Wednesday, April 10, 2024

ಲೋಕಸಭೆ ಚುನಾವಣೆ - 2024 ಏ.12ರಿಂದ ನಾಮಪತ್ರ ಸ್ವೀಕಾರ : ಡಿಸಿ ಟಿ.ಭೂಬಾಲನ್

 ಈ‌  ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ :  ಲೋಕಸಭಾ ಸಾವರ್ಬತ್ರಿಕ ಚುನಾವಣೆ 2024 ರ ನಾಮಪತ್ರಗಳನ್ನು ಸ್ವೀಕರಿಸಲು   ಏ.12 ರಿಂದ 19 ರವರೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುತ್ತದೆ  ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆದ ಟಿ.ಭೂಬಾಲನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ  ಲೋಕಸಭಾ ಚುನಾವಣೆ ಅಧಿಸೂಚನೆ ಕುರಿತು  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಮಪತ್ರಗಳನ್ನು ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11ಗಂಟೆ ಯಿಂದ ಮಧ್ಯಾಹ್ನ 3ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿರುತ್ತದೆ. 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏ.22ರವರೆಗೆ ಕಾಲಾವಕಾಶವಿರುತ್ತದೆ.  ಮೇ 7 ರಂದು ಮತದಾನ ನಡೆಯಲಿದ್ದು, ಜು 4 ರಂದು ಮತ ಎಣಿಕೆ ನಡೆಯಲಿದೆ. ಜು.6ರಂದು ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಏ.10 ರ ಅಂತ್ಯಕ್ಕೆ 19,43,566 ಮತದಾರರಿದ್ದು 9,86,778 ಪುರುಷ ಹಾಗೂ 9,56,578 ಮಹಿಳಾ ಮತ್ತು 210 ಇತರೆ ಮತದಾರರಿದ್ದಾರೆ. ಈ ಪೈಕಿ 43,468 ಯುವ ಮತದಾರರು, 21,764 ವೀಕಲಚೇತನ,  1,874 ಸೇವಾ ಮತದಾರರು ಇದ್ದಾರೆ ಎಂದರು. .

ಸುಗಮ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣಾ ಜರಗಿಸುವ ದೃಷ್ಟಿಯಿಂದ ವಿಧಾನಸಭಾ ಮತಕ್ಷೇತ್ರವಾರು ಒಟ್ಟು 167 ಸೆಕ್ಟರ್ ಅಧಿಕಾರಿಗಳು, 72 ಪ್ಲಾಯಿಂಡ್ ಸ್ವಾ÷್ಕಡ್, 87 ಸ್ಟೆಟಿಕ್ ಸರ್ವಲೈನಸ್ ಟೀಮ್, 24 ವಿಡೀಯೋ ಸರ್ವಲೈನಸ್ ಟೀಮ್, 8 ವಿಡೀಯೋ ವಿವ್ಹಿಂಗ್ ಟೀಮ್, 8 ಅಕೌಂಟಿAಗ್ ಟೀಮ್ ರಚನೆ ಮಾಡಲಾಗಿದೆ ಎಂದು ಹೇಳಿದರು.

ದೂರು ನಿರ್ವಹಣೆಯಲ್ಲಿ ಪ್ರಥಮ ಸ್ಥಾನ: 

ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ  ಇಲ್ಲಿಯವರೆಗೆ ಸಿವಿಜಿಲ್ ತಂತ್ರಾAಶದಲ್ಲಿ 3,929 ದೂರುಗಳು ದಾಖಲಾಗಿದ್ದು, ಬಂದAತಹ ದೂರುಗಳನ್ನು ಸಮರ್ಪಕವಾಗಿ ಬಗೆಹರಿಸಲಾಗಿರುತ್ತದೆ,  ರಾಜ್ಯದಲ್ಲಿ ವಿಜಯಪುರ ಜಿಲ್ಲೆ ದೂರುಗಳ ನಿವಾರಣೆ ಮಾಡುವಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಮುಂಜಾಗೃತವಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗಿದ್ದು, ಇಲ್ಲಿಯವರೆಗೆ 3 ಕೋಟಿ 24 ಲಕ್ಷ ದಾಖಲೆ ಇಲ್ಲದ ಹಣವನ್ನು ವಶಕ್ಕೆ ಪಡೆಯಲಾಗಿದೆ. 3,707 ಲೀಟರ್ ಮದ್ಯ,  624 ಗ್ರಾಂ ಡ್ರಗ್ಸ್ನ್ನು ವಶಕ್ಕೆ ಪಡೆಯಲಾಗಿದೆ. ಹಣ ಸೇರಿದಂತೆ ವಶಪಡಿಸಿಕೊಳ್ಳಲಾದ ಮಧ್ಯ, ಡ್ರಗ್ಸ್ನ ನ ಒಟ್ಟು ಮೌಲ್ಯ 3 ಕೋಟಿ 39 ಲಕ್ಷವಾಗುತ್ತದೆ ಎಂದು ಮಾಹಿತಿ ನೀಡಿದರು.

ಮುಕ್ತ, ಶಾಂತಿಯುತ ಹಾಗೂ ಸಮರ್ಪಕವಾಗಿ ಚುನಾವಣೆ ನಡೆಸಲು ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಮೊದಲನೇ ಹಂತದ ತರಬೇತಿಯನ್ನು ನೀಡಲಾಗಿದೆ. ಬರುವ ದಿನಗಳಲ್ಲಿ ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುವುದು. ಈಗಾಗಲೇ ಚುನಾವಣೆ ವೀಕ್ಷಕರು ನೀಯೋಜನೆಗೊಂಡಿರುತ್ತಾರೆ. ಜಿಲ್ಲೆಯಲ್ಲಿ ಪರವಾನಿಗೆ ಪಡೆದ ಶಸ್ತಾçಸ್ತçಗಳನ್ನು ಠೇವಣಿ ಇರಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ 2,900 ಶಸ್ತಾçಸ್ತçಗಳಿದ್ದು,  ಈ ಪೈಕಿ ಕೇವಲ 45 ಶಸ್ತಾçಸ್ತçಗಳಿಗೆ ಜೀವಬೆದರಿಕೆ ಇರುವ ವ್ಯಕ್ತಿ ಹಾಗೂ ಬ್ಯಾಂಕ್‌ನ ಭದ್ರತಾ ದೃಷ್ಟಿಯಿಂದ  ವಿನಾಯತಿ ನೀಡಲಾಗಿದೆ, ಇನ್ನೂ 7 ಅರ್ಜಿಗಳು  ಪರಿಶೀಲನೆ ಹಂತದಲ್ಲಿವೆ ಎಂದು ತಿಳಿಸಿದರು.



 ಅವಹೇಳನಕಾರಿ ಪ್ರಚೋದನೆ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಮಾಡಿದ ಹಿನ್ನಲೆಯಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.