Thursday, June 11, 2020

ಬಡವರಿಗೆ ಆಹಾರ ಸಾಮಗ್ರಿ ನೀಡುವ ಮೂಲಕ ಜನ್ಮದಿನ ಆಚರಣೆ


ಈ ದಿವಸ ವಾರ್ತೆ
ಅಫಜಲಪುರ :
ತಾಲೂಕಿನ ಮಾಶಾಳ ಗ್ರಾಮದ ಜೈ ಭೀಮ್‌ ನಗರದಲ್ಲಿ ಸುಮಾರು ಇನ್ನೂರ ಐವತ್ತು ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ನೀಡುವ ಮೂಲಕ ತಾಪಂ ಸದಸ್ಯ ರಾಜು ಬಬಲಾದ ಅವರ 38ನೇ ಜನ್ಮದಿನವನ್ನು ವಿನೂತನವಾಗಿ ಆಚರಿಸಲಾಯಿತು.

 ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಶಾಳ ಜಿ.ಪಂ ಸದಸ್ಯ ಅರುಣಕುಮಾರ ಎಂ.ವೈ ಪಾಟೀಲ್ ರವರು ಮಾತನಾಡಿ
ದೇಶಾದ್ಯಂತ ವ್ಯಾಪಿಸಿದ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಹೇರಲಾದ ಅನಿರೀಕ್ಷಿತ ಲಾಕ್ ಡೌನ್ ನಿಂದಾಗಿ ಕೂಲಿಯನ್ನೇ ಅವಲಂಬಿಸಿದ ಜನರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇಂತವರ ಸಂಕಷ್ಟದ ಜೊತೆಗೆ ನಾವೆಲ್ಲರೂ ನಿಲ್ಲುವುದರ ಕಡೆಗೆ ಗಮನ ಹರಿಸೋಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಪರಿಸರ ರಕ್ಷಣೆಯ ಪಾತ್ರ ಪ್ರಮುಖವಾಗಿರುವುದರಿಂದ ಪ್ರತಿಯೊಬ್ಬರು ಮರ ಗಿಡಗಳನ್ನು ಬೆಳೆಸುವ ಕರ್ತವ್ಯವನ್ನು ನಮ್ಮದಾಗಿಸಿಕೊಳ್ಳೊಣ ಎಂದರು.

ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿ,
 ಲಾಕ್‍ಡೌನ್‍ನಿಂದಾಗಿ ಇನ್ನೂ ಅನೇಕ ಜನ ಸಂಕಷ್ಟ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಡಂಬರದ ಜನ್ಮದಿನದ ಆಚರಣೆಗೆ ಅವಕಾಶ ಕೊಡದೆ, ಸಂಕಷ್ಟದಲ್ಲಿರುವವರಿಗೆ  ಸಹಾಯ ಮಾಡುವತ್ತ ಹೆಜ್ಜೆ ಇಟ್ಟ ರಾಜು ಬಬಲಾದ ರವರ ಕಾರ್ಯ ಮೆಚ್ಚುವಂತದ್ದು ಮತ್ತು ನಾವು ನೀವೆಲ್ಲರೂ ಮುಂದಿನ ದಿನಗಳಲ್ಲಿ ನಮ್ಮ ನಡುವೆ ಇರುವ ಬಡ ಜನರ ಕಷ್ಟದ ಜೊತೆಗೆ ನಿಲ್ಲುವ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಪ್ಪ ಅಳ್ಳಗಿ, ರಾಜುಗೌಡ ಪಾಟೀಲ್, ಸುರೇಶ ಸಿಂಗೆ, ಪುನ್ನಪ್ಪ ಡಾಳೆ, ರಾಜು ಸಿಂಗೆ, ನಾಗೇಶ ತೆಲ್ಲೂಣಗಿ, ಪೀರಪ್ಪ ಭಂಗಿ, ಸೈದು ದುಧನಿ, ಸಿದ್ದಯ್ಯಸ್ವಾಮಿ ಝಳಕಿ ಮಠ್, ಅಣ್ಣಾರಾಯ ಪ್ರಧಾನಿ,  ರೇವಣಸಿದ್ದ  ಝಳಕಿ, 
ಮಹಾಲಿಂಗ ಅಂಗಡಿ, ಮಹಾಂತೇಶ ಬಳೂಂಡಗಿ, ರವಿ ಗೌರ, ಸದಾಪತಿ ಕುಲ್ಕರ್ಣಿ‌ ಸೇರಿದಂತೆ ರಾಜು ಬಬಲಾದ ಅವರ ಅಭಿಮಾನಿ ಬಳಗ ಹಾಜರಿದ್ದರು.

No comments:

Post a Comment