ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಇಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. ಅವರು ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿದ್ದರು. ಇಂತಹ ಅವರು ಈಗ ಇನ್ನಿಲ್ಲವಾಗಿದ್ದಾರೆ.

ಅಕ್ಟೋಬರ 1 ರಿಂದ 2000 ರೂ. ನೋಟು ಚಲಾವಣೆಯಲ್ಲಿ ಸ್ಥಗಿತ



ಈ ದಿವಸ ವಾರ್ತೆ

ದೇಶದಲ್ಲಿ ನೋಟು ಅಮಾನ್ಯಕರಣದ ಬಳಿಕ ಹೊಸ ನೋಟುಗಳಾಗಿ 2000 ರೂ. ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಕ್ ಪರಿಚಯಿಸಿತ್ತು. ಇದೀಗ ಚಲಾವಣೆಯಿಂದ 2,000 ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಕ್ ಹಿಂಪಡೆಯುವ ಘೋಷಣೆ ಮಾಡಿದೆ.

ಸೆಪ್ಟೆಂಬರ್ 30ರ ಒಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.

20-05-2023 EE DIVASA KANNADA DAILY NEWS PAPER

Saturday, May 13, 2023

ನಾಳೆ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಆಯ್ಕೆ ಬಗ್ಗೆ ಚರ್ಚೆ

ಬೆಂಗಳೂರು: ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಆಯ್ಕೆಯ ಬಗ್ಗೆ ಚರ್ಚೆ ನಡೆಯಲಿದ್ದು, ಸಿ ಎಲ್ ಪಿ ನಾಯಕರು ಯಾರು ಎಂಬುದಾಗಿ ಘೋಷಣೆ ಮಾಡಲಿದೆ.

ಈ ಕುರಿತಂತೆ ಮಾಹಿತಿ ನೀಡಿದಂತ ಕರ್ನಾಟಕ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ ಪಿ) ಮೊದಲ ಸಭೆಯನ್ನು ನಾಳೆ ಸಂಜೆ 5:30 ಕ್ಕೆ ಕರೆಯಲಾಗಿದೆ' ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷ ( Congress Party ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಅದರಲ್ಲೂ ದಾಖಲೆ ಎನ್ನುವಂತೆ 42 ಹೊಸಬರಿಗೆ ನೀಡಿದ್ದಂತ ಕ್ಷೇತ್ರಗಳಲ್ಲಿ 35 ಮಂದಿ ಗೆಲುವು ಸಾಧಿಸಿದ್ದಾರೆ.

ಇನ್ನೂ ಬಿಜೆಪಿಯಿಂದ ಗುಜರಾತ್ ಮಾಡಲ್ ಎನ್ನುವಂತೆ 75 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಇವರಲ್ಲಿ 19 ಜನರು ಸೋಲನ್ನು ಕಂಡಿದ್ದಾರೆ.

ಇನ್ನೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಲಿ 13 ಸಚಿವರು ಸೋಲು ಕಂಡಿದ್ದಾರೆ. ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧಿಸಿದ್ದಂತ ಬಿ.ಶ್ರೀರಾಮುಲು ಸೋಲು ಕಂಡಿದ್ದರೇ, ಮುಧೋಳ ಕ್ಷೇತ್ರದಿಂದ ಸ್ಪರ್ಧಿಸಿದ್ದಂತ ಗೋವಿಂದ ಕಾರಜೋಳ ಸೋತಿದ್ದಾರೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆಸಿ ಮಾಧುಸ್ವಾಮಿ, ಹಿರೆಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್, ನವಲಗುಂದದಲ್ಲಿ ಸಿಸಿ ಪಾಟೀಲ್ ಸೇರಿದಂತೆ 17 ಮಂದಿ ಹಾಲಿ ಸಚಿವರು ಸೋಲು ಕಂಡಿದ್ದಾರೆ.

ಮತ್ತೊಂದೆಡೆ ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಆಯ್ಕೆ ಬಗ್ಗೆ ಚರ್ಚೆ ಕೂಡ ನಡೆಯಲಿದ್ದು, ಸಿಎಂ ಯಾರು ಎಂಬುದಾಗಿ ಘೋಷಣೆಯನ್ನು ಮಾಡಲಾಗುತ್ತದೆ.

