Saturday, July 8, 2023

ಸ್ಮರಣ ಸಂಚಿಕೆ ಕಥೆ, ಕವಿತೆ ಲೇಖನಗಳಿಗೆ ಆಹ್ವಾನ


 ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದಗ ವತಿಯಿಂದ ಜುಲೈ 29 ಹಾಗೂ 30- 2023 ರಂದು ವಿಜಯಪುರ ನಗರದ ಕಂದಗಲ್ಲ ಹಣಮಂತರಾಯ ರಂಗ ಮಂದಿರದಲ್ಲಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ತರಲಾಗುತ್ತಿದೆ ಹಾಗಾಗಿ, ದಲಿತ ಸಾಹಿತ್ಯ, ದಲಿತ ಚಳುವಳಿ ನಡೆದು ಬಂದ ದಾರಿ, ದಲಿತ ಸಮುದಾಯದ ಮುಂದಿನ ದಾರಿ, ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಇಂದಿನ ಪೀಳಿಗೆಗ ಪರಿಚಯಿಸುವ ವಿಭಿನ್ನ ಲೇಖನಗಳು ಮತ್ತು ಕಥೆ, ಕವಿತೆ ಹಾಗೂ ಗಝಲ್ ಗಳನ್ನು ಈ ಸ್ಮರಣ ಸಂಚಿಕೆಗೆ ಕಳಿಸಬಹುದಾಗಿದೆ. 



ಆಸಕ್ತ ಕವಿ ಬರಹಗಾರರು ಜುಲೈ 16.07.2023 ರ ಒಳಗಾಗಿ dspayg@gmail.com ಮೇಲ್ ಐಡಿಗೆ ತಮ್ಮ ಲೇಖನ, ಕಥೆ, ಕವಿತೆ ಗಝಲ್ ಗಳನ್ನು ಕಳುಹಿಸಬಹುದು. ನುಡಿ ಮತ್ತು ಪಿಡಿಎಫ್ ಫೈಲ್ ಮಾಡಿ ಕಳಿಸಿಕೊಡಬಹುದಾಗಿದೆ ಸಂಪಾದಕ ಮಂಡಳಿ ಆಯ್ದವುಗಳನ್ನು ಮಾತ್ರ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment