Friday, July 21, 2023

ಗುರು ಕಾರುಣ್ಯತೇಜ

 ಮನುಷ್ಯನ ಜೀವನ ಉನ್ನತ ಸ್ಥಿತಿಗೇರಬೇಕಾದರೆ ಅವನ ಸಾಧನೆ ಹಾಗೂ ಗುರುಕೃಪೆಯೇ ಕಾರಣವೆಂದು ಗ್ರಹಿಸಬೇಕಾಗುತ್ತದೆ. ಮನುಷ್ಯನ ಸಾಧನೆ ಯಾವ ಕ್ಷೇತ್ರದಲ್ಲಿಯೇ ಇರಲಿ ಅದು ಆಧ್ಯಾತ್ಮ ಕ್ಷೇತ್ರವಾಗಿರಲಿ, ಧಾರ್ಮಿಕ ಕ್ಷೇತ್ರವಾಗಿರಲಿ, ರಾಜಕೀಯ ಕ್ಷೇತ್ರವಾಗಿರಲಿ, ಸಂಗೀತ-ಚಿತ್ರಕಲೆಯಂತಹಾ ಯಾವುದೇ ಕ್ಷೇತ್ರವಾಗಿರಲಿ ಇವುಗಳಲ್ಲಿ ಸಾಧನೆ ಮಾಡಿ ಸಿದ್ಧಿ ಪಡೆಯಬೇಕಾದರೆ ಅದಕ್ಕೇಲ್ಲಾ ಸಮರ್ಥ ಗುರುವಿನ ಮಾರ್ಗದರ್ಶನ ಬೇಕೆಬೇಕು. ಅದಕ್ಕೇನೆ ಗುರು ಮತ್ತು ಶಿಷ್ಯನ ಸಂಬಂಧ ಅನ್ಯೋನ್ಯ ಹಾಗೂ ಅವರ್ನಿಯ. 

 ವೇದ ಕಾಲದ ಇತಿಹಾಸದೂದಕ್ಕು ಖ್ಯಾತಿವಂತರ ಚರಿತ್ರೆಗಳು ಗೋಚರವಾಗುತ್ತವೆ. ಗುರುವಿನಿಂದ ವಿದ್ಯೆ ಸಂಪಾದಿಸಿಕೊಂಡು ಶಿಷ್ಯರು ಗುರುಗಳ ಬಗೆಗೆ ಅಪಾರವಾದ ಗೌರವ ವಿನರ್ಮತೆ ಹೊಂದಿರುತ್ತಾರೆ. ಇದಕ್ಕೆ ಮಹಾಭಾರತದಲ್ಲಿ ಕಾಣಬರುವ ದ್ರೋಣಾಚಾರ್ಯ್ಯರ ಅವರ ಶಿಷ್ಯ ಏಕಲವ್ಯನಂತವರೇ ಸಾಕ್ಷಿ. ಶಿಷ್ಯರು ಜೀವನದಲ್ಲಿ ಯಾವತ್ತಿಗೂ ಗುರುವಿನನ್ನ ಮರೆಯಲಾರರು. ಅದಕ್ಕಾಗಿಯೇ ಪ್ರತಿ ಆಷಾಡ ಹುಣ್ಣಿಮೆಯನ್ನು ಗುರುಪೊರ್ಣಿಮೆ, ಬುದ್ಧ ಪೊರ್ಣಿಮೆಯೆಂದು ಆಚರಿಸುತ್ತಾ ಬರಲಾಗಿದೆ. ಶಿಷ್ಯರು ತಮ್ಮ ಗುರುಗಳಿಗೆ ವಿಶೇಷವಾಗಿ ಗೌರವ ಸಲ್ಲಿಸುವ ಉದೇಶಕ್ಕಾಗಿಯೇ ಗುರುವಂದನಾಯೆಂಬ ಭಕ್ತಿ ಸಮರ್ಪನಾ ಕಾರ್ಯಕ್ರಮವನ್ನು ನಾಡಿನಯಲ್ಲಡೆ ಆಚರಿಸುತ್ತಾರೆ. ಇಂತಹ ಕಾರ್ಯಕ್ರಮವೊಂದು ವಿಜಯಪುರ ನಗರದ ಗಾನಬನವೆಂಬ ಹೆಸರಿನ ಶ್ರೀ ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷದ ಸಂಗತಿ. ಗಾನಬನದ ರುವಾರಿಗಳಾದ ಶ್ರೀ ಪಂಡೀತ ತೋಂಟದಾರ್ಯ ಕವಿ ಗವಾಯಿಗಳವರ ಬದುಕು ಆವರ್ಣಿಯವಾದದ್ದು. ತಮ್ಮ ವಿದ್ಯಾಗುರುಗಳಾದ ಪೂಜ್ಯ ಲಿಂ. ಡಾ. ಪಂಡೀತ ಪುಟ್ಟರಾಜ ಗುರುವರ್ಯರ ಜೀವನವನ್ನೇ ಆದರ್ಶವಾಗಿ ಇಟ್ಟುಕೊಂಡು ಜೀವನ ನಡೆಸತಕ್ಕವಂತರು. ಗುರುಗಳ ಕೃಪಾಪೋಷಣೆಯಲ್ಲಿ ಗಾನಬನದ ಸಂಗೀತ ಗುರುಕುಲದಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಅವರಿಗೆ ಊಟ, ವಸತಿ, ವಿದ್ಯೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇವರಿಂದ ಅನೇಕರು ಸಂಗೀತ ವಿದ್ಯೆಯನ್ನು ಪಡೆದು ತಮ್ಮ ಬದುಕಿನ ನೆಲೆಯನ್ನು ಕಂಡುಕೊಂಡಿದ್ದಾರೆ. ಹೀಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಸಮರ್ಪಿಸುವ ನಿಟ್ಟಿನಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ. 