14-05-2023 EE DIVASA KANNADA DAILY NEWS PAPER

Thursday, May 11, 2023

ಮೇ.13ರಂದು ನಗರದ ಸೈನಿಕ ಶಾಲೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಈ ದಿವಸ ವಾರ್ತೆ

ವಿಜಯಪುರ:  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ.10ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ  ಸುಸೂತ್ರವಾಗಿ ಮತದಾನ ನಡೆದಿದ್ದು, ಮತ ಎಣಿಕೆ ಕಾರ್ಯ ಮೇ.13ರಂದು  ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. 

26-ಮುದ್ದೇಬಿಹಾಳ ಹಾಗೂ 27-ದೇವರಹಿಪ್ಪರಗಿ ಮತಕ್ಷೇತ್ರದ ಇವಿಎಂ ಮತಯಂತ್ರಗಳನ್ನು ಒಡೆಯರ ಸದನ, 28-ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಮತಕ್ಷೇತ್ರದ ಇವಿಯಂ ಮತಯಂತ್ರಗಳನ್ನು  ಆದಿಲ್‍ಶಾಹಿ ಸದನ, 30-ಬಿಜಾಪುರ ನಗರ ಹಾಗೂ 31-ನಾಗಠಾಣ ಮತಕ್ಷೇತ್ರದ ಇವಿಎಂ ಮತಯಂತ್ರಗಳನ್ನು ಹೊಯ್ಸಳ ಸದನ ಹಾಗೂ 32-ಇಂಡಿ ಮತ್ತು 33-ಸಿಂದಗಿ ಮತಕ್ಷೇತ್ರದ ಇವಿಎಂ ಮತಯಂತ್ರಗಳನ್ನು ವಿಜಯ ನಗರ ಸದನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಮೇ.13 ರಂದು ಬೆಳಿಗ್ಗೆ 7-30ಕ್ಕೆ ಆಯಾ ಚುನಾವಣಾಧಿಕಾರಿಗಳು ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. 

14 ಟೇಬಲ್‍ಗಳಲ್ಲಿ ಮತ ಎಣಿಕೆ:  

ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್‍ಗಳಲ್ಲಿ ಇವಿಎಂ ಮತ ಎಣಿಕೆ ಹಾಗೂ 4 ಟೇಬಲ್‍ಗಳಲ್ಲಿ ಅಂಚೆ ಮತಪತ್ರದ ಎಣಿಕೆ ಮತ್ತು ಸೇವಾ ಮತದಾರರ ಅಂಚೆ ಮತಪತ್ರಗಳನ್ನು ಚುನಾವಣಾಧಿಕಾರಿಗಳ ಟೇಬಲ್‍ನಲ್ಲಿ  ಎಣಿಕೆ ಕಾರ್ಯ ಮಾಡಲಾಗುವುದು. 

ಮತ ಎಣಿಕೆ ಸುತ್ತುಗಳು : 

 ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಪೈಕಿ ಮತಗಟ್ಟೆಗಳನುಸಾರವಾಗಿ  ಬಸವನಬಾಗೇವಾಡಿ ಮತಕ್ಷೇತ್ರದ 17 ಸುತ್ತುಗಳು,  ಮುದ್ದೇಬಿಹಾಳ, ದೇವರಹಿಪ್ಪರಗಿ ಹಾಗೂ ಬಬಲೇಶ್ವರ ಮತಕ್ಷೇತ್ರದ 18 ಸುತ್ತುಗಳು ಹಾಗೂ ಬಿಜಾಪುರ ನಗರ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ 20 ಸುತ್ತುಗಳು ಹಾಗೂ ನಾಗಠಾಣ ಮತಕ್ಷೇತ್ರದ 22 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ಮಾಡಲಾಗುವುದು. 

408 ಮತ ಎಣಿಕೆ ಸಿಬ್ಬಂದಿ: ಮತ ಎಣಿಕೆ ಕಾರ್ಯಕ್ಕಾಗಿ  ಪ್ರತಿ ವಿಧಾನಸಭಾವಾರು 14 ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ವಿಧಾನಸಭೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು 17 ಮೈಕ್ರೋ ಆಬ್ಸರವರ್ ಒಳಗೊಂಡಂತೆ ಒಟ್ಟು 51  ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ 112 ಟೇಬಲ್, 136 ಎಣಿಕೆ ಮೇಲ್ವಿಚಾರಕರು, 136 ಎಣಿಕೆ ಸಹಾಯಕರು, 136 ಮೈಕ್ರೋ ಆಬ್ಸರವರ್ ಸೇರಿದಂತೆ ಒಟ್ಟು 408 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 

