Saturday, January 20, 2024

ಜ.23ರಿಂದ ಜಿಲ್ಲಾ ಅಹಿಂದ ನಾಯಕರ ತಾಲೂಕು ಪ್ರವಾಸ

ಈ ದಿವಸ ವಾರ್ತೆ

ವಿಜಯಪುರ : ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಜ. 28 ರಂದು ಚಿತ್ರದುರ್ಗದಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ ತಾಲೂಕಾವಾರು ಪೂರ್ವಭಾವಿ ಸಭೆ ನಡೆಸಲು ಜಿಲ್ಲಾ ಅಹಿಂದ ನಾಯಕರು ಜ. 23 ರಿಂದ ಈ ಕೆಳಗಿನಂತೆ ತಾಲೂಕಗಳ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ. 23 ರಂದು ಬೆಳಗ್ಗೆ 10 ಗಂಟೆಗೆ ದೇವರಹಿಪ್ಪರಗಿ, ಮಧ್ಯಾಹ್ನ 12 ಗಂಟೆಗೆ ಸಿಂದಗಿ, 2 ಗಂಟೆಗೆ ಅಲಮೇಲ 3 ಗಂಟೆಗೆ ಇಂಡಿ ಹಾಗೂ 5:30 ಕ್ಕೆ ಚಡಚಣದಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಜ. 24 ರಂದು ಬೆಳಿಗ್ಗೆ 11 ಗಂಟೆಗೆ ಬಸವನ ಬಾಗೇವಾಡಿ, 1 ಗಂಟೆಗೆ ತಾಳಿಕೋಟೆ, 3 ಗಂಟೆಗೆ ಮುದ್ದೇಬಿಹಾಳ ಹಾಗೂ ಸಂಜೆ 5 ಗಂಟೆಗೆ ನಿಡಗುಂದಿಯಲ್ಲಿ ಜ. 25 ರಂದು ಬೆಳಗ್ಗೆ 10 ಗಂಟೆಗೆ ತಿಕೋಟಾ ಮಧ್ಯಾಹ್ನ 12 ಗಂಟೆಗೆ ಬಬಲೇಶ್ವರ, 3 ಗಂಟೆಗೆ ಕೊಲ್ದಾರ ಹಾಗೂ ಸಂಜೆ 6 ಕ್ಕೆ ವಿಜಯಪುರದಲ್ಲಿ ಸಭೆ ನಡೆಸಲಿದ್ದಾರೆ. ಅಹಿಂದ ಮುಖಂಡರಾದ ಎಸ್. ಎಂ. ಪಾಟೀಲ್ ಗಣಿಹಾರ, ಸೋಮನಾಥ ಕಳ್ಳಿಮನಿ, ನಾಗರಾಜ್ ಲಂಬು, ಜಕ್ಕಪ್ಪ ಯಡವೆ, ರವಿ ಕಿತ್ತೂರ, ವಿ.ಎಸ್. ಗಸ್ತಿ, ಪ್ರಭುಗೌಡ ಪಾಟೀಲ, ರಾಜಶ್ರೀ ಯರನಾಳ, ಶಿವಾಜಿ ಮೆಟಗಾರ, ಸಂಜು ಕಂಬಾಗಿ, ದೇವಾನಂದ ಲಚ್ಯಾಣ, ಚಂದ್ರಕಾಂತ್ ಶಿಂಘ, ಮಲ್ಲು ಬಿದರಿ, ಸತೀಶ್ ಅಡವಿ, ಅಭಿಷೇಕ್ ಚಕ್ರವರ್ತಿ, ಬಸವರಾಜ್ ಹಡಪದ, ಸಾಯಿಬಣ್ಣ ಮಡಿವಾಳ ಭಾಗವಹಿಸಲಿದ್ದಾರೆಂದು ಜಿಲ್ಲಾ ಅಹಿಂದ ಘಟಕ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

21-01-2024 EE DIVASA KANNADA DAILY NEWS PAPER