Sunday, May 24, 2020

ಕಥೆ

ಕೆಂಪು ಅರಮನೆ -ಹಸಿರು ಗುಡಿಸಲು


ಈಶ ಮತ್ತು ವಾಸ ಗೆಳೆಯರು. ಅಕ್ಕ ಪಕ್ಕ ಇದ್ದ ಅವರ ಮನೆಯ ಈರ್ವರು ಶಾಲೆ ವಿದ್ಯಾಭ್ಯಾಸದಲ್ಲಿ ಭಿನ್ನಭಿನ್ನ ರಾಗಿದ್ದರು. ಈಶ ಕನ್ನಡ ಮಾಧ್ಯಮ ಓದುತ್ತಿದ್ದರೆ ವಾಸ ಆಂಗ್ಲಮಾಧ್ಯಮ ಶಾಲೆಗೆ ಪ್ರವೇಶ ಪಡೆದಿದ್ದ. ಸೂಟು-ಬೂಟು ಆತನ ಸಮವಸ್ತ್ರವಾದರೆ ಈಶನದು ನೆಹರೂ ಶರ್ಟ್ ಪೈಜಮಾ ಗಾಂಧಿ ಟೊಪ್ಪಿಗೆ ಕೊಲ್ಹಾಪುರಿ ಪಾದರಕ್ಷೆ.

      ವಾಸ ಶಾಲೆಗೆ ಹೋಗಬೇಕಾದರೆ ವಾಹನ ಬಂದು ಕರೆದುಕೊಂಡು ಹೋಗಿ ಸಾಯಂಕಾಲ ಮರಳಿ ಮನೆಗೆ ಬಂದುಬಿಡುತ್ತಿತ್ತು. ಆದರೆ ಈಶನ ವಾಹನ ವೆಂದರೆ ಆತನ ಕಾಲುಗಳೇ. ಸರ್ಕಾರ ಕೊಡುವ ಬಿಸಿಊಟ ಮೊಟ್ಟೆ ಕುಡಿಯಲು ಹಾಲು ಆತನ ಉದರ ತುಂಬುತ್ತಿದ್ದವು.ಆದರೆ ವಾಸನದು  ಇಡ್ಲಿ-ಸಾಂಬಾರ್ ಚಪಾತಿ ಪಲ್ಲೆ ಜೀರಾ ರೈಸ್ ಮೃಷ್ಟಾನ್ನ ಭೋಜನ ವಾಗಿತ್ತು.

      ಹೀಗಿರುವಾಗ ಅವರು ಪ್ರೌಢಶಾಲೆಗೆ ಕಾಲಿಡುತ್ತಲೇ ವಾಸನಿಗೆ ಮೋಟಾರ್ಸೈಕಲ್, ಶಾಲೆಯಲ್ಲಿ ಆಡಲು ಕ್ರಿಕೆಟ್, ಜಿಮ್, ಕೇರಂ, ಕುಡಿಯಲು ಸಂಸ್ಕರಿಸಿದ ನೀರು. ಆದರೆ ಈಶ ಶಾಲೆಯ ಪಕ್ಕ ಹರಿಯುವ ಕೃಷ್ಣಾನದಿಯ ನೀರುಕುಡಿದು ತೋಟ ಪಟ್ಟಿಯಲ್ಲಿ ಆಟವಾಡಿ ಮನೆಯಲ್ಲಿ ರೊಟ್ಟಿ ಪುಂಡಿಪಲ್ಯ ಮೇಲೆ ಕುಡಿಯಲು ಮಜ್ಜಿಗೆ ಶಾಲೆಗೆ ಹೋಗಲು ಸೈಕಲ್ ಇವನಿಗೊದಗಿದವು. ಈಶ ನೇಗಿಲಯೋಗಿಯ ಮಗನಾದರೆ ವಾಸ ಧನಿಕನ ಮಗ.

