Saturday, July 29, 2023

ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ:ಶಿವರಾಜ ಬ್ಯಾಡರ


 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಪೋತೆ ಅವರು ತಮ್ಮ ಪಿ ಎಚ್ ಡಿ ಯನ್ನು ನಿಗದಿತ ಕಲಾವಧಿಯಲ್ಲಿ ಮುಗಿಸಿದವರು ಒಂದು ಕಾಲದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಚ್ಚೆ ಹಾಕುವ ಕಲೆಯನ್ನು ವಿಸ್ತಾರವಾಗಿ ಬರೆದಿದ್ದಾರೆ ಜಾನಪದ ನಂಬಿಕೊಂಡು ಬಂದಿರುವ ಕುಟುಂಬಗಳ ಬಗ್ಗೆ ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಜಾನಪದ ಹಾಡುಗಳನ್ನು ಅಶ್ಲೀಲವಾಗಿ ಬಿಂಬಿಸುವ ಕೆಲಸ ನಡೆದಿದೆ ಎಂದು ಶಿವರಾಜ ಬ್ಯಾಡರ ಹಳ್ಳಿ ವಿಷಾದ ವ್ಯಕ್ತಪಡಿಸಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 3ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಸಂಶೋಧನೆ ಸಾಹಿತ್ಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ,  ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

No comments:

Post a Comment