Saturday, August 26, 2023

ದಲ್ಲಾಳಿಗಳಿಂದ ನಷ್ಟ ಅನುಭವಿಸುತ್ತಿರುವ ದ್ರಾಕ್ಷಿ ಬೆಳೆಗಾರರು ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಣೆಗೆ ಒತ್ತಾಯ

 ಈ ದಿವಸ ವಾರ್ತೆ

ವಿಜಯಪುರ: ಇಡೀ ದೇಶದಲ್ಲಿ ದ್ರಾಕ್ಷಿ ಬೆಳೆಗೆ ಮಹಾರಾಷ್ಟç ರಾಜ್ಯ ಪ್ರಥಮ ಸ್ಥಾನ ಬಿಟ್ಟರೆ ಎರಡನೆಯದ್ದು ಕರ್ನಾಟಕ ರಾಜ್ಯ. ಅದರಲ್ಲಿ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಶೇ.70 ರಷ್ಟು ದ್ರಾಕ್ಷಿ ಬೆಳೆದ ರೈತರಿದ್ದಾರೆ ಮತ್ತು ರುಚಿಕಟ್ಟಾದ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಉಳ್ಳ ದ್ರಾಕ್ಷಿ ವಿಜಯಪುರ ಜಿಲ್ಲೆಯದ್ದಾಗಿದೆ. ಆದರೆ ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಇಲ್ಲ. ಒಂದು ಕೆ.ಜಿ. ಒಣದ್ರಾಕ್ಷಿಗೆ ಈ ಸದ್ಯದ ಮಾರುಕಟ್ಟೆ ಬೆಲೆ ಪ್ರತಿ ಕೆ.ಜಿ.ಗೆ. ಕೇವಲ 60 ರಿಂದ 70 ರೂಪಾಯಿ ಮಾರಾಟವಾಗುತ್ತಿದೆ. ಕಳೆದ ವರ್ಷ ಅಲ್ಪಸ್ವಲ್ಪ ಒಣ ದ್ರಾಕ್ಷಿಗೆ 200 ರಿಂದ 250 ರೂ. ಬೆಲೆ ಇತ್ತು ಆದರೆ ಈ ಭಾರಿ ಸಂಪೂರ್ಣ ಬೆಲೆ ಕುಷಿತ ಕಂಡಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರು ತೀವ್ರ ಕಂಗಾಲಾಗಿದ್ದಾರೆ. ಒಣದ್ರಾಕ್ಷಿ ಮಾನವ ಕುಲಕ್ಕೆ ಅತ್ಯಂತ ಉಪಯುಕ್ತವಾಗಿದೆ. ಅದರಲ್ಲಿ ಸುಮಾರು 20 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಪೋಷಕಾಂಶಗಳನ್ನು ಒಣ ದ್ರಾಕ್ಷಿ ಹೊಂದಿದೆ. ಅದರಲ್ಲಿ ವಿಟ್ಯಾಮಿನ್ ಬಿ6, ವಿಟ್ಯಾಮಿನ್ ಸಿ, ಗ್ಲೂಕೋಶ್ ಕ್ಯಾಲ್ಸಿಯಮ್ನ, ಮ್ಯಾಗ್ನಿಸಿಯಂ, ಪೊಟ್ಯಾಸಿಯಂ,. ಐರಾನ್ ಸೇರಿದಂತೆ ಹಲವಾರು ವಿಟ್ಯಾಮಿನ್‌ಗಳು ಒಣದ್ರಾಕ್ಷಿಯಲ್ಲಿ ಲಭ್ಯವಿವೆ. ಇದನ್ನು ಮಕ್ಕಳು ಸೇವಿಸುವದರಿಂದ ಅವರಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳು ಕೂಡ ನೀಡಿದರೆ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಆದ್ದರಿಂದ ಸರ್ಕಾರ ಕನಿಷ್ಠ 50 ಗ್ರಾಮ ನಷ್ಟು ಮನುಕನ್ನು ವಿತರಣೆ ಮಾಡಬೇಕು ಎಂದು ದೇವರ ಹಿಪ್ಪರಗಿ ಸದಯ್ಯನ ಮಠದ ಶ್ರೀಗಳಾದ ವೀರಗಂಗಾಧರ ಸ್ವಾಮಿಗಳು ಹಾಗೂ ರೈತ ಮುಖಂಡ ಅರವಿಂದ ಕುಲಕರ್ಣಿ ಹೇಳಿದರು.

ಅವರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಇಡೀ ವರ್ಷ ಕಷ್ಟ ಪಟ್ಟು ದ್ರಾಕ್ಷಿ ಬೆಳೆದು ನಂತರದ ಮನುಕು ತಯಾರಿಸಿ ಮಾರುಕಟ್ಟೆಗೆ ಸಾಗಿಸಿದರೆ ಕೇವಲ 60 ರಿಂದ 70 ರೂಪಾಯಿ ಪ್ರತಿ ಕೆ.ಜಿ.ಗೆ ಮಾರಾಟವಾಗುತ್ತಿವೆ. ಖರೀದಿ ಮಾಡಿದ ನಂತರ ದಲ್ಲಾಳಿಗಳು ಏನು ಕಷ್ಟ ಪಡದೆ 4 ಪಟ್ಟು ಲಾಭ ಪಡೆಯತ್ತಾರೆ. ದಲ್ಲಾಳಿಗಳು ಯಾವುದೇ ಬೆವರು ಸುರಿಸದೆ, ಕಷ್ಟ ಪಡದೆ ಹಣ ಗಳಿಸುತ್ತಾರೆ. ಆದರೆ ದ್ರಾಕ್ಷಿ ಬೆಳೆದ ರೈತ ಮಾತ್ರ ಇನ್ನು ಬಡತನದ ಬೇಗೆಯಲ್ಲಿ ಬಳಲುತ್ತಿದ್ದಾನೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಹಾಗೂ ಬಸವನ ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ದ್ರಾಕ್ಷಿ ಬೆಳೆಯನ್ನು ಅಂದಾಜು 90 ಸಾವಿರದಿಂದ 90 ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದು 7 ರಿಂದ 8 ಮೆಟ್ರಿಕ್ ಟನ್ ದ್ರಾಕ್ಷಿ ಉತ್ಪನ್ನ ಮಾಡಲಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವೇ ರೈತರಿಂದ ಬೆಂಬಲ ಬೆಲೆ ನೀಡಿ ನೇರವಾಗಿ ಖರೀದಿಸಬೇಕು. ಆದ್ದರಿಂದ ತಾವುಗಳು ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬೇದ ಮರೆತು ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಿ ಅವರಿಗೆ ಮನವರಿಕೆ ಮಾಡಿ ರಾಜ್ಯ ಸರ್ಕಾರದ ನೇತೃತ್ವದಲ್ಲಿ ರಾಜ್ಯದ ಮಠಾಧೀಶರ ಹಾಗೂ ರೈತರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟು ಪ್ರತಿ ಕೆಜೆ ಒಣ ದ್ರಾಕ್ಷಿಗೆ ಕನಿಷ್ಠ 250 ರೂಪಾಯಿ ಬೆಲೆ ನಿಗಧಿಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಒತ್ತಾಯಿಸಿದರು. ದಿನಾಂಕ: 07-09-2023 ರಂದು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಬಳಿ ನಾಡಿನ ಹಲವಾರು ಮಠಾಧೀಶರ ಸಮ್ಮುಖದಲ್ಲಿ ಕನಿಷ್ಠ 5 ರಿಂದ 6 ಸಾವಿರ ದ್ರಾಕ್ಷಿ ಬೆಳೆದ ರೈತರು ರೈತಪರ ಸಂಘಟನೆಗಳವತಿಯಿAದ ಬೃಹತ್ ಪ್ರಮಾಣದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಯುವ ರೈತರು ರೈತಪರ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಸಂಗಮೇಶ ಸಗರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಕಾರ್ಯದರ್ಶಿ ಜೀರದಾಳ ವಕೀಲರು, ಪ್ರೊ. ಐ.ಜಿ. ಹಿರೇಮಠ, ಸೇರಿದಂತೆ ಮುಂತಾದವರು ಇದ್ದರು.

No comments:

Post a Comment