Saturday, July 29, 2023

ಅಸಮಾನತೆಯ ಜಾತಿ ಹೋಗಲಾಡಿಸುವ ಸಲುವಾಗಿ ಎಚ್.ಟಿ.ಪೋತೆ ಅವರು ಹಲವು ಪ್ರಯೋಗ ಮಾಡುತ್ತಾರೆ:ಮುದೇನೂರು ನಿಂಗಪ್ಪ


 ಅಸಮಾನತೆಯ ಜಾತಿ ಹೋಗಲಾಡಿಸುವ ಸಲುವಾಗಿ ಎಚ್.ಟಿ.ಪೋತೆ ಅವರು ಹಲವು ಪ್ರಯೋಗ ಮಾಡುತ್ತಾರೆ. ಅವರ ಮಾನವಿಯತೆ ಬರಹಗಳು ಎಲ್ಲರರಿಗೂ ಅನ್ವಯಿಸುತ್ತವೆ. ಸಾಹಿತ್ಯ ಮತ್ತು ಇತರೆ ಮಾನವೀಯತೆ ಜ್ಞಾನವನ್ನು ಒಟ್ಟಾಗಿಸಿ ಹೋಗುವುದು ಕಷ್ಟಕರ. ಅಂತಹವುಗಳಲ್ಲಿಗೂ ಕಲಾತ್ಮಕವಾಗಿ ಬರಹಗಳನ್ನು ಬರೆಯುತ್ತಾರೆ ಎಂದು ಮುದೇನೂರು ನಿಂಗಪ್ಪ ಅವರು ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೩ರಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತು ಅವರು ಮಾತನಾಡಿದರು.

ವಿಶಿಷ್ಠ ಹೆಣೆಯುತ್ತಾರೆ. ಅವರು ವೈದಿಕ ಕೃತಿಯ ಪರಿಚಯಗಳನ್ನು ನೋಡಿದರೆ ಸಾಕು ಅವರಿಗೆ ಅಘಾದವಾದ ಜ್ಞಾನ ಇದೆ ಎಂಬುವುದು ಕಂಡು ಬರುತ್ತದೆ. ವರ್ತಮಾನವನ್ನು ಮರು ಶೋಧನೆಗೆ, ಅಂಬೇಡ್ಕರ, ಗಾಂಧಿ, ದಲಿತ ಚಿಂತನೆ, ವೈಚಾರಿಕ ಆಲೋಚನೆಗಳನ್ನು ಸಹಿತ ಬರವಣೆಗಳನ್ನು ಸ್ಪಷ್ಟಪಡಿಸುತ್ತಾರೆ. ನಿರ್ಭೀಡ , ಪ್ರಾಮಾಣಿಕ ವೈಚಾರಿಕತೆಯನ್ನು ಅವರ ಬರವಣಿಗೆಯಲ್ಲಿ ಕಾಣಬಹುದಾಗಿದೆ. ಅವರ ಬರಹಗಳನ್ನು ಜೀವಪರ ಮತ್ತು ಜನರಪರವಾಗಿವೆ. ಈ ಮೌಖಿಕ ಪರಂಪರೆ ಕುರಿತು, ಲಿಖಿತ ಪರಂಪರೆ ಮಾತನಾಡುವಾಗ ಅದರ ಫಲಿತಗಳನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಸಾಮಾಜಿಕ ವೈಜ್ಞಾನಿಕ, ವೈಚಾರಿಕ ಸಾಹಿತ್ಯಿಕವನ್ನು ಅವರು ರೂಪಿಸಿಕೊಳ್ಳುತ್ತಿದ್ದಾರೆ.  

ಸಾಹಿತಿಗಳಾದ ಡಾ, ಚನ್ನಪ್ಪ ಕಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ವಿಕ್ರಂ ವಿಸಾಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಬುಕ್‌ ಬ್ರಹ್ಮ ದೇವು ಪತ್ತಾರ, ಡಾ. ಜೈನೇಶ ಪ್ರಸಾದ, ಡಾ. ಬಸವರಾಜ ಪೂಜಾರ, ಡಾ. ಪೀರಪ್ಪ ಸಜ್ಜನ ವೇದಿಕೆಯಲ್ಲಿದ್ದರು.


ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು. ಶ್ರೀಮತಿ ಪೂಜಾ ಸಿಂಗೆ ನಿರೂಪಿಸಿದರು. ಶಂಕ್ರೆಮ್ಮ ಈಳಗೇರ ವಂದಿಸಿದರು.

No comments:

Post a Comment