Sunday, May 28, 2023

ಪ್ರಜಾಪ್ರಭುತ್ವದ ಮೌಲ್ಯಗಳು ಸರಿಯಾಗಿ ಅನುಷ್ಠಾನವಾಗದಿರುವುದು ದುರಂತ: ಕಲ್ಯಾಣಿ ಎಂ ಎಸ್


ವಿಜಯಪುರ:ಯುವಜನರ ಕನಸು ಪ್ರಜಾಪ್ರಭುತ್ವದ ಕುರಿತು ಕನಸು ಹೇಗಿರಬೇಕೆಂದರೆ ಪ್ರಜಾಪ್ರಭುತ್ವದ ಮೌಲ್ಯಗಳು ಸರಿಯಾಗಿ ಅನುಷ್ಠಾನವಾಗದಿರುವುದು ದುರಂತ ಎಂದು ಯುವ ವಿಚಾರವಾದಿ ಕಲ್ಯಾಣಿ ಎಂ ಎಸ್ ಅವರು ಹೇಳಿದರು.

ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಎರಡನೇ ದಿನದ ಮೊದಲ ಗೋಷ್ಠಿ ಪ್ರಜಾಪ್ರಭುತ್ವ ಯುವ ಸ್ಪಂದನದಲ್ಲಿ ಮಾತನಾಡಿದರು.

ಪ್ರಜಾಪ್ರಬುತ್ವದ ಆಶಯಗಳನ್ನು ಚೆನ್ನಾಗಿ ಹರಡಬೇಕಾಗಿತ್ತು. ಅತ್ಯುತ್ತಮ ಸ್ಥಾನಕ್ಕೆ ಕರೆದುಹೋಗುವುದಾಗಿದೆ. ರಾಜಕೀಯ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ಬಹಳ ಮಹತ್ವವಾದ ಪಾತ್ರ ವಹಿಸುತ್ತದೆ

ಪ್ರಜಾಪ್ರಭುತ್ವದಲ್ಲಿ ಯುವಜನರ ಪಾತ್ರ ಅನನ್ಯವಾಗಿದೆ. ಬೆಲೆ ಏರಿಕೆ ಸೇರಿದಂತೆ ಅನೇಕ ಸವಾಲುಗಳು ನಮ್ಮ ಮುಂದೆ ಇವೆ. ಪ್ರಜಾಪ್ರಭುತ್ವದ ಆಶಯಗಳಿಗೆ ನೀರು ಹಾಕಬೇಕು. ನಮ್ಮ ಮಕ್ಕಳನ್ನು ಸ್ಬತಂತ್ರವಾಗಿ ಬಿಡಬೇಕು. ಆಯ್ಕೆ ಯ ಸ್ವಾತಂತ್ರವನ್ನು ನಾವು ಪಡೆಯಬೇಕು. ಹೊರತು ಯಾರು ನಮಗೆ ಕೊಡುವುದಿಲ್ಲ. ಮಹಿಳೆಯರು ಸ್ವತಂತ್ರ ಕೊಡೋದು ಅಲ್ಲ. ಪಡೆದುಕೊಳ್ಳೋದು ಎಂದರು. 

 ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಎಚ್ಸೇ ಎಸ್ರಿ ಅನುಪಮಾ ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸೂ ಸುಭಾಷ ಮಾನೆ ಟಿ ಎಸ್ ಗೊರವರ ಮೋಹನ ಮೇಟಿ ಮತ್ತು ಚೆನ್ನು ಕಟ್ಟಿಮನಿ ಇದ್ದರು.

No comments:

Post a Comment