Tuesday, November 15, 2022

ಸಿದ್ದಾಪುರವರಿಗೆ " ರಮಣಶ್ರೀ ಪ್ರಶಸ್ತಿ" ಪ್ರದಾನ

 


ಈ ದಿವಸ ವಾರ್ತೆ

ವಿಜಯಪುರ: ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತುˌ ˌಮೈಸೂರು ಹಾಗೂ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡಮಾಡುವ ೨೦೨೨ನೆಯ ಸಾಲಿನ "ರಮಣಶ್ರೀ ಶರಣ ಹಿರಿಯ ಶ್ರೇಣಿ ಆಧುನಿಕ ವಚನರಚನೆ ಪ್ರಶಸ್ತಿ "ಯನ್ನು ಆಧುನಿಕ ವಚಕಾರ ˌಶರಣ ಸಾಹಿತಿ ಪ.ಗು.ಸಿದ್ದಾಪುರವರಿಗೆ ಇದೇ ೧೭ ರಂದು ಬೆಂಗಳೂರಿನ " ರಮಣಶ್ರೀ ಹೊಟೇಲ ಸಭಾಂಗಣ "ದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಪ್ರದಾನಮಾಡಲಿದ್ದಾರೆ.ಪ್ರಶಸ್ತಿಯು ೪೦ಸಾವಿರ ಗೌರವಧನದೊಂದಿಗೆ  ಪ್ರಶಸ್ತಿ ಫಲಕವನ್ನೊಳಗೊಂಡಿದೆ.ಸಮಾರಂಭದ ಅಧ್ಯಕ್ಷತೆಯನ್ನು  ಮಾನ್ಯ ಸಚಿವರಾದ ಶ್ರೀ ವಿ.ಸೋಮಣ್ಣ ವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

            ಸಾವಿರಾರು ಆಧುನಿಕ ವಚನಗಳನ್ನು ರಚಿಸಿ ಓದುಗರ ಮನಸೂರೆಗೊಳಿಸಿದ ಪ.ಗು.ಸಿದ್ದಾಪುರವರು ಅನುಭವದೀಪ್ತಿ ˌಮಕರಂದ ˌಹಣತೆ ಹಚ್ಚಿದವರು ಹಾಗೂ ಬಸವ ಬೆಳಗು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡುವುದರೊಂದಿಗೆ ಶರಣ ಸಾಹಿತ್ಯ ಕೃಷಿಗಾಗಿ ಕೊಡಮಾಡುವ ಇಳಕಲ್ ಚಿತ್ತರಗಿ ಮಹಾಂತಸ್ವಾಮಿ ಸಂಸ್ಥಾನಮಠದ  "ಬಸವಗುರುಕಾರುಣ್ಯ "ಪ್ರಶಸ್ತಿಯೊಂದಿಗೆ ಮಂಡ್ಯದ ಅಡ್ವೆೃಸರ್ ಪತ್ರಿಕೆಯ "ಅಡ್ವೈಸರ್ ೨೦೨೨ನ್ನೂ ತಮ್ಮ ಮುಡಿಗೇರಿಸಿಕೊಂಡದ್ದನ್ನಿಲ್ಲಿ ಸ್ಮರಿಸಬಹುದು.

16-11-2022 EE DIVASA KANNADA DAILY NEWS PAPER

ಜ್ಯೋತಿರ್ಲಿಂಗ ಹೊನಕಟ್ಟಿಗೆ ವಿಶ್ವ ಮಾನ್ಯ ಪ್ರಶಸ್ತಿ



 ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಪೊಲೀಸ್ ಇಲಾಖೆ ಸಿಪಿಐ ಅಧಿಕಾರಿ, ಜಾನಪದ ಹಿರಿಯ ಸಾಹಿತಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ‘ವಿಶ್ವ ಮಾನ್ಯ ಪ್ರಶಸ್ತಿ’ ಲಭಿಸಿದೆ.

