Friday, June 5, 2020

ಜಿಲ್ಲೆಯು ಸಮಗ್ರ ಅಂಕಿ-ಅಂಶಗಳ ವಾರ್ಷಿಕ ಕೈಪಿಡಿ ಬಿಡುಗಡೆ


ಈ ದಿವಸ ವಾರ್ತೆ
ವಿಜಯಪುರ : ವಿಜಯಪುರ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳ 2018-19 ನೇ ಸಾಲಿನ ಅಂಕಿ ಅಂಶಗಳ ನೋಟ ವಾರ್ಷಿಕ ಕೈಪಿಡಿಯನ್ನು ಇಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಬಿಡುಗಡೆ ಮಾಡಿದರು.

ಈ ಅಂಕಿ-ಆಂಶಗಳ ವಾರ್ಷಿಕ ಕೈಪಿಡಿಯಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಕಚೇರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಜನಸಂಖ್ಯೆಗೆ ಸಂಭಂಧಿಸಿದ ಅಂಕಿ-ಅಂಶಗಳು 2011ರ ಜನಗಣತಿ, ಮಳೆಗೆ ಸಂಬಂಧಿಸಿದ ಅಂಕಿ ಅಂಶಗಳು 2018ಕ್ಕೆ ಸಂಬಂಧಿಸಿದ್ದು ಹಾಗೂ 2012ರ ಜಾನುವಾರು ಗಣತಿ, 2015-16ನೇ ಸಾಲಿನ ಕೃಷಿಗಳ ಅಂಕಿ ಅಂಶ ಒಳಗೊಂಡಿದ್ದು, ಶಿಕ್ಷಣ, ಸಂಶೋಧನೆ, ಯೋಜನೆ ಹೀಗೆ ವಿವಿಧ ಉದ್ದೇಶಗಳಿಗೆ ಈ ಅಂಕಿ ಆಂಶಗಳು ಆಧಾರವಾಗಲಿದ್ದು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಕೈಪಿಡಿಯಾಗಿದೆ.
  
ಈ ಜಿಲ್ಲಾ ಅಂಕಿ-ಅಂಶಗಳ ನೋಟ ಕೈಪಿಡಿಯಲ್ಲಿ ಜಿಲ್ಲೆಯ ತಾಲೂಕಾ ನಕ್ಷೆ, ಭೂಬಳಕೆ ಮತ್ತು ಭೂಕವಚ ನಕ್ಷೆ, ಮಣ್ಣಿನ ನಕ್ಷೆ ಹಾಗೂ ಒಳಚರಂಡಿ ಮತ್ತು ಜಲಮೂಲಗಳ ನಕ್ಷೆ ಮಾಹಿತಿ, ತಾಲೂಕು, ಹೋಬಳಿ, ಗ್ರಾ.ಪಂ, ಗ್ರಾಮಲೆಕ್ಕಿಗರ ವೃತ್ತಗಳು, ಜನವಸತಿ ಇರುವ, ಇಲ್ಲದ ಮತ್ತು ಒಟ್ಟು ಗ್ರಾಮಗಳ 2011ರ ಜನಗಣತಿ, ನಗರ ಸ್ಥಳಿಯ ಸಂಸ್ಥೆಗಳ ವಿವರ, ಅಗ್ನಿಶಾಮಕ ಠಾಣೆಗಳ ವಿವರ ಹಾಗೂ ಪಡಿತರ ಅಂಗಡಿಗಳು ಮತ್ತು ಆದ್ಯತಾ ಪಡಿತರ ಚೀಟಿದಾರರು ವಿವರ ನೀಡಲಾಗಿದೆ. 

