Thursday, November 30, 2023

ಸಮೃದ್ದಿ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಭಕ್ತ ಕನಕದಾಸರ ಜಯಂತಿ

 


ಈ ದಿವಸ ವಾರ್ತೆ

ವಿಜಯಪುರ: ನಗರದ ಡಾ. ರಾಜಕುಮಾರ ಲೇಔಟನಲ್ಲಿರುವ ಸಮೃದ್ದಿ ಶಾಲೆಯ ವಿದ್ಯಾಥಿ  ಗಳು ಹಾಗೂ ಶಿಕ್ಷಕವೃಂದದಿಂದ ಸಂತ ಭಕ್ತ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಸಂಸ್ಥೆಯ ಮುಖ್ಯಸ್ಥರಾದ ರಮೇಶ ಅವರು ಮಾತನಾಡಿ , ಸಂತ ಭಕ್ತ ಕನಕದಾಸರ ಜೀವನ ಹಾಗೂ ಅವರು ನಡೆದು ಬಂದ ದಾರಿ ಜೀವನದಲ್ಲಿ ಅಳವಡಿಸಿಕೊಂಡ ಮಾನವವೀಯ ಮೌಲ್ಯಗಳನ್ನು ಇಡೀ ಮಾನವ ಕುಲಕೋಟಿಗೆ ಸಾರಿ ಸಾರಿ ಹೇಳಿದ ಮಹಾನ್ ಸಂತ ಎಂದರು.

ಮುಖ್ಯ ಗುರುಮಾತೆ ಶ್ರೀಮತಿ ಕಾಂತಾ ಬಿಂದುರಾವ ಕುಲಕರ್ಣಿ ಮಾತನಾಡಿ ಭಕ್ತ ಕನಕದಾಸರು ಉಡುಪಿಯ ಶ್ರೀ ಕೃಷ್ಣನ  ದಶ  ನ ಪಡೆದ ಮಹಾನ ಘಟನೆಯನ್ನು ತುಂಬಾ ಸ್ವಾರಸ್ಯಕರವಾಗಿ ಮಕ್ಕಳ ಮನ ಮುಟ್ಟುವಂತೆ ತಿಳಿಸಿದರು.  ಶ್ರೀಮತಿ ಸುನಂದಾ ಕುಲಕರ್ಣಿ ಭಾಗವಹಿಸಿದ್ದರು. ಹಾಗೆ ಈ ಒಂದು ಶುಭ ಕಾರ್ಯಕ್ರಮದಲ್ಲಿ ಶ್ರೀಮತಿ ರೇಖಾ ಶಿರೋಳಕರ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೋಡಲಾಯಿತು .

ಈ ಒಂದು ಕಾರ್ಯಕ್ರಮದಲ್ಲಿ ಸಹಶಿಕ್ಷಕಿಯರಾದ ಸವಿತಾ ಭಜಂತ್ರಿ  ರೇಖಾ ಶಿರೋಳಕರ , ಅರಚನಾ ಕನಮಡಿ ,ಭವಾನಿ ಪತ್ತಾರ, ಕವಿತಾ ರಾಠೋಡ, ಮಾಧವಿ ಗಡದಾನಿ, ವಿಷಾಲಾಕ್ಷಮಿ ಅಥಣಿ,  ಮುಂತಾದವರು ಪಾಲ್ಗೊಂಡಿದ್ದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು

No comments:

Post a Comment