Friday, July 28, 2023

ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದ ಹಿರಿಯ ಸಾಹಿತಿ ದೊದ್ದಣ್ಣ ಭಜಂತ್ರಿ


ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದದ ಬೆಳ್ಳಿ ಸಂಭ್ರಮದ ನಿಮಿತ್ಯ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 ಎರಡು ದಿನಗಳ ಕಾಲ  ಹಮ್ಮಿಕೊಂಡಿರುವ  10ನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ 

ಪರಿಷತ್ತಿನ ಧ್ವಜಾರೋಹಣ ವನ್ನು ಹಿರಿಯ ಸಾಹಿತಿ ಶ್ರೀ ದೊಡ್ಡಣ್ಣ ಭಜಂತ್ರಿ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಣರಾದ ಪ್ರೊ. ಎಚ್.ಟಿ.ಪೋತೆ ಹಾಗೂ ಅವರ ಧರ್ಮಪತ್ನಿ ಲಲಿತಾ ಪೋತೆ , ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಜಿಲ್ಲಾಧ್ಯಕ್ಷ ಸವರಾಜ ಜಾಲವಾದಿ,  ಕಾರ್ಯದರ್ಶಿ ಸುಬಾಸ ಹುದ್ಲೂರ, అತಿಥಿಗಳಾದ ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕರಮೇಶ ಆಸಂಗಿ,  ದ.ಸಂ.ಸರಾಜ್ಯ ಸಂಚಾಲಕ ಅಭಿಷೇಕ ಚಕ್ರವರ್ತಿ,  ಮಂಜುನಾಥ ಹಿರೇಮನಿ , ಸುಜಾತಾ ಚಲವಾದಿ, ಡಾ. ಪೂರ್ಣಿಮಾ ದಾಮಣ್ಣವರ,ಎಚ್. ಎಂ. ದೊಡಮನಿ, ಉಮೇಶ ಶಿವಶರಣ, ತ್ರಿವೇಣಿ ಬನಸೋಡೆ , ವಿಜು ಕಾಳಶೆಟ್ಟಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ , ಯಶವಂತ ದೊಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

No comments:

Post a Comment