 ಕನ್ನಡ ಸಂಘ ಮಸ್ಕಟ್ ಮತ್ತು ಹೃದಯವಾಹಿನಿ- ಕರ್ನಾಟಕ ಆಶ್ರಯದಲ್ಲಿ 16ನೇ ವಿಶ್ವ ಕನ್ನಡ ಸಮ್ಮೇಳನ 2022 ಒಮಾನ್ ನ. 18 ಮತ್ತು 19 ರಂದು ಅಲ್ ಫಲಾಝ್ ಸಭಾಂಗಣ ಮಸ್ಕತ್ ಸುಲ್ತಾನೆಟ್ ಆಪ್ ಒಮಾನ ಹೋರ ದೇಶದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

 16ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬದಪಟ್ಟ0ತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ. ಮಾದ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಗೋಷ್ಠಿ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತ ನಾಟ್ಯ ಜಾನಪದ ನೃತ್ಯ ರೂಪ ಯಕ್ಷಗಗಾನ ಹಾಗೂ ಮುಂತಾದ ಕಲೆಗಳು ಪ್ರದರ್ಶನಗೊಳ್ಳೂವವು ಕರ್ನಾಟಕ ಕಲೆ ಮತ್ತು ಸಂಸ್ಕೃತಿ ವಿದೇಶಿ ನೆಲವಾದ ಒಮಾನ ಪ್ರತಿ ಬಿಂಬಿಸಲಿದೆ.

ಜ್ಯೋತಿರ್ಲಿ0ಗ ಹೊನಕಟ್ಟಿಯವರು ಖ್ಯಾತ ಜಾನಪದ ಗಾಯಕರು ಹಾಗೂ ಬರಹಗಾರರು ತಾವು ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಕರ ತಾವು ಕರುನಾಡಿನ ಕಲೆಗಳ ಮೆರಗು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಜಾನಪದ ಕ್ಷೇತ್ರದಲ್ಲಿ ತಮ್ಮ ಅನುಪಮ ಕೊಡುಗೆಯನ್ನು ಪರಿಗಣಿಸಿ ಜಾನಪದ ಹಾಡು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಕನ್ನಡ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ಎಸ್‌ಡಿಟಿ ಪ್ರಸಾದ್. ಡಾ.ಕದಂ ರಮೇಶ ಬೆಂಗಳೂರು. ರಾಜು ಅಡಕಳ್ಳಿ ಸಿರ್ಶಿ, ಪ್ರೊ.ಎಂ.ಕುದರಿ ಗೋಕಾಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಪ್ಯೂಟರ್ ಸಾಕ್ಷರತೆ ಕಾರ್ಯಾಗಾರ ಇದೇ ದಿ.17 ರಂದು




ಈ ದಿವಸ ವಾರ್ತೆ

 ವಿಜಯಪುರ : ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 1(3) ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲಾ ಅಭ್ಯರ್ಥಿಗಳು ದಿನಾಂಕ 31-12 -2022 ರೊಳಗೆ  ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಇದೇ ದಿ.17 ರಂದು ವಿಜಯಪುರದ ಸರ್ಕಾರಿ ಬಾಲಕರ ಪದವಿಪೂರ್ವ  ಪ್ರೌಢಶಾಲೆಯಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಕಂಪ್ಯೂಟರ್ ಸಾಕ್ಷರತೆ ಕುರಿತಾದ ಕಾರ್ಯಾಗಾರ ಆಯೋಜಿಸಲಾಗಿದೆ. ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಈ ಕಾರ್ಯಾಗಾರ ಸಂಘಟಿಸಲಾಗಿದೆ, ಭಾಗವಹಿಸುವ ಶಿಕ್ಷಕರಿಗೆ ಓಓಡಿ ಸೌಲಭ್ಯವಿದೆ. ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು.  ಮುಖ್ಯ ಉಪಾಧ್ಯರಾಗಿ ಭಡ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸಹ ನೆರವೇರಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಶಿವರಾಜ್ ಬಿರಾದಾರ ತಿಳಿಸಿದ್ದಾರೆ.

