Sunday, May 28, 2023

ಸಾಂಕೇತಿಕ ಪ್ರತಿಭಟನೆ



ವಿಜಯಪುರ : ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಆರೋಪ ಎದಿರುಸುತ್ತಿರುವ ಸಂಸದ ಬ್ರಿಜೇಶ್ ಸಿಂಗ್ ರಾಜೀನಾಮೆ ಹಾಗೂ ಬಂಧನಕ್ಕೆ ಅಗ್ರಹಿಸಿ ಮೇ ಸಾಹಿತ್ಯ ಮೇಳದಲ್ಲಿ ಪಾಲ್ಗೊಂಡಿರುವ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಪ್ರಗತಿಪರ ಚಿಂತಕರು ಹಾಗೂ ಗಣ್ಯರು ವಿಜಯಪುರ ನಗರದ ರಂಗಮAದಿರದ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿದರು. ಇದೆ ಸಂಧರ್ಭದಲ್ಲಿ ಇವತ್ತು ಕೇಂದ್ರ ಸರಕಾರ ಪ್ರತಿಭಟನಾ ನಿರತ ಕುಸ್ತಿ ಪಟಗಳನ್ನು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಸಂಧರ್ಭದಲ್ಲಿ ಬಸವರಾಜ ಸೂಳಿಭಾವಿ ಪ್ರಭುಗೌಡ ಪಾಟೀಲ ಭೀಮಶಿ ಕಲಾದಗಿ ಸುರೇಖಾ ರಜಪೂತ ಅನಿಲ ಹೊಸಮನಿ ಸೇರಿದಂತೆ ಸಾವಿರಾರು ಜನ ಪ್ರಗತಿಪರರು ಉಪಸ್ಥಿತರಿದ್ದರು.

No comments:

Post a Comment