224 ಅಂಚೆ ಮತ ಪತ್ರ ಎಣಿಕೆ ಸಿಬ್ಬಂದಿ : 

ಅದರಂತೆ ಅಂಚೆ ಮತಪತ್ರಗಳ ಎಣಿಕೆಯನ್ನು ಪ್ರತಿ ವಿಧಾನಸಭಾ ವಾರು 4 ಟೇಬಲ್‍ಗಳಲ್ಲಿ ಜಿಲ್ಲೆಯ 8 ವಿಧಾನಸಭೆಗಳಿಗೆ 32 ಟೇಬಲ್‍ಗಳ ವ್ಯವಸ್ಥೆ, ಹಾಗೂ ಪ್ರತಿ ವಿಧಾನಸಭಾವಾರು 5 ಎಣಿಕೆ ಮೇಲ್ವಿಚಾರಕರು, 10 ಎಣಿಕೆ ಸಹಾಯಕರು, 5 ಮೈಕ್ರೋ ಆಬ್ಸರ್‍ವರ್ ಹಾಗೂ 4 ಎಆರ್‍ಓ ಸೇರಿದಂತೆ ಒಟ್ಟು 28 ಜನ ಪ್ರತಿ ವಿಧಾನಸಭೆಗೆ  ನಿಯೋಜಿಸಲಾಗಿದೆ. ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳಿಗೆ ಅಂಚೆ ಮತ ಪತ್ರ ಎಣಿಕೆಗಾಗಿ 32 ಟೇಬಲ್‍ಗಳ ವ್ಯವಸ್ಥೆ, 40 ಎಣಿಕೆ ಮೇಲ್ವಿಚಾರಕರು, 80 ಎಣಿಕೆ ಸಹಾಯಕರು, 40 ಮೈಕ್ರೋ ಆಬ್ಸರವರ್, 32 ಎಆರ್‍ಓ ಸೇರಿದಂತೆ ಒಟ್ಟು 224 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 

ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಆಯೋಗದಿಂದ ಅನುಮತಿ ಪಡೆದ ಅಧಿಕಾರಿಗಳು, ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿ, ಸ್ಪರ್ಧಿಸಿದ ಅಭ್ಯರ್ಥಿ ಹಾಗೂ ಅವರ ಚುನಾವಣಾ ಏಜೆಂಟರು ಮತ್ತು ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

12-05-2023 EE DIVASA KANNADA DAILY NEWS PAPER

11-05-2023 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಸುಸೂತ್ರ ಮತದಾನ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಇವಿಎಂ ಮತಯಂತ್ರ ಭದ್ರತಾ ಕೊಠಡಿಯಲ್ಲಿ ಸುರಕ್ಷಿತ


ಈ ದಿವಸ ವಾರ್ತೆ

ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ.10ರಂದು  ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಮತದಾನ  ನಡೆದಿದ್ದು, ಜಿಲ್ಲೆಯಾದ್ಯಂತ ಒಟ್ಟು ಶೇ 71.34 ರಷ್ಟು ಮತದಾನವಾಗಿದೆ. 

ಇವಿಎಂ ಮತಯಂತ್ರಗಳು ಭದ್ರತಾ ಕೊಠಡಿಯಲ್ಲಿ ಸುರಕ್ಷಿತ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತಯಂತ್ರಗಳನ್ನು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಎಲ್ಲ ಮತಕ್ಷೇತ್ರಗಳಿಂದ ಬಂದ ಇವಿಎಂ ಮತಯಂತ್ರಗಳನ್ನು  ಸುರಕ್ಷಿತವಾಗಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಭದ್ರತಾ ಕೊಠಡಿಗೆ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿದೆ. 

ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇಕಡಾವಾರು ಮತದಾನದ ವಿವರದಂತೆ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇ 70.91 ರಷ್ಟು ಮತದಾನವಾಗಿದೆ. 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ           ಶೇ.68.65 ರಷ್ಟು ಮತದಾನವಾಗಿದೆ. 28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ  ಶೇ. 75.18 ರಷ್ಟು ಮತದಾನವಾಗಿದೆ. 29-ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶೇ 81.79 ರಷ್ಟು ಮತದಾನವಾಗಿದೆ.        

30-ಬಿಜಾಪೂರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 64.59 ರಷ್ಟು ಮತದಾನವಾಗಿದೆ. 31-ನಾಗಠಾಣ (ಎಸ್ಸಿ) ಮೀಸಲು  ವಿಧಾನಸಭಾ ಕ್ಷೇತ್ರದಲ್ಲಿ ಶೇ 66.48  ರಷ್ಟು ಮತದಾನವಾಗಿದೆ. 32-ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 73.62 ರಷ್ಟು ಮತದಾನವಾಗಿದೆ. 33-ಸಿಂದಗಿ  ವಿಧಾನಸಭಾ ಕ್ಷೇತ್ರದಲ್ಲಿ ಶೇ 72.46 ರಷ್ಟು ಮತದಾನವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಶೇ 71.34ರಷ್ಟು ಮತದಾನವಾಗಿದೆ.  

ಜಿಲ್ಲೆಯಲ್ಲಿ 9,66,535 ಪುರುಷ ಮತದಾರರು, 9,26,096 ಮಹಿಳಾ ಮತದಾರರು ಹಾಗೂ 221 ಇತರೆ ಮತದಾರರು ಸೇರಿದಂತೆ ಒಟ್ಟು 18,92,852 ಮತದಾರರಿದ್ದಾರೆ. ಈ ಪೈಕಿ ಮೇ.10ರಂದು ನಡೆದ ಮತದಾನದಲ್ಲಿ  6,99,701 ಪುರುಷರು, 650643 ಮಹಿಳೆಯರು, 26 ಇತರೆ ಮತದಾರರು ಸೇರಿದಂತೆ ಒಟ್ಟು 13,50,370 ಮತದಾರರು ಮತ ಚಲಾಯಿಸಿದ್ದಾರೆ. 

ವಿಧಾನಸಭಾ ಕ್ಷೇತ್ರವಾರು ವಿವರದಂತೆ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 1,53,887 ಮತದಾರರು ಮತ ಚಲಾಯಿಸಿದ್ದಾರೆ. 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ  150442 ಮತದಾರರು ಮತ ಚಲಾಯಿಸಿದ್ದಾರೆ.  28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ 157728 ಮತದಾರರು ಮತ ಚಲಾಯಿಸಿದ್ದಾರೆ.                         29-ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 177601 ಮತದಾರರು ಮತ ಚಲಾಯಿಸಿದ್ದಾರೆ. 30-ಬಿಜಾಪೂರ ನಗರ ವಿಧಾನಸಭಾ ಕ್ಷೇತ್ರದಲ್ಲಿ 181911 ಮತದಾರರು ಮತ ಚಲಾಯಿಸಿದ್ದಾರೆ.31-ನಾಗಠಾಣ  ವಿಧಾನಸಭಾ ಕ್ಷೇತ್ರದಲ್ಲಿ 178915 ಮತದಾರರು ಮತ ಚಲಾಯಿಸಿದ್ದಾರೆ. 32-ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 178511 ಮತದಾರರು ಮತ ಚಲಾಯಿಸಿದ್ದಾರೆ. 33-ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ 171375 ಮತದಾರರು ಸೇರಿದಂತೆ ಒಟ್ಟು 13,50,370 ಮತದಾರರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.

Tuesday, May 9, 2023

ಸರದಿ ಸಾಲಿನಲ್ಲಿ ನಿಂತು ಪತ್ನಿಯೊಂದಿಗೆ ಮತದಾನ ಮಾಡಿದ ಸರಳ, ಪ್ರಾಮಾಣಿಕ ಅಧಿಕಾರಿ ರಾಹುಲ್ ಶಿಂಧೆ

 


ಈ ದಿವಸ ವಾರ್ತೆ

ವಿಜಯಪುರ: ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿನ ಕ್ರೀಡಾ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಸರಳ, ಪ್ರಾಮಾಣಿಕ ಜಿಲ್ಲಾ ಪಂಚಾಯತಿಯ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು  ಪತ್ನಿಯೊಂದಿಗೆ ಮತದಾನ ಮಾಡಿದರು.



ಕುಟುಂಬ ಸಮೇತ ಮತ ಚಲಾಯಿಸಿದ ದಕ್ಷ ಜಿಲ್ಲಾಧಿಕಾರಿ ದಾನಮ್ಮನವರ

ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಜಿಲ್ಲೆಯ ದಕ್ಷ  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಬಿಜಾಪೂರ ನಗರ ವಿಧಾನ ಸಭಾ ಮತಕ್ಷೇತ್ರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿನ ಯುವ ಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆ  ಸಂಖ್ಯೆ 50ರಲ್ಲಿ ಪತ್ನಿ ಶ್ವೇತಾ ದಾನಮ್ಮನವರು ಕುಟುಂಬ ಸಮೇತ  ಮತದಾನ ಮಾಡಿದರು.