ಪಾಟೀಲ ಫೌಂಡೇಷನ್ ಸಂಸ್ಥೆಯ 8ನೇ ವಾರ್ಷಿಕೋತ್ಸವ




ಈ ದಿವಸ ವಾರ್ತೆ

ವಿಜಯಪುರ: ಮಾನವನ ಸೇವೆ ನಿಜವಾದ ದೇವರ ಸೇವೆ ಎಂದು ಪೀಟರ್ ಅಲೆಕ್ಸಾಂಡರ್ ಹೇಳಿದರು. ನಗರದಲ್ಲಿ ಹಮ್ಮಿಕೊಂಡ 8 ನೇ ವಾರ್ಷಿಕ ಸಮ್ಮೇಳನದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.




ಪಾಟೀಲ ಫೌಂಡೇಶನ್ ಸೇವೆ ನಿತಂತರವಾಗಿರಲಿ ನಾವು ಎಂದೆಂದು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಸೇವೆ ಸಾಮಾನ್ಯ ಸೇವೆ ಅಲ್ಲ. ಅದು ದೇವರ ಸೇವೆಯಾಗಿದೆ. ಇಂದಿನ ಯುವಕರಿಗೆ ಸೇವೆ ಮಾಡುವ ಮನೋಭಾವ ಇಲ್ಲ. ಮುಂದಿನ ದಿನಗಳಲ್ಲಿ ಪಾಟೀಲ ಫೌಂಡೇಶನ್ ಇತಿಹಾಸ ನಿರ್ಮಿಸಲಿ. ೭ ನದಿ ಇದ್ದರು ವಿಜಯಪುರ ಜಿಲ್ಲೆ ಬರಗಾಲ ಪೀಡಿತವಾಗಿದೆ. ಪಂಚಭೂತಗಳನ್ನು ನಾವು ಸಂರಕ್ಷಿಸಬೇಕಾಗಿದೆ. ಅದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಕರೆ ನೀಡಿದರು.



ಈ ಸಂದರ್ಭದಲ್ಲಿ ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ ರಾಜ್ಯಾಧ್ಯಕ್ಷ ಮುರಳಿಧರ ಕೆ ಎಸ್ ಮಾತನಾಡಿ, ವಿಜಯಪುರ ಜಿಲ್ಲೆ ಎಲ್ಲ ಜಿಲ್ಲೆಗಳಿಗೆ ಮಾದರಿಯಾಗಲಿ ಪಾಟೀಲ ಫೌಂಡೇಶನ್ ನೊಂದಿಗೆ ಸದಾ ಇರುವೆ ಎಂದರು. ಈ ಸಂದರ್ಭದಲ್ಲಿ ಬಿ.ಎಂ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ ಕಲ್ಪಿಸಿ ಒಳ್ಳೆಯ ಸಂದೇಶಗಳನ್ನು ನೀಡುತ್ತಿದ್ದಾರೆ. ಹಗಲಿರುಳು ಶ್ರಮಿಸುತ್ತಿದ್ದಾರೆ. ಸೃಷ್ಠಿ ಕಷ್ಟ ನಾಶ ಸುಲಭ. ಮಾಡಬೇಕು ಮಾಡದಂತಿರಬೇಕು.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದದೆ ಎಂದರು.ಯುವಕರು ಮುಂದೆ ಬರಬೇಕು.  ಅತಿ ಬಡತನದಲ್ಲಿ ಹಿಂದುಳಿದ ಮಕ್ಕಳನ್ನು ಮೇಲೆತ್ತಯವ ಕೆಲಸ ಮಾಡಬೇಕು. ಯುವಕರು ಜಾಗೃತರಾಗಬೇಕು ಎಂದರು. ಜಗತ್ತಿನಲ್ಲಿ ಹುಟ್ಟು ವಾಗ ಯಾರು ಜ್ಞಾನವಂತರಿರುವುದಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಮನುಷ್ಯನಿಗೆ ಸಾಧನೆಗೆ ಛಲ ಬೇಕು..ಛಲ ವಿದ್ದಾಗ ಯಶಸ್ಸು ಸಿಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪೂಜಾ ಟೆಲಿವ್ಹೀಜನ್ ಮಾಲಿಕರಾದ ವಿಜಯಕುಮಾರ ಚವ್ಹಾಣ, ಮಹಿಳಾ ಹೋರಾಟಗಾರ್ತಿ ಸುರೇಖಾ ರಜಪುತ, ಅನುಜಾ ತಾಳಿಕೋಟೆ, ಬಿ.ಡಿ.ಎ ಮಾಜಿ ಅಧ್ಯಕ್ಷರಾದ ಚಂದ್ರಕಾಂತ ಶೆಟ್ಟಿ ವೇದಿಕೆಯ ಮೇಲಿದ್ದರು.

