Sunday, May 28, 2023

ಸರಕಾರ ಹೊಸ ಸಂಸತ್ತು ಭವನ ಉದ್ಘಾಟನೆಗೆ ಕರೆಯಲು ಮೀನಾಮೇಷ : ಸುಕೀರ್ತ ರಾಣಿ

 

ಈ ದಿವಸ ವಾರ್ತೆ
ವಿಜಯಪುರ : ಭಾರತದ ರಾಷ್ಟ್ರಪತಿಗಳು ಬುಡಕಟ್ಟು ಜನಾಂಗದವರಾಗಿರುವುದರಿAದ ಅವರನ್ನು ಹೊಸ ಸಂಸತ್ತು ಭವನ ಉದ್ಘಾಟನೆಗೆ ಕರೆಯಲು ಸರಕಾರ ಮೀನಾಮೇಷ ಎಣಿಸುತ್ತಿದೆ ಎಂದು ತಮಿಳುನಾಡಿನ ಖ್ಯಾತ ಪ್ರಗತಿಪರ ಸಾಹಿತಿ ಸುಕೀರ್ತ ರಾಣಿ ಅವರು ಹೇಳಿದರು
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ 2ನೇ ದಿನದ 2ನೇ ಗೋಷ್ಠಿ ಕವಿ ಗೋಷ್ಠಿ ಯಲ್ಲಿ ಆಶಯ ಭಾಷಣ ಮಾಡಿ ಮಾತನಾಡಿದರು.
ಬಾಲ್ಯದ ಶಾಲಾದಿನಗಳಲ್ಲಿ ನನ್ನನ್ನು ದಲಿತಳು ಎಂಬ ಕಾರಣಕ್ಕೆ ಹಿಂದಿನ ಬೆಂಚಗಳಲ್ಲಿ ಕೂರಿಸಲಾಗುತಿತ್ತು. ಇದು ಭಾರತದ ಜಾತಿ ವ್ಯವಸ್ಥೆಯ ಕರಾಳ ಮುಖ ತೋರಿಸುತ್ತದೆ.ಇಂಡಿಯನ್ ಎಕ್ಸ್ಪ್ರೆಸ್ ನವರು ಕೊಡುವ ಅಧಾನಿ ಗ್ರೂಪ್ ಪ್ರಯೋಜಿತ ಎಂಬ ಕಾರಣಕ್ಕೆ 10 ಲಕ್ಷ ಮೌಲ್ಯದ ಸಾಹಿತ್ಯ ಪ್ರಶಸ್ತಿ ತಿರಸ್ಕರಿಸಿದೆ ಯಾಕೆಂದರೆ ಅಧಾನಿಯಿಂದ ನಮ್ಮ ಹಕ್ಕಗಳು ದಮನಿತವಾಗುತ್ತಿವೆ ನನ್ನ ಎಲ್ಲ ಕವನಗಳು ಸರಕಾರಿ ವ್ಯವಸ್ಥೆ ಪ್ರಶ್ನಿಸುತ್ತಿವೆ. ತುಳಿತಕ್ಕೆ ಒಳಗಾದವರ ಧ್ವನಿಯಾಗಿ ನನ್ನ ಕವನಗಳು ಮೂಡಿಬಂದಿವೆ. ಅದರಲ್ಲಿ ಮುಖ್ಯವಾದುದು ಎಲ್ಲರು ಹೇಳುತ್ತಾರೆ ಕೇರಿ ಊರ ಹೊರಗೆ ಇರುತ್ತೆ ಎಂದು ನಾನು ಹೇಳುತ್ತೇನೆ ಕೇರಿ ಊರಿನ ಹೆಬ್ಬಾಗಿಲು ಎಂದು ಅವರು ತಮ್ಮ ಕವನದ ಸಾಲುಗಳನ್ನು ಮಾರ್ಮಿಕವಾಗಿ ನುಡಿದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ ಸಾಬಿತಾ ಬನ್ನಾಡಿ ಹಾಗೂ ವಿವಿಧ ಕವಿಗಳು ಇದ್ದರು. ವಾಣಿ ಪೆರಿಯೋಡಿ ಈರಪ್ಪ ಸುತಾರ ಕಾರ್ಯಕ್ರಮ ಸಂಯೋಜಿಸಿದರು. ಕವಿಗೋಷ್ಠಿಯಲ್ಲಿ ದೇವು ಮಾಕೊಂಡ ಫಾತಿಮಾ ರಾಲಿಯಾ ಶುಭಾ ಮರವಂತೆ ದೇವರಾಜ ಹುಣಸಿಕಟ್ಟೆ ಸುಧಾ ಆಡುಕಳ ಅಬ್ದುಲ್ ಹೈ ತೋರಣಗಲ್ಕ್ರ ಕವನ ವಾಚಿಸಿ ಪ್ರೇಕ್ಷಕರ ಜನಮನ ಸೆಳೆದರು. ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಎಚ್ ಎಸ್ ಅನುಪಮಾ ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

No comments:

Post a Comment