Saturday, July 29, 2023

ಮಾನವೀಯತೆಯನ್ನು ಬೆಳೆಸಿಕೊಂಡು ನಾವು ವಿಶ್ವಮಾನವರಾಗಬೇಕು:ಡಾ ಕಲ್ಯಾಣಸಿರಿ ಭಂತೇಜಿ


ಈ ದಿವಸ ವಾರ್ತೆ ವಿಜಯಪುರ:

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಮಾನವೀಯತೆಯನ್ನು ಬೆಳೆಸಿಕೊಂಡು ನಾವು ವಿಶ್ವಮಾನವರಾಗಬೇಕು ಸಹೋದರತೆಯಿಂದ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು ನಮ್ಮ ಬದುಕಿನಲ್ಲಿ  ಭಾರತದಲ್ಲಿ ಬೆಳಕಾಗಿ ಬಂದ ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಇಂದಿನ ಭಾರತಕ್ಕೆ ಬುದ್ಧನ ಅಸ್ಟಾಂಗ ಮಾರ್ಗದ ಅವಶ್ಯಕತೆ ಇದೆ ಎಂದು ಮೈಸೂರು ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದ ನೇತೃತ್ವ ವಹಿಸಿ ಮಾತನಾಡಿದರು.ವೇದಿಕೆಯಲ್ಲಿ ಸಮ್ಮೇಳನ ಸರ್ವಧ್ಯಕ್ಷರಾದ ಪ್ರೊ ಎಚ್ ಟಿ ಪೋತೆ,ಡಾ ಬಿ ಎಂ ಪುಟ್ಟಯ್ಯ, ಡಾ ನಾರಾಯಣ ಪವಾರ ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ, ಚಿತ್ರದುಗ ಸಾಹಿತಿ ಬಿ.ಎಂ.ಗುರುನಾಥ  ವೇದಿಕೆಯಲ್ಲಿ ಇದ್ದರು.ಡಾ ಗುರುರಾಜ ಯರಗನಹಳ್ಳಿ ಕಾರ್ಯಕ್ರಮ ಸಂಯೋಜಿಸಿದರು ಅವಿನಾಶ ಹತ್ತರಕಿಹಾಳ ಸ್ವಾಗತಿಸಿದರು ಬಸವರಾಜ ಜಾಲವಾದಿ ನಿರೂಪಿಸಿದರು ಭಾರತಿ ಸಂಗಣ್ಣವರ ವಂದಿಸಿದರು.

No comments:

Post a Comment