ಈ ಸಂದರ್ಭದಲ್ಲಿ ನೂತನ ಮಹಾನಗರ ಪಾಲಿಕೆ ಸದಸ್ಯರಾದ ಕುಮಾರಿ ಆರತಿ ಶಾಹಾಪೂರ  ದಿನೇಶ್ ಹಳ್ಳಿ ಹಾಗೂ ಸಮಾಜಸೇವಕರಾದ  ಮಿಲಿಂದ್ ಚಂಚಲಕರ, ಡಾ:ರಮೇಶ ಸೂನಕಾಂಬಳೆ, ತಿಪ್ಪಣ್ಣ ದೊಡ್ಡಮನಿ. ಮಹ್ಮದಹಮ್ಮೀದ ಇನಾಮದಾರ, ಪಾಟೀಲ ಫೌಂಡೇಷನ್ ಅಧ್ಯಕ್ಷ ಪ್ರವೀಣಗೌಡ ಪಾಟೀಲ, ಉಪಾಧ್ಯಕ್ಷ  ಶ್ರೇಯಸ್ಸ ಶೆಟ್ಟಿ,  ನಿರ್ದೇಶಕ ಶ್ರೀಧರ ಇಳಗೇರ, ವಿಠ್ಠಲ ಚವ್ಹಾಣ, ಸಂದೇಶ ತಡಲಗಿ , ಮಾಹಂತೇಶ ಪಾಟೀಲ, ತಿಲಕ್ ಬೂದಿಹಳ, ವೀರೇಶ್ ಬಡಿಗೇರ, ಮಲ್ಲಿಕಾರ್ಜುನ ಪಾಟೀಲ, ಅಕ್ಷಯ ವಜ್ರದ್, ಶಂಕರ್ ಅಮರಣ್ಣನವರ, ಸಚಿನ ಸಜ್ಜನ, ಸಂಗಮೇಶ ಮನಗೂಳಿ, ಪೂರ್ಣಿಮಾ ಬರಿಮನಿ, ಶಿವು ಹಳ್ಳಿ, ಜೀವಿತಾ, ದಿವ್ಯಶ್ರೀ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಎಸ್ .ಸಿ.ಮ್ಯಾಗೇರಿ, ಲೆಕ್ಕ ಪರೀಶೋಧಕ ಕಮಲಾಕರ ಕದಮ್, ಕುಮಾರಿ ಪೂಜಾ ರಾಯಕರ್ ಹಾಗೂ ಪಾಟೀಲ ಫೌಂಡೇಶನ್ ೨೧ ಜಿಲ್ಲೆಯ ಕಾರ್ಯಕರ್ತರು ಮತ್ತು ಸಂಸ್ಥೆಯ ಧಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಮತ್ತು ಪ್ರಸ್ಥಾವಿಕವಾಗಿ ಪ್ರಭುಗೌಡ ಪಾಟೀಲ ಮಾತನಾಡಿದರು, ಯಶೋಧ ಜೋಶಿ ಕಾರ್ಯಕ್ರಮ ನಿರೂಪಿಸಿದರು. 

ಇದೆ ಸಂದರ್ಭದಲ್ಲಿ ಸಂಸ್ಥೆಯ ಮೂಲಕ ಗಣ್ಯರಿಗೆ, ಸ್ವಯಂ ಸೇವಕರಿಗೆ  ಗೌರವ ಸನ್ಮಾನ, ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸಲಾಯಿತು.

ಪ್ರಸನ್ನ ಕರ್ಪೂರ, ಪತ್ರಕರ್ತರು ಇವರು ಬರೆದ "ಕಾಡ ಕಸ್ತೂರಿ" ಪುಸ್ತಕವನ್ನು ಎಲ್ಲಾ ಅತಿಥಿಗಳಿಗೆ ನೀಡಲಾಯಿತು.