Thursday, October 6, 2022

ಶಾಸಕ ಶಿವಾನಂದ ಪಾಟೀಲ ಪರಿವಾರದಿಂದ ಬನ್ನಿವಿನಿಮಯ

 


ಈ ದಿವಸ ವಾರ್ತೆ

ವಿಜಯಪುರ: ನಗರದ ರಿಂಗ ರಸ್ತೆ ಹತ್ತಿರ ಬಸವನ ಬಾಗೇವಾಡಿ ಶಾಸಕರ ಮನೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಸಾರ್ವಜನಿಕರ ಸಾಲು ಸಾಲು ತಂಡೋಪ, ತಂಡವಾಗಿ ಅದ್ದೂರಿ ದಸರಾ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ಯವಾಗಿ, ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಬನ್ನಿವಿನಿಯಮ ಮಾಡಿಕೊಂಡು ಅರ್ಥಪೂರ್ಣ ದಸರಾ ಆಚರಿಸಿದರು.



ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ, ಶಾಸಕರ ಸಹೋದರರಾದ ಶಿವಶರಣ .ಎಸ್. ಪಾಟೀಲ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕಿಯಾದ ಸಂಯುಕ್ತ ಪಾಟೀಲ ಮತ್ತು ಅವರ ಪತಿ ಹಾಗೂ ಸಕಲ ಪಾಟೀಲ ಕುಟುಂಬದ ವತಿಯಿಂದ ಸರ್ವರಿಗೂ ಹಬ್ಬದ ಶುಭಕೋರಿ ಬನ್ನಿ ನೀಡಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.