     ಶಾಲೆಯ ಅಕಾಡೆಮಿಕ ವರ್ಷ ಮುಗಿಯುವ ಸಂದರ್ಭದಲ್ಲಿ ವಾಸನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಏರ್ಪಡಿಸಲಾಗಿತ್ತು ಆ ಸವಿನೆನಪಿಗಾಗಿ ಈಶ ಕಲಿಯುವ ಕನ್ನಡ ಮಾಧ್ಯಮ ಶಾಲೆ ವಾಸ ಓದುವ ಆಂಗ್ಲಮಾಧ್ಯಮ ಶಾಲೆಯವರೆಗೆ ರಸಪ್ರಶ್ನೆ , ಕಬಡ್ಡಿ ಭಾರದ ಗುಂಡು ಎಸೆತ ಸ್ಪರ್ಧೆ ಏರ್ಪಡಿಸಲಾಗಿತ್ತು.  ಪ್ರಾರಂಭವಾದಾಗ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು .ಮಾತೃಭಾಷೆಯಲ್ಲಿ ನದಿ ನೀರು ಕುಡಿದು ತೋಟಪಟ್ಟಿ ಸುತ್ತಾಡಿದ ಮಕ್ಕಳು ಸೋಲಿಲ್ಲದ ಸರದಾರ ರಾದರು

       ಅಂತೂ ಇಂತೂ ಡಿಗ್ರಿ ಓದಿ ಮುಗಿಸಿದ ಈರ್ವರ ದಾರಿ ವಿರುದ್ಧವಾಗಿದ್ದವು. ಈಶ ಚೆನ್ನಾಗಿ ಓದಿ ಡಿಗ್ರಿ ಪಾಸಾಗಿ ಸರ್ಕಾರದ ಉದ್ಯೋಗ ಅರಸದೆ ಭಾರತದ ಬೆನ್ನೆಲುಬಾದ. ಆದರೆ ವಾಸ ಮಾತ್ರ ಡಾಲರ್ ಸಂಬಳ ಗಳಿಸಲು ಉದ್ಯೋಗ ಪಡೆದು ಅಮೆರಿಕ ವಿಶ್ವದ ದೊಡ್ಡಣ್ಣನ ನೆಲ ಸ್ಪರ್ಶಿಸಿದ. ಕಾರು ಬಂಗಲೆ ಮತ್ತು ರತ್ನ ಎಲ್ಲವೂ ಅವನ ಪಾಲಿಗೆ ಬಂದವು. ಬಡವರ ಬಂಧು ತನ್ನ ತೋಟದಲ್ಲಿ ಬೆಳೆದ ದವಸ ಧಾನ್ಯ ಹಣ್ಣು-ಹಂಪಲು ದೀನದಲಿತರಿಗೆ ಬಡವ ನಿರ್ಗತಿಕರಿಗೆ ದಾನ ಮಾಡಿ ಕರ್ಣನಾದ . ವಾಸ ದೈತ್ಯ ಕಂಟಕ ತಂದೊಡ್ಡಿದ ಕೊರೋಣ ಹೆಮ್ಮಾರಿಯಿಂದ ಅಮೆರಿಕಾದಲ್ಲಿನ ಉದ್ಯೋಗ ಕಳೆದುಕೊಂಡು ಮರಳಿಗೂಡಿಗೆ ಬಂದ. ಅರಮನೆಯಲ್ಲಿ ಹುಟ್ಟಿ ಬೆಳೆದವ ಬೆಂಕಿ ಉಂಡು ನಾಲಿಗೆ ಸುಟ್ಟುಕೊಂಡ . ಕೈಕೆಸರು ಮಾಡಿಕೊಂಡವ ಮೊಸರುಂಡು ಹಾಯಾಗಿದ್ದ.                           -  ಮಂದಾಕಿನಿ  ಎಸ್.ಬಿರಾದರ್
           ವಿಜಯಪುರ

1 comment:

  1. ಸೊಗಸಾಗಿದೆ ಬರಹ , ಮುಂದುವರೆಸಿ ,

    ReplyDelete