Wednesday, July 19, 2023

ಮತಾಂತರ ವಿರೋಧಿ ,,,,,,,!!!!!!,,,,,,,,,,!!!!!!,,,,,,,,,,,

ಹೊಲೆಯರೆಲ್ಲರನು ಹರಿಜನರೆಂದು ಕರಿದು

ಹರಿಹರರಿಂದ ಅವರನ್ನೆಲ್ಲಾ ದೂರವಿರಿಸಿ

ಬಲು ಹಗುರವಾಗಿ ಕಂಡಿರಿ.

ಊರೊಳಗೆ ಅವರನು ಕರೆಯಿಸಿ ಜನಗಳ ಕಸವ ಹೊರಿಸಿದಿರಿ ದನಗಳ ಹಣವ ಹೆಗಲಿಗೇರಿಸಿದಿರಿ.

ಅವರೊಂದಿಗೆ ಬೆರೆತು ಬಾಳುವದು ಅವರ ಬದುಕು ಬದಲಾಯಿಸುವುದು ನಿಮ್ಮ ಬಾಯಿಗೆ ಬಂಡವಾಳವಾಗಿತ್ತು.

ಬಾಳಿನಲಿ ಬೆಳಕಿಗಾಗಿ ಬೊಬ್ಬೆಯಿಟ್ಟವರು ತಮಗೆ ಲೇಸನಿಸಿದತ್ತ ವಲಸೆ ಹೋದರೆ ನೀವೇಕೆ ತಬ್ಬಿಬ್ಬಾದಿರಿ ? ತಂಗಾದಿರಿ ?

ಲಗುಬಗೆಯಿಂದ ಅವರು ದೌಡಾಯಿಸಿ ಸವಲತ್ತುಗಳ ಬಿಸಿಲುಗುದುರೆಗಳನ್ನು ಅವರೆದುರು ಓಡಿಸಲು ಮುಂದಾದಿರಿ.

ಪೊಳ್ಳು ಪರ೦ಪರೆಗೆ ಬಣ್ಣ ಬಳಿದು ಒಳ್ಳೆಯದೆಂದು ಒದರುತ್ತಾ ಶತಶತಮಾನಗಳಿಂದ ಮಾಡಿದ ಶೋಷಣೆ ಸಾಲದೆ ?

ಅವರು ನೀವಾಗಿ, ನೀವು ಅವರಾಗಿ ಬದುಕು ಭಯಂಕರವಾದೀತೆಂಬ ಭಯ ನಿಮ್ಮನೆಲ್ಲಾ ಬಡಿದೆಬ್ಬಿಸಿರಬಹುದು.

ಅವರಿವರ ಧರ್ಮಗಳನ್ನು ಹಳಿಯುತ್ತ ತುಳಿಯುತ್ತಾ ನಿಮ್ಮಗಳ ಧರ್ಮಗಳನ್ನು ಮೇಲೆತ್ತ ಮರೆದಾಡುವ ನೀವು ಧರ್ಮಿಷ್ಟರೆ ?

ಬೇಡ ನಮ್ಮಲಿ ಧರ್ಮ ಕಲಹ ಅಂದು ಇಂದು, ಮುಂದು, ಎಂದೆಂದಿಗೂ ಜಗದೊಳೊಂದೆ ಮನುಜ ಮನುಜ ಕುಲವು.

ಬಸವರಾಜ್ ಜಾಲವಾದಿ

ಅಧ್ಯಕ್ಷರು ದಲಿತ ಸಾಹಿತ್ಯ ಪರಿಷತ್ ವಿಜಯಪುರ.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

No comments:

Post a Comment