ಕುಟುಂಬ ಸಮೇತ ಮತ ಚಲಾಯಿಸಿದ ಯತ್ನಾಳ

 


ಈ ದಿವಸ ವಾರ್ತೆ

ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ನಗರ ಎಸ್.ಎಸ್.ಹೈಸ್ಕೂಲ್ ದಲ್ಲಿನ ಮತ ಕೇಂದ್ರ 61 ರಲ್ಲಿ ಕುಟುಂಬ ಸಮೇತ ತೆರಳಿ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,   ತಪ್ಪದೆ ತಮ್ಮ ಹತ್ತಿರದ ಮತ ಕೇಂದ್ರಕ್ಕೆ ತೆರಳಿ, ಮತಯಾಚನೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಸಹಕರಿಸಲು ವಿನಂತಿಸಿಕೊಂಡರು.

ಚುನಾವಣಾ ಆಯೋಗ ನಿಗದಿಪಡಿಸಿದ ಯಾವುದಾದರೊಂದು ದಾಖಲೆ ತೋರಿಸಿ ಮತದಾನ ಮಾಡಿ

ಈ ದಿವಸ ವಾರ್ತೆ

ವಿಜಯಪುರ: ಪ್ರಜಾಪ್ರಭುತ್ವ ಬಲಪಡಿಸಲು ಅತಿಮುಖ್ಯವಾದ ಮತದಾನದ ಹಬ್ಬದಲ್ಲಿ 18 ವರ್ಷ ಪೂರೈಸಿದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬ ಅರ್ಹ ಮತದಾರರು ಮೇ.10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸಂಬಂಧಿಸಿದ ಮತಗಟ್ಟೆಗೆ ಹೋಗಿ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಕರೆ ನೀಡಿದ್ದಾರೆ. 

ಪ್ರತಿ 5 ವರ್ಷಗಳಿಗೊಮ್ಮೆ ಬರುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರತಿಯೊಬ್ಬರು ಉತ್ಸಾಹದಿಂದ ಭಾಗವಹಿಸಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಈ ಸಲದ ಚುನಾವಣೆಯಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತನಾಗದೇ ಪ್ರತಿಯೊಬ್ಬರು ಮೇ.10ರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಮತದಾನದಲ್ಲಿ ಭಾಗವಹಿಸಿ, ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಬಲಪಡಿಸಲು ಕೈ ಜೋಡಿಸುವಂತೆ ಅವರು ಕರೆ ನೀಡಿದ್ದಾರೆ. 

ಭಾವಚಿತ್ರ ಇರುವ ಪರ್ಯಾಯ ದಾಖಲೆ*: ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಮತದಾರರು ಮತಗಟ್ಟೆಗೆ ತೆರಳಿ ಚುನಾವಣಾ ಆಯೋಗ ಗುರುತಿಸಿ ಈ ಕೆಳಕಾಣಿಸಿದ ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗೆ ತೋರಿಸಿ ಮತದಾನ ಮಾಡಬಹುದುದಾಗಿದೆ. 

ಎಪಿಕ್ ಕಾರ್ಡ್, ಆಧಾರ ಕಾರ್ಡ್, ಎಂಜಿಎನ್‍ಆರ್‍ಇಜಿಎ ಜಾಬ್ ಕಾರ್ಡ್, ಬ್ಯಾಂಕ್-ಅಂಚೆ ಕಚೇರಿಯ ಭಾವಚಿತ್ರವಿರುವ ಪಾಸ್ ಪುಸ್ತಕ, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಪ್ಯಾನ್ ಕಾರ್ಡ್, ಸರ್ಕಾರಿ, ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ, ಚಾಲನಾ ಪರವಾನಿಗೆ, ಎಂಓಎಲ್ ಮತ್ತು ಇ ಅನ್ವಯ ನೀಡಲಾಗಿರುವ ಸ್ಮಾರ್ಟ್ ಕಾರ್ಡ್, ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ ಪತ್ರ, ಎಂಎಲ್‍ಎ, ಎಂಪಿ. ಅಧಿಕೃತ ಗುರುತಿನ ಚೀಟಿ, ವಿಶೇಷಚೇತನ ಗುರುತಿನ ಚೀಟಿಯಲ್ಲಿ ಯಾವುದಾದರೊಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದಾಗಿದೆ.

10-05-2023 EE DIVASA KANNADA DAILY NEWS PAPER