Sunday, May 28, 2023

ಮೇ 9 ಸಮ್ಮೇಳನದಲ್ಲಿ 8 ನಿರ್ಣಯಗಳು

 

ಈ ದಿವಸ ವಾರ್ತೆ
ವಿಜಯಪುರ: ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಸಂಘಟಕ ಹಾಗೂ ಹಿರಿಯ ಚಿಂತಕರಾದ ಬಸವರಾಜು ಸೂಳಿಬಾವಿ ಅವರು ಮೇ 9 ಸಮ್ಮೇಳನದಲ್ಲಿ 8 ನಿರ್ಣಯಗಳನ್ನು ಕೈಗೊಂಡರು. ಅವುಗಳೆಂದರೆ...
1. ವಿಜಯಪುರ ಜಿಲ್ಲೆ ಪಂಚನದಿಗಳ ಬೀಡು, ಉತ್ಕೃಷ್ಟ ಮಣ್ಣಿನ ಗುಣಧರ್ಮ ಹೊಂದಿದ, ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದ ನಾಡು. ಇಂತಹ ಜಿಲ್ಲೆಯಲ್ಲಿ ಒಟ್ಟ ಫಾರ್ಮ ಎಂದೇ ಖ್ಯಾತಿಯಿಂದ 1933 ರಲ್ಲಿಯೇ ಸ್ಥಾಪನೆಯಾದ ಕೃಷಿ ಸಂಶೋಧನಾ ಸಂಶೋಧನೆಯಿAದ ಇಂದು ಅನೇಕ ಕೃಷಿ ಸಂಬAಧಿತ ಸಂಸ್ಥೆಗಳೊAದಿಗೆ ಬೆಳೆದು ಹೆಮ್ಮರವಾಗಿ ನಿಂತಿದೆ. ಈ ಭಾಗದ ರೈತರಿಗೆ ಕೃಷಿ ಸಂಶೋಧನೆ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ವಿಜಯಪುರದಲ್ಲಿ ಕೃಷಿ ಸ್ವಾತಂತ್ರ‍್ಯ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಮತ್ತು ಜಿಲ್ಲೆಯಲ್ಲಿ ಈಗಾಗಲೇ ಹಿಟ್ನಳ್ಳಿಯಲ್ಲಿ ಆರಂಭಿಸಲಾದ ಬಿ.ಟೆಕ್ (ಕೃಷಿ) 'ಮಹಾವಿದ್ಯಾಲಯ ಮತ್ತು ಆಲಮೇಲದಲ್ಲಿ ಮಂಜೂರಾದ ತೋಟಗಾರಿಕೆ ಮಹಾವಿದ್ಯಾಲಯಗಳು ಜಿಲ್ಲೆಯಲ್ಲಿ ಮಾನರಾರಂಭಿಸಬೇಕು.
 2. ಜಿಲ್ಲೆಯಲ್ಲಿ ರೈತರು ವಿವಿಧ ಕೃಷಿ, ತೋಟಗಾರಿಕೆ ವೈವಿದ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಕೃಷಿಯಲ್ಲಿ ನಷ್ಟವನ್ನನುಭವಿಸಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅದಕ್ಕಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನ್ಯಾಯಯುತ ಟೆಂಬಲ ಬೆಲೆ ಘೋಷಿಸಬೇಕು. ಸರಕಾರದಿಂದ ಕೊಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಿ.
3. ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮಂಜೂರಾಗಿರುವ ವಿವಿಧ ಏತನೀರಾವರಿಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸುವದು ಹಾಗೂ ಭೀಮಾ ನದಿಯ ನೀರಿನ ಸಂಪೂರ್ಣ ಸದ್ಬಳಕೆ ಜಿಲ್ಲೆಯ ರೈತರಿಗಾಗಬೇಕು. ಅದೇ ರೀತಿ ಜಿಲ್ಲೆಯ ಜೀವನಾಡಿ ಡೋಣಿ ನದಿ ಹೊಳೆ ಅದರ ಸಂಪೂರ್ಣ ಸದ್ಬಳಕೆ ನದಿ ಪಾತ್ರದಲ್ಲಿರುವ ಜಿಲ್ಲೆಯ ರೈತರಿಗಾಗಬೇಕು.
4, ಜಿಲ್ಲೆಯಿಂದ ಅನೇಕ ಜನ ತಮ್ಮ ಜೀವನೋಪಾಯಕ್ಕಾಗಿ ಪಕ್ಕದ ಮಹಾರಾಷ್ಟ್ರ, ಗೋವಾ, ಆಂದ್ರ ಪ್ರದೇಶಗಳಿಗೆ ಪ್ರತಿ ವರ್ಷ ಗುಳೇ ಹೊಗುತ್ತಿದ್ದು, ಇದನ್ನು ತಪ್ಪಿಸಲು ಅವರ ಜೀವನೋಪಾಯಕ್ಕೆ ನಿರಂತರ ಉದ್ಯೋಗ ಕಲ್ಪಿಸುವಂತಾಗಬೇಕು. ಅದೇ ರೀತಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. 
5. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭೂರಹಿತ ದೀನದಲಿತರು ಬಡ ಕೃಷಿ ಕಾರ್ಮಿಕರು ಇದ್ದು ದುಡಿಯುವ ವರ್ಗಕ್ಕೆ ಕನಿಷ್ಟ 2 ಎಕರೆ ಪ್ರತಿ ಕುಟುಂಬಕ್ಕೆ ಜಮೀನು ಹಂಚಿಕೆ ಮಾಡಬೇಕು.
6. ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು ಮತ್ತು ಒಂದು ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಹಾಗೂ ಕನಿಷ್ಟ ಎರಡು ಜನಸ0ಖ್ಯೆಗಳಿಗುವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಬೇಕು.
7. ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಬಹಳದೊಡ್ಡ ಸಂಖ್ಯೆಯಲ್ಲಿ ವಸತಿ ನ ಕಾರ್ಮಿಕರಿದ್ದು ಇವರೆಲ್ಲರಿಗೂ ನಿವೇಶನ ಹಂಚುವ ಹಾಗೂ ಮನೆ ಕಟ್ಟಿಸಿಕೊಡುವ ಕೆಲಸವಾಗಬೇಕು.
8.5 ಕೆ.ಜಿ. ಗೋಧಿ 5 ಕೆಜಿ .ಜೋಳ ಕೊಡುವ ಕೆಲಸವಾಗಬೇಕು.

No comments:

Post a Comment