Saturday, July 29, 2023

ಮಕ್ಕಳಿಗೆ ಸಾಹಿತ್ಯವನ್ನು ಓದುವುದನ್ನು ಕಲಿಸಬೇಕು :ಗಜಲ್ ಕವಿ ಅಲ್ಲಾಗಿರಿರಾಜ್


ಈ ದಿವಸ ವಾರ್ತೆ

 ವಿಜಯಪುರ: ಅಕ್ಯಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಗಾಗಿ ಸಾಹಿತ್ಯ ಬರೆದು ವಿಧಾನಸೌಧ ಸುತ್ತುವುದನ್ನು ಬಿಟ್ಟು ಸಮಾಜದಲ್ಲಿನ ನೋವು ಸಂಕಟಗಳ ಬಗ್ಗೆ ಸಾಹಿತ್ಯ ರಚನೆ ಮಾಡಬೇಕಿದೆ ಎಂದು ಗಜಲ್ ಕವಿ ಅಲ್ಲಾಗಿರಿರಾಜ್ ಅವರು ಹೇಳಿದರು. ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಜುಲೈ 29 ಮತ್ತು 30ರಂದು ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು.ಕವಿ ಮತ್ತೊಬ್ಬ ಕವಿ ಯನ್ನು ಎಂದು ಪ್ರೀತಿಸಲಾರ ನೀವು ಬರೆದ ಪುಸ್ತಕಗಳನ್ನು ಹಮಾಲನಿಗೆ ಕೊಡಿ ಅವರು ನಿಮ್ಮ ಸಾಹಿತ್ಯವನ್ನು ಪ್ರೀತಿಸುತ್ತಾರೆ ನಮ್ಮ ಮನೆಯ ಮಕ್ಕಳಿಗೆ ಸಾಹಿತ್ಯವನ್ನು ಓದುವುದನ್ನು ಕಲಿಸಬೇಕು ಇಲ್ಲವಾದರೆ ಸಾಹಿತ್ಯ ಸಂಸ್ಕೃತಿ ಕಟ್ಟುವುದು ಕಷ್ಟಕರವಾಗಲಿದೆ ಎಂದರು. 

ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, ನಾಗಠಾಣ ಶಾಸಕ ವಿಠ್ಠಲ ಕಟಧೋಂಡ, ರಾಜು ಆಲಗೂರ, ಮುತ್ತಪ್ಪ ಪೋತೆ, ದಸಂಸ ರಾಜ್ಯ ಸಂಚಾಲಕ ಡಿ.ಜಿಸಾಗರ,  ಬಿ ಎಚ್ ನಾಡಗೇರಿ, ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ಉಪಾಧ್ಯಕ್ಚ ಡಾ. ವೈ.ಎಂ.ಭಜಂತ್ರಿ, ದಸಾಪ ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ,  ಸುಜಾತಾ ಚಲವಾದಿ, ಡಾ.ಗಾಂಧೀಜಿ ಮೊಳಕೇರಿ,ಹೇಮಲತಾ ವಸ್ತ್ರದ , ಸಿದ್ದು ರಾಯಣ್ಣವರ  ಇದ್ದರು.

No comments:

Post a Comment