ಜಿಲ್ಲೆಯ ವಿಸ್ತಿರ್ಣ, ಜನಸಂಖ್ಯೆ, ಲಿಂಗಾಣುಪಾತ, ಮಕ್ಕಳ ಶೇಕಡಾವಾರು, ಮಕ್ಕಳ ಲಿಂಗಾಣುಪಾತ, ಪರಿಶಿಷ್ಠ ಪಂಗಡ, ಪರಿಶಿಷ್ಠಜಾತಿ ಶೇಕಡಾವಾರು ಜನಸಂಖ್ಯೆ, ಕೃಷಿ ಸಾಗುವಳಿದಾರರು, ಕೃಷಿ ಕಾರ್ಮಿಕರು, ಗೃಹ ಕೈಗಾರಿಕೆ ಕೆಲಸಗಾರರು, ಕೃಷಿಯೇತರ ಕೆಲಸಗಾರರು ಹೀಗೆ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಅಂಕಿ-ಅಂಶಗಳನ್ನು ನೀಡಲಾಗಿದೆ.

ಜಿಲ್ಲೆಯ ಮಳೆಗೆ ಸಂಬಂಧಿಸಿದಂತೆ ಮಳೆ ಮಾಪನಕೇಂದ್ರಗಳು, ವಾರ್ಷಿಕ ವಾಡಿಕೆ ಮಳೆ ಮತ್ತು ಮಳೆ ದಿನಗಳು, ವಾರ್ಷಿಕ ವಾಸ್ತವಿಕ ಮಳೆ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆಗೆ ಸಂಬಂಧಿಸಿದಂತೆ ಇರುವ ಭೂ ಪ್ರದೇಶಗಳ ಮಾಹಿತಿ, ವಿವಿಧ ಬೆಳಗಳ ಭೂ ಪ್ರದೇಶ ಹಾಗೂ ಮಾಹಿತಿ, ಪಶುಪಾಲನೆಯ ಜಾನುವಾರು ಗಣತಿ 2012ರ ಸಂಪೂರ್ಣ ಜಿಲ್ಲೆಯ ಮಾಹಿತಿ, ಪಶುವೈದ್ಯ ಸಂಸ್ಥೆಗಳು, ಮೀನುಗಾರಿಕೆ ಹಾಗೂ ಹೈನುಗಾರಿಗೆ, ಜಿಲ್ಲೆಯ ವಿವಿಧ ಕೈಗಾರಿಕೆಗಳ ಸಂಖ್ಯೆ ಹಾಗೂ ಮಾಹಿತಿ, ವಿವಿಧ ಬ್ಯಾಂಕುಗಳ ಮಾಹಿತಿ, ಸಹಕಾರ ಮತ್ತು ಕೃಷಿ ಮಾರಾಟ ಕೇಂದ್ರಗಳ ಬಗ್ಗೆ ಮಾಹಿತಿ ಹಾಗೂ ಅಂಕಿ-ಸಂಖ್ಯೆ, ಸಾರಿಗೆ ಸಂಪರ್ಕ, ಶಿಕ್ಷಣ, ಸಾಕ್ಷರತೆ ಹಾಗೂ ಅನಕ್ಷರತೆಯ ಮಾಹಿತಿ ಮಾಹಿತಿ ಸಂಗ್ರಹಿಸಿ ಹಾಕಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮಾಹಿತಿ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳ ಅಂಕಿ ಸಂಖ್ಯೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ, ಅಂಗನವಾಡಿ ಕೇಂದ್ರಗಳ ಸಂಖ್ಯೆ, ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಾಹಿತಿ, ಜಿಲ್ಲೆಯ ವಸತಿಗಳ ಮಾಹಿತಿ, ಕೃಷಿ ಹಿಡುವಳಿ ಹಾಗೂ ವಿಸ್ತಿರ್ಣ, ಜನನ ಮತ್ತು ಮರಣ ನೊಂದಣಿ ಸಂಖ್ಯೆ ಸೇರಿದಂತೆ ವಿವಿಧ ವಿಷಯಗಳ ಮಾಹಿತಿಯನ್ನು ಈ ವಾರ್ಷಿಕ ಕೈಪಿಡಿಯಲ್ಲಿ ನೀಡಲಾಗಿದೆ   
  
ಈ ವಾರ್ಷಿಕ ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಎಂ. ಕುಲಕರ್ಣಿ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಸಂತೋಷ ಇನಾಂದಾರ್ ಸೇರಿದಂತೆ ಇತರರಿದ್ದರು.

No comments:

Post a Comment