 ಇವರು ಶಿಷ್ಯರಿಗೆ ಸಂಗೀತ ಕಲೆಯನ್ನು ಧಾರಾಳವಾಗಿ ಅವರ ಅವರ ಅರ್ಹತೆ ಅನುಗುಣವಾಗಿ ಕೊಡುತ್ತಾ ಬಂದಿದ್ದಾರೆ. ತಮ್ಮ ಸ್ವಂತ ಜೀವನಕ್ಕೆ ಹೆಚ್ಚು ಗಮನ ಕೊಡದೇ ಸದಾ ಗಾನಬನದ ಶ್ರೇಯೋಭಿವೃದ್ಧಿಗಾಗಿ ವಿದ್ಯಾರ್ಥಿಗಳ ಯೋಗಕ್ಷೇಮದ ಬಗೆಗೆನೆ ಚಿಂತಿಸುತ್ತಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಸಂಗೀತ ಕಲಾಭಿಮಾನಿಗಳು ತಮ್ಮ ಸಹಾಯ ಸಹಕಾರವನ್ನು ನೀಡುತ್ತಾ ನಮ್ಮ ಭಾಗÀದಲ್ಲಿ ಇದೊಂದು ಸಂಗೀತ ಸೇವಾ ಸಂಸ್ಥೆ ಬೆಳೆಯಲೆಂದು ತಮ್ಮ ಮುಕ್ತ ಮನಸ್ಸಿನಿಂದ ಹಾರೈಸುತ್ತಿದ್ದಾರೆ. ಭಕ್ತರ ಹಾಗೂ ಮಠಾಧೀಶರ ದೇಣಿಗೆಯ ಕೊಡುಗೆಯಿಂದ ನಿರ್ಮಾಣಗೊಂಡ ಗುರುತ್ರಯರ ಮೂರ್ತಿಗಳ ಮಂದಿರ ಕಂಗೊಳಿಸುತ್ತಿದೆ. ಇದಕ್ಕೇಲ್ಲಾ ಕಾರಣರು ಗಾನಬನದ ನಿರ್ಮಾತೃಗಳಾದ ಶ್ರೀ ಪಂ. ತೋಂಟದಾರ್ಯ ಕವಿಗವಾಯಿಗಳವರು ಇಂತಹ ತೋಂಟದಾರ್ಯರ ಕಾರ್ಯಗಳನ್ನು ಮೆಚ್ಚಿ ಅವರ ಶಿಷ್ಯರೆಲ್ಲರೂ ಸೇರಿ ಶ್ರದ್ಧಾ-ಭಕ್ತಿಯಿಂದ "ಗುರುವಂದನಾ" ಎಂಬ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಇದೇ ತಿಂಗಳ ಅಂದರೆ 22-07-2023 ಶನಿವಾರದಂದು ಸಮಯ ಸಂಜೆ : 6-30ಕ್ಕೆ ಗಾನಬನದಲ್ಲಿ ಜರುಗಲಿದೆ. ಇಂತಹ ಯೋಗ್ಯ ಕಾರ್ಯಕ್ರಮಕ್ಕೆ ಸ್ವಾಗತ ಬಯಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸೋಣ.

 ರಚನೆ - ಶ್ರೀ ವೇ.ಮೂ. ವೀರುಪಾಕ್ಷಯ್ಯ ಶಾಸ್ತ್ರೀಗಳು, ಹಿರೇಮಠ, ಹಚ್ಚಾ್ಯಳ 


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

No comments:

Post a Comment